ETV Bharat / city

ಕಾಂಗ್ರೆಸ್​ನವರಿಗೆ ಬ್ಯಾಗ್ ಕೊಟ್ಟು ನೀವು ಮುಖ್ಯಮಂತ್ರಿ ಆಗಿರಬೇಕು: ಹೆಚ್​ಡಿಕೆಗೆ ರೇಣುಕಾಚಾರ್ಯ ಟಾಂಗ್

author img

By

Published : Sep 2, 2021, 10:37 PM IST

ಬ್ಯಾಗ್​ ಕೊಡುವ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿಲ್ಲ. ನೀವು ಕಾಂಗ್ರೆಸ್​​ಗೆ ಬ್ಯಾಗ್​​ ಕೊಟ್ಟು ಮುಖ್ಯಮಂತ್ರಿಯಾಗಿದ್ದನ್ನು ಮರೆಯಬಾರದು ಎಂದು ಶಾಸಕ ರೇಣುಕಾಚಾರ್ಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

mp-renukacharya-statement-on-hd-kumaraswamy
ರೇಣುಕಾಚಾರ್ಯ

ದಾವಣಗೆರೆ: ಕಾಂಗ್ರೆಸ್​ನವರಿಗೆ ಬ್ಯಾಗ್ ಕೊಟ್ಟು ನೀವು ಮುಖ್ಯಮಂತ್ರಿ ಆಗಿರಬೇಕು ಎಂದು ಅರುಣ್ ಸಿಂಗ್ ಹಣ ತೆಗೆದುಕೊಂಡು ಹೋಗಲು ಕರ್ನಾಟಕಕ್ಕೆ ಬರ್ತಾರೆ ಎಂಬ ಹೆಚ್​​.ಡಿ.ಕುಮಾರಸ್ವಾಮಿ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟರು.

'ಕಾಂಗ್ರೆಸ್​ನವರಿಗೆ ಬ್ಯಾಗ್ ಕೊಟ್ಟು ನೀವು ಮುಖ್ಯಮಂತ್ರಿ ಆಗಿರಬೇಕು'

ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್​​​ಡಿಕೆ ಅವರು ಬಿಜೆಪಿ ಆಶೀರ್ವಾದದಿಂದ ಸಿಎಂ ಆಗಿದ್ದನ್ನು ಮರೆಯಬಾರದು. ಕಾಂಗ್ರೆಸ್ ಅವರ ಮುಂದೆ ಮಂಡಿ ಊರಿದ್ದಕ್ಕೆ ಮತ್ತೆ ಅಧಿಕಾರ ಕೊಟ್ರು. ಸಿಎಂ ಸ್ಥಾನ ಹೋಗಿದ್ದಕ್ಕೆ ಹತಾಶ ಭಾವನೆಯಿಂದ ಮಾತನಾಡ್ತಾರೆ. ನಮ್ಮ ಪಾರ್ಟಿಯಲ್ಲಿ ಹಣ ಕೊಡುವ ಸಂಸ್ಕ್ರತಿ ಇಲ್ಲ. ಅದು ನಿಮ್ಮ‌ ಸಂಸ್ಕ್ರತಿ ಇರಬೇಕು ಎಂದರು.

2023ಕ್ಕೆ ಜೆಡಿಎಸ್ ಬಹುಮತ ಪಡೆಯುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಎಲ್ಲೂ ನಿಮ್ಮವರು ಇಲ್ಲ, ಮೈಸೂರಿನಲ್ಲಿ ಇದ್ದವರೂ ನಿಮ್ಮಿಂದ ದೂರ ಆಗ್ತಿದ್ದಾರೆ. ಇನ್ನೊಬ್ಬರನ್ನು ಟೀಕೆ ಮಾಡದೇ ಅಧಿಕಾರಕ್ಕೆ ಬರೋದು ಮುಖ್ಯ ಎಂದು ಹೇಳಿದರು.

ದಾವಣಗೆರೆ: ಕಾಂಗ್ರೆಸ್​ನವರಿಗೆ ಬ್ಯಾಗ್ ಕೊಟ್ಟು ನೀವು ಮುಖ್ಯಮಂತ್ರಿ ಆಗಿರಬೇಕು ಎಂದು ಅರುಣ್ ಸಿಂಗ್ ಹಣ ತೆಗೆದುಕೊಂಡು ಹೋಗಲು ಕರ್ನಾಟಕಕ್ಕೆ ಬರ್ತಾರೆ ಎಂಬ ಹೆಚ್​​.ಡಿ.ಕುಮಾರಸ್ವಾಮಿ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟರು.

'ಕಾಂಗ್ರೆಸ್​ನವರಿಗೆ ಬ್ಯಾಗ್ ಕೊಟ್ಟು ನೀವು ಮುಖ್ಯಮಂತ್ರಿ ಆಗಿರಬೇಕು'

ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್​​​ಡಿಕೆ ಅವರು ಬಿಜೆಪಿ ಆಶೀರ್ವಾದದಿಂದ ಸಿಎಂ ಆಗಿದ್ದನ್ನು ಮರೆಯಬಾರದು. ಕಾಂಗ್ರೆಸ್ ಅವರ ಮುಂದೆ ಮಂಡಿ ಊರಿದ್ದಕ್ಕೆ ಮತ್ತೆ ಅಧಿಕಾರ ಕೊಟ್ರು. ಸಿಎಂ ಸ್ಥಾನ ಹೋಗಿದ್ದಕ್ಕೆ ಹತಾಶ ಭಾವನೆಯಿಂದ ಮಾತನಾಡ್ತಾರೆ. ನಮ್ಮ ಪಾರ್ಟಿಯಲ್ಲಿ ಹಣ ಕೊಡುವ ಸಂಸ್ಕ್ರತಿ ಇಲ್ಲ. ಅದು ನಿಮ್ಮ‌ ಸಂಸ್ಕ್ರತಿ ಇರಬೇಕು ಎಂದರು.

2023ಕ್ಕೆ ಜೆಡಿಎಸ್ ಬಹುಮತ ಪಡೆಯುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಎಲ್ಲೂ ನಿಮ್ಮವರು ಇಲ್ಲ, ಮೈಸೂರಿನಲ್ಲಿ ಇದ್ದವರೂ ನಿಮ್ಮಿಂದ ದೂರ ಆಗ್ತಿದ್ದಾರೆ. ಇನ್ನೊಬ್ಬರನ್ನು ಟೀಕೆ ಮಾಡದೇ ಅಧಿಕಾರಕ್ಕೆ ಬರೋದು ಮುಖ್ಯ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.