ETV Bharat / city

ರಾಜ್ಯಸಭೆ ಚುನಾವಣೆ: ಜೆಡಿಎಸ್ ತಂತ್ರಗಾರಿಕೆ ಏನು?

author img

By

Published : May 18, 2022, 10:17 AM IST

ರಾಜ್ಯ ವಿಧಾನಸಭೆಯಿಂದ ನಾಲ್ಕು ಸ್ಥಾನಗಳಿಗೆ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸೀಟನ್ನು ಸಹ ಗೆಲ್ಲಲು ಜೆಡಿಎಸ್​ಗೆ ಸಾಧ್ಯವಿಲ್ಲ. ಹಾಗಾಗಿ ಬಿಜೆಪಿ, ಕಾಂಗ್ರೆಸ್​ನ ಹೆಚ್ಚುವರಿ ಮತಗಳನ್ನು ಕಬಳಿಸಿ ರಾಜ್ಯಸಭೆಗೆ ತನ್ನದೇ ಅಭ್ಯರ್ಥಿ ಆಯ್ಕೆಮಾಡಿಕೊಳ್ಳುವ ಇರಾದೆಯನ್ನು ಜೆಡಿಎಸ್ ಹೊಂದಿದೆ.

JDS strategy to win in Rajya Sabha elections
ರಾಜ್ಯಸಭೆ ಚುನಾವಣೆ: ಜೆಡಿಎಸ್ ತಂತ್ರಗಾರಿಕೆ ಏನು

ಬೆಂಗಳೂರು: ವಿಧಾನಸಭೆಯಲ್ಲಿ ಕಡಿಮೆ ಶಾಸಕರ ಸಂಖ್ಯೆಯಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್​, ಬಿಜೆಪಿ ಬೆಂಬಲ ಪಡೆದು ಮುಖ್ಯಮಂತ್ರಿ ಪದವಿ ಗಿಟ್ಟಿಸಿಕೊಂಡು ರಾಜ್ಯಭಾರ ನಡೆಸಿದ ಜೆಡಿಎಸ್ ಈಗ ರಾಜ್ಯಸಭೆ ಚುನಾವಣೆಯಲ್ಲಿಯೂ ಇಂತಹದೇ ತಂತ್ರಗಾರಿಕೆ ಹೆಣೆದು ಪಕ್ಷದಿಂದ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಸ್ಟ್ರಾಟಜಿ ರೂಪಿಸಿದೆ.

ರಾಜ್ಯ ವಿಧಾನಸಭೆಯಿಂದ 04 ಸ್ಥಾನಗಳಿಗೆ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸೀಟನ್ನು ಸಹ ಗೆಲ್ಲಲು ಜೆಡಿಎಸ್​ಗೆ ಸಾಧ್ಯವಿಲ್ಲವೆನ್ನುವ ಪರಿಸ್ಥಿತಿಯಿದೆ. ಗೆಲುವಿಗೆ ಮತಗಳ ಕೊರತೆ ಇದ್ದರೂ ಅಭ್ಯರ್ಥಿ ಕಣಕ್ಕಿಳಿಸಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ(32ಮತ), ಕಾಂಗ್ರೆಸ್(25ಮತ)ನ ಹೆಚ್ಚುವರಿ ಮತಗಳನ್ನು ಕಬಳಿಸಿ ರಾಜ್ಯಸಭೆಗೆ ತನ್ನದೇ ಅಭ್ಯರ್ಥಿ ಆಯ್ಕೆಮಾಡಿಕೊಳ್ಳುವ ಇರಾದೆಯನ್ನು ಜೆಡಿಎಸ್ ಹೊಂದಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲಲು ಕನಿಷ್ಠ 45 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿ ಕೇವಲ 32 ಶಾಸಕರ ಬೆಂಬಲ ಇರುವ ಜೆಡಿಎಸ್ ಗೆಲುವಿಗೆ 13 ಮತಗಳ ಕೊರತೆಯಿರುವುದರಿಂದ ರಾಜ್ಯಸಭೆ ಚುನಾವಣೆ ಗೋಜಿಗೆ ಹೋಗುವುದಿಲ್ಲ ಎಂದೇ ರಾಜಕೀಯವಾಗಿ ವಿಶ್ಲೇಷಿಸಲಾಗಿತ್ತು.

ಜೆಡಿಎಸ್ ಮತಗಳ ಬೆಂಬಲದಿಂದ ನಾಲ್ಕನೇ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿರುವಾಗಲೇ ಕುಮಾರಸ್ವಾಮಿ ಅವರು ಜೆಡಿಎಸ್ ತನ್ನ ಅಭ್ಯರ್ಥಿಯನ್ನು ರಾಜ್ಯಸಭೆ ಚುನಾವಣೆಯಲ್ಲಿ ನಿಲ್ಲಿಸಲಿದೆ ಎನ್ನುವ ನಿರ್ಧಾರ ಪ್ರಕಟಿಸುವ ಮೂಲಕ ಸಂಸತ್ತಿನ ಚುನಾವಣೆಯನ್ನು ಕುತೂಹಲಕಾರಿಯಾಗಿಸಿದ್ದಾರೆ.

ಜೆಡಿಎಸ್​​​ನಲ್ಲಿ ಅಸಮಾಧಾನ ಹೊಂದಿರುವ, ವಿಧಾನಸಭೆ ಚುನಾವಣೆ ವೇಳೆ ತಮ್ಮ ಪಕ್ಷಕ್ಕೆ ಜಿಗಿಯಲು ಸಿದ್ಧವಾಗಿರುವ ಜೆಡಿಎಸ್ ಶಾಸಕರ ಮತಗಳನ್ನು ಪಡೆದು ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಬಿಜೆಪಿ-ಕಾಂಗ್ರೆಸ್ ಸಮಾಲೋಚನೆ ನಡೆಸುತ್ತಿದ್ದವು. ತಮ್ಮ ಸಂಪರ್ಕದಲ್ಲಿರುವ ಜೆಡಿಎಸ್ ಶಾಸಕರ ಅಭಿಪ್ರಾಯ ಸಹ ಪಡೆಯಲಾಗುತ್ತಿತ್ತು ಎನ್ನಲಾಗಿದೆ.

ಈ ಬೆಳವಣಿಗೆಗಳ ನಡುವೆ ಜೆಡಿಎಸ್ ಅಭ್ಯರ್ಥಿ ನಿಲ್ಲಿಸುವ ತನ್ನ ನಿರ್ಧಾರ ಪ್ರಕಟಿಸಿರುವುದು ರಾಜ್ಯಸಭೆ ಚುನಾವಣೆಗೆ ಒಂದು ರೀತಿಯಲ್ಲಿ ಹೊಸ ಟ್ವಿಸ್ಟ್ ದೊರೆತಂತಾಗಿದೆ.‌ ಬಿಜೆಪಿಯಂತೂ ಜೆಡಿಎಸ್​ನ ಮತಗಳ ಮೇಲೆ ಕಣ್ಣಿಟ್ಟು ಹೆಚ್ಚುವರಿ ಅಭ್ಯರ್ಥಿ ನಿಲ್ಲಿಸುವ ಸಂಬಂಧ ಆರ್ಥಿಕವಾಗಿ ಪ್ರಬಲವಾಗಿರುವ ಹೋಟೆಲ್ ಉದ್ಯಮಿ ಪ್ರಕಾಶ ಶೆಟ್ಟಿಯವರಂತಹ ಅಭ್ಯರ್ಥಿಯ ಹೆಸರನ್ನು ಸಹ ಹೈಕಮಾಂಡ್​ಗೆ ಶಿಫಾರಸ್ಸು ಮಾಡಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಸುಸಜ್ಜಿತ ಅವ್ವಾ ಶಿಶುಪಾಲನ ಕೇಂದ್ರ ತೆರೆದ ಹಾವೇರಿ ಜಿಲ್ಲಾಡಳಿತ

ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷವು ಮಾಜಿ ರಾಜ್ಯಸಭೆ ಸದಸ್ಯರಾದ ಉದ್ಯಮಿ ಕುಪೇಂದ್ರ ರೆಡ್ಡಿ, ಸಿಎಂ ಇಬ್ರಾಹಿಂ ಹಾಗು ಈ ಹಿಂದೆ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದ ಉದ್ಯಮಿ ಫಾರೂಕ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಬೆಂಗಳೂರು: ವಿಧಾನಸಭೆಯಲ್ಲಿ ಕಡಿಮೆ ಶಾಸಕರ ಸಂಖ್ಯೆಯಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್​, ಬಿಜೆಪಿ ಬೆಂಬಲ ಪಡೆದು ಮುಖ್ಯಮಂತ್ರಿ ಪದವಿ ಗಿಟ್ಟಿಸಿಕೊಂಡು ರಾಜ್ಯಭಾರ ನಡೆಸಿದ ಜೆಡಿಎಸ್ ಈಗ ರಾಜ್ಯಸಭೆ ಚುನಾವಣೆಯಲ್ಲಿಯೂ ಇಂತಹದೇ ತಂತ್ರಗಾರಿಕೆ ಹೆಣೆದು ಪಕ್ಷದಿಂದ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಸ್ಟ್ರಾಟಜಿ ರೂಪಿಸಿದೆ.

ರಾಜ್ಯ ವಿಧಾನಸಭೆಯಿಂದ 04 ಸ್ಥಾನಗಳಿಗೆ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸೀಟನ್ನು ಸಹ ಗೆಲ್ಲಲು ಜೆಡಿಎಸ್​ಗೆ ಸಾಧ್ಯವಿಲ್ಲವೆನ್ನುವ ಪರಿಸ್ಥಿತಿಯಿದೆ. ಗೆಲುವಿಗೆ ಮತಗಳ ಕೊರತೆ ಇದ್ದರೂ ಅಭ್ಯರ್ಥಿ ಕಣಕ್ಕಿಳಿಸಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ(32ಮತ), ಕಾಂಗ್ರೆಸ್(25ಮತ)ನ ಹೆಚ್ಚುವರಿ ಮತಗಳನ್ನು ಕಬಳಿಸಿ ರಾಜ್ಯಸಭೆಗೆ ತನ್ನದೇ ಅಭ್ಯರ್ಥಿ ಆಯ್ಕೆಮಾಡಿಕೊಳ್ಳುವ ಇರಾದೆಯನ್ನು ಜೆಡಿಎಸ್ ಹೊಂದಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲಲು ಕನಿಷ್ಠ 45 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿ ಕೇವಲ 32 ಶಾಸಕರ ಬೆಂಬಲ ಇರುವ ಜೆಡಿಎಸ್ ಗೆಲುವಿಗೆ 13 ಮತಗಳ ಕೊರತೆಯಿರುವುದರಿಂದ ರಾಜ್ಯಸಭೆ ಚುನಾವಣೆ ಗೋಜಿಗೆ ಹೋಗುವುದಿಲ್ಲ ಎಂದೇ ರಾಜಕೀಯವಾಗಿ ವಿಶ್ಲೇಷಿಸಲಾಗಿತ್ತು.

ಜೆಡಿಎಸ್ ಮತಗಳ ಬೆಂಬಲದಿಂದ ನಾಲ್ಕನೇ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿರುವಾಗಲೇ ಕುಮಾರಸ್ವಾಮಿ ಅವರು ಜೆಡಿಎಸ್ ತನ್ನ ಅಭ್ಯರ್ಥಿಯನ್ನು ರಾಜ್ಯಸಭೆ ಚುನಾವಣೆಯಲ್ಲಿ ನಿಲ್ಲಿಸಲಿದೆ ಎನ್ನುವ ನಿರ್ಧಾರ ಪ್ರಕಟಿಸುವ ಮೂಲಕ ಸಂಸತ್ತಿನ ಚುನಾವಣೆಯನ್ನು ಕುತೂಹಲಕಾರಿಯಾಗಿಸಿದ್ದಾರೆ.

ಜೆಡಿಎಸ್​​​ನಲ್ಲಿ ಅಸಮಾಧಾನ ಹೊಂದಿರುವ, ವಿಧಾನಸಭೆ ಚುನಾವಣೆ ವೇಳೆ ತಮ್ಮ ಪಕ್ಷಕ್ಕೆ ಜಿಗಿಯಲು ಸಿದ್ಧವಾಗಿರುವ ಜೆಡಿಎಸ್ ಶಾಸಕರ ಮತಗಳನ್ನು ಪಡೆದು ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಬಿಜೆಪಿ-ಕಾಂಗ್ರೆಸ್ ಸಮಾಲೋಚನೆ ನಡೆಸುತ್ತಿದ್ದವು. ತಮ್ಮ ಸಂಪರ್ಕದಲ್ಲಿರುವ ಜೆಡಿಎಸ್ ಶಾಸಕರ ಅಭಿಪ್ರಾಯ ಸಹ ಪಡೆಯಲಾಗುತ್ತಿತ್ತು ಎನ್ನಲಾಗಿದೆ.

ಈ ಬೆಳವಣಿಗೆಗಳ ನಡುವೆ ಜೆಡಿಎಸ್ ಅಭ್ಯರ್ಥಿ ನಿಲ್ಲಿಸುವ ತನ್ನ ನಿರ್ಧಾರ ಪ್ರಕಟಿಸಿರುವುದು ರಾಜ್ಯಸಭೆ ಚುನಾವಣೆಗೆ ಒಂದು ರೀತಿಯಲ್ಲಿ ಹೊಸ ಟ್ವಿಸ್ಟ್ ದೊರೆತಂತಾಗಿದೆ.‌ ಬಿಜೆಪಿಯಂತೂ ಜೆಡಿಎಸ್​ನ ಮತಗಳ ಮೇಲೆ ಕಣ್ಣಿಟ್ಟು ಹೆಚ್ಚುವರಿ ಅಭ್ಯರ್ಥಿ ನಿಲ್ಲಿಸುವ ಸಂಬಂಧ ಆರ್ಥಿಕವಾಗಿ ಪ್ರಬಲವಾಗಿರುವ ಹೋಟೆಲ್ ಉದ್ಯಮಿ ಪ್ರಕಾಶ ಶೆಟ್ಟಿಯವರಂತಹ ಅಭ್ಯರ್ಥಿಯ ಹೆಸರನ್ನು ಸಹ ಹೈಕಮಾಂಡ್​ಗೆ ಶಿಫಾರಸ್ಸು ಮಾಡಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಸುಸಜ್ಜಿತ ಅವ್ವಾ ಶಿಶುಪಾಲನ ಕೇಂದ್ರ ತೆರೆದ ಹಾವೇರಿ ಜಿಲ್ಲಾಡಳಿತ

ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷವು ಮಾಜಿ ರಾಜ್ಯಸಭೆ ಸದಸ್ಯರಾದ ಉದ್ಯಮಿ ಕುಪೇಂದ್ರ ರೆಡ್ಡಿ, ಸಿಎಂ ಇಬ್ರಾಹಿಂ ಹಾಗು ಈ ಹಿಂದೆ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದ ಉದ್ಯಮಿ ಫಾರೂಕ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.