ETV Bharat / city

ಜೈ ಶ್ರೀರಾಮ್ ಎನ್ನುವರು ಎಷ್ಟು ಜನ ರಾಮಾಯಣ ಓದಿದ್ದಾರೆ?: ಉಗ್ರಪ್ಪ ಪ್ರಶ್ನೆ

author img

By

Published : Mar 14, 2022, 9:52 AM IST

Updated : Mar 14, 2022, 10:02 AM IST

ಇಂದಿನ ದಿನಗಳಲ್ಲಿ ಎರಡು ಗುಂಪುಗಳನ್ನು ಕಾಣಬಹುದು. ಒಂದು ಜೈ ಶ್ರೀರಾಮ್ ಎನ್ನುವರು ಮತ್ತೊಂದು ಹೇ ರಾಮ್ ಎನ್ನುವರು. ನಾಥೂರಾಮ್ ಗೋಡ್ಸೆ ಸಂತತಿಯವರು ಜೈ ಶ್ರೀರಾಮ್ ಅಂತಾರೆ. ಸಂವಿಧಾನವನ್ನು ಗೌರವಿಸುವವರು ಹೇ ರಾಮ್ ಎನ್ನುತ್ತಾರೆ. ಜೈ ಶ್ರೀರಾಮ್ ಎನ್ನುವವರು ಎಷ್ಟು ಜನ ರಾಮಾಯಣ ಓದಿದ್ದಾರೆ ಹೇಳಿ? ಎಂದು ಕಾಂಗ್ರೆಸ್ ‌ಮುಖಂಡ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.

ವಿ.ಎಸ್. ಉಗ್ರಪ್ಪ
ವಿ.ಎಸ್. ಉಗ್ರಪ್ಪ

ದಾವಣಗೆರೆ: ನಾಥೂರಾಮ್ ಗೋಡ್ಸೆ ಸಂತತಿಯವರು ಜೈ ಶ್ರೀರಾಮ್ ಅಂತಾರೆ, ಸಂವಿಧಾನವನ್ನು ಗೌರವಿಸುವವರು ಹೇ ರಾಮ್ ಎನ್ನುತ್ತಾರೆ, ಜೈ ಶ್ರೀರಾಮ್ ಎನ್ನುವರು ಎಷ್ಟು ಜನ ರಾಮಾಯಣ ಓದಿದ್ದಾರೆ ಹೇಳಿ ಎಂದು ಕಾಂಗ್ರೆಸ್ ‌ಮುಖಂಡ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಎರಡು ಗುಂಪುಗಳನ್ನು ಕಾಣಬಹುದು. ಒಂದು ಜೈ ಶ್ರೀರಾಮ್ ಎನ್ನುವರು ಮತ್ತೊಂದು ಹೇ ರಾಮ್ ಎನ್ನುವರು. ವಾಲ್ಮೀಕಿ ರಾಮಾಯಣವನ್ನು ಜೈ ಶ್ರೀರಾಮ್ ಎನ್ನುವರು ನಂಬುವುದಿಲ್ಲ, ತುಳಸಿದಾಸ್ ರಚಿತ ರಾಮಾಯಣವನ್ನು ಮಾತ್ರ ಅವರು ನಂಬುತ್ತಾರೆ. ವಾಲ್ಮೀಕಿ ಪರಿಶಿಷ್ಟ ಪಂಗಡ, ಜಾತಿಯ ವ್ಯಕ್ತಿಯಾದ್ದರಿಂದ ನಂಬುವುದಿಲ್ಲ. ರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಕೂಡ ನಾನ್ ವೆಜಿಟೇರಿಯನ್ ಎಂದು ಕಾಂಗ್ರೆಸ್ ‌ಮುಖಂಡ ವಿ.ಎಸ್. ಉಗ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರು.

ವಿವಾದಾತ್ಮಕ ಹೇಳಿಕೆ ನೀಡಿದ ವಿ.ಎಸ್. ಉಗ್ರಪ್ಪ

ರಾಜಕೀಯದಲ್ಲಿ ಈ ರೀತಿಯ ಆಯಾರಾಂ ಗಯಾರಾಂಗಳು ಸಹಜ: ಇಬ್ರಾಹಿಂ ಪಕ್ಷ ತೊರೆದ ಮೇಲೆ ಸರ್ವ ಸ್ವತಂತ್ರರು. ಒಂದು ರಾಜಕೀಯ ಪಕ್ಷದಲ್ಲಿ ಸ್ಥಾನ ಮಾನ ಸಿಗದಿದ್ದಾಗ ಬಿಟ್ಟು ಹೋಗೋದು ಸರಿಯಲ್ಲ. ಸಿದ್ಧಾಂತದ ಮೇಲೆ ಪಕ್ಷದಲ್ಲಿ ಇರಬೇಕು, ಅದು ಬಿಟ್ಟು ಅಧಿಕಾರ ಸಿಗಲಿಲ್ಲ ಎಂದು ಬೇರೆ ಪಕ್ಷ ಸೇರುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ರಷ್ಯಾ- ಉಕ್ರೇನ್​ ಯುದ್ಧ: ಸೇನಾ ಪಡೆಗಳ ಮುಖ್ಯಸ್ಥರನ್ನು ಭೇಟಿ ಮಾಡಿದ ಮೋದಿ

ದಾವಣಗೆರೆ: ನಾಥೂರಾಮ್ ಗೋಡ್ಸೆ ಸಂತತಿಯವರು ಜೈ ಶ್ರೀರಾಮ್ ಅಂತಾರೆ, ಸಂವಿಧಾನವನ್ನು ಗೌರವಿಸುವವರು ಹೇ ರಾಮ್ ಎನ್ನುತ್ತಾರೆ, ಜೈ ಶ್ರೀರಾಮ್ ಎನ್ನುವರು ಎಷ್ಟು ಜನ ರಾಮಾಯಣ ಓದಿದ್ದಾರೆ ಹೇಳಿ ಎಂದು ಕಾಂಗ್ರೆಸ್ ‌ಮುಖಂಡ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಎರಡು ಗುಂಪುಗಳನ್ನು ಕಾಣಬಹುದು. ಒಂದು ಜೈ ಶ್ರೀರಾಮ್ ಎನ್ನುವರು ಮತ್ತೊಂದು ಹೇ ರಾಮ್ ಎನ್ನುವರು. ವಾಲ್ಮೀಕಿ ರಾಮಾಯಣವನ್ನು ಜೈ ಶ್ರೀರಾಮ್ ಎನ್ನುವರು ನಂಬುವುದಿಲ್ಲ, ತುಳಸಿದಾಸ್ ರಚಿತ ರಾಮಾಯಣವನ್ನು ಮಾತ್ರ ಅವರು ನಂಬುತ್ತಾರೆ. ವಾಲ್ಮೀಕಿ ಪರಿಶಿಷ್ಟ ಪಂಗಡ, ಜಾತಿಯ ವ್ಯಕ್ತಿಯಾದ್ದರಿಂದ ನಂಬುವುದಿಲ್ಲ. ರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಕೂಡ ನಾನ್ ವೆಜಿಟೇರಿಯನ್ ಎಂದು ಕಾಂಗ್ರೆಸ್ ‌ಮುಖಂಡ ವಿ.ಎಸ್. ಉಗ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರು.

ವಿವಾದಾತ್ಮಕ ಹೇಳಿಕೆ ನೀಡಿದ ವಿ.ಎಸ್. ಉಗ್ರಪ್ಪ

ರಾಜಕೀಯದಲ್ಲಿ ಈ ರೀತಿಯ ಆಯಾರಾಂ ಗಯಾರಾಂಗಳು ಸಹಜ: ಇಬ್ರಾಹಿಂ ಪಕ್ಷ ತೊರೆದ ಮೇಲೆ ಸರ್ವ ಸ್ವತಂತ್ರರು. ಒಂದು ರಾಜಕೀಯ ಪಕ್ಷದಲ್ಲಿ ಸ್ಥಾನ ಮಾನ ಸಿಗದಿದ್ದಾಗ ಬಿಟ್ಟು ಹೋಗೋದು ಸರಿಯಲ್ಲ. ಸಿದ್ಧಾಂತದ ಮೇಲೆ ಪಕ್ಷದಲ್ಲಿ ಇರಬೇಕು, ಅದು ಬಿಟ್ಟು ಅಧಿಕಾರ ಸಿಗಲಿಲ್ಲ ಎಂದು ಬೇರೆ ಪಕ್ಷ ಸೇರುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ರಷ್ಯಾ- ಉಕ್ರೇನ್​ ಯುದ್ಧ: ಸೇನಾ ಪಡೆಗಳ ಮುಖ್ಯಸ್ಥರನ್ನು ಭೇಟಿ ಮಾಡಿದ ಮೋದಿ

Last Updated : Mar 14, 2022, 10:02 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.