ETV Bharat / city

ಅತ್ತಿಗೆ ಆಗಬೇಕಿದ್ದವಳ ಮೇಲೆ ಕಣ್ಣು ಹಾಕಿದ ತಮ್ಮನ ಕತ್ತು ಸೀಳಿದ ಅಣ್ಣ! - ದಾವಣಗೆರೆಯಲ್ಲಿ ಕೊಲೆ ಕೇಸ್

ಅವರಿಬ್ಬರು ಅಕ್ಕ-ತಂಗಿ ಮಕ್ಕಳು, ಸಂಬಂಧದಲ್ಲಿ ಸಹೋದರರಾಗಬೇಕು. ಇಬ್ಬರ ನಡುವೆ ಹುಡುಗಿಗಾಗಿ ವೈಮನಸ್ಸು ಉಂಟಾಗಿತ್ತು. ತಮ್ಮನೊಬ್ಬ ಕಣ್ಣು ಹಾಕಿದ್ದ ಹುಡುಗಿಯೊಂದಿಗೆ ಅಣ್ಣನಿಗೆ ಮದುವೆ ನಿಶ್ಚಯವಾಗಿತ್ತು. ಈ ಪ್ರಕರಣ ಕೊಲೆಯಲ್ಲಿ ಅಂತ್ಯಗೊಂಡಿದೆ.

brother-murdered-by-a-person-over-a-girl-issue-in-davanagere
ಅತ್ತಿಗೆ ಆಗಬೇಕಿದ್ದವಳ ಮೇಲೆ ಕಣ್ಣು ಹಾಕಿದ ತಮ್ಮನ ಕತ್ತು ಸೀಳಿದ ಅಣ್ಣ!
author img

By

Published : Jan 28, 2022, 2:00 PM IST

Updated : Jan 28, 2022, 6:52 PM IST

ದಾವಣಗೆರೆ: ಅವರಿಬ್ಬರು ಅಕ್ಕ - ತಂಗಿ ಮಕ್ಕಳು, ಸಂಬಂಧದಲ್ಲಿ ಸಹೋದರರಾಗಬೇಕು. ಇಬ್ಬರ ನಡುವೆ ಹುಡುಗಿಗಾಗಿ ವೈಮನಸ್ಸು ಉಂಟಾಗಿತ್ತು. ತಮ್ಮನೊಬ್ಬ ಕಣ್ಣು ಹಾಕಿದ್ದ ಹುಡುಗಿಯೊಂದಿಗೆ ಅಣ್ಣನಿಗೆ ಮದುವೆ ನಿಶ್ಚಯವಾಗಿತ್ತು. ಈ ಪ್ರಕರಣ ಕೊಲೆಯಲ್ಲಿ ಅಂತ್ಯಗೊಂಡಿದೆ.

ಅವರಿಬ್ಬರು ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳು. ಅಣ್ಣನಿಗೆ ಮದುವೆ ನಿಶ್ಚಯ ಆಗಿದ್ದರಿಂದ ಅಣ್ಣ - ತಮ್ಮ ಇಬ್ಬರು ಶಾಪಿಂಗ್​ಗೆ ತೆರಳಿದ್ದಾರೆ. ನಂತರದ ದಿನ ಬೆಳಗಾಗುವುದರಲ್ಲಿ ಒಬ್ಬ ಶವವಾಗಿ ಸಿಕ್ಕರೆ, ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಈ ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಶಾಂಪಿಂಗ್​​ಗೆ ಕರೆದುಕೊಂಡು ಬಂದಿದ್ದ ಅಣ್ಣ ಇಬ್ರಾಹಿಂ ಹುಡುಗಿ ವಿಚಾರವಾಗಿ ತಮ್ಮನಾದ ಅಲ್ತಾಫ್​ನ ಕಥೆ ಮುಗಿಸಿದ್ದಾನೆ.

ಪೊಲೀಸ್​ ತನಿಖೆಯಿಂದ ಸತ್ಯ ಬಯಲು: ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ನಿವಾಸಿ ಮೆಹೆಬೂಬ್ ಬಾಷಾ ಅವರ ಮಗ ಅಲ್ತಾಫ್ ಇದೆ ತಿಂಗಳು 19ಕ್ಕೆ ದಾವಣಗೆರೆ ಕುಂದವಾಡ ಕೆರೆಯ ಕೂಗಳತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಶವವಾಗಿ ಸಿಕ್ಕಿದ್ದನು. ಆಗಲೇ ಅದು ಕೊಲೆ ಎಂದು ದೃಢಪಟ್ಟಿದ್ದು, ಸ್ವತಃ ಅಣ್ಣನೇ ತಮ್ಮನ ಕೊಲೆ‌ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ಸತ್ಯ ಹೊರಬಂದಿದೆ.

ನಿಜವಾಗಿ ನಡೆದಿದ್ದೇನು?: ಅಣ್ಣ ಇಬ್ರಾಹಿಂ ಮದುವೆ ನಿಶ್ಚಿಯವಾಗಿದ್ದ ಹುಡುಗಿಯ ಮೇಲೆ ತಮ್ಮ ಅಲ್ತಾಫ್ ಕಣ್ಣು ಹಾಕಿದ್ದನಂತೆ. ಇದನ್ನು ಸಹಿಸಿಕೊಳ್ಳದ ಅಣ್ಣ ಇಬ್ರಾಹಿಂ ಇದೇ ತಿಂಗಳು 18ಕ್ಕೆ ಅಲ್ತಾಫ್​ನನ್ನು ಶಾಪಿಂಗ್​ಗೆ ಕರೆದುಕೊಂಡು ಬಂದು, ಕತ್ತು ಸೀಳಿ ಕೊಲೆ ಮಾಡಿ, ಕಾಲ್ಕಿತ್ತಿದ್ದಾನೆ.

ಅತ್ತಿಗೆ ಆಗಬೇಕಿದ್ದವಳ ಮೇಲೆ ಕಣ್ಣು ಹಾಕಿದ ತಮ್ಮನ ಕತ್ತು ಸೀಳಿದ ಅಣ್ಣ!

ಆರೋಪಿ ಅಣ್ಣ ಇಬ್ರಾಹಿಂ ಅವರ ಮದುವೆ ಮಾರ್ಚ್‌ ತಿಂಗಳಲ್ಲಿ ನಿಶ್ಚಯವಾಗಿತ್ತು. ಅದರ ಹಿನ್ನೆಲೆ ಹೆಣ್ಣಿನ ಮನೆಗೆ ನಿಶ್ಚಿತಾರ್ಥ ಸಮಾರಂಭಕ್ಕೆಂದು ಇಬ್ರಾಹಿಂ ಹಾಗೂ ಅಲ್ತಾಫ್‌ ಜವಳಿ ಖರೀದಿಗೆಂದು ಇದೇ ತಿಂಗಳು ಮಂಗಳವಾರ 18ಕ್ಕೆ ಸಂಜೆ ದಾವಣಗೆರೆ ಹೋಗಿದ್ದರು. ರಾತ್ರಿ 8.30ರವರೆಗೆ ಇಬ್ಬರೂ ಬೇರೆಯವರೊಂದಿಗೆ ಫೋನ್‌ ಸಂಪರ್ಕದಲ್ಲಿದ್ದರು. ನಂತರ, ಇದ್ದಕ್ಕಿದ್ದಂತೆ ಒಂದು ಫೋನ್‌ ಸ್ವಿಚ್‌ ಆಫ್‌ ಆಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.

ಸಹೋದರಿಯರಿಂದ ದಾಖಲಾಗಿತ್ತು ಕಂಪ್ಲೇಂಟ್​: ಆರೋಪಿ ಇಬ್ರಾಹಿಂನ ಫೋನ್ ಆನ್‌ ಇದ್ರೂ ಕಾಲ್‌ ರೀಸೀವ್‌ ಮಾಡುತ್ತಿರಲಿಲ್ಲ. ತಡರಾತ್ರಿ ಸಹೋದರರಿಬ್ಬರು ಮನೆಗೆ ವಾಪಸ್ಸು ಬಾರದ ಹಿನ್ನೆಲೆ ಕುಟುಂಬದವರು ಹರಿಹರ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬುಧವಾರ ಸಂಜೆ ಹೊತ್ತಿಗೆ ಅಲ್ತಾಫ್‌ನ ಶವ ದಾವಣಗೆರೆ ಮಹಾಲಕ್ಷ್ಮೀ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇಬ್ರಾಹಿಂ ಹಾಗೂ ಆತನ ಬೈಕ್‌ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುರೆಸಿದ್ದರು.

ಇದೀಗ ಹುಡುಗಿ ವಿಚಾರವಾಗಿ ಅಣ್ಣ ಇಬ್ರಾಹಿಂ ತಮ್ಮ‌ಅಲ್ತಾಫ್ ನ ಕೊಲೆ ಮಾಡಿರುವ ಪ್ರಕರಣವನ್ನು ದಾವಣಗೆರೆ ಪೋಲಿಸರು ಭೇದಿಸಿ ಆರೋಪಿ ಇಬ್ರಾಹಿಂನನ್ನು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಕೇರಳ ಬಾಲಕಿಯರ ಮಿಸ್ಸಿಂಗ್​ ಕೇಸ್​: ಮತ್ತೋರ್ವ ಹುಡುಗಿ ಮಂಡ್ಯದಲ್ಲಿ ಪತ್ತೆ

ದಾವಣಗೆರೆ: ಅವರಿಬ್ಬರು ಅಕ್ಕ - ತಂಗಿ ಮಕ್ಕಳು, ಸಂಬಂಧದಲ್ಲಿ ಸಹೋದರರಾಗಬೇಕು. ಇಬ್ಬರ ನಡುವೆ ಹುಡುಗಿಗಾಗಿ ವೈಮನಸ್ಸು ಉಂಟಾಗಿತ್ತು. ತಮ್ಮನೊಬ್ಬ ಕಣ್ಣು ಹಾಕಿದ್ದ ಹುಡುಗಿಯೊಂದಿಗೆ ಅಣ್ಣನಿಗೆ ಮದುವೆ ನಿಶ್ಚಯವಾಗಿತ್ತು. ಈ ಪ್ರಕರಣ ಕೊಲೆಯಲ್ಲಿ ಅಂತ್ಯಗೊಂಡಿದೆ.

ಅವರಿಬ್ಬರು ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳು. ಅಣ್ಣನಿಗೆ ಮದುವೆ ನಿಶ್ಚಯ ಆಗಿದ್ದರಿಂದ ಅಣ್ಣ - ತಮ್ಮ ಇಬ್ಬರು ಶಾಪಿಂಗ್​ಗೆ ತೆರಳಿದ್ದಾರೆ. ನಂತರದ ದಿನ ಬೆಳಗಾಗುವುದರಲ್ಲಿ ಒಬ್ಬ ಶವವಾಗಿ ಸಿಕ್ಕರೆ, ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಈ ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಶಾಂಪಿಂಗ್​​ಗೆ ಕರೆದುಕೊಂಡು ಬಂದಿದ್ದ ಅಣ್ಣ ಇಬ್ರಾಹಿಂ ಹುಡುಗಿ ವಿಚಾರವಾಗಿ ತಮ್ಮನಾದ ಅಲ್ತಾಫ್​ನ ಕಥೆ ಮುಗಿಸಿದ್ದಾನೆ.

ಪೊಲೀಸ್​ ತನಿಖೆಯಿಂದ ಸತ್ಯ ಬಯಲು: ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ನಿವಾಸಿ ಮೆಹೆಬೂಬ್ ಬಾಷಾ ಅವರ ಮಗ ಅಲ್ತಾಫ್ ಇದೆ ತಿಂಗಳು 19ಕ್ಕೆ ದಾವಣಗೆರೆ ಕುಂದವಾಡ ಕೆರೆಯ ಕೂಗಳತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಶವವಾಗಿ ಸಿಕ್ಕಿದ್ದನು. ಆಗಲೇ ಅದು ಕೊಲೆ ಎಂದು ದೃಢಪಟ್ಟಿದ್ದು, ಸ್ವತಃ ಅಣ್ಣನೇ ತಮ್ಮನ ಕೊಲೆ‌ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ಸತ್ಯ ಹೊರಬಂದಿದೆ.

ನಿಜವಾಗಿ ನಡೆದಿದ್ದೇನು?: ಅಣ್ಣ ಇಬ್ರಾಹಿಂ ಮದುವೆ ನಿಶ್ಚಿಯವಾಗಿದ್ದ ಹುಡುಗಿಯ ಮೇಲೆ ತಮ್ಮ ಅಲ್ತಾಫ್ ಕಣ್ಣು ಹಾಕಿದ್ದನಂತೆ. ಇದನ್ನು ಸಹಿಸಿಕೊಳ್ಳದ ಅಣ್ಣ ಇಬ್ರಾಹಿಂ ಇದೇ ತಿಂಗಳು 18ಕ್ಕೆ ಅಲ್ತಾಫ್​ನನ್ನು ಶಾಪಿಂಗ್​ಗೆ ಕರೆದುಕೊಂಡು ಬಂದು, ಕತ್ತು ಸೀಳಿ ಕೊಲೆ ಮಾಡಿ, ಕಾಲ್ಕಿತ್ತಿದ್ದಾನೆ.

ಅತ್ತಿಗೆ ಆಗಬೇಕಿದ್ದವಳ ಮೇಲೆ ಕಣ್ಣು ಹಾಕಿದ ತಮ್ಮನ ಕತ್ತು ಸೀಳಿದ ಅಣ್ಣ!

ಆರೋಪಿ ಅಣ್ಣ ಇಬ್ರಾಹಿಂ ಅವರ ಮದುವೆ ಮಾರ್ಚ್‌ ತಿಂಗಳಲ್ಲಿ ನಿಶ್ಚಯವಾಗಿತ್ತು. ಅದರ ಹಿನ್ನೆಲೆ ಹೆಣ್ಣಿನ ಮನೆಗೆ ನಿಶ್ಚಿತಾರ್ಥ ಸಮಾರಂಭಕ್ಕೆಂದು ಇಬ್ರಾಹಿಂ ಹಾಗೂ ಅಲ್ತಾಫ್‌ ಜವಳಿ ಖರೀದಿಗೆಂದು ಇದೇ ತಿಂಗಳು ಮಂಗಳವಾರ 18ಕ್ಕೆ ಸಂಜೆ ದಾವಣಗೆರೆ ಹೋಗಿದ್ದರು. ರಾತ್ರಿ 8.30ರವರೆಗೆ ಇಬ್ಬರೂ ಬೇರೆಯವರೊಂದಿಗೆ ಫೋನ್‌ ಸಂಪರ್ಕದಲ್ಲಿದ್ದರು. ನಂತರ, ಇದ್ದಕ್ಕಿದ್ದಂತೆ ಒಂದು ಫೋನ್‌ ಸ್ವಿಚ್‌ ಆಫ್‌ ಆಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.

ಸಹೋದರಿಯರಿಂದ ದಾಖಲಾಗಿತ್ತು ಕಂಪ್ಲೇಂಟ್​: ಆರೋಪಿ ಇಬ್ರಾಹಿಂನ ಫೋನ್ ಆನ್‌ ಇದ್ರೂ ಕಾಲ್‌ ರೀಸೀವ್‌ ಮಾಡುತ್ತಿರಲಿಲ್ಲ. ತಡರಾತ್ರಿ ಸಹೋದರರಿಬ್ಬರು ಮನೆಗೆ ವಾಪಸ್ಸು ಬಾರದ ಹಿನ್ನೆಲೆ ಕುಟುಂಬದವರು ಹರಿಹರ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬುಧವಾರ ಸಂಜೆ ಹೊತ್ತಿಗೆ ಅಲ್ತಾಫ್‌ನ ಶವ ದಾವಣಗೆರೆ ಮಹಾಲಕ್ಷ್ಮೀ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇಬ್ರಾಹಿಂ ಹಾಗೂ ಆತನ ಬೈಕ್‌ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುರೆಸಿದ್ದರು.

ಇದೀಗ ಹುಡುಗಿ ವಿಚಾರವಾಗಿ ಅಣ್ಣ ಇಬ್ರಾಹಿಂ ತಮ್ಮ‌ಅಲ್ತಾಫ್ ನ ಕೊಲೆ ಮಾಡಿರುವ ಪ್ರಕರಣವನ್ನು ದಾವಣಗೆರೆ ಪೋಲಿಸರು ಭೇದಿಸಿ ಆರೋಪಿ ಇಬ್ರಾಹಿಂನನ್ನು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಕೇರಳ ಬಾಲಕಿಯರ ಮಿಸ್ಸಿಂಗ್​ ಕೇಸ್​: ಮತ್ತೋರ್ವ ಹುಡುಗಿ ಮಂಡ್ಯದಲ್ಲಿ ಪತ್ತೆ

Last Updated : Jan 28, 2022, 6:52 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.