ETV Bharat / city

ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಶರತ್​ ಬಚ್ಚೇಗೌಡ - ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶರತ್​ ಬಚ್ಚೇಗೌಡ ಸ್ಪರ್ಧೆ

ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶರತ್​ ಬಚ್ಚೇಗೌಡ ಸ್ಪರ್ಧಿಸುತ್ತಿದ್ದು, ಅಖಾಡಕ್ಕಿಳಿದ ಮೇಲೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನರ ಮನಸ್ಸಿನಲ್ಲಿ ನನಗೆ ಜಾಗವಿದೆ ಎಂದು ಹೊಸಕೋಟೆ ವಿಧಾನಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದ್ರು.

ಶರತ್​ ಬಚ್ಚೇಗೌಡ
author img

By

Published : Nov 19, 2019, 10:49 AM IST

ಹೊಸಕೋಟೆ: ಎಂಟಿಬಿ ನಾಗರಾಜ್​ ವಿರುದ್ಧ ಬಂಡಾಯವೆದ್ದಿರುವ ಪ್ರಬಲ ಟಿಕೆಟ್​ ಆಕಾಂಕ್ಷಿ ಶರತ್​ ಬಚ್ಚೇಗೌಡರನ್ನು ಸಿಎಂ ಬಿಎಸ್​ವೈ ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಈಗ ಅವರು ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್​ ಬಚ್ಚೇಗೌಡ

ಈ ಕುರಿತು ಮಾತನಾಡಿದ ಶರತ್ ಬಚ್ಚೇಗೌಡ, ಇಷ್ಟು ದಿನ ನನಗೆ ಬೆಂಬಲಿಸಿದ ಎಲ್ಲ ಬಿಜೆಪಿ ನಾಯಕರು, ಮುಖಂಡರಿಗೂ ಧನ್ಯವಾದಗಳು. ಕ್ಷೇತ್ರದ ಜನರು, ಕಾರ್ಯಕರ್ತರು, ಮುಖಂಡರಿಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅಖಾಡಕ್ಕಿಳಿದ ಮೇಲೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನರ ಮನಸಲ್ಲಿ ನನಗೆ ಜಾಗವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸಕೋಟೆ ಸ್ವಾಭಿಮಾನ ಎತ್ತಿಹಿಡಿಯವುದು ಮತದಾರರ ಕೈಯಲ್ಲಿದೆ. ಅವರು ನೀಡುವ ತೀರ್ಪಿಗೆ ನಾನು ತಲೆಬಾಗುತ್ತೇನೆ. ಈ ಚುನಾವಣೆ ಸ್ವಾಭಿಮಾನಿ ಹೊಸಕೋಟೆ ಮತದಾರರ ಹೋರಾಟ. ಅಲ್ಲದೇ ನನ್ನ ಒಂದು ತೀರ್ಮಾನದಲ್ಲಿ ತಂದೆ ಬಚ್ಚೇಗೌಡರ ಯಾವುದೇ ಪಾತ್ರ ಇಲ್ಲ ಎಂದು ಇದೇ ವೇಳೆ ಹೇಳಿದರು.

ಹೊಸಕೋಟೆ: ಎಂಟಿಬಿ ನಾಗರಾಜ್​ ವಿರುದ್ಧ ಬಂಡಾಯವೆದ್ದಿರುವ ಪ್ರಬಲ ಟಿಕೆಟ್​ ಆಕಾಂಕ್ಷಿ ಶರತ್​ ಬಚ್ಚೇಗೌಡರನ್ನು ಸಿಎಂ ಬಿಎಸ್​ವೈ ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಈಗ ಅವರು ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್​ ಬಚ್ಚೇಗೌಡ

ಈ ಕುರಿತು ಮಾತನಾಡಿದ ಶರತ್ ಬಚ್ಚೇಗೌಡ, ಇಷ್ಟು ದಿನ ನನಗೆ ಬೆಂಬಲಿಸಿದ ಎಲ್ಲ ಬಿಜೆಪಿ ನಾಯಕರು, ಮುಖಂಡರಿಗೂ ಧನ್ಯವಾದಗಳು. ಕ್ಷೇತ್ರದ ಜನರು, ಕಾರ್ಯಕರ್ತರು, ಮುಖಂಡರಿಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅಖಾಡಕ್ಕಿಳಿದ ಮೇಲೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನರ ಮನಸಲ್ಲಿ ನನಗೆ ಜಾಗವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸಕೋಟೆ ಸ್ವಾಭಿಮಾನ ಎತ್ತಿಹಿಡಿಯವುದು ಮತದಾರರ ಕೈಯಲ್ಲಿದೆ. ಅವರು ನೀಡುವ ತೀರ್ಪಿಗೆ ನಾನು ತಲೆಬಾಗುತ್ತೇನೆ. ಈ ಚುನಾವಣೆ ಸ್ವಾಭಿಮಾನಿ ಹೊಸಕೋಟೆ ಮತದಾರರ ಹೋರಾಟ. ಅಲ್ಲದೇ ನನ್ನ ಒಂದು ತೀರ್ಮಾನದಲ್ಲಿ ತಂದೆ ಬಚ್ಚೇಗೌಡರ ಯಾವುದೇ ಪಾತ್ರ ಇಲ್ಲ ಎಂದು ಇದೇ ವೇಳೆ ಹೇಳಿದರು.

Intro:Hosakote

ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ ಪರವಾಗಿಲ್ಲ,
ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಶರತ್​ ಬಚ್ಚೇಗೌಡ

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶರತ್​ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎಂಟಿಬಿ ನಾಗರಾಜ್​ ವಿರುದ್ದ ಬಂಡಾಯ ಎದ್ದಿರುವ ಪ್ರಬಲ ಟಿಕೆಟ್​ ಆಕಾಂಕ್ಷಿ ಶರತ್​ ಬಚ್ಚೇಗೌಡರನ್ನು ಸಿಎಂ ಬಿಎಸ್​ವೈ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.

ಇನ್ನೂ ಪಕ್ಷದಿಂದ ಉಚ್ಚಾಟನೆ ಮಾಡಿದ ಕುರಿತು ಮಾತನಾಡಿದ ಶರತ್ ಬಚ್ಚೇಗೌಡ ನಮ್ಮನ್ನ ಪಕ್ಷದಿಂದ ಉಚ್ಚಾಟಿಸಿರೂ ವಿಚಾರ ಗೊತ್ತಿಗಿದೆ ಇಷ್ಟು ದಿನ ನಾನಗೆ ಪಕ್ಷದಿಂದ ಬೆಂಬಲಿಸಿದ ಎಲ್ಲ ನಾಯಕರು ಮುಖಂಡರಿಗೂ ಧನ್ಯವಾದಗಳು, ಕ್ಷೇತ್ರದ ಕಾರ್ಯಕರ್ತರು ಮುಖಂಡರಿಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ದಿಸಿದ್ದು,ಕ್ಷೇತ್ರದ ಜನರ ಮನಸಲ್ಲಿ ನನಗೆ ಜಾಗವಿದೆ ಅನ್ನೂ ವಿಶ್ವಾಸವಿದೆ ಅಂತ ಉಚ್ಚಾಟನೆ ಕುರಿತು ಕೂಲ್ ಆಗಿ ಪ್ರತಿಕ್ರಿಯಿಸಿದ್ರು.

.Body:ಹೊಸಕೋಟೆ ಸ್ವಾಭಿಮಾನ ಎತ್ತಿಹಿಡಿಯವುದು ಮತದಾರರ ಕೈಯಲ್ಲಿದೆ. ಅವರು ನೀಡುವ ತೀರ್ಪಿಗೆ ನಾನು ತಲೆಬಾಗುತ್ತೇನೆ. ಈ ಚುನಾವಣೆ ಸ್ವಾಭಿಮಾನಿ ಹೊಸಕೋಟೆ ಮತದಾರರ ಹೋರಾಟ ಎಂದು ಹೇಳಿದರು.Conclusion:ಬಚ್ಚೇಗೌಡರು ನಂಬಿಕೆ ದ್ರೋಹ ಮಾಡಿದ್ದಾರೆ ಎನ್ನುವ ವಿಚಾರವಾಗಿ,ಬಚ್ಚೇಗೌಡರು ಯಾರಿಗೂ ದ್ರೋಹ ಮಾಡಿಲ್ಲ, ಅವರನ್ನು ಇಲ್ಲಿ ಎಳೆದು ತರಬೇಡಿ.ಇದರ ಬಗ್ಗೆ ಬಚ್ಚೇಗೌಡರನ್ನೇ ಕೇಳಿ.ಅಪ್ಪ ಮಕ್ಕಳ ಸಹಕಾರ ಇದೆ. ರಾಜಕೀಯ ನೆರವು ಇಲ್ಲ. ಅವರ ತತ್ವ ಸಿದ್ದಾಂತ ಬೇರೆ, ನನ್ನ ತತ್ವ ಸಿದ್ದಾಂತ ಬೇರೆ ಎಂದರು.


ಬೈಟ್ :- ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.