ETV Bharat / city

ಕೊರೊನಾ ಬಿಕ್ಕಟ್ಟು - ಕಳ್ಳರು ಸೈಲೆಂಟ್ - ಹೆಚ್ಚಾಯ್ತು ಸೈಬರ್​ ಕ್ರೈಂ!

author img

By

Published : Jun 14, 2021, 1:27 PM IST

ಎರಡನೇ ಅಲೆ ಕೋವಿಡ್ ತಡೆಗೆ ಹಂತ ಹಂತವಾಗಿ ಲಾಕ್​ಡೌನ್​​ ಜಾರಿ ಮಾಡಿ ಇದೀಗ ಅನ್​ಲಾಕ್​ ಮಾಡಲಾಗ್ತಿದೆ. ಈ ಅವಧಿಯಲ್ಲಿ ಕಳ್ಳತನದಂತಹ ಪ್ರಕರಣಗಳು ಹೆಚ್ಚಾಗಿ ನಡೆದಿಲ್ಲ ಅನ್ನೋದೇ ನಿರಾತಂಕದ ವಿಚಾರ.

Theft
ಕಳ್ಳರು ಸೈಲೆಂಟ್

ಬೆಂಗಳೂರು: ಎಲ್ಲೆಡೆ ಆರ್ಭಟವಿಟ್ಟ ಮಾರಕ ರೋಗ ತಡೆಗೆ ಜನತಾ ಕರ್ಫ್ಯೂ ನಂತರ ಸೆಮಿ ಲಾಕ್​ಡೌನ್​​ ಜಾರಿಯಾಯ್ತು. ಇದೀಗ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆಯೂ ಆರಂಭವಾಗಿದೆ. ಕೋವಿಡ್​, ಲಾಕ್​ಡೌನ್​, ಪೊಲೀಸರ ಕಾರ್ಯಾಚರಣೆ ಖದೀಮರ ಕೈ ಚಳಕಕ್ಕೆ ಅಡ್ಡಿಯಾಗಿದೆ. ಹೌದು, ಕಳೆದ ಎರಡು ಮೂರು ತಿಂಗಳಿನಲ್ಲಿ ಕಳ್ಳತನದಂತಹ ಪ್ರಕರಣಗಳು ತೀರಾನೇ ಇಳಿಕೆ ಕಂಡಿದೆ.

ಕೊರೊನಾ ಬಿಕ್ಕಟ್ಟಲ್ಲಿ ಸೈಲೆಂಟಾದ ಕಳ್ಳರು

ಕಳೆದ ಕೆಲ ದಿನಗಳಿಂದೆ ರಾಜ್ಯ ರಾಜಧಾನಿಯಲ್ಲಿ ಸೋಂಕು ವಿಪರೀತವಾಗಿತ್ತು. ಕೋವಿಡ್​ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸುತ್ತಾ, ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಜನರು ಸುಖಾಸುಮ್ಮನೆ ಹೊರಗೆ ಬಾರಲು ಹಿಂದೇಟು ಹಾಕುತ್ತಿದ್ದರು. ಇದೆಲ್ಲವೂ ಕಳ್ಳರ ಕೈ ಕಟ್ಟಿ ಹಾಕಿದ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣಗಳು ತೀರಾ ಇಳಿಕೆಯಾಗಿದ್ದವು. ಆದ್ರೆ ಸೈಬರ್​ ಕ್ರೈಂ ಮಾತ್ರ ಎಗ್ಗಿಲ್ಲದೇ ನಡೆಯುತ್ತಿದೆ.

ಹೌದು, ಬೆಂಗಳೂರಿನಲ್ಲಿ ಆಕ್ಸಿಜನ್​ ದಂಧೆ, ಬೆಡ್​ ಬ್ಲಾಕಿಂಗ್​​ ದಂಧೆ, ರೆಮ್ಡಿಸಿವಿರ್​​ ಮಾರಾಟ ಇಂತಹ ಆನ್​ಲೈನ್​ ವಂಚನೆಯೇ ಹೆಚ್ಚಾಗಿ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ಮನೆಗಳ್ಳತನ, ಡಕಾಯಿತಿ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತವೆ. ಆದ್ರೆ ಕಳೆದ ಎರಡ್ಮೂರು ತಿಂಗಳಿಂದ ಕಳ್ಳರು ಗಪ್​ಚುಪ್​ ಆಗಿದ್ದಾರೆ. ಕೋವಿಡ್​, ಸೆಮಿ ಲಾಕ್​ಡೌನ್​ ಎಲ್ಲೆಡೆ ಪೊಲೀಸರೇ ಕಾಣ್ಸೋದ್ರಿಂದ ಕಳ್ಳತನಕ್ಕೆ ಅವಕಾಶವಿಲ್ಲದಂತಾಗಿದೆ.

ಕೋವಿಡ್​, ಲಾಕ್​ಡೌನ್​ನಿಂದ ಕಳ್ಳತನ ಪ್ರಕರಣಗಳು ತೀರಾ ಕಡಿಮೆಯಾಗಿದ್ದವು. ಇದೀಗ ಹಂತಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಶುರುವಾಗಿದ್ದು, ಮತ್ತೆ ಬಾಲ ಬಿಚ್ಚುವ ಕಳ್ಳರಿಗೆ ಪೊಲೀಸರು ಬಿಸಿ ಮುಟ್ಟಿಸಬೇಕಿದೆ.

ಬೆಂಗಳೂರು: ಎಲ್ಲೆಡೆ ಆರ್ಭಟವಿಟ್ಟ ಮಾರಕ ರೋಗ ತಡೆಗೆ ಜನತಾ ಕರ್ಫ್ಯೂ ನಂತರ ಸೆಮಿ ಲಾಕ್​ಡೌನ್​​ ಜಾರಿಯಾಯ್ತು. ಇದೀಗ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆಯೂ ಆರಂಭವಾಗಿದೆ. ಕೋವಿಡ್​, ಲಾಕ್​ಡೌನ್​, ಪೊಲೀಸರ ಕಾರ್ಯಾಚರಣೆ ಖದೀಮರ ಕೈ ಚಳಕಕ್ಕೆ ಅಡ್ಡಿಯಾಗಿದೆ. ಹೌದು, ಕಳೆದ ಎರಡು ಮೂರು ತಿಂಗಳಿನಲ್ಲಿ ಕಳ್ಳತನದಂತಹ ಪ್ರಕರಣಗಳು ತೀರಾನೇ ಇಳಿಕೆ ಕಂಡಿದೆ.

ಕೊರೊನಾ ಬಿಕ್ಕಟ್ಟಲ್ಲಿ ಸೈಲೆಂಟಾದ ಕಳ್ಳರು

ಕಳೆದ ಕೆಲ ದಿನಗಳಿಂದೆ ರಾಜ್ಯ ರಾಜಧಾನಿಯಲ್ಲಿ ಸೋಂಕು ವಿಪರೀತವಾಗಿತ್ತು. ಕೋವಿಡ್​ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸುತ್ತಾ, ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಜನರು ಸುಖಾಸುಮ್ಮನೆ ಹೊರಗೆ ಬಾರಲು ಹಿಂದೇಟು ಹಾಕುತ್ತಿದ್ದರು. ಇದೆಲ್ಲವೂ ಕಳ್ಳರ ಕೈ ಕಟ್ಟಿ ಹಾಕಿದ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣಗಳು ತೀರಾ ಇಳಿಕೆಯಾಗಿದ್ದವು. ಆದ್ರೆ ಸೈಬರ್​ ಕ್ರೈಂ ಮಾತ್ರ ಎಗ್ಗಿಲ್ಲದೇ ನಡೆಯುತ್ತಿದೆ.

ಹೌದು, ಬೆಂಗಳೂರಿನಲ್ಲಿ ಆಕ್ಸಿಜನ್​ ದಂಧೆ, ಬೆಡ್​ ಬ್ಲಾಕಿಂಗ್​​ ದಂಧೆ, ರೆಮ್ಡಿಸಿವಿರ್​​ ಮಾರಾಟ ಇಂತಹ ಆನ್​ಲೈನ್​ ವಂಚನೆಯೇ ಹೆಚ್ಚಾಗಿ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ಮನೆಗಳ್ಳತನ, ಡಕಾಯಿತಿ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತವೆ. ಆದ್ರೆ ಕಳೆದ ಎರಡ್ಮೂರು ತಿಂಗಳಿಂದ ಕಳ್ಳರು ಗಪ್​ಚುಪ್​ ಆಗಿದ್ದಾರೆ. ಕೋವಿಡ್​, ಸೆಮಿ ಲಾಕ್​ಡೌನ್​ ಎಲ್ಲೆಡೆ ಪೊಲೀಸರೇ ಕಾಣ್ಸೋದ್ರಿಂದ ಕಳ್ಳತನಕ್ಕೆ ಅವಕಾಶವಿಲ್ಲದಂತಾಗಿದೆ.

ಕೋವಿಡ್​, ಲಾಕ್​ಡೌನ್​ನಿಂದ ಕಳ್ಳತನ ಪ್ರಕರಣಗಳು ತೀರಾ ಕಡಿಮೆಯಾಗಿದ್ದವು. ಇದೀಗ ಹಂತಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಶುರುವಾಗಿದ್ದು, ಮತ್ತೆ ಬಾಲ ಬಿಚ್ಚುವ ಕಳ್ಳರಿಗೆ ಪೊಲೀಸರು ಬಿಸಿ ಮುಟ್ಟಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.