ನೆಲಮಂಗಲ: ದೇವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿ ಕಿರೀಟ, ಹುಂಡಿ ಸಮೇತ ಪರಾರಿಯಾಗಿರುವ ಘಟನೆ ನೆಲಮಂಗಲ ಪಟ್ಟಣದ ಮಾರುತಿ ನಗರದಲ್ಲಿನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ.
ವರಸಿದ್ಧಿ ವಿನಾಯಕ ದೇವಸ್ಥಾನದ ಬಾಗಿಲ ಬೀಗ ಒಡೆದು ದೇವಸ್ಥಾನ ಪ್ರವೇಶಿಸಿರುವ ಕಳ್ಳರು ದೇವರ ಬೆಳ್ಳಿ ಕಿರೀಟ, ಬೀರುವಿನಲ್ಲಿದ್ದ ಹಣ ಮತ್ತು ಹುಂಡಿ ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.