ETV Bharat / city

ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಲಾಟೆ: ಮರುದಿನವೇ ವಿದ್ಯಾರ್ಥಿ ಹತ್ಯೆ

author img

By

Published : Aug 12, 2022, 10:08 PM IST

ಪ್ರಾವಿನ್ಸ್​ ಕಾಲೇಜಿನಲ್ಲಿ ನಿನ್ನೆ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಸಹಪಾಠಿಗಳೊಂದಿಗೆ ಜಗಳವಾಡಿಕೊಂಡಿದ್ದ ಅರ್ಬಾಜ್​ನನ್ನು ಇಂದು ಕಾಲೇಜಿನಿಂದ ಹೊರಕರೆದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

died Arbaz
ಕೊಲೆಯಾದ ಅರ್ಬಾಜ್​

ಬೆಂಗಳೂರು: ವಿದ್ಯಾರ್ಥಿಗಳ ನಡುವೆ ಕಾಲೇಜಿನಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಇಂದು ಮಧ್ಯಾಹ್ನ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಹೆಚ್.ಬಿ.ಆರ್ ಲೇಔಟಿನ ಪ್ರಾವಿನ್ಸ್ ಕಾಲೇಜು ಬಳಿ ನಡೆದಿದೆ. ಆರ್ಬಾಜ್ (18) ಕೊಲೆಯಾದ ವಿದ್ಯಾರ್ಥಿ.

ಪ್ರಾವಿನ್ಸ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ಅರ್ಬಾಜ್ ನಿನ್ನೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಸಹಪಾಠಿಗಳೊಂದಿಗೆ ಜಗಳವಾಡಿಕೊಂಡಿದ್ದ. ಇಂದು ಮಧ್ಯಾಹ್ನ ನಮಾಜ್ ಮುಗಿಸಿ ಕಾಲೇಜಿಗೆ ಬಂದಿದ್ದ ಅರ್ಬಾಜ್​ನನ್ನು ಕಾಲೇಜಿನಿಂದ ಹೊರ ಕರೆದು ಚಾಕುವಿನಿಂದ ಇರಿಯಲಾಗಿದೆ.

ಬಳಿಕ ಗಾಯಾಳುವನ್ನು ಕೆ.ಜಿ.ಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಸಹ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ‌. ಗಲಾಟೆಯ ಕಾರಣದಿಂದಲೇ ಹತ್ಯೆ ನಡೆದಿರುವ ಶಂಕೆಯಿದ್ದು ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹುಡುಗಿಗೋಸ್ಕರ ಪ್ರಾಣ ಸ್ನೇಹಿತನ ಕೊಲೆ: 12ನೇ ತರಗತಿ ವಿದ್ಯಾರ್ಥಿಗಳಿಂದ ನಡೀತು ಕೃತ್ಯ

ಬೆಂಗಳೂರು: ವಿದ್ಯಾರ್ಥಿಗಳ ನಡುವೆ ಕಾಲೇಜಿನಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಇಂದು ಮಧ್ಯಾಹ್ನ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಹೆಚ್.ಬಿ.ಆರ್ ಲೇಔಟಿನ ಪ್ರಾವಿನ್ಸ್ ಕಾಲೇಜು ಬಳಿ ನಡೆದಿದೆ. ಆರ್ಬಾಜ್ (18) ಕೊಲೆಯಾದ ವಿದ್ಯಾರ್ಥಿ.

ಪ್ರಾವಿನ್ಸ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ಅರ್ಬಾಜ್ ನಿನ್ನೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಸಹಪಾಠಿಗಳೊಂದಿಗೆ ಜಗಳವಾಡಿಕೊಂಡಿದ್ದ. ಇಂದು ಮಧ್ಯಾಹ್ನ ನಮಾಜ್ ಮುಗಿಸಿ ಕಾಲೇಜಿಗೆ ಬಂದಿದ್ದ ಅರ್ಬಾಜ್​ನನ್ನು ಕಾಲೇಜಿನಿಂದ ಹೊರ ಕರೆದು ಚಾಕುವಿನಿಂದ ಇರಿಯಲಾಗಿದೆ.

ಬಳಿಕ ಗಾಯಾಳುವನ್ನು ಕೆ.ಜಿ.ಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಸಹ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ‌. ಗಲಾಟೆಯ ಕಾರಣದಿಂದಲೇ ಹತ್ಯೆ ನಡೆದಿರುವ ಶಂಕೆಯಿದ್ದು ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹುಡುಗಿಗೋಸ್ಕರ ಪ್ರಾಣ ಸ್ನೇಹಿತನ ಕೊಲೆ: 12ನೇ ತರಗತಿ ವಿದ್ಯಾರ್ಥಿಗಳಿಂದ ನಡೀತು ಕೃತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.