ETV Bharat / city

ಇಂದಿರಾ ಗಾಂಧಿ ಈ ದೇಶ ಕಂಡ ಅಪ್ರತಿಮ ನಾಯಕಿ : ವಿಪಕ್ಷ ನಾಯಕ ಸಿದ್ದರಾಮಯ್ಯ

author img

By

Published : Oct 31, 2021, 4:07 PM IST

ಇಂದಿರಾಗಾಂಧಿ ಅವರು ಬಾಲ್ಯದಿಂದ ಅಪಾರ ದೇಶ ಭಕ್ತಿ ಬೆಳೆಸಿಕೊಂಡಿದ್ದವರು. ಸ್ವಾತಂತ್ರ್ಯ ಹೋರಾಟಗಾರರ ಜತೆಯಲ್ಲೇ ಬೆಳೆದಿದ್ದರು. ದೇಶದ ಪ್ರಧಾನಿಯಾಗಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಬಹಳ ವಿರೋಧ ಎದುರಿಸಿದರು. ಕಾಂಗ್ರೆಸ್ ಇಬ್ಬಾಗ ಆದಾಗ ನಿಜಲಿಂಗಪ್ಪ ಅವರು ಸಿಂಡಿಕೇಟ್ ಭಾಗದ ನಾಯಕರಾದರೆ, ಇಂದಿರಾ ಅವರು ಇಂಡಿಕೆಟ್ ನಾಯಕರಾದರು. ನಂತರ ಇಂದಿರಾ ಅವರು ಪಕ್ಷ ಕಟ್ಟಿದ ರೀತಿ, ದೇಶ ಮುನ್ನಡೆಸಿದ ರೀತಿ ಸ್ಮರಿಸಬೇಕಾದದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Statement of Opposition Leader Siddaramaiah on Indira Gandhi
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು : ಇಂದಿರಾ ಗಾಂಧಿ ಅವರು ಈ ದೇಶ ಕಂಡ ಅಪ್ರತಿಮ ನಾಯಕಿ. 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿರಾಗಾಂಧಿ ಅವರು ಹುತಾತ್ಮರಾದ ಹಾಗೂ ಸರ್ದಾರ್ ಪಟೇಲ್ ಅವರ ಜನ್ಮದಿನ ಕಾಕತಾಳೀಯವಾಗಿ ಎರಡು ಒಂದೇ ದಿನ. ಇಂದಿರಾ ಅವರನ್ನು ಉಕ್ಕಿನ ಮಹಿಳೆ ಎಂದರೆ, ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ ಎಂದರು.

ಇಂದಿರಾ ಅವರು ಪಕ್ಷ ಕಟ್ಟಿದ ರೀತಿ ಸ್ಮರಿಸಬೇಕಾದದ್ದು: ಇಂದಿರಾಗಾಂಧಿ ಅವರು ಬಾಲ್ಯದಿಂದ ಅಪಾರ ದೇಶ ಭಕ್ತಿ ಬೆಳೆಸಿಕೊಂಡಿದ್ದವರು. ಸ್ವಾತಂತ್ರ್ಯ ಹೋರಾಟಗಾರರ ಜತೆಯಲ್ಲೇ ಬೆಳೆದಿದ್ದರು. ದೇಶದ ಪ್ರಧಾನಿಯಾಗಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಬಹಳ ವಿರೋಧ ಎದುರಿಸಿದರು. ಕಾಂಗ್ರೆಸ್ ಇಬ್ಭಾಗ ಆದಾಗ ನಿಜಲಿಂಗಪ್ಪ ಅವರು ಸಿಂಡಿಕೇಟ್ ಭಾಗದ ನಾಯಕರಾದರೆ, ಇಂದಿರಾ ಅವರು ಸಿಂಡಿಕೇಟ್ ನಾಯಕರಾದರು. ನಂತರ ಇಂದಿರಾ ಅವರು ಪಕ್ಷ ಕಟ್ಟಿದ ರೀತಿ, ದೇಶ ಮುನ್ನಡೆಸಿದ ರೀತಿ ಸ್ಮರಿಸಬೇಕಾದದ್ದು ಎಂದು ಹೇಳಿದರು.

ದೇಶದಲ್ಲಿನ ಬಡತನ ನಿರ್ಮೂಲನೆಗೆ ಇಚ್ಛಾಶಕ್ತಿ : ದೇಶದಲ್ಲಿನ ಬಡತನ ನಿರ್ಮೂಲನೆಗೆ ಇಚ್ಛಾಶಕ್ತಿ ಇಟ್ಟಿದ್ದರು. ದೇಶದಲ್ಲಿ ಅಸಮಾನತೆ ಶತಮಾನಗಳಿಂದ ಬೆಳೆದು ಬಂದಿತ್ತು. ಸಾಮಾಜಿಕ ಹಾಗೂ ಆರ್ಥಿಕವಾಗಿ ಇದ್ದ ಅಸಮಾನತೆ ಹೋಗಲಾಡಿಸಲು 20 ಅಂಶಗಳ ಕಾರ್ಯಕ್ರಮ ರೂಪಿಸಿದರು. ಬಡವರಿಗಾಗಿ, ರೈತರಿಗೆ, ಮಹಿಳೆಯರಿಗಾಗಿ, ಅನೇಕ ಕಾರ್ಯಕ್ರಮ ಕೊಟ್ಟರು ಎಂದು ತಿಳಿಸಿದರು.

ಇಂದಿರಾ-ಪಟೇಲ್‌ರ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣ್ಣನೆ..

ಭೂ ಸುಧಾರಣಾ ಕಾಯ್ದೆ ತಂದು, ರಾಜಧನ ರದ್ದು, ಬ್ಯಾಂಕ್ ರಾಷ್ಟೀಕರಣ ಮಾಡಿದರು. ಶ್ರೀಮಂತರು ಮಾತ್ರ ಬ್ಯಾಂಕ್ ಖಾತೆ, ಸಾಲ, ಠೇವಣಿ ಅವಕಾಶ ಇತ್ತು. ರಾಷ್ಟ್ರೀಕರಣದಿಂದ ಬ್ಯಾಂಕ್ ಸೌಲಭ್ಯ ಕಟ್ಟೆ ಕಡೆಯ ವ್ಯಕ್ತಿಗೂ ಸಿಗುವಂತೆ ಮಾಡಿದರು. ಇದೆಲ್ಲದರಿಂದ ಜನ ಅವರನ್ನು ದೇವತೆಯಂತೆ ಕಾಣುತ್ತಿದ್ದರು ಎಂದರು.

ದಲಿತರ ಮನೆಯಲ್ಲಿ ಇಂದಿರಾ ಗಾಂಧಿ ಅವರ ಫೋಟೋ ಇತ್ತು: 1978ರಲ್ಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ನಾನು ಜನತಾ ಪಕ್ಷದಲ್ಲಿದ್ದಾಗ ಹಾರೋಹಳ್ಳಿ ಊರಿಗೆ ಮತ ಕೇಳಲು ಹೋದಾಗ ಪ್ರತಿ ದಲಿತರ ಮನೆಯಲ್ಲಿ ಇಂದಿರಾ ಗಾಂಧಿ ಅವರ ಫೋಟೋ ಇತ್ತು. ಕೇವಲ ಇಂದಿರಾ ಗಾಂಧಿ ಅವರ ಫೋಟೋ ತೋರಿಸಿ 27 ಕ್ಷೇತ್ರಗಲ್ಲಿ ಕಾಂಗ್ರೆಸ್ ಗೆದ್ದಿತ್ತು. ಇಂದಿರಾ ಅವರು ಅಷ್ಟರ ಮಟ್ಟಿಗೆ ಖ್ಯಾತಿ ಪಡೆದಿದ್ದರು ಎಂದು ಬಣ್ಣಿಸಿದರು.

ಇಂದಿರಾಗಾಂಧಿ ಹಾಗೂ ಸರ್ದಾರ್ ಪಟೇಲರ ಆದರ್ಶ ಪಾಲಿಸಿಕೊಂಡು ಮುಂದುವರಿಸಿಕೊಂಡು ಹೋಗಬೇಕು. ಪಟೇಲರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡವರು. ರೈತ ಕುಟುಂಬದಿಂದ ಬಂದ ಅವರು ಕಾನೂನು ಓದಿ ಗಾಂಧೀಜಿ ಅವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ತಮ್ಮ ಪತ್ನಿ ಕಾಲವಾದಾಗಲೂ ವಿಚಾಲಿತರಾಗದೆ, ತಮ್ಮ ಕೆಲಸ ಮುಗಿಸಿ ನಂತರ ಹೋಗುತ್ತಾರೆ. ಅಷ್ಟರ ಮಟ್ಟಿಗೆ ಕರ್ತವ್ಯ ನಿಷ್ಠೆ ಹಾಗೂ ದೇಶ ನಿಷ್ಠೆ ಇತ್ತು ಎಂದು ವಿವರಿಸಿದರು.

ಭಾರತದಲ್ಲಿ 500ಕ್ಕೂ ಹೆಚ್ಚು ಸಂಸ್ಥಾನ ಇವೆ : ಭಾರತದಲ್ಲಿ 500ಕ್ಕೂ ಹೆಚ್ಚು ಸಂಸ್ಥಾನ ಇವೆ. ಅವು ವಿಭಜನೆ ಆಗುತ್ತವೆ ಎಂದು ಬ್ರಿಟಿಷರು ಭಾವಿಸಿದರು. ಆದರೆ, ಈ ಎಲ್ಲ ಸಂಸ್ಥಾನಗಳನ್ನು ಒಗ್ಗೂಡಿಸಿದ ರೀತಿ ಅವಿಸ್ಮರಣೀಯ. ಅದು ಸಾಮಾನ್ಯ ನಾಯಕರಿಂದ ಸಾಧ್ಯವಿಲ್ಲ. ಭಾರತ ಒಂದು ರಾಷ್ಟ್ರವಾಗಿ ಒಗ್ಗೂಡಿಸುವಲ್ಲಿ ಅವರ ಪಾತ್ರ ಅಪಾರ. ಅವರು ಹೆಚ್ಚು ದಿನ ಉಳಿಯಲಿಲ್ಲ. ಆದರೂ ಇವರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಪಟೇಲರನ್ನು ಕಡೆಗಣಿಸಿದರು, ಅಂಬೇಡ್ಕರ್ ಅವರನ್ನು ಸೋಲಿಸಿದರು ಎಂದೆಲ್ಲಾ ಸುಳ್ಳು ಹೇಳುತ್ತಿದ್ದಾರೆ ಎಂದರು.

ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟೇ ಇರಲಿಲ್ಲ: ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟೇ ಇರಲಿಲ್ಲ. ಅವರಿಗೆ ದೇಶಭಕ್ತಿ ಗೊತ್ತಿಲ್ಲ, ತ್ಯಾಗ-ಬಲಿದಾನ ಮಾಡಿಲ್ಲ. ಈಗ ದೇಶ ರಕ್ಷಿಸುತ್ತೇವೆ ಎಂದು ಡೋಂಗಿ ಬಿಡುತ್ತಿದ್ದಾರೆ. ಕಾಂಗ್ರೆಸ್ ನವರು ತಮ್ಮ ಆಸ್ತಿ ಪಾಸ್ತಿ, ಪ್ರಾಣ ತ್ಯಾಗ ಮಾಡಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವ್ಯತ್ಯಾಸ. ಸ್ವಾತಂತ್ರ್ಯ ತರಲು, ದೇಶ ಕಟ್ಟಲು ಕಾಂಗ್ರೆಸ್ ಕೊಡುಗೆ ಅಪಾರ ಎಂದು ವಿವರಿಸಿದರು.

ಮೋದಿ ಅವರು ಈಗ ದೇಶಕ್ಕಾಗಿ ಕಾಂಗ್ರೆಸ್ ಕೊಡುಗೆ ಏನು ಎಂದು ಕೇಳುತ್ತಾರೆ. ದೇಶದಲ್ಲಿ ವಿದ್ಯುತೀಕರಣ, ದೂರವಾಣಿ ಸಂಪರ್ಕ ಕೊಟ್ಟಿದ್ದು ರಾಜೀವ್ ಗಾಂಧಿ. ನೆಹರು, ಪಟೇಲರು, ಅಂಬೇಡ್ಕರ್, ಇಂದಿರಾಗಾಂಧಿ, ರಾಜೀವ್ ಗಾಂಧಿ, ಈ ನಾಯಕರು ನಡೆದ ದಾರಿಯಲ್ಲಿ ನಡೆಯಲು ಪ್ರಯತ್ನಿಸಿದರೆ ಸಾಕು ದೇಶಕ್ಕೆ ಸ್ವಲ್ಪವಾದರೂ ಸೇವೆ ಮಾಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ರಾಣಿ ಸತೀಶ್, ಉಮಾಶ್ರೀ, ಹೆಚ್.ಎಂ.ರೇವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು : ಇಂದಿರಾ ಗಾಂಧಿ ಅವರು ಈ ದೇಶ ಕಂಡ ಅಪ್ರತಿಮ ನಾಯಕಿ. 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿರಾಗಾಂಧಿ ಅವರು ಹುತಾತ್ಮರಾದ ಹಾಗೂ ಸರ್ದಾರ್ ಪಟೇಲ್ ಅವರ ಜನ್ಮದಿನ ಕಾಕತಾಳೀಯವಾಗಿ ಎರಡು ಒಂದೇ ದಿನ. ಇಂದಿರಾ ಅವರನ್ನು ಉಕ್ಕಿನ ಮಹಿಳೆ ಎಂದರೆ, ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ ಎಂದರು.

ಇಂದಿರಾ ಅವರು ಪಕ್ಷ ಕಟ್ಟಿದ ರೀತಿ ಸ್ಮರಿಸಬೇಕಾದದ್ದು: ಇಂದಿರಾಗಾಂಧಿ ಅವರು ಬಾಲ್ಯದಿಂದ ಅಪಾರ ದೇಶ ಭಕ್ತಿ ಬೆಳೆಸಿಕೊಂಡಿದ್ದವರು. ಸ್ವಾತಂತ್ರ್ಯ ಹೋರಾಟಗಾರರ ಜತೆಯಲ್ಲೇ ಬೆಳೆದಿದ್ದರು. ದೇಶದ ಪ್ರಧಾನಿಯಾಗಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಬಹಳ ವಿರೋಧ ಎದುರಿಸಿದರು. ಕಾಂಗ್ರೆಸ್ ಇಬ್ಭಾಗ ಆದಾಗ ನಿಜಲಿಂಗಪ್ಪ ಅವರು ಸಿಂಡಿಕೇಟ್ ಭಾಗದ ನಾಯಕರಾದರೆ, ಇಂದಿರಾ ಅವರು ಸಿಂಡಿಕೇಟ್ ನಾಯಕರಾದರು. ನಂತರ ಇಂದಿರಾ ಅವರು ಪಕ್ಷ ಕಟ್ಟಿದ ರೀತಿ, ದೇಶ ಮುನ್ನಡೆಸಿದ ರೀತಿ ಸ್ಮರಿಸಬೇಕಾದದ್ದು ಎಂದು ಹೇಳಿದರು.

ದೇಶದಲ್ಲಿನ ಬಡತನ ನಿರ್ಮೂಲನೆಗೆ ಇಚ್ಛಾಶಕ್ತಿ : ದೇಶದಲ್ಲಿನ ಬಡತನ ನಿರ್ಮೂಲನೆಗೆ ಇಚ್ಛಾಶಕ್ತಿ ಇಟ್ಟಿದ್ದರು. ದೇಶದಲ್ಲಿ ಅಸಮಾನತೆ ಶತಮಾನಗಳಿಂದ ಬೆಳೆದು ಬಂದಿತ್ತು. ಸಾಮಾಜಿಕ ಹಾಗೂ ಆರ್ಥಿಕವಾಗಿ ಇದ್ದ ಅಸಮಾನತೆ ಹೋಗಲಾಡಿಸಲು 20 ಅಂಶಗಳ ಕಾರ್ಯಕ್ರಮ ರೂಪಿಸಿದರು. ಬಡವರಿಗಾಗಿ, ರೈತರಿಗೆ, ಮಹಿಳೆಯರಿಗಾಗಿ, ಅನೇಕ ಕಾರ್ಯಕ್ರಮ ಕೊಟ್ಟರು ಎಂದು ತಿಳಿಸಿದರು.

ಇಂದಿರಾ-ಪಟೇಲ್‌ರ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣ್ಣನೆ..

ಭೂ ಸುಧಾರಣಾ ಕಾಯ್ದೆ ತಂದು, ರಾಜಧನ ರದ್ದು, ಬ್ಯಾಂಕ್ ರಾಷ್ಟೀಕರಣ ಮಾಡಿದರು. ಶ್ರೀಮಂತರು ಮಾತ್ರ ಬ್ಯಾಂಕ್ ಖಾತೆ, ಸಾಲ, ಠೇವಣಿ ಅವಕಾಶ ಇತ್ತು. ರಾಷ್ಟ್ರೀಕರಣದಿಂದ ಬ್ಯಾಂಕ್ ಸೌಲಭ್ಯ ಕಟ್ಟೆ ಕಡೆಯ ವ್ಯಕ್ತಿಗೂ ಸಿಗುವಂತೆ ಮಾಡಿದರು. ಇದೆಲ್ಲದರಿಂದ ಜನ ಅವರನ್ನು ದೇವತೆಯಂತೆ ಕಾಣುತ್ತಿದ್ದರು ಎಂದರು.

ದಲಿತರ ಮನೆಯಲ್ಲಿ ಇಂದಿರಾ ಗಾಂಧಿ ಅವರ ಫೋಟೋ ಇತ್ತು: 1978ರಲ್ಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ನಾನು ಜನತಾ ಪಕ್ಷದಲ್ಲಿದ್ದಾಗ ಹಾರೋಹಳ್ಳಿ ಊರಿಗೆ ಮತ ಕೇಳಲು ಹೋದಾಗ ಪ್ರತಿ ದಲಿತರ ಮನೆಯಲ್ಲಿ ಇಂದಿರಾ ಗಾಂಧಿ ಅವರ ಫೋಟೋ ಇತ್ತು. ಕೇವಲ ಇಂದಿರಾ ಗಾಂಧಿ ಅವರ ಫೋಟೋ ತೋರಿಸಿ 27 ಕ್ಷೇತ್ರಗಲ್ಲಿ ಕಾಂಗ್ರೆಸ್ ಗೆದ್ದಿತ್ತು. ಇಂದಿರಾ ಅವರು ಅಷ್ಟರ ಮಟ್ಟಿಗೆ ಖ್ಯಾತಿ ಪಡೆದಿದ್ದರು ಎಂದು ಬಣ್ಣಿಸಿದರು.

ಇಂದಿರಾಗಾಂಧಿ ಹಾಗೂ ಸರ್ದಾರ್ ಪಟೇಲರ ಆದರ್ಶ ಪಾಲಿಸಿಕೊಂಡು ಮುಂದುವರಿಸಿಕೊಂಡು ಹೋಗಬೇಕು. ಪಟೇಲರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡವರು. ರೈತ ಕುಟುಂಬದಿಂದ ಬಂದ ಅವರು ಕಾನೂನು ಓದಿ ಗಾಂಧೀಜಿ ಅವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ತಮ್ಮ ಪತ್ನಿ ಕಾಲವಾದಾಗಲೂ ವಿಚಾಲಿತರಾಗದೆ, ತಮ್ಮ ಕೆಲಸ ಮುಗಿಸಿ ನಂತರ ಹೋಗುತ್ತಾರೆ. ಅಷ್ಟರ ಮಟ್ಟಿಗೆ ಕರ್ತವ್ಯ ನಿಷ್ಠೆ ಹಾಗೂ ದೇಶ ನಿಷ್ಠೆ ಇತ್ತು ಎಂದು ವಿವರಿಸಿದರು.

ಭಾರತದಲ್ಲಿ 500ಕ್ಕೂ ಹೆಚ್ಚು ಸಂಸ್ಥಾನ ಇವೆ : ಭಾರತದಲ್ಲಿ 500ಕ್ಕೂ ಹೆಚ್ಚು ಸಂಸ್ಥಾನ ಇವೆ. ಅವು ವಿಭಜನೆ ಆಗುತ್ತವೆ ಎಂದು ಬ್ರಿಟಿಷರು ಭಾವಿಸಿದರು. ಆದರೆ, ಈ ಎಲ್ಲ ಸಂಸ್ಥಾನಗಳನ್ನು ಒಗ್ಗೂಡಿಸಿದ ರೀತಿ ಅವಿಸ್ಮರಣೀಯ. ಅದು ಸಾಮಾನ್ಯ ನಾಯಕರಿಂದ ಸಾಧ್ಯವಿಲ್ಲ. ಭಾರತ ಒಂದು ರಾಷ್ಟ್ರವಾಗಿ ಒಗ್ಗೂಡಿಸುವಲ್ಲಿ ಅವರ ಪಾತ್ರ ಅಪಾರ. ಅವರು ಹೆಚ್ಚು ದಿನ ಉಳಿಯಲಿಲ್ಲ. ಆದರೂ ಇವರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಪಟೇಲರನ್ನು ಕಡೆಗಣಿಸಿದರು, ಅಂಬೇಡ್ಕರ್ ಅವರನ್ನು ಸೋಲಿಸಿದರು ಎಂದೆಲ್ಲಾ ಸುಳ್ಳು ಹೇಳುತ್ತಿದ್ದಾರೆ ಎಂದರು.

ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟೇ ಇರಲಿಲ್ಲ: ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟೇ ಇರಲಿಲ್ಲ. ಅವರಿಗೆ ದೇಶಭಕ್ತಿ ಗೊತ್ತಿಲ್ಲ, ತ್ಯಾಗ-ಬಲಿದಾನ ಮಾಡಿಲ್ಲ. ಈಗ ದೇಶ ರಕ್ಷಿಸುತ್ತೇವೆ ಎಂದು ಡೋಂಗಿ ಬಿಡುತ್ತಿದ್ದಾರೆ. ಕಾಂಗ್ರೆಸ್ ನವರು ತಮ್ಮ ಆಸ್ತಿ ಪಾಸ್ತಿ, ಪ್ರಾಣ ತ್ಯಾಗ ಮಾಡಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವ್ಯತ್ಯಾಸ. ಸ್ವಾತಂತ್ರ್ಯ ತರಲು, ದೇಶ ಕಟ್ಟಲು ಕಾಂಗ್ರೆಸ್ ಕೊಡುಗೆ ಅಪಾರ ಎಂದು ವಿವರಿಸಿದರು.

ಮೋದಿ ಅವರು ಈಗ ದೇಶಕ್ಕಾಗಿ ಕಾಂಗ್ರೆಸ್ ಕೊಡುಗೆ ಏನು ಎಂದು ಕೇಳುತ್ತಾರೆ. ದೇಶದಲ್ಲಿ ವಿದ್ಯುತೀಕರಣ, ದೂರವಾಣಿ ಸಂಪರ್ಕ ಕೊಟ್ಟಿದ್ದು ರಾಜೀವ್ ಗಾಂಧಿ. ನೆಹರು, ಪಟೇಲರು, ಅಂಬೇಡ್ಕರ್, ಇಂದಿರಾಗಾಂಧಿ, ರಾಜೀವ್ ಗಾಂಧಿ, ಈ ನಾಯಕರು ನಡೆದ ದಾರಿಯಲ್ಲಿ ನಡೆಯಲು ಪ್ರಯತ್ನಿಸಿದರೆ ಸಾಕು ದೇಶಕ್ಕೆ ಸ್ವಲ್ಪವಾದರೂ ಸೇವೆ ಮಾಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ರಾಣಿ ಸತೀಶ್, ಉಮಾಶ್ರೀ, ಹೆಚ್.ಎಂ.ರೇವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.