ETV Bharat / city

ದಾಖಲೆ ಕೊಡಬೇಡಿ, ಚುನಾವಣೆ ಬಂದಾಗ ನೀವೇ ಓಡಿ ಬರುತ್ತೀರಾ: ಕೈ ನಾಯಕರಿಗೆ ಆರ್​​.ಅಶೋಕ್​​ ಟಾಂಗ್​​

author img

By

Published : Dec 26, 2019, 7:36 PM IST

ಕೆಲ ಮಾಜಿ ಮಂತ್ರಿಗಳು ನಾನು ಯಾವ ದಾಖಲೆನೂ ಕೊಡಲ್ಲ ಎಂದಿದ್ದಾರೆ. ಅವರು ಹಾಗೇ ಮಾಡಿದರೆ ಒಳ್ಳೇದು. ದಯವಿಟ್ಟು ಮಾಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ‌ನೀಡಿದ್ದಾರೆ.

KN_BNG_03_RASHOK_BYTE_SCRIPT_7201951
ದಾಖಲೆ ಕೊಡಬೇಡಿ, ಚುನಾವಣೆ ಬಂದಾಗ ನೀವೇ ಓಡಿ ಬರುತ್ತೀರ: ಕೈ ನಾಯಕರಿಗೆ ಸಚಿವ ಆರ್.ಅಶೋಕ್ ಟಾಂಗ್

ಬೆಂಗಳೂರು: ಕೆಲ ಮಾಜಿ ಮಂತ್ರಿಗಳು ನಾನು ಯಾವ ದಾಖಲೆನೂ ಕೊಡಲ್ಲ ಎಂದಿದ್ದಾರೆ. ಅವರು ಹಾಗೇ ಮಾಡಿದರೆ ಒಳ್ಳೇದು. ದಯವಿಟ್ಟು ಮಾಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ‌ನೀಡಿದ್ದಾರೆ.

ಸಚಿವ ಆರ್.ಅಶೋಕ್
ಕೆಲ ಕಾಂಗ್ರೆಸ್ ಶಾಸಕರು, ಮಾಜಿ ಮಂತ್ರಿಗಳು ಪೌರತ್ವ ಕಾಯ್ದೆಗೆ ತಾವು ದಾಖಲೆನೇ ಕೊಡುವುದಿಲ್ಲ‌ ಎಂದಿದ್ದಾರೆ. ಹಾಗೆ ಮಾಡಿದರೆ ನಿಮಗೆ ಚುನಾವಣೆಯಲ್ಲಿ ಸ್ಪರ್ಧೆ‌ ಮಾಡಲು ಆಗುವುದಿಲ್ಲ. ಈ ರೀತಿಯ ರಾಜಾರೋಷದ ಮಾತು ನಡೆಯಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​​ಗೆ ಟಾಂಗ್ ನೀಡಿದರು. ಅಮೆರಿಕದಂತಹ ದೇಶಕ್ಕೆ ಹೋದರೆ ಅಲ್ಲಿ ವೀಸಾ ಅವಧಿ ಮೀರಿದರೆ ಅರ್ಧ ಗಂಟೆ ಇರಲೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಹೊರ ದೇಶದವರು ಅಕ್ರಮವಾಗಿ ಬಂದು ಇಲ್ಲಿ ನಕಲಿ ರೇಷನ್ ಕಾರ್ಡ್ ತಗೊಂಡು ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ದೇಶದ ಜನರು ಕಟ್ಟುವ ತೆರಿಗೆ ದುರುಪಯೋಗ ಮಾಡುತ್ತಿದ್ದಾರೆ. ಬಾಂಗ್ಲಾದೇಶ, ಪಾಕ್‌ನಿಂದ ಬರುವುದಕ್ಕೆ ಇದು ಧರ್ಮ ಛತ್ರ ಅಲ್ಲ. ಸವಾಲು ಹಾಕುವ ಮೂಲಕ ಏನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್ ಶಾಸಕರಾಗಲಿ, ಬಿಜೆಪಿ ಶಾಸಕರಾಗಲಿ ಎಲ್ಲರೂ ಒಪ್ಪಲೇಬೇಕು. ನೆಲದ ಕಾನೂನುಗಳನ್ನು ಪಾಲಿಸಲೇಬೇಕು ಎಂದರು.

ಬೆಂಗಳೂರು: ಕೆಲ ಮಾಜಿ ಮಂತ್ರಿಗಳು ನಾನು ಯಾವ ದಾಖಲೆನೂ ಕೊಡಲ್ಲ ಎಂದಿದ್ದಾರೆ. ಅವರು ಹಾಗೇ ಮಾಡಿದರೆ ಒಳ್ಳೇದು. ದಯವಿಟ್ಟು ಮಾಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ‌ನೀಡಿದ್ದಾರೆ.

ಸಚಿವ ಆರ್.ಅಶೋಕ್
ಕೆಲ ಕಾಂಗ್ರೆಸ್ ಶಾಸಕರು, ಮಾಜಿ ಮಂತ್ರಿಗಳು ಪೌರತ್ವ ಕಾಯ್ದೆಗೆ ತಾವು ದಾಖಲೆನೇ ಕೊಡುವುದಿಲ್ಲ‌ ಎಂದಿದ್ದಾರೆ. ಹಾಗೆ ಮಾಡಿದರೆ ನಿಮಗೆ ಚುನಾವಣೆಯಲ್ಲಿ ಸ್ಪರ್ಧೆ‌ ಮಾಡಲು ಆಗುವುದಿಲ್ಲ. ಈ ರೀತಿಯ ರಾಜಾರೋಷದ ಮಾತು ನಡೆಯಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​​ಗೆ ಟಾಂಗ್ ನೀಡಿದರು. ಅಮೆರಿಕದಂತಹ ದೇಶಕ್ಕೆ ಹೋದರೆ ಅಲ್ಲಿ ವೀಸಾ ಅವಧಿ ಮೀರಿದರೆ ಅರ್ಧ ಗಂಟೆ ಇರಲೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಹೊರ ದೇಶದವರು ಅಕ್ರಮವಾಗಿ ಬಂದು ಇಲ್ಲಿ ನಕಲಿ ರೇಷನ್ ಕಾರ್ಡ್ ತಗೊಂಡು ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ದೇಶದ ಜನರು ಕಟ್ಟುವ ತೆರಿಗೆ ದುರುಪಯೋಗ ಮಾಡುತ್ತಿದ್ದಾರೆ. ಬಾಂಗ್ಲಾದೇಶ, ಪಾಕ್‌ನಿಂದ ಬರುವುದಕ್ಕೆ ಇದು ಧರ್ಮ ಛತ್ರ ಅಲ್ಲ. ಸವಾಲು ಹಾಕುವ ಮೂಲಕ ಏನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್ ಶಾಸಕರಾಗಲಿ, ಬಿಜೆಪಿ ಶಾಸಕರಾಗಲಿ ಎಲ್ಲರೂ ಒಪ್ಪಲೇಬೇಕು. ನೆಲದ ಕಾನೂನುಗಳನ್ನು ಪಾಲಿಸಲೇಬೇಕು ಎಂದರು.
Intro:Body:KN_BNG_03_RASHOK_BYTE_SCRIPT_7201951

ದಾಖಲೆ ಕೊಡಬೇಡಿ, ಚುನಾವಣೆ ಬಂದಾಗ ನೀವೇ ಓಡಿ ಬರುತ್ತೀರ: ಸಚಿವ ಆರ್.ಅಶೋಕ್ ಟಾಂಗ್

ಬೆಂಗಳೂರು: ಕೆಲ ಮಾಜಿ ಮಂತ್ರಿಗಳು ನಾನು ದಾಖಲೆನೇ ಕೊಡಲ್ಲ ಎಂದಿದ್ದಾರೆ. ಅವರು ಹಾಗೇ ಮಾಡಿದರೆ ಒಳ್ಳೇದು. ದಯವಿಟ್ಟು ಹಾಗೆ ಮಾಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ‌ನೀಡಿದ್ದಾರೆ.

ವಿಧಾನಸೌಧಲ್ಲಿ ಮಾತನಾಡಿದ ಅವರು, ಕೆಲ ಕಾಂಗ್ರೆಸ್ ಶಾಸಕರು, ಮಾಜಿ ಮಂತ್ರಿಗಳು ಪೌರತ್ವ ಕಾಯ್ದೆಗೆ ತಾವು ದಾಖಲೆನೇ ಕೊಡುವುದಿಲ್ಲ‌ ಎಂದಿದ್ದಾರೆ. ದಯವಿಟ್ಟು ಹಾಗೇ ಮಾಡಿ. ಅವರು ಹಾಗೇ ಮಾಡಿದರೆ ಒಳ್ಳೇದು‌. ಹಾಗೆ ಮಾಡಿದರೆ ನಿಮಗೆ ಚುನಾವಣೆಯಲ್ಲಿ ಸ್ಪರ್ಧೆ‌ ಮಾಡಲೇ ಆಗುವುದಿಲ್ಲ. ಆಗ ಓಡಿ ಬರುತ್ತಾರೆ. ಈ ರೀತಿಯ ರಾಜ ರೋಷದ ಮಾತು ನಡೆಯಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು.

ಭಾರತ ಏನು ದರ್ಮಛತ್ರ ಅಲ್ಲ:

ಈ ದೇಶ ಏನು ಸಂತೆ ಅಲ್ಲ. ಧರ್ಮ ಛತ್ರ ಅಲ್ಲ. ಅಮೇರಿಕಾ, ಬೇರೆ ದೇಶಕ್ಕೆ ಹೋದರೆ ಅಲ್ಲಿ ವೀಸಾ ಅವಧಿ ಮೀರಿದರೆ ಅರ್ಧ ಗಂಟೆ ಇರಲೂ ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.

ಹೊರ ದೇಶದವರು ಅಕ್ರಮವಾಗಿ ಬಂದು ಇಲ್ಲಿ ನಕಲಿ ರೇಷನ್ ಕಾರ್ಡ್ ತಗೊಂಡು, ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ದೇಶದ ಜನರು ಕಟ್ಟುವ ತೆರಿಗೆ ದುರುಪಯೋಗ ಮಾಡುತ್ತಿದ್ದಾರೆ. ಬಾಂಗ್ಲಾದೇಶ, ಪಾಕ್‌ನಿಂದ ಬರುವುದಕ್ಕೆ ಇದು ಧರ್ಮ ಛತ್ರ ಅಲ್ಲ. ಸವಾಲು ಹಾಕುವ ಮೂಲಕ ಏನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಪೌರತ್ವ ಕಾಯ್ದೆಯನ್ನು ಎಲ್ಲ ಶಾಸಕರು ಒಪ್ಪಲೇಬೇಕು. ಕಾಂಗ್ರೆಸ್ ಶಾಸಕರಾಗಲಿ, ಬಿಜೆಪಿ ಶಾಸಕರಾಗಲಿ ಎಲ್ಲರೂ ಕಾಯ್ದೆಯನ್ನು ಒಪ್ಪಲೇ ಬೇಕು. ನೆಲದ ಕಾನೂನುಗಳನ್ನು ಪಾಲಿಸಲೇಬೇಕು ಎಂದು ತಿಳಿಸಿದರು.

ಉ.ಪ್ರದೇಶ ಮಾದರಿ ಕಾನೂನು:

ಪ್ರತಿಭಟನೆ ನೆಪದಲ್ಲಿ ಆಸ್ತಿ ಹಾನಿ ಮಾಡಿದರೆ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಂದು ವೇಳೆ ಪ್ರತಿಭಟನಾಕಾರರು ಆಸ್ತಿಗಳನ್ನು ಹಾನಿ ಮಾಡಿದರೆ, ಉತ್ತರ ಪ್ರದೇಶ ಮಾದರಿಯಲ್ಲೇ ಸಾರ್ವಜನಿಕರ ಆಸ್ತಿ ಮುಟ್ಟುಗೋಲು ಹಾಕುವ ಕಾನೂನು ತರಬೇಕಾಗುತ್ತದೆ. ಹಾಗಾಗಿ ಯಾರೂ ಹಿಂಸಾತ್ಮಕ ಪ್ರತಿಭಟನೆ ಮಾಡಬಾರದು ಎಂದು ತಿಳಿಸಿದರು.

ಪರಿಹಾರ ಸಂಬಂಧ ಯುಟರ್ನ್ ಮಾಡಿಲ್ಲ:

ಗೋಲಿಬಾರ್ ಮೃತರಿಗೆ ಪರಿಹಾರ ಘೋಷಣೆಯಲ್ಲಿ ಯು ಟರ್ನ್ ವಿಚಾರವಾಗಿ ಪ್ರತಿಕ್ರಿಯಿಸಿದ ಆರ್.ಅಶೋಕ್, ಗೋಲಿಬಾರ್ ಸಂದರ್ಭದಲ್ಲಿ ಅವರು ಅಮಾಯಕರು ಎಂದು ಬಿಂಬಿತವಾಗಿತ್ತು. ಹಾಗಾಗಿ ಪರಿಹಾರ ಘೋಷಣೆ ಮಾಡಲಾಗಿತ್ತು. ಈಗ ಪೊಲೀಸ್ ಪೂಟೇಜ್ ನಲ್ಲಿ ಅವರೂ ಅಪರಾಧಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸತ್ಯಾಸತ್ಯತೆ ಹೊರ ಬರಲು ತನಿಖೆ ಆಗಲಿ. ಅವರು ಅಲ್ಲಿಗೆ ಸುಮ್ಮನೆ ಬಂದಿದ್ರಾ, ಅಥವ ಗಲಭೆ ಮಾಡಲು ಬಂದಿದ್ರಾ ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ. ಸಿಎಂ ಹೇಳಿಕೆಯನ್ನು ನಾವು ಸಮರ್ಥಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಧನುರ್ಮಾಸ ಬಳಿಕ ಸಂಪುಟ ವಿಸ್ತರಣೆ:

ಧನುರ್ಮಾಸ ಬಳಿಕ ಸಂಪುಡ ವಿಸ್ತರಣೆ ಆಗಲಿದೆ ಎಂದು ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

ಬಿಜೆಪಿ, ಯಡಿಯೂರಪ್ಪ ಅವರು ಏನು ಮಾತು ಕೊಟ್ಟಿದ್ದೇವೆ ಅದೇ ರೀತಿ ನಡೆದುಕೊಳ್ಳುತ್ತೇವೆ. ನುಡಿದಂತೆ ನಾವು ನಡೆಯುತ್ತೇವೆ. ಚುನಾವಣಾ ಪ್ರಚಾರದಲ್ಲೂ ಸಿಎಂ ಗೆದ್ದವರಿಗೆ ಮಂತ್ರಿ ಸ್ಥಾನ ಕೊಡಲಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಧನುರ್ಮಾಸ ಇರುವುದರಿಂದ ಬಹುಶಃ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಲಿದೆ. ಧನುರ್ಮಾಸ ಮುಗಿದ ತಕ್ಷಣ ಸಂಪುಟ ವಿಸ್ತರಣೆ ಆಗಲಿದೆ. ಜನವರಿಯಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.