ETV Bharat / city

ಅಜ್ಞಾತ ಸ್ಥಳದಲ್ಲಿ ಶ್ರೀಕಿ ವಿಷ್ಣುಭಟ್ ವಿಚಾರಣೆ: ವಿವಿಧ ಆಯಾಮದಲ್ಲಿ ಪೊಲೀಸ್ ತನಿಖೆ

author img

By

Published : Nov 7, 2021, 8:25 PM IST

ಅಜ್ಞಾತ ಸ್ಥಳದಲ್ಲಿ ಹ್ಯಾಕರ್, ಬಿಟ್ ಕಾಯಿನ್ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಹಾಗೂ ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣುಭಟ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

shrreki-and-vishnubhat-investigation-going-on-in-undisclosed-location
ಶ್ರೀಕಿ ವಿಷ್ಣುಭಟ್

ಬೆಂಗಳೂರು: ಫೈವ್ ಸ್ಟಾರ್ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿರುವ ಹ್ಯಾಕರ್, ಬಿಟ್ ಕಾಯಿನ್ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಹಾಗೂ ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣುಭಟ್​ನನ್ನು ಅರೆಸ್ಟ್ ಮಾಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇಬ್ಬರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಲಾಟೆಯ ವೇಳೆ ಮದ್ಯ ಸೇವಿಸಿರೋದು ದೃಢಪಟ್ಟಿದ್ದು, ಹ್ಯಾಕರ್ ಶ್ರೀಕೃಷ್ಣ ಮತ್ತು ವಿಷ್ಣು ಭಟ್ ಇಬ್ಬರಿಗೂ ಮಾದಕವಸ್ತು ಸೇವನೆ ಪರೀಕ್ಷೆ ಮಾಡಿಸಲಾಗಿದೆ. ಸದ್ಯ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಹ್ಯಾಕರ್ ಶ್ರೀಕೃಷ್ಣ ಹಾಗೂ ವಿಷ್ಣುಭಟ್‌ ಇಬ್ಬರನ್ನು ಪ್ರತ್ಯೇಕವಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನೆಡೆಸುತ್ತಿದ್ದಾರೆ. ಶ್ರೀಕೃಷ್ಣನನ್ನು ಭೇಟಿಯಾಗಲು ವಿಷ್ಣುಭಟ್ ಬಂದಿದ್ದು ಯಾಕೆ ಎಂಬ ಕುರಿತು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಎರಡೂವರೆ ತಿಂಗಳಿಂದ ರಾಯಲ್ ಆರ್ಕೆಡ್ ಹೋಟೆಲ್​ನಲ್ಲಿದ್ದ ಶ್ರೀಕೃಷ್ಣನ ಹೋಟೆಲ್ ಬಿಲ್​ಗೆ ವಿಷ್ಣುಭಟ್ ಫಂಡಿಂಗ ಮಾಡಿದ್ದಾನೆ. ಇದಕ್ಕೆ ಕಾರಣವನ್ನು ತನಿಖೆಯಿಂದ ಕಂಡುಹಿಡಿಯಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

ಹಲವು ಆಯಾಮಗಳಲ್ಲಿ ವಿಚಾರಣೆ:

ಶ್ರೀಕೃಷ್ಣ ತಂಗಿದ್ದ ಹೋಟೆಲ್ ರೂಂ ತಪಾಸಣೆ ನಡೆಸಿದ್ದ ಪೊಲೀಸರು ನಾಲ್ಕು ಲ್ಯಾಪ್ ಟ್ಯಾಪ್ ವಶಕ್ಕೆ ಪಡೆದಿದ್ದಾರೆ. ಶ್ರೀಕಿ ಈ ಹಿಂದೆ ಸಿಸಿಬಿಯಿಂದ ಆರೆಸ್ಟ್​​ ಆದಾಗ ಹಲವು ಸ್ಫೋಟಕ ವಿಚಾರಗಳು ಹೊರಬಂದಿದ್ದವು. ಈಗಲೂ ಸಹ ಹಲವು ದೃಷ್ಟಿಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಬಿಟ್ ಕಾಯಿನ್ ಹಾಗೂ ಡಾರ್ಕ್ ವೆಬ್‌ಸೈಟ್ ಬಳಸುವ ಕುರಿತು ಶ್ರೀಕಿ ಮಾಸ್ಟರ್ ಮೈಂಡ್ ಆಗಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ಹ್ಯಾಕ್ ಮಾಡುತ್ತಿದ್ದನಾ ಅಥವಾ ಬಿಟ್ ಕಾಯಿನ್ ಹಗರಣ ನೆಡೆಸುತ್ತಿದ್ದಾನಾ ಎನ್ನುವುದರ ಕುರಿತು ಸಮಗ್ರವಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ನಂಟುಹೊಂದಿರುವ ರಾಜಕಾರಣಿಗಳ ಮಕ್ಕಳಿಗೆ ಕಂಟಕ:

ಇತ್ತ ಶ್ರೀಕಿ ಅರೆಸ್ಟ್ ಆಗುತ್ತಿದ್ದಂತೆ ಈತನ ನಂಟು ಹೊಂದಿದ್ದ ಹತ್ತು ಹಲವಾರು ಜನರಿಗೆ ನಡುಕ ಆರಂಭವಾಗಿದೆ. ಅನೇಕ ರಾಜಕಾರಣಿಗಳ ಮಕ್ಕಳು, ವ್ಯಾಪಾರಸ್ಥರ ಮಕ್ಕಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈತ ಯಾರ ಜತೆ ಯಾವ ವ್ಯವಹಾರ ನಡೆಸಿದ್ದಾನೆ ಎನ್ನುವುದರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಾಗುತ್ತಿದೆ.

ಎರಡೂವರೆ ತಿಂಗಳಿನಿಂದ ರಾಯಲ್ ಆರ್ಕೆಡ್ ಹೋಟೆಲ್​ನಲ್ಲಿ ಶ್ರೀಕಿ:

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಕಳೆದ ಎರಡೂವರೆ ತಿಂಗಳಿನಿಂದ ಶ್ರೀಕಿ ರಾಯಲ್ ಆರ್ಕೆಡ್ ಹೋಟೆಲ್‌ನಲ್ಲಿ ತಂಗಿದ್ದ. ಶ್ರೀಕೃಷ್ಣನ ಭೇಟಿಗಾಗಿ ಶನಿವಾರ ಭೀಮಾ ಜ್ಯುವೆಲ್ಲರ್ಸ್ ನ ವಿಷ್ಣು ಭಟ್ ಬಂದಿದ್ದ. ಈ ವೇಳೆ ಹೋಟೆಲ್‌ನಲ್ಲಿದ್ದ ಡ್ಯೂಟಿ ಮ್ಯಾನೇಜರ್ ಮೇಲೆ ವಿಷ್ಣುಭಟ್ ಹಾಗೂ ಶ್ರೀಕಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ಇಬ್ಬರ ವಿರುದ್ಧ ಜೀವನ ಭೀಮಾನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504, 348,323 ರ ಅಡಿ ಎಫ್.ಐ.ಆರ್ ದಾಖಲಾಗಿದೆ.

ಬೆಂಗಳೂರು: ಫೈವ್ ಸ್ಟಾರ್ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿರುವ ಹ್ಯಾಕರ್, ಬಿಟ್ ಕಾಯಿನ್ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಹಾಗೂ ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣುಭಟ್​ನನ್ನು ಅರೆಸ್ಟ್ ಮಾಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇಬ್ಬರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಲಾಟೆಯ ವೇಳೆ ಮದ್ಯ ಸೇವಿಸಿರೋದು ದೃಢಪಟ್ಟಿದ್ದು, ಹ್ಯಾಕರ್ ಶ್ರೀಕೃಷ್ಣ ಮತ್ತು ವಿಷ್ಣು ಭಟ್ ಇಬ್ಬರಿಗೂ ಮಾದಕವಸ್ತು ಸೇವನೆ ಪರೀಕ್ಷೆ ಮಾಡಿಸಲಾಗಿದೆ. ಸದ್ಯ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಹ್ಯಾಕರ್ ಶ್ರೀಕೃಷ್ಣ ಹಾಗೂ ವಿಷ್ಣುಭಟ್‌ ಇಬ್ಬರನ್ನು ಪ್ರತ್ಯೇಕವಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನೆಡೆಸುತ್ತಿದ್ದಾರೆ. ಶ್ರೀಕೃಷ್ಣನನ್ನು ಭೇಟಿಯಾಗಲು ವಿಷ್ಣುಭಟ್ ಬಂದಿದ್ದು ಯಾಕೆ ಎಂಬ ಕುರಿತು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಎರಡೂವರೆ ತಿಂಗಳಿಂದ ರಾಯಲ್ ಆರ್ಕೆಡ್ ಹೋಟೆಲ್​ನಲ್ಲಿದ್ದ ಶ್ರೀಕೃಷ್ಣನ ಹೋಟೆಲ್ ಬಿಲ್​ಗೆ ವಿಷ್ಣುಭಟ್ ಫಂಡಿಂಗ ಮಾಡಿದ್ದಾನೆ. ಇದಕ್ಕೆ ಕಾರಣವನ್ನು ತನಿಖೆಯಿಂದ ಕಂಡುಹಿಡಿಯಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

ಹಲವು ಆಯಾಮಗಳಲ್ಲಿ ವಿಚಾರಣೆ:

ಶ್ರೀಕೃಷ್ಣ ತಂಗಿದ್ದ ಹೋಟೆಲ್ ರೂಂ ತಪಾಸಣೆ ನಡೆಸಿದ್ದ ಪೊಲೀಸರು ನಾಲ್ಕು ಲ್ಯಾಪ್ ಟ್ಯಾಪ್ ವಶಕ್ಕೆ ಪಡೆದಿದ್ದಾರೆ. ಶ್ರೀಕಿ ಈ ಹಿಂದೆ ಸಿಸಿಬಿಯಿಂದ ಆರೆಸ್ಟ್​​ ಆದಾಗ ಹಲವು ಸ್ಫೋಟಕ ವಿಚಾರಗಳು ಹೊರಬಂದಿದ್ದವು. ಈಗಲೂ ಸಹ ಹಲವು ದೃಷ್ಟಿಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಬಿಟ್ ಕಾಯಿನ್ ಹಾಗೂ ಡಾರ್ಕ್ ವೆಬ್‌ಸೈಟ್ ಬಳಸುವ ಕುರಿತು ಶ್ರೀಕಿ ಮಾಸ್ಟರ್ ಮೈಂಡ್ ಆಗಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ಹ್ಯಾಕ್ ಮಾಡುತ್ತಿದ್ದನಾ ಅಥವಾ ಬಿಟ್ ಕಾಯಿನ್ ಹಗರಣ ನೆಡೆಸುತ್ತಿದ್ದಾನಾ ಎನ್ನುವುದರ ಕುರಿತು ಸಮಗ್ರವಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ನಂಟುಹೊಂದಿರುವ ರಾಜಕಾರಣಿಗಳ ಮಕ್ಕಳಿಗೆ ಕಂಟಕ:

ಇತ್ತ ಶ್ರೀಕಿ ಅರೆಸ್ಟ್ ಆಗುತ್ತಿದ್ದಂತೆ ಈತನ ನಂಟು ಹೊಂದಿದ್ದ ಹತ್ತು ಹಲವಾರು ಜನರಿಗೆ ನಡುಕ ಆರಂಭವಾಗಿದೆ. ಅನೇಕ ರಾಜಕಾರಣಿಗಳ ಮಕ್ಕಳು, ವ್ಯಾಪಾರಸ್ಥರ ಮಕ್ಕಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈತ ಯಾರ ಜತೆ ಯಾವ ವ್ಯವಹಾರ ನಡೆಸಿದ್ದಾನೆ ಎನ್ನುವುದರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಾಗುತ್ತಿದೆ.

ಎರಡೂವರೆ ತಿಂಗಳಿನಿಂದ ರಾಯಲ್ ಆರ್ಕೆಡ್ ಹೋಟೆಲ್​ನಲ್ಲಿ ಶ್ರೀಕಿ:

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಕಳೆದ ಎರಡೂವರೆ ತಿಂಗಳಿನಿಂದ ಶ್ರೀಕಿ ರಾಯಲ್ ಆರ್ಕೆಡ್ ಹೋಟೆಲ್‌ನಲ್ಲಿ ತಂಗಿದ್ದ. ಶ್ರೀಕೃಷ್ಣನ ಭೇಟಿಗಾಗಿ ಶನಿವಾರ ಭೀಮಾ ಜ್ಯುವೆಲ್ಲರ್ಸ್ ನ ವಿಷ್ಣು ಭಟ್ ಬಂದಿದ್ದ. ಈ ವೇಳೆ ಹೋಟೆಲ್‌ನಲ್ಲಿದ್ದ ಡ್ಯೂಟಿ ಮ್ಯಾನೇಜರ್ ಮೇಲೆ ವಿಷ್ಣುಭಟ್ ಹಾಗೂ ಶ್ರೀಕಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ಇಬ್ಬರ ವಿರುದ್ಧ ಜೀವನ ಭೀಮಾನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504, 348,323 ರ ಅಡಿ ಎಫ್.ಐ.ಆರ್ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.