ETV Bharat / city

ಸೆ.30ಕ್ಕೆ ನಿರ್ಧಾರವಾಗಲಿದೆ ಬಿಬಿಎಂಪಿಯ ಮೇಯರ್, ಉಪಮೇಯರ್ ಅಭ್ಯರ್ಥಿ: ವಿಶ್ವನಾಥ್

ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಪತನದ ಬಳಿಕ ಬಿಬಿಎಂಪಿಯ ಮೇಯರ್​ ಗಂಗಾಂಬಿಕೆಯವರ ಅಧಿಕಾರವಧಿ ಕೊನೆಗೊಂಡಿದೆ. ಹೀಗಾಗಿ, ಬಿಜೆಪಿಯು ಸೆಪ್ಟೆಂಬರ್ 30ರಂದು ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು, ಬೆಂಗಳೂರಿನ ಶಾಸಕರು, ಸಂಸದರು, ಪರಿಷತ್ ಸದಸ್ಯರ ಸಭೆ ಕರೆದು ಮೇಯರ್, ಉಪಮೇಯರ್ ಅಭ್ಯರ್ಥಿ ಬಗ್ಗೆ ಅಂತಿಮ‌ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ‌ ಅವರ ರಾಜಕೀಯ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ.

author img

By

Published : Sep 28, 2019, 4:48 AM IST

S R Vishwanath

ಬೆಂಗಳೂರು: ಸೆಪ್ಟೆಂಬರ್​ 30ರಂದು ಸಿಎಂ, ಪಕ್ಷದ ರಾಜ್ಯಾಧ್ಯಕ್ಷರ, ಬೆಂಗಳೂರಿನ ಶಾಸಕರ, ಸಂಸದರ ಹಾಗೂ ವಿಧಾನ ಪರಿಷತ್ ಸದಸ್ಯರ ಸಭೆ ಕರೆದು ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಅಭ್ಯರ್ಥಿ ಬಗ್ಗೆ ಅಂತಿಮ‌ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ‌ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಮೇಯರ್, ಉಪಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ಎಸ್.ಆರ್ ವಿಶ್ವನಾಥ್ ಪ್ರತಿಕ್ರಿಯೆ

ವಿಧಾನಸೌಧದಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚಿಸಲು ಸಚಿವ ಆರ್. ಅಶೋಕ್​ ಅವರನ್ನು ಭೇಟಿಯಾದ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮವಾಗಿ ಸಿಎಂ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ‌ ನಾವು ಬದ್ಧರಾಗಿಲಿದ್ದೇವೆ. ಅರ್ಹರಾದವರು ಮತ್ತು ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ವ್ಯಕ್ತಿ ಮೇಯರ್ ಆಗಬೇಕು ಎಂಬುದು ನಮ್ಮ ಆಸೆಯ ಎಂದು ತಿಳಿಸಿದರು.

ಅನರ್ಹ ಶಾಸಕರ ಬೆಂಬಲಿಗರು, ಪಾಲಿಕೆ‌ಯ ಸದಸ್ಯರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಇದೆ. ಆ‌ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಕ್ಕಾಗಿ ಆಡಳಿತರೂಢ ಪಕ್ಷಕ್ಕೆ ಪತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಗಳ‌ ಬೆಂಬಲವೂ ಇದೆ ಎಂದರು.

ಇನ್ನು ಅವಶ್ಯಕತೆ ಇದ್ದರೆ ಅನರ್ಹರ ಬೆಂಬಲವನ್ನೂ ಕೇಳುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗುವ ಪ್ರಶ್ನೆಯೇ ಇಲ್ಲ. ಹಾಗಾಗಿ ಅವರು ಅಭ್ಯರ್ಥಿಯನ್ನು ಹಾಕುವುದು ಅನುಮಾನ‌ ಎಂದರು.

ಬೆಂಗಳೂರು: ಸೆಪ್ಟೆಂಬರ್​ 30ರಂದು ಸಿಎಂ, ಪಕ್ಷದ ರಾಜ್ಯಾಧ್ಯಕ್ಷರ, ಬೆಂಗಳೂರಿನ ಶಾಸಕರ, ಸಂಸದರ ಹಾಗೂ ವಿಧಾನ ಪರಿಷತ್ ಸದಸ್ಯರ ಸಭೆ ಕರೆದು ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಅಭ್ಯರ್ಥಿ ಬಗ್ಗೆ ಅಂತಿಮ‌ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ‌ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಮೇಯರ್, ಉಪಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ಎಸ್.ಆರ್ ವಿಶ್ವನಾಥ್ ಪ್ರತಿಕ್ರಿಯೆ

ವಿಧಾನಸೌಧದಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚಿಸಲು ಸಚಿವ ಆರ್. ಅಶೋಕ್​ ಅವರನ್ನು ಭೇಟಿಯಾದ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮವಾಗಿ ಸಿಎಂ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ‌ ನಾವು ಬದ್ಧರಾಗಿಲಿದ್ದೇವೆ. ಅರ್ಹರಾದವರು ಮತ್ತು ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ವ್ಯಕ್ತಿ ಮೇಯರ್ ಆಗಬೇಕು ಎಂಬುದು ನಮ್ಮ ಆಸೆಯ ಎಂದು ತಿಳಿಸಿದರು.

ಅನರ್ಹ ಶಾಸಕರ ಬೆಂಬಲಿಗರು, ಪಾಲಿಕೆ‌ಯ ಸದಸ್ಯರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಇದೆ. ಆ‌ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಕ್ಕಾಗಿ ಆಡಳಿತರೂಢ ಪಕ್ಷಕ್ಕೆ ಪತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಗಳ‌ ಬೆಂಬಲವೂ ಇದೆ ಎಂದರು.

ಇನ್ನು ಅವಶ್ಯಕತೆ ಇದ್ದರೆ ಅನರ್ಹರ ಬೆಂಬಲವನ್ನೂ ಕೇಳುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗುವ ಪ್ರಶ್ನೆಯೇ ಇಲ್ಲ. ಹಾಗಾಗಿ ಅವರು ಅಭ್ಯರ್ಥಿಯನ್ನು ಹಾಕುವುದು ಅನುಮಾನ‌ ಎಂದರು.

Intro:Body:KN_BNG_06_SRVISHWANATH_MAYOR_SCRIPT_7201951

ಸೆ.30ಕ್ಕೆ ಮೇಯರ್, ಉಪಮೇಯರ್ ಅಭ್ಯರ್ಥಿ ಅಂತಿಮ ಮಾಡಲಾಗುತ್ತದೆ: ಎಸ್.ಆರ್.ವಿಶ್ವನಾಥ್

ಬೆಂಗಳೂರು: ಸೆ.30 ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಬೆಂಗಳೂರಿನ ಶಾಸಕರು, ಸಂಸದರು, ಪರಿಷತ್ ಸದಸ್ಯರ ಸಭೆ ಕರೆದು ಮೇಯರ್, ಉಪಮೇಯರ್ ಅಭ್ಯರ್ಥಿ ಬಗ್ಗೆ ಅಂತಿಮ‌ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಿಎಂ‌ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚಿಸಲು ಸಚಿವ ಆರ್.ಅಶೋಕ್ ರನ್ನು ಭೇಟಿಯಾದ ಬಳಿಕ‌ ಮಾತನಾಡಿದ ಅವರು, ಅಂತಿಮವಾಗಿ ಸಿಎಂ ಏನು ತೀರ್ಮಾನ ಕೈಗೊಳ್ಳುತ್ತಾರೆ ಅದಕ್ಕೆ‌ ನಾವು ಬದ್ಧರಾಗಿರುತ್ತೇವೆ. ಒಬ್ಬ ಅರ್ಹ ಅನುಭವಸ್ತ, ಪಕ್ಷಕ್ಕೆ ಹೆಸರು ತರುವಂಥ, ಬೆಂಗಳುರಿಗೆ ಅಭಿವೃದ್ಧಿಗೆ ಪೂರಕವಾಗಿರುವ ವ್ಯಕ್ತಿ ಮೇಯರ್ ಆಗಬೇಕು ಎಂಬುದು ನಮ್ಮ‌ ಅಭಿಪ್ರಾಯ ಎಂದು ತಿಳಿಸಿದರು.

ಅನರ್ಹ ಶಾಸಕರ ಬೆಂಬಲಿಗ ಪಾಲಿಕೆ‌ ಸದಸ್ಯರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಇದೆ. ಆ‌ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಕ್ಕಾಗಿ ಆಡಳಿತರೂಢ ಪಕ್ಷಕ್ಕೆ ಪತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲಿಸುವ ಬಗ್ಗೆ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪಕ್ಷೇತರ ಅಭ್ಯರ್ಥಿಗಳ‌ ಬೆಂಬಲ ಇದೆ. ಅನರ್ಹ ಶಾಸಕರಾಗಲಿ, ಅವರ ಬೆಂಬಲಿಗ ಪಾಲಿಕೆ ಸದಸ್ಯರನ್ನು‌ ಇನ್ನೂ ನಾವು ಸಂಪರ್ಕ ಮಾಡಿಲ್ಲ. ಬಹುಶ: ಅವರು ಗೈರು ಹಾಜರಾಗುವುದು, ಪತ್ಯಕ್ಷವಾಗಿ, ಪರೋಕ್ಷವಾಗಿ ಬೆಂಬಲ ಕೊಡುವ ಬಗ್ಗೆ ತೀರ್ಮಾನ ಆಗಿದೆ. ಇದೆಲ್ಲವೂ ಅಭ್ಯರ್ಥಿ ಅಂತಿಮವಾದ ಬಳಿಕ ತೀರ್ಮಾನವಾಗಲಿದೆ ಎಂದು ವಿವರಿಸಿದರು.

ಅವಶ್ಯಕತೆ ಇದ್ದರೆ, ಅನರ್ಹರ ಬೆಂಬಲವನ್ನೂ ಕೇಳುತ್ತೇವೆ. ಕಾಂಗ್ರೆಸ್ ಹಾಗೂ ಜಡಿಎಸ್ ಒಂದಾಗುವ ಪ್ರಶ್ನೆಯೆ ಇಲ್ಲ. ಹಾಗಾಗಿ ಅವರು ಅಭ್ಯರ್ಥಿಯನ್ನು ಹಾಕುವುದು ಅನುಮಾನ‌ ಎಂದು ಇದೇ ವೇಳೆ ತಿಳಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.