ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ... ಯಾಕಂದ್ರೆ ಪಿಸ್ತೂಲ್ ಹಿಡಿದು ಖದೀಮರು ಕಳ್ಳತನಕ್ಕೆ ಇಳಿದು ಮನೆಯಲ್ಲಿರೋ ಎಲ್ಲ ವಸ್ತುಗಳನ್ನ ದೋಚುತ್ತಾರೆ ಹುಷಾರ್.. ಇದೇ ರೀತಿಯ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯ ಮೈಕೋ ಲೇಔಟ್ ಬಳಿ ಘಟನೆ ನಡೆದಿದೆ.
ಶ್ರೀಹರಿಪ್ರಸಾದ್ ಮನೆಗೆ ಕಾರ್ನಲ್ಲಿ ಮೂವರು ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ನುಗ್ಗಿ ವಸ್ತು ಚೆಲ್ಲಾಪಿಲ್ಲಿ ಮಾಡಿದ್ದಾರೆ ತಡಕಾಡಿದ್ದಾರೆ. ಈ ಸಂದರ್ಭ ಪ್ರಸಾದ್ ಮನೆಯ ಪಕ್ಕದ ರಸ್ತೆಯಲ್ಲಿರುವ ಸಹೋದರಿ ಮನೆಗೆ ಹೋಗಿದ್ದರು. ಶ್ರೀಹರಿ ಪ್ರಸಾದ್ ಮನೆಗೆ ಕಳ್ಳರು ಬಂದಿದ್ದನ್ನ ಅರಿತ ಪಕ್ಕದ ಮನೆಯವರು ಕೂಡಲೇ ಹರಿಪ್ರಸಾದ್ಗೆ ಕರೆ ಮಾಡಿದ್ದಾರೆ. ಕದ್ದ ವಸ್ತುಗಳನ್ನು ಎಲ್ಲ ಪ್ಯಾಕ್ ಮಾಡಿದ ಕಳ್ಳರು ಎಲ್ಲವನ್ನೂ ತಮ್ಮ ಕಾರ್ಗೆ ತುಂಬಿಸಿದ್ದಾರೆ. ತಕ್ಷಣವೇ ಮನೆಗೆ ಬಂದ ಹರಿಪ್ರಸಾದ್ ಮನೆ ಬಿಲ್ಡಿಂಗ್ ಒಳಗೆ ಹೋಗುವ ಮುನ್ನ ಕಳ್ಳರು ಕದ್ದ ವಸ್ತುಗಳನ್ನು ಕಿತ್ತುಕೊಳ್ಳಲು ಹೋಗಿದ್ದಾರೆ. ಈ ವೇಳೆ, ಕಳ್ಳರು ಹಲ್ಲೆ ಮಾಡಲು ಮುಂದಾಗಿ ಒಬ್ಬ ವ್ಯಕ್ತಿ ಪಿಸ್ತೂಲ್ ಆಚೆ ತೆಗೆದು ಬೆದರಿಸಿದ್ದಾನೆ. ಅದಾಗ್ಯೂ ಅವರನ್ನ ಹಿಡಿಯಲು ಹರಿಪ್ರಸಾದ್ ಮುಂದಾಗಿದ್ದಾರೆ. ಈ ವೇಳೆ, ಕಲ್ಲಿನಲ್ಲಿ ಬಡಿದಾಡಿಕೊಂಡು ಇತ್ತಂಡ ಗಲಾಟೆಗೆ ಹರಿಪ್ರಸಾದ್ ತಲೆ ಒಡೆದಿದೆ. ರಕ್ತದ ಮಡುವಿನಲ್ಲಿದ್ದರೂ ಕಳ್ಳರನ್ನ ಹಿಡಿಯಲು ಮುಂದಾದಾಗ ಕಿವಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ.