ETV Bharat / city

ಸಿಲಿಕಾನ್ ಸಿಟಿ ಜನರೇ ಎಚ್ಚರ.. ಎಚ್ಚರ..: ಪಿಸ್ತೂಲ್ ತೋರಿಸಿ ಕಳ್ಳತನಕ್ಕೆ ಇಳಿತಾರೆ ಖದೀಮರು

author img

By

Published : Oct 18, 2020, 11:28 AM IST

ತಕ್ಷಣವೇ ಮನೆಗೆ ಬಂದ ಹರಿಪ್ರಸಾದ್ ಮನೆ ಬಿಲ್ಡಿಂಗ್ ಒಳಗೆ ಹೋಗುವ ಮುನ್ನ ಕಳ್ಳರು ಕದ್ದ ವಸ್ತುಗಳನ್ನು ಕಿತ್ತುಕೊಳ್ಳಲು ಹೋಗಿದ್ದಾರೆ. ಈ ವೇಳೆ, ಕಳ್ಳರು ಹಲ್ಲೆ ಮಾಡಲು ಮುಂದಾಗಿ ಒಬ್ಬ ವ್ಯಕ್ತಿ ಪಿಸ್ತೂಲ್ ಆಚೆ ತೆಗೆದು ಬೆದರಿಸಿದ್ದಾನೆ.

robbery gang attack
ಸಿಲಿಕಾನ್ ಸಿಟಿ

ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ... ಯಾಕಂದ್ರೆ ‌ಪಿಸ್ತೂಲ್ ಹಿಡಿದು ಖದೀಮರು ಕಳ್ಳತನಕ್ಕೆ ಇಳಿದು ಮನೆಯಲ್ಲಿರೋ ಎಲ್ಲ ವಸ್ತುಗಳನ್ನ ದೋಚುತ್ತಾರೆ ಹುಷಾರ್.. ಇದೇ ರೀತಿಯ ಘಟನೆ ಬೆಂಗಳೂರಿನ‌ ಪುಟ್ಟೇನಹಳ್ಳಿಯ ಮೈಕೋ ಲೇಔಟ್ ಬಳಿ ಘಟನೆ ನಡೆದಿದೆ.

ಪಿಸ್ತೂಲ್ ತೋರಿಸಿ ಕಳ್ಳತನಕ್ಕೆ ಬಂದ ಖದೀಮರು

ಶ್ರೀಹರಿಪ್ರಸಾದ್ ಮನೆಗೆ ‌ಕಾರ್​ನಲ್ಲಿ ಮೂವರು ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ನುಗ್ಗಿ ವಸ್ತು ಚೆಲ್ಲಾಪಿಲ್ಲಿ ಮಾಡಿದ್ದಾರೆ ತಡಕಾಡಿದ್ದಾರೆ. ಈ ಸಂದರ್ಭ ಪ್ರಸಾದ್ ಮನೆಯ ಪಕ್ಕದ ರಸ್ತೆಯಲ್ಲಿರುವ ಸಹೋದರಿ ಮನೆಗೆ ಹೋಗಿದ್ದರು. ಶ್ರೀಹರಿ ಪ್ರಸಾದ್ ಮನೆಗೆ ಕಳ್ಳರು ಬಂದಿದ್ದನ್ನ ಅರಿತ ಪಕ್ಕದ ಮನೆಯವರು ಕೂಡಲೇ ಹರಿಪ್ರಸಾದ್​ಗೆ ಕರೆ ಮಾಡಿದ್ದಾರೆ. ಕದ್ದ ವಸ್ತುಗಳನ್ನು ಎಲ್ಲ ಪ್ಯಾಕ್​ ಮಾಡಿದ ಕಳ್ಳರು ಎಲ್ಲವನ್ನೂ ತಮ್ಮ ಕಾರ್​ಗೆ ತುಂಬಿಸಿದ್ದಾರೆ. ತಕ್ಷಣವೇ ಮನೆಗೆ ಬಂದ ಹರಿಪ್ರಸಾದ್ ಮನೆ ಬಿಲ್ಡಿಂಗ್ ಒಳಗೆ ಹೋಗುವ ಮುನ್ನ ಕಳ್ಳರು ಕದ್ದ ವಸ್ತುಗಳನ್ನು ಕಿತ್ತುಕೊಳ್ಳಲು ಹೋಗಿದ್ದಾರೆ. ಈ ವೇಳೆ, ಕಳ್ಳರು ಹಲ್ಲೆ ಮಾಡಲು ಮುಂದಾಗಿ ಒಬ್ಬ ವ್ಯಕ್ತಿ ಪಿಸ್ತೂಲ್ ಆಚೆ ತೆಗೆದು ಬೆದರಿಸಿದ್ದಾನೆ. ಅದಾಗ್ಯೂ ಅವರನ್ನ ಹಿಡಿಯಲು ಹರಿಪ್ರಸಾದ್‌ ಮುಂದಾಗಿದ್ದಾರೆ. ಈ ವೇಳೆ, ಕಲ್ಲಿನಲ್ಲಿ ಬಡಿದಾಡಿಕೊಂಡು ಇತ್ತಂಡ ಗಲಾಟೆಗೆ ಹರಿಪ್ರಸಾದ್ ತಲೆ ಒಡೆದಿದೆ. ರಕ್ತದ ಮಡುವಿನಲ್ಲಿದ್ದರೂ ಕಳ್ಳರನ್ನ ಹಿಡಿಯಲು ಮುಂದಾದಾಗ ಕಿವಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ.

ಕಾರ್​ನಲ್ಲಿ ಬಂದಿದ್ದ ಕಳ್ಳರು ಹೇಗೋ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ, ಕಾರ್​ನಲ್ಲಿಟ್ಟಿದ್ದ ಕಳ್ಳತನದ ವಸ್ತುಗಳನ್ನ ಎತ್ತಿಕೊಳ್ಳಲು ಶ್ರೀಹರಿಪ್ರಸಾದ್ ಮುಂದಾಗಿ ಬ್ಯಾಗ್ ಕಸಿದುಕೊಳ್ಳಲು ಯಶಸ್ವಿಯಾದರು. ಆದ್ರೆ ಕಳ್ಳರು ಕಾರ್​ನಲ್ಲಿ ಎಸ್ಕೇಪ್ ಆಗಿದ್ದು,‌ ಕಳ್ಳರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ತೀವ್ರ ಪೆಟ್ಟಾಗಿರುವ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಹರಿಪ್ರಸಾದ್‌ ಚಿಕಿತ್ಸೆ ಪಡೆಯುತ್ತಿದ್ದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ... ಯಾಕಂದ್ರೆ ‌ಪಿಸ್ತೂಲ್ ಹಿಡಿದು ಖದೀಮರು ಕಳ್ಳತನಕ್ಕೆ ಇಳಿದು ಮನೆಯಲ್ಲಿರೋ ಎಲ್ಲ ವಸ್ತುಗಳನ್ನ ದೋಚುತ್ತಾರೆ ಹುಷಾರ್.. ಇದೇ ರೀತಿಯ ಘಟನೆ ಬೆಂಗಳೂರಿನ‌ ಪುಟ್ಟೇನಹಳ್ಳಿಯ ಮೈಕೋ ಲೇಔಟ್ ಬಳಿ ಘಟನೆ ನಡೆದಿದೆ.

ಪಿಸ್ತೂಲ್ ತೋರಿಸಿ ಕಳ್ಳತನಕ್ಕೆ ಬಂದ ಖದೀಮರು

ಶ್ರೀಹರಿಪ್ರಸಾದ್ ಮನೆಗೆ ‌ಕಾರ್​ನಲ್ಲಿ ಮೂವರು ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ನುಗ್ಗಿ ವಸ್ತು ಚೆಲ್ಲಾಪಿಲ್ಲಿ ಮಾಡಿದ್ದಾರೆ ತಡಕಾಡಿದ್ದಾರೆ. ಈ ಸಂದರ್ಭ ಪ್ರಸಾದ್ ಮನೆಯ ಪಕ್ಕದ ರಸ್ತೆಯಲ್ಲಿರುವ ಸಹೋದರಿ ಮನೆಗೆ ಹೋಗಿದ್ದರು. ಶ್ರೀಹರಿ ಪ್ರಸಾದ್ ಮನೆಗೆ ಕಳ್ಳರು ಬಂದಿದ್ದನ್ನ ಅರಿತ ಪಕ್ಕದ ಮನೆಯವರು ಕೂಡಲೇ ಹರಿಪ್ರಸಾದ್​ಗೆ ಕರೆ ಮಾಡಿದ್ದಾರೆ. ಕದ್ದ ವಸ್ತುಗಳನ್ನು ಎಲ್ಲ ಪ್ಯಾಕ್​ ಮಾಡಿದ ಕಳ್ಳರು ಎಲ್ಲವನ್ನೂ ತಮ್ಮ ಕಾರ್​ಗೆ ತುಂಬಿಸಿದ್ದಾರೆ. ತಕ್ಷಣವೇ ಮನೆಗೆ ಬಂದ ಹರಿಪ್ರಸಾದ್ ಮನೆ ಬಿಲ್ಡಿಂಗ್ ಒಳಗೆ ಹೋಗುವ ಮುನ್ನ ಕಳ್ಳರು ಕದ್ದ ವಸ್ತುಗಳನ್ನು ಕಿತ್ತುಕೊಳ್ಳಲು ಹೋಗಿದ್ದಾರೆ. ಈ ವೇಳೆ, ಕಳ್ಳರು ಹಲ್ಲೆ ಮಾಡಲು ಮುಂದಾಗಿ ಒಬ್ಬ ವ್ಯಕ್ತಿ ಪಿಸ್ತೂಲ್ ಆಚೆ ತೆಗೆದು ಬೆದರಿಸಿದ್ದಾನೆ. ಅದಾಗ್ಯೂ ಅವರನ್ನ ಹಿಡಿಯಲು ಹರಿಪ್ರಸಾದ್‌ ಮುಂದಾಗಿದ್ದಾರೆ. ಈ ವೇಳೆ, ಕಲ್ಲಿನಲ್ಲಿ ಬಡಿದಾಡಿಕೊಂಡು ಇತ್ತಂಡ ಗಲಾಟೆಗೆ ಹರಿಪ್ರಸಾದ್ ತಲೆ ಒಡೆದಿದೆ. ರಕ್ತದ ಮಡುವಿನಲ್ಲಿದ್ದರೂ ಕಳ್ಳರನ್ನ ಹಿಡಿಯಲು ಮುಂದಾದಾಗ ಕಿವಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ.

ಕಾರ್​ನಲ್ಲಿ ಬಂದಿದ್ದ ಕಳ್ಳರು ಹೇಗೋ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ, ಕಾರ್​ನಲ್ಲಿಟ್ಟಿದ್ದ ಕಳ್ಳತನದ ವಸ್ತುಗಳನ್ನ ಎತ್ತಿಕೊಳ್ಳಲು ಶ್ರೀಹರಿಪ್ರಸಾದ್ ಮುಂದಾಗಿ ಬ್ಯಾಗ್ ಕಸಿದುಕೊಳ್ಳಲು ಯಶಸ್ವಿಯಾದರು. ಆದ್ರೆ ಕಳ್ಳರು ಕಾರ್​ನಲ್ಲಿ ಎಸ್ಕೇಪ್ ಆಗಿದ್ದು,‌ ಕಳ್ಳರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ತೀವ್ರ ಪೆಟ್ಟಾಗಿರುವ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಹರಿಪ್ರಸಾದ್‌ ಚಿಕಿತ್ಸೆ ಪಡೆಯುತ್ತಿದ್ದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.