ETV Bharat / city

ಡಿಕೆಶಿ ಸಿಎಂ ಆದ್ರೆ ರಾಜ್ಯವನ್ನೇ ಗೂಂಡಾ ರಾಜ್ಯವನ್ನಾಗಿ ಮಾಡುತ್ತಾರೆ: ರೇಣುಕಾಚಾರ್ಯ

author img

By

Published : Feb 17, 2022, 2:09 PM IST

Updated : Feb 17, 2022, 2:28 PM IST

ವಿಧಾನಸಭೆಯಲ್ಲಿ ನಿನ್ನೆ ಈಶ್ವರಪ್ಪ ಅವರ ಮೇಲೆ ಡಿ.ಕೆ.ಶಿವಕುಮಾರ್ ಗೂಂಡಾಗಿರಿ ತೋರಿದ್ದಾರೆ. ಸದನದ ಒಳಗಡೆ ಈಶ್ವರಪ್ಪನವರಿಗೆ ಹಲ್ಲೆ ಮಾಡುವ ರೀತಿಯ ವರ್ತನೆ ತೋರಿದ್ದಾರೆ. ಬಿಜೆಪಿ ಇದಕ್ಕೆಲ್ಲ ಹೆದರಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ರೇಣುಕಾಚಾರ್ಯ
ರೇಣುಕಾಚಾರ್ಯ

ಬೆಂಗಳೂರು: ಸದನದಲ್ಲಿ ಡಿ.ಕೆ.ಶಿವಕುಮಾರ್ ಈಗಲೇ ಗೂಂಡಾ ವರ್ತನೆ ತೋರುತ್ತಿದ್ದಾರೆ. ಇನ್ನು ಸಿಎಂ ಆದರೆ ರಾಜ್ಯವನ್ನೇ ಗುಂಡಾ ರಾಜ್ಯವನ್ನಾಗಿ ಮಾಡ್ತಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ ಇಳಿಸಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೇವೆ ಅಂತಾ ಈಶ್ವರಪ್ಪ ಹೇಳಿಲ್ಲ. ಮುಂದೊಂದು ದಿನ ಕೇಸರಿ ಧ್ವಜ ಹಾರಬಹುದು ಎಂದಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ಹುಬ್ಬಳ್ಳಿ, ಕಾಶ್ಮೀರದ ಶ್ರೀನಗರದಲ್ಲಿ ಬಿಜೆಪಿ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಗುಂಡು ಹಾರಿಸಿದವರು ಕಾಂಗ್ರೆಸ್​ನವರು. ರಾಷ್ಟ್ರಧ್ವಜದ ಬಗ್ಗೆ ಕಾಂಗ್ರೆಸ್​​ನವರಿಗೆ ಗೌರವ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮದವರೊಂದಿಗೆ ರೇಣುಕಾಚಾರ್ಯ

ಇದನ್ನೂ ಓದಿ: ಡಿಕೆಶಿ ತಂದೆ ಬಗ್ಗೆ ನನಗೆ ಗೌರವ ಇದೆ, ನೀನು, ನಿಮ್ಮಪ್ಪ ಅಂತ ಹೇಳಿದ್ದು ಆಕ್ರೋಶಕ್ಕಾಗಿ ಅಷ್ಟೇ: ಈಶ್ವರಪ್ಪ ಸಮಜಾಯಿಷಿ

ವಿಧಾನಸಭೆಯಲ್ಲಿ ನಿನ್ನೆ ಈಶ್ವರಪ್ಪ ಅವರ ಮೇಲೆ ಡಿ.ಕೆ.ಶಿವಕುಮಾರ್ ಗೂಂಡಾಗಿರಿ ತೋರಿದ್ದಾರೆ. ಸದನದ ಒಳಗಡೆ ಈಶ್ವರಪ್ಪ ನವರಿಗೆ ಹಲ್ಲೆ ಮಾಡುವ ರೀತಿಯ ವರ್ತನೆ ತೋರಿದ್ದಾರೆ. ಈಶ್ವರಪ್ಪ ಅವರಿಗೆ ಮಾತನಾಡಲು ಬಿಡಬಾರದು ಅಂತಾ ತಮ್ಮ ಚೇರ್ ನಿಂದ ಎದ್ದು ಬಂದು ಸಿದ್ದರಾಮಯ್ಯ ಅವರಿಗೆ ಕಿವಿ ಚುಚ್ಚಿದರು. ಈಶ್ವರಪ್ಪ ಅವರು ಗುಂಡಾ ವರ್ತನೆ ತೋರಿಲ್ಲ. ಸದನ ಯಾರಪ್ಪನ ಸ್ವತ್ತಲ್ಲ ಅಂತಾ ಡಿ.ಕೆ ಶಿವಕುಮಾರ್​ಗೆ ಹೇಳಿದ್ರು ಅಷ್ಟೇ. ಬಿಜೆಪಿ ಇದಕ್ಕೆಲ್ಲ ಹೆದರಲ್ಲ. ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು: ಸದನದಲ್ಲಿ ಡಿ.ಕೆ.ಶಿವಕುಮಾರ್ ಈಗಲೇ ಗೂಂಡಾ ವರ್ತನೆ ತೋರುತ್ತಿದ್ದಾರೆ. ಇನ್ನು ಸಿಎಂ ಆದರೆ ರಾಜ್ಯವನ್ನೇ ಗುಂಡಾ ರಾಜ್ಯವನ್ನಾಗಿ ಮಾಡ್ತಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ ಇಳಿಸಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೇವೆ ಅಂತಾ ಈಶ್ವರಪ್ಪ ಹೇಳಿಲ್ಲ. ಮುಂದೊಂದು ದಿನ ಕೇಸರಿ ಧ್ವಜ ಹಾರಬಹುದು ಎಂದಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ಹುಬ್ಬಳ್ಳಿ, ಕಾಶ್ಮೀರದ ಶ್ರೀನಗರದಲ್ಲಿ ಬಿಜೆಪಿ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಗುಂಡು ಹಾರಿಸಿದವರು ಕಾಂಗ್ರೆಸ್​ನವರು. ರಾಷ್ಟ್ರಧ್ವಜದ ಬಗ್ಗೆ ಕಾಂಗ್ರೆಸ್​​ನವರಿಗೆ ಗೌರವ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮದವರೊಂದಿಗೆ ರೇಣುಕಾಚಾರ್ಯ

ಇದನ್ನೂ ಓದಿ: ಡಿಕೆಶಿ ತಂದೆ ಬಗ್ಗೆ ನನಗೆ ಗೌರವ ಇದೆ, ನೀನು, ನಿಮ್ಮಪ್ಪ ಅಂತ ಹೇಳಿದ್ದು ಆಕ್ರೋಶಕ್ಕಾಗಿ ಅಷ್ಟೇ: ಈಶ್ವರಪ್ಪ ಸಮಜಾಯಿಷಿ

ವಿಧಾನಸಭೆಯಲ್ಲಿ ನಿನ್ನೆ ಈಶ್ವರಪ್ಪ ಅವರ ಮೇಲೆ ಡಿ.ಕೆ.ಶಿವಕುಮಾರ್ ಗೂಂಡಾಗಿರಿ ತೋರಿದ್ದಾರೆ. ಸದನದ ಒಳಗಡೆ ಈಶ್ವರಪ್ಪ ನವರಿಗೆ ಹಲ್ಲೆ ಮಾಡುವ ರೀತಿಯ ವರ್ತನೆ ತೋರಿದ್ದಾರೆ. ಈಶ್ವರಪ್ಪ ಅವರಿಗೆ ಮಾತನಾಡಲು ಬಿಡಬಾರದು ಅಂತಾ ತಮ್ಮ ಚೇರ್ ನಿಂದ ಎದ್ದು ಬಂದು ಸಿದ್ದರಾಮಯ್ಯ ಅವರಿಗೆ ಕಿವಿ ಚುಚ್ಚಿದರು. ಈಶ್ವರಪ್ಪ ಅವರು ಗುಂಡಾ ವರ್ತನೆ ತೋರಿಲ್ಲ. ಸದನ ಯಾರಪ್ಪನ ಸ್ವತ್ತಲ್ಲ ಅಂತಾ ಡಿ.ಕೆ ಶಿವಕುಮಾರ್​ಗೆ ಹೇಳಿದ್ರು ಅಷ್ಟೇ. ಬಿಜೆಪಿ ಇದಕ್ಕೆಲ್ಲ ಹೆದರಲ್ಲ. ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Feb 17, 2022, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.