ETV Bharat / city

ರೈತ ಉತ್ಪಾದಕ ಸಂಘಗಳು, ಫುಡ್ ಪಾರ್ಕ್‌ಗಳ ಪ್ರಸ್ತುತ ಸ್ಥಿತಿಗತಿ

author img

By

Published : May 4, 2022, 2:32 PM IST

ರೈತರ ಆದಾಯವನ್ನು ಹೆಚ್ಚಿಸುವುದು, ಅವಕಾಶ ಇರುವಲ್ಲೆಲ್ಲಾ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಗರಿಷ್ಠಗೊಳಿಸುವುದು ರೈತ ಉತ್ಪಾದಕ ಸಂಘಗಳ ಉದ್ದೇಶವಾಗಿದೆ. ಆದಾಗ್ಯೂ, ಇದಕ್ಕೆ ಸಾರಿಗೆ ಸೌಲಭ್ಯಗಳು, ಸಂಗ್ರಹಣೆ, ಶುಚಿಗೊಳಿಸುವಿಕೆ, ಶ್ರೇಣೀಕರಣ, ವಿಂಗಡಣೆ, ಬ್ರಾಂಡ್ ನಿರ್ಮಾಣ ಮತ್ತು ಮಾರುಕಟ್ಟೆಯಂತಹ ಮೂಲಸೌಕರ್ಯಗಳಿಗೆ ಪ್ರವೇಶದ ಅಗತ್ಯವಿದೆ..

ಫುಡ್ ಪಾರ್ಕ್
ಫುಡ್ ಪಾರ್ಕ್

ಬೆಂಗಳೂರು : ಕರ್ನಾಟಕ ರಾಜ್ಯವು 600ಕ್ಕೂ ಹೆಚ್ಚು ರೈತ ಉತ್ಪಾದಕ ಸಂಘಗಳನ್ನು ಹೊಂದಿದೆ. ಜೊತೆಗೆ ಅಮೃತ್ ಯೋಜನೆಯ ಮೂಲಕ 250ಕ್ಕೂ ಹೆಚ್ಚು ಹೊಸ ರೈತ ಉತ್ಪಾದಕ ಸಂಘಗಳು ಸೇರಿವೆ. ರೈತ ಉತ್ಪಾದಕ ಸಂಘಗಳು ಗುಣಾಕಾರ/ಸಂಖ್ಯಾತ್ಮಕ ಮಾದರಿಯಲ್ಲಿ ಬೆಳೆಯುವುದಕ್ಕಿಂತಲೂ ಕೃಷಿ ಜೈವಿಕ ಪರಿಸರ ವ್ಯವಸ್ಥೆಗೆ ಮೌಲ್ಯವನ್ನು ಸೇರಿಸುವ ದಿಕ್ಕಿನಲ್ಲಿ ವ್ಯವಸ್ಥಿತವಾಗಿ ಬೆಳವಣಿಗೆ ಮಾಡುವುದು ಅವಶ್ಯಕವಾಗಿದೆ.

ಆರಂಭಿಕ ಹಂತಗಳಲ್ಲಿ ರೈತ ಉತ್ಪಾದಕ ಸಂಘಗಳನ್ನು ಫುಡ್​ ಪಾರ್ಕ್‌ಗಳ ರಚನೆ ಮತ್ತು ಆರಂಭಿಕ ಕಾರ್ಯಾಚರಣೆಯನ್ನು ಹೊಂದಿಸುವುದರ ಮೇಲೆ ಒತ್ತು ನೀಡಲಾಯಿತು. ಆದಾಗ್ಯೂ, ಕೇವಲ ಈ ರಚನೆಗಳನ್ನು ನೋಂದಾಯಿಸುವುದು ಸಾಕಾಗುವುದಿಲ್ಲ. ಈ ಸಂಸ್ಥೆಗಳನ್ನು ಈಕ್ವಿಟಿ ಮತ್ತು ಮೂಲ ಬಂಡವಾಳಕ್ಕೆ ಲಿಂಕ್ ಮಾಡುವುದು, ಪರವಾನಿಗೆ ಮತ್ತು ಅನುಸರಣೆಯನ್ನು ಸರಾಗಗೊಳಿಸುವುದು, ಬ್ಯಾಕ್-ಎಂಡ್ ಮೂಲಸೌಕರ್ಯವನ್ನು ರಚಿಸುವುದು, ಈ ಸಂಸ್ಥೆಗಳಿಂದ ಬೃಹತ್ ಖರೀದಿದಾರರು ನೇರವಾಗಿ ಖರೀದಿಸಲು ಆಕರ್ಷಕವಾಗಿಸುವುದು ಸೇರಿದಂತೆ ಸಂಪೂರ್ಣ ಬೆಂಬಲದ ಪರಿಸರ ವ್ಯವಸ್ಥೆಯನ್ನು ರಚಿಸಬೇಕಾಗಿದೆ. ಮುಂದಿನ ಹಂತದಲ್ಲಿ ಪರಿಕಲ್ಪನಾತ್ಮಕವಾಗಿ ತೆಗೆದುಕೊಳ್ಳಲು ಅದರ ಬೆಂಬಲದ ಪರಿಸರ ವ್ಯವಸ್ಥೆಯನ್ನು ರಚಿಸಬೇಕಾಗಿದೆ.

ರೈತ ಉತ್ಪಾದಕ ಸಂಘಗಳ ಉದ್ದೇಶವೇನು? : ಸದಸ್ಯ ರೈತರ ಆದಾಯವನ್ನು ಹೆಚ್ಚಿಸುವುದು, ಅವಕಾಶ ಇರುವಲ್ಲೆಲ್ಲಾ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಗರಿಷ್ಠಗೊಳಿಸುವುದು ರೈತ ಉತ್ಪಾದಕ ಸಂಘಗಳ ಉದ್ದೇಶವಾಗಿದೆ. ಆದಾಗ್ಯೂ, ಇದಕ್ಕೆ ಸಾರಿಗೆ ಸೌಲಭ್ಯಗಳು, ಸಂಗ್ರಹಣೆ, ಶುಚಿಗೊಳಿಸುವಿಕೆ, ಶ್ರೇಣೀಕರಣ, ವಿಂಗಡಣೆ, ಬ್ರಾಂಡ್ ನಿರ್ಮಾಣ ಮತ್ತು ಮಾರುಕಟ್ಟೆಯಂತಹ ಮೂಲಸೌಕರ್ಯಗಳಿಗೆ ಪ್ರವೇಶದ ಅಗತ್ಯವಿದೆ.

ಮೂಲಸೌಕರ್ಯಕ್ಕೆ ಪ್ರವೇಶವನ್ನು ಹೊರತುಪಡಿಸಿ, ವ್ಯಾಪಾರ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಸ್ಥಾಪಿಸುವುದು, ಬದ್ಧತೆಗಳನ್ನು ಗೌರವಿಸುವುದು, ಮಾರುಕಟ್ಟೆ ಅಗತ್ಯತೆಗಳ (ಗ್ರೇಡ್‌ಗಳು ಮತ್ತು ಮಾನದಂಡಗಳು) ಮತ್ತು ಮೌಲ್ಯವರ್ಧನೆಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಇವುಗಳ ಜೊತೆಗೆ ಅಗತ್ಯವಾದ ಮಾರುಕಟ್ಟೆ ಮತ್ತು ವ್ಯಾಪಾರ ಸಂಪರ್ಕಗಳನ್ನು ವಿಸ್ತರಿಸುವ ಮೂಲಸೌಕರ್ಯ ಸ್ಥಾಪಿಸುವುದು. ಅರಿವು, ಬಂಡವಾಳಕ್ಕೆ ಬೇಕಾಗುವ ಸರಳ ಸಾಲ ಸೌಲಭ್ಯ ಬೆಲೆ ನಿಗದಿಪಡಿಸುವುದು ಮತ್ತು ಒಟ್ಟುಗೂಡಿಸುವಿಕೆ. ಈ ಎಲ್ಲ ಅಂಶಗಳು ರೈತ ಉತ್ಪಾದಕ ಸಂಘಗಳು ಎದುರಿಸುತ್ತಿರುವ ಸವಾಲುಗಳನ್ನು ಸೂಚಿಸುತ್ತದೆ.

ರೈತ ಉತ್ಪಾದಕ ಸಂಘಗಳು ಎದುರಿಸುತ್ತಿರುವ ಸವಾಲುಗಳೇನು?: ಪ್ರತಿ ರೈತ ಉತ್ಪಾದಕ ಸಂಘಗಳ ಗಾತ್ರವು 50-1000ಗಳನ್ನು ಒಳಗೊಂಡಿದೆ. ರೈತ ಉತ್ಪಾದಕ ಸಂಘಗಳ ರಚನೆ ಕಠಿಣ ಕಾರ್ಯವಾಗಿದೆ ಮತ್ತು ಸೀಮಿತ ಉದ್ಯಮಶೀಲತೆ ಹಾಗೂ ವ್ಯಾಪಾರ ನಿರ್ವಹಣೆ ಕೌಶಲ್ಯಗಳ ಹೆಚ್ಚಿನ ಮಾನವ ಶಕ್ತಿಯ ಕ್ಷೀಣತೆಗೆ ಕಾರಣವಾಗುತ್ತವೆ. ಸೀಮಿತ ಕೌಶಲ್ಯ ಒಳಗೊಂಡ ರೈತ ಉತ್ಪಾದಕ ಸಂಘಗಳನ್ನು ಒಂದೇ ವ್ಯಾಪ್ತಿಗೆ ತರಲು ಮತ್ತು ಮಾತುಕತೆ ನಡೆಸಲು ಕೊರತೆಯಿದೆ. ಆದರ್ಶ ಪ್ರಮಾಣದ ಆರ್ಥಿಕತೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಸೀಮಿತಗೊಳಿಸುತ್ತದೆ. ರೈತ ಉತ್ಪಾದಕರ ಸಂಘಗಳು ಅಸ್ತಿತ್ವದಲ್ಲಿರುವ ಮಾರುಕಟ್ಟೆ ಸಂಘಟನೆಗಳೊಂದಿಗೆ ಸ್ಪರ್ಧೆಯನ್ನು ಎದುರಿಸಬೇಕಾಗಿದೆ.

ಹಣಕಾಸಿನ ಸವಾಲುಗಳು : ಸಾಲವನ್ನು ಪಡೆಯುವಲ್ಲಿ ರೈತ ಉತ್ಪಾದಕ ಸಂಘಗಳು ಸವಾಲುಗಳನ್ನು ಎದುರಿಸುತ್ತಿದ್ದು, ಸರಕುಗಳ ತಿಳುವಳಿಕೆಯ ಕೊರತೆ ಕಾರ್ಯನಿರತ ಬಂಡವಾಳದ ಚಕ್ರಗಳು, ಮಾರುಕಟ್ಟೆ ಸಂಪರ್ಕಗಳು/ ಬ್ಯಾಂಕರ್ ಗಳ ಕಡೆಯಿಂದ ಮಾರುಕಟ್ಟೆ ಪ್ರವೇಶ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿವೆ.

ರೈತ ಉತ್ಪಾದಕ ಸಂಘಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ, ಬ್ಯಾಂಕ್ ಗಳಿಂದ ಸಾಲ ಪಡೆಯುವ ಸಂದರ್ಭದಲ್ಲಿ ಕ್ರೆಡಿಟ್ ಗ್ಯಾರೆಂಟಿ ನೀಡಲು ಉತ್ಪಾದಕ ಸಂಘಟನೆಗಳಲ್ಲಿ ಈಕ್ವಿಟಿ ಮತ್ತು ಸಾಂಸ್ಥಿಕ ನಿಧಿಗಳ ಬಂಡವಾಳದ ಕೊರತೆಯನ್ನು ಎದುರಿಸುತ್ತಿವೆ. ರೈತ ಉತ್ಪಾದಕ ಸಂಘಗಳು ಮತ್ತು ಫುಡ್ ಪಾರ್ಕ್‌ಗಳನ್ನು ರಚಿಸುವ ಉದ್ದೇಶವು ಕೃಷಿ ಮಾರುಕಟ್ಟೆಗೆ ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್ ಸಂಪರ್ಕವನ್ನು ಒದಗಿಸುವುದಾಗಿದೆ. ಈ ಪರಿಕಲ್ಪನೆಗಳ ಮೂಲಕ ಕೃಷಿ ಮಾರುಕಟ್ಟೆಯನ್ನು ಸಕ್ರಿಯಗೊಳಿಸಲು, ಕೃಷಿಯಲ್ಲಿ ಲಾಭ ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯದಲ್ಲಿನ ಫುಡ್ ಪಾರ್ಕ್‌ಗಳು ಮತ್ತು ರೈತ ಉತ್ಪಾದಕ ಸಂಘಗಳ ಪ್ರಸ್ತುತ ಸನ್ನಿವೇಶ ಮತ್ತು ಅವು ಹಲವು ಸವಾಲುಗಳನ್ನು ಎದುರಿಸುತ್ತಿವೆ.

ರಾಜ್ಯದಲ್ಲಿರುವ ರೈತ ಉತ್ಪಾದಕ ಸಂಘಗಳು ಮತ್ತು ಫುಡ್ ಪಾರ್ಕ್ ಗಳ ಪ್ರಸ್ತುತ ಸ್ಥಿತಿ ಹೇಗಿದೆ? : ಕರ್ನಾಟಕದಲ್ಲಿರುವ 650 ರೈತ ಉತ್ಪಾದಕ ಸಂಘಗಳಲ್ಲಿ (ಕಡಿಮೆ ಸಾಮರ್ಥ್ಯವುಳ್ಳ ರೈತ ಉತ್ಪಾದಕ ಸಂಘಗಳು ಸೇರಿದಂತೆ) ಬೆರಳೆಣಿಕೆಯಷ್ಟು ಮಾತ್ರ ಸಮಗ್ರ ಕೃಷಿ ಮೌಲ್ಯ ಸರಪಳಿಯ ಮೇಲೆ ಪೂರ್ಣ ಪ್ರಮಾಣದಲ್ಲಿ ವ್ಯವಹಾರವನ್ನು ಕೇಂದ್ರೀಕರಿಸುತ್ತವೆ.

ಸಿಇಒಗಳು ಮತ್ತು ನಿರ್ದೇಶಕರ ಮಂಡಳಿಯು ಉದ್ದೇಶಿತ ಕೆಲಸವನ್ನು ಮಾಡಲು ಹೆಚ್ಚು ಗಮನವನ್ನು ನೀಡುತ್ತಿಲ್ಲ. ಕೌಶಲ್ಯ/ನುರಿತ ಉದ್ಯೋಗಿಗಳ ಕೊರತೆಯಿಂದಾಗಿ ಸಾಕಷ್ಟು ಅನುಸರಣೆ ಜವಾಬ್ದಾರಿಯನ್ನು ನಿಗಧಿತ ಸಮಯದಲ್ಲಿ ಮಾಡಲಾಗುತ್ತಿಲ್ಲ. ಇದು ಸಮಗ್ರ ಕೃಷಿ ಮೌಲ್ಯ ಸರಪಳಿಯನ್ನು ರಚಿಸುವ ದಿಕ್ಕಿನಲ್ಲಿ ಹೆಚ್ಚಿನ ಗಮನ ನೀಡದಿರಲು ಕಾರಣವಾಗಿದೆ.

ಪ್ರಾಕೃತಿಕ ಹಾಗೂ ಮಾರುಕಟ್ಟೆ ಮುನ್ಸೂಚನೆಗಳು ಸರಿಯಾದ ಸಮಯಕ್ಕೆ ಲಭ್ಯವಿಲ್ಲ. ಸದಸ್ಯ ರೈತರು ಮತ್ತು ಎಫ್‌ಪಿಒಗಳಲ್ಲಿ ನಿರ್ದಿಷ್ಟವಾಗಿ ಉತ್ಪಾದನೆಯ ವ್ಯವಹಾರದ ಅಂಶಗಳ ಕುರಿತ ಚರ್ಚೆಗಳ ಕೊರತೆಯಿದೆ. ರೈತ ಉತ್ಪಾದಕ ಸಂಘಗಳಲ್ಲಿ ಶೇ. 90 ಕ್ಕಿಂತಲೂ ಹೆಚ್ಚು ರೈತ ಉತ್ಪಾದಕ ಸಂಘಗಳು 80 ಲಕ್ಷಗಳಿಗಿಂತ ಕಡಿಮೆ ಆದಾಯವನ್ನು ಗಳಿಸುತ್ತಿವೆ. ಇದರಲ್ಲಿ ಹೆಚ್ಚಿನವು ಕೃಷಿ ಪರಿಕರಗಳ ವ್ಯವಹಾರದ ಮೂಲಕ ಮಾತ್ರ ಆದಾಯ ಗಳಿಸುತ್ತಿದ್ದಾರೆ.

2021-22ನೇ ಸಾಲಿನಲ್ಲಿ ರಾಜ್ಯದ ಯೋಜನೆಯಡಿಯಲ್ಲಿ ರೈತ ಉತ್ಪಾದಕ ಸಂಘಗಳಿಗೆ 250,00 ಕೋಟಿ ರೂ.ಗಳ ಬಿಡುಗಡೆಯಲ್ಲಿ ಕೇವಲ 185.34 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಹೊಸ ರೈತ ಉತ್ಪಾದಕ ಸಂಘಗಳಿಗೆ ಯಶೋಗಾಥೆಗಳನ್ನು ಅನುಸರಿಸಲು ರಾಜ್ಯದಲ್ಲಿ ರೋಲ್ ಮಾಡೆಲ್/ ಮಾದರಿ ರೈತ ಉತ್ಪಾದಕ ಸಂಘಗಳ ಕೊರತೆ ಕಾಣುತ್ತಿದೆ. ರೈತ ಉತ್ಪಾದಕ ಸಂಘಗಳ ಸಂಸ್ಕರಣಾ ಸಾಮರ್ಥ್ಯವು ತುಂಬಾ ಸೀಮಿತವಾಗಿದೆ.

ಪ್ರಸ್ತುತ ರಾಜ್ಯದಲ್ಲಿ 5 ಫುಡ್ ಪಾರ್ಕ್‌ಗಳಿದ್ದು, ಇವುಗಳಲ್ಲಿ ಯಾವುದೇ ಫುಡ್ ಪಾರ್ಕ್‌ಗಳು ನೂರರಷ್ಟು ಮಾಲೀಕತ್ವ ಹೊಂದಿಲ್ಲ. ದೇಶೀಯ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮೂಲಸೌಲಭ್ಯದ ಕೊರತೆ ಇದೆ.‌ ಕೆಲವು ರೈತ ಉತ್ಪಾದಕ ಸಂಘಗಳು ಶೈತ್ಯಗಾರ ಸರಪಳಿ ಮತ್ತು ಇತರೆ ಕಾರ್ಯವಿಧಾನಗಳ ಮೂಲಕ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ತೊಡಗಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೌಲ್ಯವರ್ಧನೆಯ ಮಧ್ಯಸ್ಥಿಕೆಯು ರೈತರ ಜೀವನೋಪಾಯವನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿರುವ ಉದ್ಯಮಿಗಳು ಮತ್ತು ಮಿಷನ್‌ ಚಾಲಿತ ಸಂಸ್ಥೆಗಳಿಂದ ನಡೆಸಲ್ಪಟ್ಟಿದೆ. ರೈತ ಉತ್ಪಾದಕ ಸಂಘಗಳಿಂದ ತೆಂಗಿನ ಕಾಯಿಯ ಮೌಲ್ಯವರ್ಧನೆ, ರೈತರಿಂದ ಖರೀದಿಸಿದ ರಾಗಿಯನ್ನು ನೀರಿನಲ್ಲಿ ತೊಳೆದು ಒಣಗಿಸಿ ಗುಣಮಟ್ಟದ ವಿವರಣೆಗೆ ಅನುಗುಣವಾಗಿ ವರ್ಗೀಕರಿಸಿ ನಂತರ ಅಪೇಕ್ಷಿತ ಗ್ರಾಹಕರಿಗೆ ರವಾನಿಸಲಾಗುತ್ತದೆ. ಕೃಷಿ ಮೌಲ್ಯ ಸರಪಳಿಯನ್ನು ಹೆಚ್ಚಿಸಲು ಪ್ರಮುಖವಾದ ಎಫ್ ಪಿಒಗಳಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಲಾಗಿದೆ.

ರಾಜ್ಯದಲ್ಲಿನ ಫುಡ್ ಪಾರ್ಕ್‌ಗಳ ವಾಸ್ತವವು ಈ ಕೆಳಕಂಡಂತಿದೆ : ತುಮಕೂರಿನ ಇಂಡಿಯಾ ಫುಟ್ ಪಾರ್ಕ್​ನಲ್ಲಿ 10,000 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತದೆ. ಇದರಿಂದ ಒಂದು ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಅದೇ ರೀತಿ ಇನೋವಾ ಅಗ್ರಿ ಬಯೋಪಾರ್ಕ್ ಲಿ. ಮಾಲೂರಿನಲ್ಲಿ 1000 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತಿದ್ದು, 150 ಉದ್ಯೋಗ ಸೃಷ್ಟಿಯಾಗಿದೆ.

ಅಕ್ಷಯ ಫುಡ್ ಪಾರ್ಕ್ ಲಿ. ಹಿರಿಯೂರಿನಲ್ಲಿ 9900 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತಿದ್ದು, 186 ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೇ ಗ್ರೀನ್ ಫುಡ್ ಪಾರ್ಕ್ ಲಿ. ಬಾಗಲಕೋಟೆಯಲ್ಲಿ 1500 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತಿದ್ದು, 60 ಉದ್ಯೋಗ ಸೃಷ್ಟಿಯಾಗಿದೆ. ಮತ್ತು ಜೇವರ್ಗಿ ಆಗ್ರೋ ಫುಡ್ ಪಾರ್ಕ್ ಲಿ. ಕಲಬುರಗಿಯಲ್ಲಿ 1923 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತಿದ್ದು, 40 ಉದ್ಯೋಗ ಸೃಷ್ಟಿಯಾಗಿದೆ.

ಬೆಂಗಳೂರು : ಕರ್ನಾಟಕ ರಾಜ್ಯವು 600ಕ್ಕೂ ಹೆಚ್ಚು ರೈತ ಉತ್ಪಾದಕ ಸಂಘಗಳನ್ನು ಹೊಂದಿದೆ. ಜೊತೆಗೆ ಅಮೃತ್ ಯೋಜನೆಯ ಮೂಲಕ 250ಕ್ಕೂ ಹೆಚ್ಚು ಹೊಸ ರೈತ ಉತ್ಪಾದಕ ಸಂಘಗಳು ಸೇರಿವೆ. ರೈತ ಉತ್ಪಾದಕ ಸಂಘಗಳು ಗುಣಾಕಾರ/ಸಂಖ್ಯಾತ್ಮಕ ಮಾದರಿಯಲ್ಲಿ ಬೆಳೆಯುವುದಕ್ಕಿಂತಲೂ ಕೃಷಿ ಜೈವಿಕ ಪರಿಸರ ವ್ಯವಸ್ಥೆಗೆ ಮೌಲ್ಯವನ್ನು ಸೇರಿಸುವ ದಿಕ್ಕಿನಲ್ಲಿ ವ್ಯವಸ್ಥಿತವಾಗಿ ಬೆಳವಣಿಗೆ ಮಾಡುವುದು ಅವಶ್ಯಕವಾಗಿದೆ.

ಆರಂಭಿಕ ಹಂತಗಳಲ್ಲಿ ರೈತ ಉತ್ಪಾದಕ ಸಂಘಗಳನ್ನು ಫುಡ್​ ಪಾರ್ಕ್‌ಗಳ ರಚನೆ ಮತ್ತು ಆರಂಭಿಕ ಕಾರ್ಯಾಚರಣೆಯನ್ನು ಹೊಂದಿಸುವುದರ ಮೇಲೆ ಒತ್ತು ನೀಡಲಾಯಿತು. ಆದಾಗ್ಯೂ, ಕೇವಲ ಈ ರಚನೆಗಳನ್ನು ನೋಂದಾಯಿಸುವುದು ಸಾಕಾಗುವುದಿಲ್ಲ. ಈ ಸಂಸ್ಥೆಗಳನ್ನು ಈಕ್ವಿಟಿ ಮತ್ತು ಮೂಲ ಬಂಡವಾಳಕ್ಕೆ ಲಿಂಕ್ ಮಾಡುವುದು, ಪರವಾನಿಗೆ ಮತ್ತು ಅನುಸರಣೆಯನ್ನು ಸರಾಗಗೊಳಿಸುವುದು, ಬ್ಯಾಕ್-ಎಂಡ್ ಮೂಲಸೌಕರ್ಯವನ್ನು ರಚಿಸುವುದು, ಈ ಸಂಸ್ಥೆಗಳಿಂದ ಬೃಹತ್ ಖರೀದಿದಾರರು ನೇರವಾಗಿ ಖರೀದಿಸಲು ಆಕರ್ಷಕವಾಗಿಸುವುದು ಸೇರಿದಂತೆ ಸಂಪೂರ್ಣ ಬೆಂಬಲದ ಪರಿಸರ ವ್ಯವಸ್ಥೆಯನ್ನು ರಚಿಸಬೇಕಾಗಿದೆ. ಮುಂದಿನ ಹಂತದಲ್ಲಿ ಪರಿಕಲ್ಪನಾತ್ಮಕವಾಗಿ ತೆಗೆದುಕೊಳ್ಳಲು ಅದರ ಬೆಂಬಲದ ಪರಿಸರ ವ್ಯವಸ್ಥೆಯನ್ನು ರಚಿಸಬೇಕಾಗಿದೆ.

ರೈತ ಉತ್ಪಾದಕ ಸಂಘಗಳ ಉದ್ದೇಶವೇನು? : ಸದಸ್ಯ ರೈತರ ಆದಾಯವನ್ನು ಹೆಚ್ಚಿಸುವುದು, ಅವಕಾಶ ಇರುವಲ್ಲೆಲ್ಲಾ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಗರಿಷ್ಠಗೊಳಿಸುವುದು ರೈತ ಉತ್ಪಾದಕ ಸಂಘಗಳ ಉದ್ದೇಶವಾಗಿದೆ. ಆದಾಗ್ಯೂ, ಇದಕ್ಕೆ ಸಾರಿಗೆ ಸೌಲಭ್ಯಗಳು, ಸಂಗ್ರಹಣೆ, ಶುಚಿಗೊಳಿಸುವಿಕೆ, ಶ್ರೇಣೀಕರಣ, ವಿಂಗಡಣೆ, ಬ್ರಾಂಡ್ ನಿರ್ಮಾಣ ಮತ್ತು ಮಾರುಕಟ್ಟೆಯಂತಹ ಮೂಲಸೌಕರ್ಯಗಳಿಗೆ ಪ್ರವೇಶದ ಅಗತ್ಯವಿದೆ.

ಮೂಲಸೌಕರ್ಯಕ್ಕೆ ಪ್ರವೇಶವನ್ನು ಹೊರತುಪಡಿಸಿ, ವ್ಯಾಪಾರ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಸ್ಥಾಪಿಸುವುದು, ಬದ್ಧತೆಗಳನ್ನು ಗೌರವಿಸುವುದು, ಮಾರುಕಟ್ಟೆ ಅಗತ್ಯತೆಗಳ (ಗ್ರೇಡ್‌ಗಳು ಮತ್ತು ಮಾನದಂಡಗಳು) ಮತ್ತು ಮೌಲ್ಯವರ್ಧನೆಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಇವುಗಳ ಜೊತೆಗೆ ಅಗತ್ಯವಾದ ಮಾರುಕಟ್ಟೆ ಮತ್ತು ವ್ಯಾಪಾರ ಸಂಪರ್ಕಗಳನ್ನು ವಿಸ್ತರಿಸುವ ಮೂಲಸೌಕರ್ಯ ಸ್ಥಾಪಿಸುವುದು. ಅರಿವು, ಬಂಡವಾಳಕ್ಕೆ ಬೇಕಾಗುವ ಸರಳ ಸಾಲ ಸೌಲಭ್ಯ ಬೆಲೆ ನಿಗದಿಪಡಿಸುವುದು ಮತ್ತು ಒಟ್ಟುಗೂಡಿಸುವಿಕೆ. ಈ ಎಲ್ಲ ಅಂಶಗಳು ರೈತ ಉತ್ಪಾದಕ ಸಂಘಗಳು ಎದುರಿಸುತ್ತಿರುವ ಸವಾಲುಗಳನ್ನು ಸೂಚಿಸುತ್ತದೆ.

ರೈತ ಉತ್ಪಾದಕ ಸಂಘಗಳು ಎದುರಿಸುತ್ತಿರುವ ಸವಾಲುಗಳೇನು?: ಪ್ರತಿ ರೈತ ಉತ್ಪಾದಕ ಸಂಘಗಳ ಗಾತ್ರವು 50-1000ಗಳನ್ನು ಒಳಗೊಂಡಿದೆ. ರೈತ ಉತ್ಪಾದಕ ಸಂಘಗಳ ರಚನೆ ಕಠಿಣ ಕಾರ್ಯವಾಗಿದೆ ಮತ್ತು ಸೀಮಿತ ಉದ್ಯಮಶೀಲತೆ ಹಾಗೂ ವ್ಯಾಪಾರ ನಿರ್ವಹಣೆ ಕೌಶಲ್ಯಗಳ ಹೆಚ್ಚಿನ ಮಾನವ ಶಕ್ತಿಯ ಕ್ಷೀಣತೆಗೆ ಕಾರಣವಾಗುತ್ತವೆ. ಸೀಮಿತ ಕೌಶಲ್ಯ ಒಳಗೊಂಡ ರೈತ ಉತ್ಪಾದಕ ಸಂಘಗಳನ್ನು ಒಂದೇ ವ್ಯಾಪ್ತಿಗೆ ತರಲು ಮತ್ತು ಮಾತುಕತೆ ನಡೆಸಲು ಕೊರತೆಯಿದೆ. ಆದರ್ಶ ಪ್ರಮಾಣದ ಆರ್ಥಿಕತೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಸೀಮಿತಗೊಳಿಸುತ್ತದೆ. ರೈತ ಉತ್ಪಾದಕರ ಸಂಘಗಳು ಅಸ್ತಿತ್ವದಲ್ಲಿರುವ ಮಾರುಕಟ್ಟೆ ಸಂಘಟನೆಗಳೊಂದಿಗೆ ಸ್ಪರ್ಧೆಯನ್ನು ಎದುರಿಸಬೇಕಾಗಿದೆ.

ಹಣಕಾಸಿನ ಸವಾಲುಗಳು : ಸಾಲವನ್ನು ಪಡೆಯುವಲ್ಲಿ ರೈತ ಉತ್ಪಾದಕ ಸಂಘಗಳು ಸವಾಲುಗಳನ್ನು ಎದುರಿಸುತ್ತಿದ್ದು, ಸರಕುಗಳ ತಿಳುವಳಿಕೆಯ ಕೊರತೆ ಕಾರ್ಯನಿರತ ಬಂಡವಾಳದ ಚಕ್ರಗಳು, ಮಾರುಕಟ್ಟೆ ಸಂಪರ್ಕಗಳು/ ಬ್ಯಾಂಕರ್ ಗಳ ಕಡೆಯಿಂದ ಮಾರುಕಟ್ಟೆ ಪ್ರವೇಶ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿವೆ.

ರೈತ ಉತ್ಪಾದಕ ಸಂಘಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ, ಬ್ಯಾಂಕ್ ಗಳಿಂದ ಸಾಲ ಪಡೆಯುವ ಸಂದರ್ಭದಲ್ಲಿ ಕ್ರೆಡಿಟ್ ಗ್ಯಾರೆಂಟಿ ನೀಡಲು ಉತ್ಪಾದಕ ಸಂಘಟನೆಗಳಲ್ಲಿ ಈಕ್ವಿಟಿ ಮತ್ತು ಸಾಂಸ್ಥಿಕ ನಿಧಿಗಳ ಬಂಡವಾಳದ ಕೊರತೆಯನ್ನು ಎದುರಿಸುತ್ತಿವೆ. ರೈತ ಉತ್ಪಾದಕ ಸಂಘಗಳು ಮತ್ತು ಫುಡ್ ಪಾರ್ಕ್‌ಗಳನ್ನು ರಚಿಸುವ ಉದ್ದೇಶವು ಕೃಷಿ ಮಾರುಕಟ್ಟೆಗೆ ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್ ಸಂಪರ್ಕವನ್ನು ಒದಗಿಸುವುದಾಗಿದೆ. ಈ ಪರಿಕಲ್ಪನೆಗಳ ಮೂಲಕ ಕೃಷಿ ಮಾರುಕಟ್ಟೆಯನ್ನು ಸಕ್ರಿಯಗೊಳಿಸಲು, ಕೃಷಿಯಲ್ಲಿ ಲಾಭ ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯದಲ್ಲಿನ ಫುಡ್ ಪಾರ್ಕ್‌ಗಳು ಮತ್ತು ರೈತ ಉತ್ಪಾದಕ ಸಂಘಗಳ ಪ್ರಸ್ತುತ ಸನ್ನಿವೇಶ ಮತ್ತು ಅವು ಹಲವು ಸವಾಲುಗಳನ್ನು ಎದುರಿಸುತ್ತಿವೆ.

ರಾಜ್ಯದಲ್ಲಿರುವ ರೈತ ಉತ್ಪಾದಕ ಸಂಘಗಳು ಮತ್ತು ಫುಡ್ ಪಾರ್ಕ್ ಗಳ ಪ್ರಸ್ತುತ ಸ್ಥಿತಿ ಹೇಗಿದೆ? : ಕರ್ನಾಟಕದಲ್ಲಿರುವ 650 ರೈತ ಉತ್ಪಾದಕ ಸಂಘಗಳಲ್ಲಿ (ಕಡಿಮೆ ಸಾಮರ್ಥ್ಯವುಳ್ಳ ರೈತ ಉತ್ಪಾದಕ ಸಂಘಗಳು ಸೇರಿದಂತೆ) ಬೆರಳೆಣಿಕೆಯಷ್ಟು ಮಾತ್ರ ಸಮಗ್ರ ಕೃಷಿ ಮೌಲ್ಯ ಸರಪಳಿಯ ಮೇಲೆ ಪೂರ್ಣ ಪ್ರಮಾಣದಲ್ಲಿ ವ್ಯವಹಾರವನ್ನು ಕೇಂದ್ರೀಕರಿಸುತ್ತವೆ.

ಸಿಇಒಗಳು ಮತ್ತು ನಿರ್ದೇಶಕರ ಮಂಡಳಿಯು ಉದ್ದೇಶಿತ ಕೆಲಸವನ್ನು ಮಾಡಲು ಹೆಚ್ಚು ಗಮನವನ್ನು ನೀಡುತ್ತಿಲ್ಲ. ಕೌಶಲ್ಯ/ನುರಿತ ಉದ್ಯೋಗಿಗಳ ಕೊರತೆಯಿಂದಾಗಿ ಸಾಕಷ್ಟು ಅನುಸರಣೆ ಜವಾಬ್ದಾರಿಯನ್ನು ನಿಗಧಿತ ಸಮಯದಲ್ಲಿ ಮಾಡಲಾಗುತ್ತಿಲ್ಲ. ಇದು ಸಮಗ್ರ ಕೃಷಿ ಮೌಲ್ಯ ಸರಪಳಿಯನ್ನು ರಚಿಸುವ ದಿಕ್ಕಿನಲ್ಲಿ ಹೆಚ್ಚಿನ ಗಮನ ನೀಡದಿರಲು ಕಾರಣವಾಗಿದೆ.

ಪ್ರಾಕೃತಿಕ ಹಾಗೂ ಮಾರುಕಟ್ಟೆ ಮುನ್ಸೂಚನೆಗಳು ಸರಿಯಾದ ಸಮಯಕ್ಕೆ ಲಭ್ಯವಿಲ್ಲ. ಸದಸ್ಯ ರೈತರು ಮತ್ತು ಎಫ್‌ಪಿಒಗಳಲ್ಲಿ ನಿರ್ದಿಷ್ಟವಾಗಿ ಉತ್ಪಾದನೆಯ ವ್ಯವಹಾರದ ಅಂಶಗಳ ಕುರಿತ ಚರ್ಚೆಗಳ ಕೊರತೆಯಿದೆ. ರೈತ ಉತ್ಪಾದಕ ಸಂಘಗಳಲ್ಲಿ ಶೇ. 90 ಕ್ಕಿಂತಲೂ ಹೆಚ್ಚು ರೈತ ಉತ್ಪಾದಕ ಸಂಘಗಳು 80 ಲಕ್ಷಗಳಿಗಿಂತ ಕಡಿಮೆ ಆದಾಯವನ್ನು ಗಳಿಸುತ್ತಿವೆ. ಇದರಲ್ಲಿ ಹೆಚ್ಚಿನವು ಕೃಷಿ ಪರಿಕರಗಳ ವ್ಯವಹಾರದ ಮೂಲಕ ಮಾತ್ರ ಆದಾಯ ಗಳಿಸುತ್ತಿದ್ದಾರೆ.

2021-22ನೇ ಸಾಲಿನಲ್ಲಿ ರಾಜ್ಯದ ಯೋಜನೆಯಡಿಯಲ್ಲಿ ರೈತ ಉತ್ಪಾದಕ ಸಂಘಗಳಿಗೆ 250,00 ಕೋಟಿ ರೂ.ಗಳ ಬಿಡುಗಡೆಯಲ್ಲಿ ಕೇವಲ 185.34 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಹೊಸ ರೈತ ಉತ್ಪಾದಕ ಸಂಘಗಳಿಗೆ ಯಶೋಗಾಥೆಗಳನ್ನು ಅನುಸರಿಸಲು ರಾಜ್ಯದಲ್ಲಿ ರೋಲ್ ಮಾಡೆಲ್/ ಮಾದರಿ ರೈತ ಉತ್ಪಾದಕ ಸಂಘಗಳ ಕೊರತೆ ಕಾಣುತ್ತಿದೆ. ರೈತ ಉತ್ಪಾದಕ ಸಂಘಗಳ ಸಂಸ್ಕರಣಾ ಸಾಮರ್ಥ್ಯವು ತುಂಬಾ ಸೀಮಿತವಾಗಿದೆ.

ಪ್ರಸ್ತುತ ರಾಜ್ಯದಲ್ಲಿ 5 ಫುಡ್ ಪಾರ್ಕ್‌ಗಳಿದ್ದು, ಇವುಗಳಲ್ಲಿ ಯಾವುದೇ ಫುಡ್ ಪಾರ್ಕ್‌ಗಳು ನೂರರಷ್ಟು ಮಾಲೀಕತ್ವ ಹೊಂದಿಲ್ಲ. ದೇಶೀಯ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮೂಲಸೌಲಭ್ಯದ ಕೊರತೆ ಇದೆ.‌ ಕೆಲವು ರೈತ ಉತ್ಪಾದಕ ಸಂಘಗಳು ಶೈತ್ಯಗಾರ ಸರಪಳಿ ಮತ್ತು ಇತರೆ ಕಾರ್ಯವಿಧಾನಗಳ ಮೂಲಕ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ತೊಡಗಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೌಲ್ಯವರ್ಧನೆಯ ಮಧ್ಯಸ್ಥಿಕೆಯು ರೈತರ ಜೀವನೋಪಾಯವನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿರುವ ಉದ್ಯಮಿಗಳು ಮತ್ತು ಮಿಷನ್‌ ಚಾಲಿತ ಸಂಸ್ಥೆಗಳಿಂದ ನಡೆಸಲ್ಪಟ್ಟಿದೆ. ರೈತ ಉತ್ಪಾದಕ ಸಂಘಗಳಿಂದ ತೆಂಗಿನ ಕಾಯಿಯ ಮೌಲ್ಯವರ್ಧನೆ, ರೈತರಿಂದ ಖರೀದಿಸಿದ ರಾಗಿಯನ್ನು ನೀರಿನಲ್ಲಿ ತೊಳೆದು ಒಣಗಿಸಿ ಗುಣಮಟ್ಟದ ವಿವರಣೆಗೆ ಅನುಗುಣವಾಗಿ ವರ್ಗೀಕರಿಸಿ ನಂತರ ಅಪೇಕ್ಷಿತ ಗ್ರಾಹಕರಿಗೆ ರವಾನಿಸಲಾಗುತ್ತದೆ. ಕೃಷಿ ಮೌಲ್ಯ ಸರಪಳಿಯನ್ನು ಹೆಚ್ಚಿಸಲು ಪ್ರಮುಖವಾದ ಎಫ್ ಪಿಒಗಳಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಲಾಗಿದೆ.

ರಾಜ್ಯದಲ್ಲಿನ ಫುಡ್ ಪಾರ್ಕ್‌ಗಳ ವಾಸ್ತವವು ಈ ಕೆಳಕಂಡಂತಿದೆ : ತುಮಕೂರಿನ ಇಂಡಿಯಾ ಫುಟ್ ಪಾರ್ಕ್​ನಲ್ಲಿ 10,000 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತದೆ. ಇದರಿಂದ ಒಂದು ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಅದೇ ರೀತಿ ಇನೋವಾ ಅಗ್ರಿ ಬಯೋಪಾರ್ಕ್ ಲಿ. ಮಾಲೂರಿನಲ್ಲಿ 1000 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತಿದ್ದು, 150 ಉದ್ಯೋಗ ಸೃಷ್ಟಿಯಾಗಿದೆ.

ಅಕ್ಷಯ ಫುಡ್ ಪಾರ್ಕ್ ಲಿ. ಹಿರಿಯೂರಿನಲ್ಲಿ 9900 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತಿದ್ದು, 186 ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೇ ಗ್ರೀನ್ ಫುಡ್ ಪಾರ್ಕ್ ಲಿ. ಬಾಗಲಕೋಟೆಯಲ್ಲಿ 1500 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತಿದ್ದು, 60 ಉದ್ಯೋಗ ಸೃಷ್ಟಿಯಾಗಿದೆ. ಮತ್ತು ಜೇವರ್ಗಿ ಆಗ್ರೋ ಫುಡ್ ಪಾರ್ಕ್ ಲಿ. ಕಲಬುರಗಿಯಲ್ಲಿ 1923 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತಿದ್ದು, 40 ಉದ್ಯೋಗ ಸೃಷ್ಟಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.