ETV Bharat / city

ಬಿ ಕೇರ್​​ಫುಲ್​... ಅಪಘಾತದಲ್ಲಿ ಪಾದಚಾರಿ ಮೃತಪಟ್ಟರೆ ಸವಾರರ ವಿರುದ್ಧ ಕೊಲೆ ಪ್ರಕರಣ ದಾಖಲು

author img

By

Published : Sep 5, 2019, 7:41 PM IST

ವಿದ್ಯಾವಂತರು ನೋ ಪಾರ್ಕಿಂಗ್ ರಸ್ತೆಯಲ್ಲೂ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟನೆ ಉಂಟಾಗುತ್ತಿದೆ. ಈ ರೀತಿ ಸಂಚಾರಿ ನಿಯಮ‌ ಉಲ್ಲಂಘಿಸುತ್ತಿರುವ ಪರಿಣಾಮ ರಸ್ತೆ ಅಪಘಾತಗಳು ಸಂಭವಿಸಲು ಕಾರಣ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

pedestrian dies in an accident, a murder case is registered against the riders

ಬೆಂಗಳೂರು: ಪ್ರಸ್ತುತ ಅಪಘಾತದಲ್ಲಿ ಪಾದಚಾರಿಗಳು ಮೃತಪಟ್ಟರೆ 304 ಎ (ಕೊಲೆಯತ್ನ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಇನ್ಮುಂದೆ 307 ಸೆಕ್ಷನ್ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.

304A ಜೊತಗೆ‌ 307 ಸೇರಿಸುವುದಕ್ಕೆ ಸಂಬಂಧಿಸಿದಂತೆ ಡಿಸಿಎಂ ಅಶ್ವತ್ಥನಾರಾಯಣ್ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಅಪಘಾತವಾದ ಬಳಿಕ ಬಂದು ಕ್ಷಮಿಸಿ, ತಪ್ಪಾಯ್ತು ಎಂದರೆ ಸಹಿಸುವುದಿಲ್ಲ. ಅವುಗಳಿಗೆ ಕಡಿವಾಣಕ್ಕೆ ಮತ್ತಷ್ಟು ಪಾದಚಾರಿ ಸೇತುವೆಗಳ ನಿರ್ಮಾಣಕ್ಕೆ ಡಿಸಿಎಂ ಸೂಚಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ವಿದ್ಯಾವಂತರು ನೋ ಪಾರ್ಕಿಂಗ್ ರಸ್ತೆಯಲ್ಲೂ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ರೀತಿ ಸಂಚಾರಿ ನಿಯಮ‌ ಉಲ್ಲಂಘಿಸುತ್ತಿರುವ ಪರಿಣಾಮ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸಂಚಾರ ಪೊಲೀಸರ ಬಳಿ ಬಾಡಿ ವೇರ್ ಕ್ಯಾಮರಾಗಳಿವೆ. ಈಗಿರುವ 280 ಇಂತಹ ಕ್ಯಾಮರಾಗಳನ್ನು 600ಕ್ಕೆ ಹೆಚ್ಚಿಸುವ ಚಿಂತನೆ ಇದೆ ಎಂದು ಹೇಳಿದರು.

ನಗರದಲ್ಲಿ ಗಂಟೆಗಟ್ಟಲೆ ಪಾರ್ಕ್​ ಮಾಡುವವರು ಸಂಖ್ಯೆ ಅಧಿಕವಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಸೂಕ್ತ ದಂಡ ವಿಧಿಸುವಂತೆ ಮತ್ತು ರಸ್ತೆಯಲ್ಲಿ ಕಾರು, ಬಸ್​ ನಿಲ್ಲಿಸಿದರೆ ಶುಲ್ಕ ಪಾವತಿಸುವಂತೆ ಕೋರಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಲಾಗುವುದು. ಖಾಸಗಿ ಶಾಲಾ ‌ಮುಖಸ್ಥರ ಜೊತೆ ಈಗಾಗಲೇ ಸಭೆ ನಡೆಸಿದ್ದು, ಶಾಲೆ ಹೊರಗಡೆ, ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಬಾರದು ಎಂದು ಸೂಚನೆ ನೀಡಿದ್ದೇವೆ ಎಂದರು.

ಸೆಪ್ಟೆಂಬರ್​​ 3ರಂದು ನಗರದಲ್ಲಿ ನೂತನ ಸಾರಿಗೆ ನಿಯಮ ಜಾರಿಗೆ ಬಂದಿದೆ. ಈಗಾಗಲೇ ಮೂರು ದಿನಗಳಲ್ಲಿ ₹ 2 ಲಕ್ಷ ದಂಡ ಸಂಗ್ರಹವಾಗಿದೆ. ನಿನ್ನೆ ಕೆ.ಎಸ್.ಲೇಔಟ್ ಠಾಣೆ ವ್ಯಾಪ್ಯಿಯಲ್ಲಿ ಸವಾರನಿಗೆ ₹ 17 ಸಾವಿರ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ರಸ್ತೆ ಅಪಘಾತದಲ್ಲಿ ಬಹುತೇಕ ಬೈಕ್ ಸವಾರರು ಹಾಗೂ ಪಾದಚಾರಿಗಳೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೆಂದೇ ಕೇಂದ್ರ ಮೋಟಾರ್ ವಾಹನ ಕಾಯ್ದೆಯನ್ನು ತಿದ್ದುಪಡಿ ತರಲಾಗಿದೆಯೇ ಹೊರತು ಆದಾಯ ಸಂಗ್ರಹಿಸುವ ಉದ್ದೇಶದಿಂದಲ್ಲ

ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

ಬೆಂಗಳೂರು: ಪ್ರಸ್ತುತ ಅಪಘಾತದಲ್ಲಿ ಪಾದಚಾರಿಗಳು ಮೃತಪಟ್ಟರೆ 304 ಎ (ಕೊಲೆಯತ್ನ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಇನ್ಮುಂದೆ 307 ಸೆಕ್ಷನ್ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.

304A ಜೊತಗೆ‌ 307 ಸೇರಿಸುವುದಕ್ಕೆ ಸಂಬಂಧಿಸಿದಂತೆ ಡಿಸಿಎಂ ಅಶ್ವತ್ಥನಾರಾಯಣ್ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಅಪಘಾತವಾದ ಬಳಿಕ ಬಂದು ಕ್ಷಮಿಸಿ, ತಪ್ಪಾಯ್ತು ಎಂದರೆ ಸಹಿಸುವುದಿಲ್ಲ. ಅವುಗಳಿಗೆ ಕಡಿವಾಣಕ್ಕೆ ಮತ್ತಷ್ಟು ಪಾದಚಾರಿ ಸೇತುವೆಗಳ ನಿರ್ಮಾಣಕ್ಕೆ ಡಿಸಿಎಂ ಸೂಚಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ವಿದ್ಯಾವಂತರು ನೋ ಪಾರ್ಕಿಂಗ್ ರಸ್ತೆಯಲ್ಲೂ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ರೀತಿ ಸಂಚಾರಿ ನಿಯಮ‌ ಉಲ್ಲಂಘಿಸುತ್ತಿರುವ ಪರಿಣಾಮ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸಂಚಾರ ಪೊಲೀಸರ ಬಳಿ ಬಾಡಿ ವೇರ್ ಕ್ಯಾಮರಾಗಳಿವೆ. ಈಗಿರುವ 280 ಇಂತಹ ಕ್ಯಾಮರಾಗಳನ್ನು 600ಕ್ಕೆ ಹೆಚ್ಚಿಸುವ ಚಿಂತನೆ ಇದೆ ಎಂದು ಹೇಳಿದರು.

ನಗರದಲ್ಲಿ ಗಂಟೆಗಟ್ಟಲೆ ಪಾರ್ಕ್​ ಮಾಡುವವರು ಸಂಖ್ಯೆ ಅಧಿಕವಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಸೂಕ್ತ ದಂಡ ವಿಧಿಸುವಂತೆ ಮತ್ತು ರಸ್ತೆಯಲ್ಲಿ ಕಾರು, ಬಸ್​ ನಿಲ್ಲಿಸಿದರೆ ಶುಲ್ಕ ಪಾವತಿಸುವಂತೆ ಕೋರಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಲಾಗುವುದು. ಖಾಸಗಿ ಶಾಲಾ ‌ಮುಖಸ್ಥರ ಜೊತೆ ಈಗಾಗಲೇ ಸಭೆ ನಡೆಸಿದ್ದು, ಶಾಲೆ ಹೊರಗಡೆ, ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಬಾರದು ಎಂದು ಸೂಚನೆ ನೀಡಿದ್ದೇವೆ ಎಂದರು.

ಸೆಪ್ಟೆಂಬರ್​​ 3ರಂದು ನಗರದಲ್ಲಿ ನೂತನ ಸಾರಿಗೆ ನಿಯಮ ಜಾರಿಗೆ ಬಂದಿದೆ. ಈಗಾಗಲೇ ಮೂರು ದಿನಗಳಲ್ಲಿ ₹ 2 ಲಕ್ಷ ದಂಡ ಸಂಗ್ರಹವಾಗಿದೆ. ನಿನ್ನೆ ಕೆ.ಎಸ್.ಲೇಔಟ್ ಠಾಣೆ ವ್ಯಾಪ್ಯಿಯಲ್ಲಿ ಸವಾರನಿಗೆ ₹ 17 ಸಾವಿರ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ರಸ್ತೆ ಅಪಘಾತದಲ್ಲಿ ಬಹುತೇಕ ಬೈಕ್ ಸವಾರರು ಹಾಗೂ ಪಾದಚಾರಿಗಳೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೆಂದೇ ಕೇಂದ್ರ ಮೋಟಾರ್ ವಾಹನ ಕಾಯ್ದೆಯನ್ನು ತಿದ್ದುಪಡಿ ತರಲಾಗಿದೆಯೇ ಹೊರತು ಆದಾಯ ಸಂಗ್ರಹಿಸುವ ಉದ್ದೇಶದಿಂದಲ್ಲ

ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

Intro:Mojo byteBody:ರಸ್ತೆ ಅಪಘಾತದಲ್ಲಿ ‌ಸಾವನ್ನಪ್ಪಿತ್ತಿರುವವರ ಪೈಕಿ ಬೈಕ್ ಸವಾರರು ಹಾಗೂ ಪಾದಚಾರಿಗಳೇ ಹೆಚ್ಚು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಬಹುತೇಕ ಬೈಕ್ ಸವಾರರು ಹಾಗೂ ಪಾದಚಾರಿಗಳೇ ಹೆಚ್ಚು ಸಾವನ್ನಪ್ಪಿತ್ತಿರುವುದು ಆತಂಕಕಾರಿ. ಈ ಹಿನ್ನೆಲೆಯಲ್ಲಿ ಸಾವು- ನೋವುಗಳನ್ನು ತಹಬದಿಗೆ ತೆರಳಲು ಕೇಂದ್ರ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವುದು ಹೊರತು ಆದಾಯ ಸಂಗ್ರಹಿಸುವ ಉದ್ದೇಶದಿಂದಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟ ಪಡಿಸಿದ್ದಾರೆ.

ಸೆ.3ರಂದೇ ನಗರದಲ್ಲಿ ಹೊಸ ಸಾರಿಗೆ ನಿಯಮ ಜಾರಿಗೆ ಬಂದಿದೆ. ಕಳೆದ‌ ಮೂರು ದಿನಗಳಲ್ಲಿ 2 ಲಕ್ಷ ದಂಡ ಸಂಗ್ರಹಿಸಲಾಗಿದೆ. ನಿನ್ನೆ ಕೆ.ಎಸ್.ಲೇಔಟ್ ಠಾಣೆ ವ್ಯಾಪ್ಯಿಯಲ್ಲಿ ಓರ್ವ ವಾಹನ ಸವಾರನಿಂದಲೇ 17 ಸಾವಿರ ರೂ.ಜುಲ್ಮಾನೆ ವಿಧಿಸಲಾಗಿದೆ. ರಾಜಧಾನಿಯಲ್ಲಿ ಅಕ್ಷರವಂತರೇ ನೋ ಪಾರ್ಕಿಂಗ್ ರಸ್ತೆಯಲ್ಲಿ ವಾಹನ ಚಾಲನೆ ಮೂಲಕ‌ ಟ್ರಾಫಿಕ್ ಜಾಮ್ ಗೆ ಕಾರಣರಾಗುತ್ತಿದ್ದಾರೆ. ಉಲ್ಲಂಘನೆ ಬಗ್ಗೆ ಪ್ರಶ್ನಿಸಿದರೆ ರಸ್ತೆಯಲ್ಲಿ ಸಂಚಾರಿ ಪೊಲೀಸರ ಮೇಲೆ ವಾಕ್ಸಮರ ನಡೆಸುತ್ತಿದ್ದಾರೆ ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಂಚಾರಿ ನಿಯಮ‌ ಉಲ್ಲಂಘನೆಯಿಂದಾಗಿ ಬೆಂಗಳೂರಿನಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳಾಗುತ್ತಿವೆ. ಶಿಸ್ತಿನಿಂದ ವಾಹನ ಚಲಾಯಿಸಲು ಹೊಸ ನಿಯಮ ಸಹಕಾರಿಯಾಗಲಿದೆ.
ಸಂಚಾರ ಪೊಲೀಸರ ಬಳಿ ಬ್ಯಾಡಿ ವೇರ್ ಕ್ಯಾಮರಾ 280 ಇದ್ದು ಇದನ್ನು 600ಕ್ಕೆ ಹೆಚ್ಚಿಸಲಾಗುವುದು. ಇನ್ನೂ ರಿಂಗ್ ರೋಡ್ ರಸ್ತೆಯಲ್ಲಿ ವಾಹನಗಳು ಹೆಚ್ಚು ವೇಗವಾಗಿ ಬರುತ್ತದೆ. ಅಪಘಾತವಾಗಿ ಪಾದಚಾರಿಗಳು ಮೃತಪಟ್ಟರೆ ನಾವು 304a (ಕೊಲೆಯತ್ನ) ಅಡಿಯಲ್ಲಿ ದಾಖಲು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ 307 ಸೆಕ್ಷನ್ (ಕೊಲೆ)ಅಡಿಯಲ್ಲಿ ಕೇಸ್ ಬುಕ್ ಮಾಡಲು ಸೂಚಿಸಲಾಗುವುದು. ಅಪಘಾತವಾದ ಬಳಿಕ ಬಂದು ಕ್ಷಮಿಸಿ ಮಿಸ್ಟೇಕ್ ಆಯ್ತು ಅನ್ನುವುದು‌ ನನಗೆ ಇಷ್ಟವಿಲ್ಲ ಎಂದರು.

304 A ಜೊತಗೆ‌ 307 ಸೇರಿಸುವುದು ಡಿಸಿಎಂ ಅಶ್ವಥ್ ನಾರಾಯಣ್ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ನಗರದ ಕೆಲಕಡೆ ಮತ್ತಷ್ಟು ಸ್ಕೈವ್ ವಾಕ್ ಗಳನ್ನು‌ ನಿರ್ಮಾಣ ಮಾಡಲು ಸೂಚಿಸಿದ್ದಾರೆ.‌ ನಗರದಲ್ಕಿ 12 ಕಡೆಗಳಲ್ಲಿ ಹೈಡೆನ್ ಸಿಟಿ ಕಾರಿಡರ್ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ನಗರದಲ್ಲಿ ಪಾರ್ಕಿಂಗ್ ಮಾಫಿಯಾ ಇದೆ. ‌ನಗರದಲ್ಲಿ ಗಂಟೆಗಳ ಕಾಲ ಪಾರ್ಕಿಂಗ್ ಮಾಡಿ ಹೋಗುತ್ತಾರೆ.
ಈ ಸಂಬಂಧ ಸೂಕ್ತ ಪಾರ್ಕಿಂಗ್ ಚಾರ್ಜ್ ಮಾಡಬೇಕೆಂದು ಕೋರಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಲಾಗುವುದು
ರಸ್ತೆಯಲ್ಲಿ ಕಾರ್ ಪಾರ್ಕ್ ಮಾಡುವುದು, ಬಸ್ಸು ಪಾರ್ಕ್ ಮಾಡುವುದು.ಇದಕ್ಕೆಲ್ಲಾ ಶುಲ್ಕ ಪಾವತಿ ಮಾಡಬೇಕು ಎಂದು ಪತ್ರ ಬರೆಯಲಾಗುವುದು.‌ಕಾರ್ ಇದ್ದರೆ ಮನೆ ಒಳಗೊಂಡೆ ಇಟ್ಟುಕೊಳ್ಳಬೇಕು. ಹೊರಗಡೆ ಪಾರ್ಕ್ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ..
ಬೆಂಗಳೂರಿನ ಖಾಸಗಿ ಶಾಲಾ ‌ಮುಖಸ್ಥರ ಜೊತರ ಸಭೆ ನಡೆಸಲಾಗಿದೆ. ಶಾಲೆ ಹೊರಗಡೆ, ರಸ್ತೆಯಲ್ಲಿ ಶಾಲಾ ವಾಹನ ಪಾರ್ಕ್ ಮಾಡುತ್ತಾರೆ ‌ಇದ್ದರಿಂದ ಟ್ರಾಫಿಕ್ ಸಮಸ್ಯೆ ಆಗುತ್ತದೆ. ಹೀಗಾಗಿ ಶಾಲಾ ಬಾಸ್ ಗಳನ್ನು ನಿಮ್ಮ ಶಾಲೆಯ ಒಳಗೆ ಪಾರ್ಕ್ ಮಾಡಿಕೊಳ್ಳಿ.. ಇಲ್ಲ ಅಂದರೆ ನಿಮ್ಮ ಶಾಲೆಯನ್ನ ನಗರದ ಹೊರಗಡೆ ನಡೆಸಿ. ನಗರದ ವಾಹನ ಸವಾರರಿಗೆ ತೊಂದರೆ ಕೊಡಬೇಡಿ ಎಂದು ಶಾಲೆ ಮಾಲೀಕರಿಗೆ ಖಡಕ್ ಸೂಚನೆ ನೀಡಿದರು.
ಸುದ್ದಿಗೋಷ್ಠಿ ಯಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ನಗರದ ಮೂವರು ಸಂಚಾರ ವಿಭಾಗದ ಡಿಸಿಪಿ ಗಳು ಭಾಗಿಯಾಗಿದ್ದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.