ETV Bharat / city

ಕೈ ಪಾಳಯದಲ್ಲಿ ಕೇಸರಿ ಪೇಟದ ಹವಾ... ಕಾಂಗ್ರೆಸ್ ರ್ಯಾಲಿಯಲ್ಲಿ ಹೊಸ ಟ್ರೆಂಡ್!

author img

By

Published : Mar 25, 2019, 3:04 PM IST

ಕೇಸರಿ ಬಣ್ಣದ ಪೇಟ ಧರಿಸಿ ಅಚ್ಚರಿ ಮೂಡಿಸಿದ ಕಾಂಗ್ರೆಸ್ ಕಾರ್ಯಕರ್ತರು. ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಕೆಯ ರ್ಯಾಲಿಯಲ್ಲಿ ಹೊಸ ಟ್ರೆಂಡ್.

ಕಾಂಗ್ರೆಸ್ ರ್ಯಾಲಿ

ಬೆಂಗಳೂರು: ಕಾಂಗ್ರೆಸ್ ರ್ಯಾಲಿಯಲ್ಲಿ ಹೊಸ ಟ್ರೆಂಡ್ ಆರಂಭವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಬಣ್ಣದ ಪೇಟ ಧರಿಸುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.

ಹೌದ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ನಾಮಪತ್ರ ಸಲ್ಲಿಕೆಯ ರ್ಯಾಲಿಯಲ್ಲಿ ಕೇಸರಿ ಪೇಟದ ಕಾರ್ಯಕರ್ತರು ಗಮನ ಸೆಳೆದರು. ರಿಜ್ವಾನ್ ಅರ್ಷದ್ ಬೆಂಬಲಿಗರು ಕೇಸರಿ ಪೇಟ ಹಾಗೂ ಕೇಸರಿ ಕುಂಕುಮ ತೊಟ್ಟು ರ್ಯಾಲಿಯಲ್ಲಿ ಭಾಗಿಯಾಗಿದ್ದರು.

ಕೈ ಪಾಳಯದಲ್ಲಿ ಕೇಸರಿ ಪೇಟದ ಹವಾ

ಬಿಜೆಪಿ ಮಾತ್ರ ಹಿಂದೂಗಳ ಧ್ವನಿಯಲ್ಲ. ಕಾಂಗ್ರೆಸ್ ಕೂಡ ಹಿಂದೂಗಳ ಪರವಿದೆ. ರಿಜ್ವಾನ್ ಹಿಂದೂಗಳ ಪರ ನಿಲ್ಲುತ್ತಾರೆ. ಇದರ ಸಂಕೇತವಾಗಿ ಕೇಸರಿ ಪೇಟ ಕೇಸರಿ ಕುಂಕುಮ ತೊಟ್ಟಿದ್ದೇವೆ. ಕೇಸರಿ ಬಿಜೆಪಿ ಸ್ವತ್ತಲ್ಲ, ಹಿಂದೂಗಳು ಬಿಜೆಪಿ ಬೆಂಬಲಿಗರು ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಅಪಾರ ಸಂಖ್ಯೆಯ ಹಿಂದೂಗಳು ಕಾಂಗ್ರೆಸ್ ಬೆಂಬಲಿಗರು. ಹೀಗಾಗಿ ಕೇಸರಿ ಪೇಟ ಧರಿಸಿದ್ದೇವೆ ಎಂದು ಬೆಂಬಲಿಗ ಲಕ್ಷ್ಮೀಕಾಂತ್ ತಿಳಿಸಿದರು.

ಬೆಂಗಳೂರು: ಕಾಂಗ್ರೆಸ್ ರ್ಯಾಲಿಯಲ್ಲಿ ಹೊಸ ಟ್ರೆಂಡ್ ಆರಂಭವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಬಣ್ಣದ ಪೇಟ ಧರಿಸುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.

ಹೌದ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ನಾಮಪತ್ರ ಸಲ್ಲಿಕೆಯ ರ್ಯಾಲಿಯಲ್ಲಿ ಕೇಸರಿ ಪೇಟದ ಕಾರ್ಯಕರ್ತರು ಗಮನ ಸೆಳೆದರು. ರಿಜ್ವಾನ್ ಅರ್ಷದ್ ಬೆಂಬಲಿಗರು ಕೇಸರಿ ಪೇಟ ಹಾಗೂ ಕೇಸರಿ ಕುಂಕುಮ ತೊಟ್ಟು ರ್ಯಾಲಿಯಲ್ಲಿ ಭಾಗಿಯಾಗಿದ್ದರು.

ಕೈ ಪಾಳಯದಲ್ಲಿ ಕೇಸರಿ ಪೇಟದ ಹವಾ

ಬಿಜೆಪಿ ಮಾತ್ರ ಹಿಂದೂಗಳ ಧ್ವನಿಯಲ್ಲ. ಕಾಂಗ್ರೆಸ್ ಕೂಡ ಹಿಂದೂಗಳ ಪರವಿದೆ. ರಿಜ್ವಾನ್ ಹಿಂದೂಗಳ ಪರ ನಿಲ್ಲುತ್ತಾರೆ. ಇದರ ಸಂಕೇತವಾಗಿ ಕೇಸರಿ ಪೇಟ ಕೇಸರಿ ಕುಂಕುಮ ತೊಟ್ಟಿದ್ದೇವೆ. ಕೇಸರಿ ಬಿಜೆಪಿ ಸ್ವತ್ತಲ್ಲ, ಹಿಂದೂಗಳು ಬಿಜೆಪಿ ಬೆಂಬಲಿಗರು ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಅಪಾರ ಸಂಖ್ಯೆಯ ಹಿಂದೂಗಳು ಕಾಂಗ್ರೆಸ್ ಬೆಂಬಲಿಗರು. ಹೀಗಾಗಿ ಕೇಸರಿ ಪೇಟ ಧರಿಸಿದ್ದೇವೆ ಎಂದು ಬೆಂಬಲಿಗ ಲಕ್ಷ್ಮೀಕಾಂತ್ ತಿಳಿಸಿದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.