ETV Bharat / city

ಅಲಯನ್ಸ್​ ಯೂನಿವರ್ಸಿಟಿ ಮಾಜಿ ಉಪಕುಲಪತಿಯ ಬರ್ಬರ ಹತ್ಯೆ... ವಾಕಿಂಗ್​ ಹೋದಾಗ ಕೊಚ್ಚಿ ಕೊಲೆ

author img

By

Published : Oct 16, 2019, 10:32 AM IST

Updated : Oct 16, 2019, 1:33 PM IST

ನಿನ್ನೆ ರಾತ್ರಿ ವಾಕಿಂಗ್​ಗೆ ಹೋಗಿದ್ದ ಅಲಯನ್ಸ್​ ಯೂನಿವರ್ಸಿಟಿ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್​.ಟಿ. ನಗರದಲ್ಲಿ ನಡೆದಿದೆ.

ಅಲಯನ್ಸ್​ ಯೂನಿವರ್ಸಿಟಿ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ

ಬೆಂಗಳೂರು: ನಿನ್ನೆ ರಾತ್ರಿ ವಾಕಿಂಗ್​ಗೆ ಹೋಗಿದ್ದ ಅಲಯನ್ಸ್​ ಯೂನಿವರ್ಸಿಟಿ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್​.ಟಿ. ನಗರದಲ್ಲಿ ನಡೆದಿದೆ.

ಅಲಯನ್ಸ್​ ಯೂನಿವರ್ಸಿಟಿ ಮಾಜಿ ಉಪಕುಲಪತಿಯ ಬರ್ಬರ ಹತ್ಯೆ... ವಾಕಿಂಗ್​ ಹೋದಾಗ ಕೊಚ್ಚಿ ಕೊಲೆ

ರಾತ್ರಿ ಊಟ ಮುಗಿಸಿ ಮನೆಯಿಂದ ವಾಕಿಂಗ್ ಹೋಗಿದ್ದ ಅಯ್ಯಪ್ಪ ದೊರೆ, ವಾಪಾಸ್​ ಮನೆಗೆ ಬಂದಿರಲಿಲ್ಲ. ಇದ್ರಿಂದ ಗಾಬರಿಗೊಂಡ ಮನೆಯವರು ರಾತ್ರಿ ಹುಡುಕಾಡಿದಾಗ ಮನೆಯಿಂದ ಸ್ವಲ್ಪ ದೂರದಲ್ಲಿ ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ. ತಕ್ಷಣ ಸ್ಥಳಾಕ್ಕಾಗಮಿಸಿದ ನಗರ ಆಯುಕ್ತ ಭಾಸ್ಕರ್ ರಾವ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಆರ್​.ಟಿ.ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆಯಾದ ಕುಲಪತಿ ಅಯ್ಯಪ್ಪ ದೊರೆ ಪ್ರತ್ಯೇಕ‌ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಲಿಂಗಾಯುತ ಧರ್ಮಕ್ಕೆ ಆಗ್ರಹಿಸಿ, ಹೋರಾಟ ನಡೆಸಿ ಜನಸಾಮಾನ್ಯರ ಪಕ್ಷವನ್ನು ಸ್ಥಾಪಿಸಿದ್ದರು. ಮಾತ್ರವಲ್ಲದೇ ಅಲಯನ್ಸ್ ಯೂನಿವರ್ಸಿಟಿಗೆ ಸೇರಿದ ಜಮೀನು ವಿವಾದವೂ ಸಹ ಇತ್ತು. ಹೀಗಾಗಿ ಎರಡು ಕಡೆಯ ವಿಚಾರ ತೆಗೆದುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಗರ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಅಯ್ಯಪ್ಪ ದೊರೆ ನಿನ್ನೆ ಮನೆಯಿಂದ ಊಟ ಮುಗಿಸಿ ವಾಕಿಂಗ್​ಗೆ ಬಂದಿದ್ದಾರೆ. ಈ ವೇಳೆ ಯಾರೋ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ಅವರ ಪತ್ನಿ ಈ ಬಗ್ಗೆ ಹೊಯ್ಸಳಗೆ ಮಾಹಿತಿ ನೀಡಿದ್ದಾರೆ. ಅಯ್ಯಪ್ಪ ದೊರೆ ವಿಜಯಪುರ ಮೂಲದವರಾಗಿದ್ದು, 17 ವರ್ಷದಿಂದ ಬೆಂಗಳೂರಿನಲ್ಲೇ ವಾಸವಿದ್ದರು. 7 ರಿಂದ 8 ವರ್ಷ ಅಲಯನ್ಸ್ ಯೂನಿವರ್ಸಿಟಿ ಉಪಕುಲಪತಿಯಾಗಿದ್ದರು. ಕೋರ್ಟ್​ನಲ್ಲಿ ಅಲಯನ್ಸ್ ಯೂನಿವರ್ಸಿಟಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ನಡೆಯುತ್ತಲೇ ಇತ್ತು. ಈಗಾಗಲೇ ತನಿಖಾ ತಂಡ ರಚನೆ ಮಾಡಲಾಗಿದ್ದು, ಎಲ್ಲಾ ಆ್ಯಂಗಲ್​ನಿಂದೂ ತನಿಖೆ ನಡೆಸುತ್ತಿದ್ದೇವೆ ಎಂದರು.

ಬೆಂಗಳೂರು: ನಿನ್ನೆ ರಾತ್ರಿ ವಾಕಿಂಗ್​ಗೆ ಹೋಗಿದ್ದ ಅಲಯನ್ಸ್​ ಯೂನಿವರ್ಸಿಟಿ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್​.ಟಿ. ನಗರದಲ್ಲಿ ನಡೆದಿದೆ.

ಅಲಯನ್ಸ್​ ಯೂನಿವರ್ಸಿಟಿ ಮಾಜಿ ಉಪಕುಲಪತಿಯ ಬರ್ಬರ ಹತ್ಯೆ... ವಾಕಿಂಗ್​ ಹೋದಾಗ ಕೊಚ್ಚಿ ಕೊಲೆ

ರಾತ್ರಿ ಊಟ ಮುಗಿಸಿ ಮನೆಯಿಂದ ವಾಕಿಂಗ್ ಹೋಗಿದ್ದ ಅಯ್ಯಪ್ಪ ದೊರೆ, ವಾಪಾಸ್​ ಮನೆಗೆ ಬಂದಿರಲಿಲ್ಲ. ಇದ್ರಿಂದ ಗಾಬರಿಗೊಂಡ ಮನೆಯವರು ರಾತ್ರಿ ಹುಡುಕಾಡಿದಾಗ ಮನೆಯಿಂದ ಸ್ವಲ್ಪ ದೂರದಲ್ಲಿ ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ. ತಕ್ಷಣ ಸ್ಥಳಾಕ್ಕಾಗಮಿಸಿದ ನಗರ ಆಯುಕ್ತ ಭಾಸ್ಕರ್ ರಾವ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಆರ್​.ಟಿ.ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆಯಾದ ಕುಲಪತಿ ಅಯ್ಯಪ್ಪ ದೊರೆ ಪ್ರತ್ಯೇಕ‌ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಲಿಂಗಾಯುತ ಧರ್ಮಕ್ಕೆ ಆಗ್ರಹಿಸಿ, ಹೋರಾಟ ನಡೆಸಿ ಜನಸಾಮಾನ್ಯರ ಪಕ್ಷವನ್ನು ಸ್ಥಾಪಿಸಿದ್ದರು. ಮಾತ್ರವಲ್ಲದೇ ಅಲಯನ್ಸ್ ಯೂನಿವರ್ಸಿಟಿಗೆ ಸೇರಿದ ಜಮೀನು ವಿವಾದವೂ ಸಹ ಇತ್ತು. ಹೀಗಾಗಿ ಎರಡು ಕಡೆಯ ವಿಚಾರ ತೆಗೆದುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಗರ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಅಯ್ಯಪ್ಪ ದೊರೆ ನಿನ್ನೆ ಮನೆಯಿಂದ ಊಟ ಮುಗಿಸಿ ವಾಕಿಂಗ್​ಗೆ ಬಂದಿದ್ದಾರೆ. ಈ ವೇಳೆ ಯಾರೋ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ಅವರ ಪತ್ನಿ ಈ ಬಗ್ಗೆ ಹೊಯ್ಸಳಗೆ ಮಾಹಿತಿ ನೀಡಿದ್ದಾರೆ. ಅಯ್ಯಪ್ಪ ದೊರೆ ವಿಜಯಪುರ ಮೂಲದವರಾಗಿದ್ದು, 17 ವರ್ಷದಿಂದ ಬೆಂಗಳೂರಿನಲ್ಲೇ ವಾಸವಿದ್ದರು. 7 ರಿಂದ 8 ವರ್ಷ ಅಲಯನ್ಸ್ ಯೂನಿವರ್ಸಿಟಿ ಉಪಕುಲಪತಿಯಾಗಿದ್ದರು. ಕೋರ್ಟ್​ನಲ್ಲಿ ಅಲಯನ್ಸ್ ಯೂನಿವರ್ಸಿಟಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ನಡೆಯುತ್ತಲೇ ಇತ್ತು. ಈಗಾಗಲೇ ತನಿಖಾ ತಂಡ ರಚನೆ ಮಾಡಲಾಗಿದ್ದು, ಎಲ್ಲಾ ಆ್ಯಂಗಲ್​ನಿಂದೂ ತನಿಖೆ ನಡೆಸುತ್ತಿದ್ದೇವೆ ಎಂದರು.

Intro:ಅಲಯನ್ಸ್ ಯೂನಿವರ್ಸಿಟಿ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆಯವರನ್ನ ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಅಯ್ಯಪ್ಪ ದೊರೆ ಮೃತ ವ್ಯಕ್ತಿ

ಬೆಂಗಳೂರಿನ ಆರ್ ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಹೊಂದಿದ್ದು ರಾತ್ರಿ ಊಟ ಮುಗಿಸಿ ಮನೆಯಿಂದ ವಾಕಿಂಗ್ ಹೋಗಿದ್ದ ದೋರೆ ನಂತ್ರ ಮನೆಗೆ ವಾಪಸ್ಸು ಬಂದಿರಲಿಲ್ಲಾ. ಮನೆಯವರು ಗಾಬರಿಗೊಂಡು ರಾತ್ರಿ ಹುಡುಕಾಡಿದಾಗ ಮನೆಯ ಕೊಂಚ ಅಂತರದಲ್ಲಿ ಮಚ್ಚು ಲಾಂಗು ಗಳಿಂದ ಹೊಡೆದು ಬರ್ಬರ ಹತ್ಯೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ. ತಕ್ಷಣ ಆರ್ ಟಿ ನಗರ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದು ನಗರ ಆಯುಕ್ತ ಭಾಸ್ಕರ್ ರಾವ್ ಹಾಗೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಆರ್ ಟಿನಗರ ಪೊಲೀಸರು ಕುಟುಂಸ್ಥರು ಸ್ಥಳಕ್ಕೆ ದೌಡಯಿಸಿದ್ದಾರೆ‌.

ಇನ್ನು ಪ್ರಾಥಮಿಕ ತನಿಖೆಯಲ್ಲಿ ಕೊಲೆಯಾದ ಕುಲಪತಿ ಪ್ರತ್ಯೇಕ‌ ಲಿಂಗಾಯತ ಧರ್ಮಕ್ದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು
ಲಿಂಗಾಯತ ಧರ್ಮಕ್ಕೆ ಆಗ್ರಹಿಸಿ ಹೊರಾಟ ನಡೆಸಿ ಜನಸಾಮಾನ್ಯರ ಪಕ್ಷವನ್ನು ಸ್ಥಾಪಿಸಿದ್ದರು. ಅಷ್ಟು ಮಾತ್ರವಲ್ಕದೇ ಅಲಯನ್ಸ್ ಯೂನಿವರ್ಸಿಟಿಗೆ ಸೇರಿದ ಜಮೀನು ವಿವಾದವೂ ಸಹ ಇತ್ತು ಹೀಗಾಗಿ ಎರಡು ಕಡೆಯ ವಿಚಾರ ತೆಗೆದುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ

ನಗರ ಆಯುಕ್ತ ಮಾತಾಡಿ ನಿನ್ನೆ ಮನೆಯಿಂದ ಊಟ ಮುಗಿಸಿ ವಾಕಿಂಗ್ ಗೆ ಬಂದಿದ್ದಾರೆ.ಈ ವೇಳೆ ಯಾರೋ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಬೆಳಗ್ಗೆ ಅವ್ರ ಪತ್ನಿ ಹೊಯ್ಸಳಗೆ ಮಾಹಿತಿ ನೀಡಿದ್ದಾರೆ.ಅಯ್ಯಪ್ಪ ದೊರೆ ವಿಜಯಪುರದ ಮೂಲದವರಾಗಿದ್ದರು.೧೭ ವರ್ಷದಿಂದ ಬೆಂಗಳೂರಿನಲ್ಲೇ ವಾಸವಿದ್ದರು ೭-೮ ವರ್ಷ ಅಲಯನ್ಸ್ ಯೂನಿವರ್ಸಿಟಿ ಉಪಕುಲಪತಿಯಾಗಿದ್ದರು ಕೋರ್ಟ್ ನಲ್ಲಿ ಅಲಯನ್ಸ್ ಯೂನಿವರ್ಸಿಟಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ನಡೆಯುತ್ತಲ್ಲೇ ಇತ್ತು.ಈಗಾಗಲೇ ತನಿಖಾ ತಂಡವನ್ನು ರಚನೆ ಮಾಡಲಾಗಿದೆ ಎಲ್ಲಾ ಆಂಗಲ್ ಗಳಲ್ಲೂ ತನಿಖೆ ನಡೆಸುತ್ತಿದ್ದೇವೆ ಹಾಗೆ ಅವರ ಪತ್ನಿ ಭಾವನರಿಂದ ಸಾಕಷ್ಟು ಮಾಹಿತಿಯನ್ನು ಪಡೆದಿದ್ದೇವೆ ಎಂದ್ರು.
Body:KN_BNG_02_MURDER_7204498Conclusion:KN_BNG_02_MURDER_7204498
Last Updated : Oct 16, 2019, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.