ETV Bharat / city

ಅಶ್ವತ್ಥ ನಾರಾಯಣ ರಾಮನಗರ ಜನರ ಸ್ವಾಭಿಮಾನ ಕೆಣಕಿದ್ದಾರೆ: ಸಂಸದ ಡಿ.ಕೆ ಸುರೇಶ್

author img

By

Published : Jan 4, 2022, 1:54 PM IST

ಡಿ.ಕೆ. ಸುರೇಶ್ ನೆಪ ಮಾತ್ರ. ಸಚಿವ ಅಶ್ವತ್ಥ ನಾರಾಯಣ ರಾಮನಗರ ಜನರ ಸ್ವಾಭಿಮಾನ ಕೆಣಕುವ ಕೆಲಸ ಮಾಡಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ದೂರಿದರು.

MP DK Suresh
ಡಿ.ಕೆ ಸುರೇಶ್

ಬೆಂಗಳೂರು: ಇಂದು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯ ಕಾರ್ಯಕರ್ತರಿಗೆ ಅಭಿನಂದಿಸುವೆ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ. ರಾಮನಗರ ಘಟನೆ ಹಿನ್ನೆಲೆ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ(ಸೋಮವಾರ) ಸಿಎಂ ಸಭೆಯಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಸ್ವತಃ ಸಿಎಂ ನೀವು ಭಾಷಣ ಮಾಡಿದ್ದು ಸರಿ ಇಲ್ಲ, ಸಾಕು ಅಂತಾ ಹೇಳಿದರು. ಆದರೂ ಕರ್ನಾಟಕದ ಎಲ್ಲಾ ಯುವಕರಿಗೆ ಅವಮಾನ ಮಾಡುವ ಕೆಲಸವನ್ನು ಸಚಿವರು ಮಾಡಿದ್ದಾರೆ ಎಂದರು.

ರಾಮನಗರ ಪ್ರಕರಣದ ಬಗ್ಗೆ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯೆ

ಇದನ್ನೂ ಓದಿ: ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?

ಮಾಧ್ಯಮಗಳ ವ್ಯಾಖ್ಯಾನ ನೋಡಿದ್ದೇನೆ. ಸಭೆಯನ್ನು ಹೊರತು ಪಡಿಸಿ ನಾವು ಬಿಜೆಪಿಯವರು, ನಾವು ಮಾಡೋದೇ ಹೀಗೆ, ಗಂಡಸಾದ್ರೆ ಬನ್ನಿ ಅಂತಾ ನನಗೆ ಸವಾಲು ಹಾಕಿದರು. ಅದು ನನಗೆ ಹಾಕಿದ ಸವಾಲಲ್ಲ. ರಾಮನಗರದ ಜನರಿಗೆ ಹಾಕಿದ ಸವಾಲು. ಕೆಂಪೇಗೌಡರು, ಅಂಬೇಡ್ಕರ್​​ಗೆ ಮಾಡಿದ ಅವಮಾನ. ಡಿ.ಕೆ. ಸುರೇಶ್ ಇಲ್ಲಿ ನೆಪ ಮಾತ್ರ, ರಾಮನಗರದ ಜನರ ಸ್ವಾಭಿಮಾನ ಕೆಣಕುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ದೂರಿದರು.

ಗಂಡಸುತನದ ಬಗ್ಗೆ ಮಾತನಾಡುವುದು ನಿಮ್ಮ ಸಂಸ್ಕೃತಿಯೇ?

ಗಂಡಸುತನದ ಮಾತು ಯಾಕೆ ಬರುತ್ತೆ?. ಬಿಜೆಪಿ ರಾಜ್ಯಾಧ್ಯಕ್ಷರೇ ಗಂಡಸುತನದ ಬಗ್ಗೆ ಮಾತನಾಡುವುದು ನಿಮ್ಮ ಸಂಸ್ಕೃತಿಯೇ?. ಕುಮಾರಸ್ವಾಮಿ ಮಾಜಿ ಸಿಎಂ, ಅವರ ಬಗ್ಗೆ ಮಾತನಾಡಬೇಕಿಲ್ಲ. ನಾನು ಕುಮಾರಸ್ವಾಮಿ ಬಗ್ಗೆ ಮಾತಾಡಲ್ಲ. ನಾನು ಮಾತಾನಾಡಬೇಕಿರುವುದು ಬಿಜೆಪಿಯವರ ಬಗ್ಗೆ ಮಾತಾಡಿದ್ದೇನೆ. ಗಂಡಸುತನದ ಬಗ್ಗೆ ಚರ್ಚೆ ಮಾಡಲು ಸಮಯ ನಿಗದಿ ಮಾಡಿ ಅಂತಾ ಸಿಎಂ ಎದುರೇ ಹೇಳಿದ್ದೇನೆ. ನಾನು ಪಲಾಯನ ಮಾಡಬೇಕಿಲ್ಲ ಎಂದರು.

ಅಶ್ವತ್ಥ ನಾರಾಯಣ ಅವರ ಸ್ಟೈಲ್​​, ಧಿಮಾಕನ್ನ ಅಶೋಕ್ ಅವರಿಗೆ ತೋರಿಸಿ. ಅಶೋಕ್ ನೋಡಲಿ. ಅಶೋಕ್​ ಅವರನ್ನು ಅದೇನೋ ಸಾಮ್ರಾಟ್ ಅಂತಾ ಕರೀತಾರಂತೆ. ನಾನು ಯಾವತ್ತೂ ಹಾಗೇ ಕರೆದಿಲ್ಲ ಎಂದರು.

ಇದನ್ನೂ ಓದಿ: ರಾಮನಗರ ಪ್ರಕರಣ: ಇಂಥ ಘಟನೆ ನಡೆದಿರುವುದು ವಿಷಾದನೀಯ - ಸಿಎಂ

'ಅನಿತಾ ಕುಮಾರಸ್ವಾಮಿ ಅವರನ್ನ ಯಾವ ರೀತಿ ಉದ್ಧರಿಸಿದರು':

ಅನಿತಾ ಕುಮಾರಸ್ವಾಮಿ ಅವರು ಏನು ಹೇಳಿದ್ರೂ ಅನ್ನೋದನ್ನ ನೋಡಲಿ. ಒಂದು ಹೆಣ್ಣು ಮಗಳು, ಹಿರಿಯರು ಏನ್ ಹೇಳಿದರು ಅಂತಾ ನೋಡಲಿ. ಅಶ್ವತ್ಥ ನಾರಾಯಣ ನಿನ್ನೆ(ಸೂಮವಾರ) ಅನಿತಾ ಕುಮಾರಸ್ವಾಮಿ ಅವರನ್ನ ಯಾವ ರೀತಿ ಉದ್ಧರಿಸಿದರು ಅನ್ನೋದನ್ನೂ ನೋಡಲಿ. ಮಾಧ್ಯಮಗಳು ಇದನ್ನೆಲ್ಲ ಗಮನಿಸಬೇಕು ಎಂದರು.

ಪ್ರಚೋದನೆ ಮತ್ತು ಭಾವನಾತ್ಮಕ ವಿಚಾರಗಳು ಬಿಜೆಪಿ ಅಜೆಂಡಾ. ಧರ್ಮ ಸಂಸ್ಕೃತಿ ಇದ್ಯಾವುದೂ ಅವರಲ್ಲಿ ಇಲ್ಲ. ಪ್ರಚೋದನೆ ಮತ್ತು ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ದೇಶವನ್ನು ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ. ಯುವಕರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅಂತ್ಯ ಅತೀ ಶೀಘ್ರದಲ್ಲೇ ಆಗುತ್ತದೆ ಎಂದು ಡಿ.ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಚಿವ ಅಶ್ವತ್ಥನಾರಾಯಣ​ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು: ಇಂದು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯ ಕಾರ್ಯಕರ್ತರಿಗೆ ಅಭಿನಂದಿಸುವೆ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ. ರಾಮನಗರ ಘಟನೆ ಹಿನ್ನೆಲೆ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ(ಸೋಮವಾರ) ಸಿಎಂ ಸಭೆಯಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಸ್ವತಃ ಸಿಎಂ ನೀವು ಭಾಷಣ ಮಾಡಿದ್ದು ಸರಿ ಇಲ್ಲ, ಸಾಕು ಅಂತಾ ಹೇಳಿದರು. ಆದರೂ ಕರ್ನಾಟಕದ ಎಲ್ಲಾ ಯುವಕರಿಗೆ ಅವಮಾನ ಮಾಡುವ ಕೆಲಸವನ್ನು ಸಚಿವರು ಮಾಡಿದ್ದಾರೆ ಎಂದರು.

ರಾಮನಗರ ಪ್ರಕರಣದ ಬಗ್ಗೆ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯೆ

ಇದನ್ನೂ ಓದಿ: ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?

ಮಾಧ್ಯಮಗಳ ವ್ಯಾಖ್ಯಾನ ನೋಡಿದ್ದೇನೆ. ಸಭೆಯನ್ನು ಹೊರತು ಪಡಿಸಿ ನಾವು ಬಿಜೆಪಿಯವರು, ನಾವು ಮಾಡೋದೇ ಹೀಗೆ, ಗಂಡಸಾದ್ರೆ ಬನ್ನಿ ಅಂತಾ ನನಗೆ ಸವಾಲು ಹಾಕಿದರು. ಅದು ನನಗೆ ಹಾಕಿದ ಸವಾಲಲ್ಲ. ರಾಮನಗರದ ಜನರಿಗೆ ಹಾಕಿದ ಸವಾಲು. ಕೆಂಪೇಗೌಡರು, ಅಂಬೇಡ್ಕರ್​​ಗೆ ಮಾಡಿದ ಅವಮಾನ. ಡಿ.ಕೆ. ಸುರೇಶ್ ಇಲ್ಲಿ ನೆಪ ಮಾತ್ರ, ರಾಮನಗರದ ಜನರ ಸ್ವಾಭಿಮಾನ ಕೆಣಕುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ದೂರಿದರು.

ಗಂಡಸುತನದ ಬಗ್ಗೆ ಮಾತನಾಡುವುದು ನಿಮ್ಮ ಸಂಸ್ಕೃತಿಯೇ?

ಗಂಡಸುತನದ ಮಾತು ಯಾಕೆ ಬರುತ್ತೆ?. ಬಿಜೆಪಿ ರಾಜ್ಯಾಧ್ಯಕ್ಷರೇ ಗಂಡಸುತನದ ಬಗ್ಗೆ ಮಾತನಾಡುವುದು ನಿಮ್ಮ ಸಂಸ್ಕೃತಿಯೇ?. ಕುಮಾರಸ್ವಾಮಿ ಮಾಜಿ ಸಿಎಂ, ಅವರ ಬಗ್ಗೆ ಮಾತನಾಡಬೇಕಿಲ್ಲ. ನಾನು ಕುಮಾರಸ್ವಾಮಿ ಬಗ್ಗೆ ಮಾತಾಡಲ್ಲ. ನಾನು ಮಾತಾನಾಡಬೇಕಿರುವುದು ಬಿಜೆಪಿಯವರ ಬಗ್ಗೆ ಮಾತಾಡಿದ್ದೇನೆ. ಗಂಡಸುತನದ ಬಗ್ಗೆ ಚರ್ಚೆ ಮಾಡಲು ಸಮಯ ನಿಗದಿ ಮಾಡಿ ಅಂತಾ ಸಿಎಂ ಎದುರೇ ಹೇಳಿದ್ದೇನೆ. ನಾನು ಪಲಾಯನ ಮಾಡಬೇಕಿಲ್ಲ ಎಂದರು.

ಅಶ್ವತ್ಥ ನಾರಾಯಣ ಅವರ ಸ್ಟೈಲ್​​, ಧಿಮಾಕನ್ನ ಅಶೋಕ್ ಅವರಿಗೆ ತೋರಿಸಿ. ಅಶೋಕ್ ನೋಡಲಿ. ಅಶೋಕ್​ ಅವರನ್ನು ಅದೇನೋ ಸಾಮ್ರಾಟ್ ಅಂತಾ ಕರೀತಾರಂತೆ. ನಾನು ಯಾವತ್ತೂ ಹಾಗೇ ಕರೆದಿಲ್ಲ ಎಂದರು.

ಇದನ್ನೂ ಓದಿ: ರಾಮನಗರ ಪ್ರಕರಣ: ಇಂಥ ಘಟನೆ ನಡೆದಿರುವುದು ವಿಷಾದನೀಯ - ಸಿಎಂ

'ಅನಿತಾ ಕುಮಾರಸ್ವಾಮಿ ಅವರನ್ನ ಯಾವ ರೀತಿ ಉದ್ಧರಿಸಿದರು':

ಅನಿತಾ ಕುಮಾರಸ್ವಾಮಿ ಅವರು ಏನು ಹೇಳಿದ್ರೂ ಅನ್ನೋದನ್ನ ನೋಡಲಿ. ಒಂದು ಹೆಣ್ಣು ಮಗಳು, ಹಿರಿಯರು ಏನ್ ಹೇಳಿದರು ಅಂತಾ ನೋಡಲಿ. ಅಶ್ವತ್ಥ ನಾರಾಯಣ ನಿನ್ನೆ(ಸೂಮವಾರ) ಅನಿತಾ ಕುಮಾರಸ್ವಾಮಿ ಅವರನ್ನ ಯಾವ ರೀತಿ ಉದ್ಧರಿಸಿದರು ಅನ್ನೋದನ್ನೂ ನೋಡಲಿ. ಮಾಧ್ಯಮಗಳು ಇದನ್ನೆಲ್ಲ ಗಮನಿಸಬೇಕು ಎಂದರು.

ಪ್ರಚೋದನೆ ಮತ್ತು ಭಾವನಾತ್ಮಕ ವಿಚಾರಗಳು ಬಿಜೆಪಿ ಅಜೆಂಡಾ. ಧರ್ಮ ಸಂಸ್ಕೃತಿ ಇದ್ಯಾವುದೂ ಅವರಲ್ಲಿ ಇಲ್ಲ. ಪ್ರಚೋದನೆ ಮತ್ತು ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ದೇಶವನ್ನು ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ. ಯುವಕರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅಂತ್ಯ ಅತೀ ಶೀಘ್ರದಲ್ಲೇ ಆಗುತ್ತದೆ ಎಂದು ಡಿ.ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಚಿವ ಅಶ್ವತ್ಥನಾರಾಯಣ​ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.