ETV Bharat / city

ಬೊಮ್ಮನಹಳ್ಳಿ ಶಾಸಕ ಸತೀಶ್​ ರೆಡ್ಡಿ ನಾಪತ್ತೆ: ಹುಳಿಮಾವು ಕೆರೆ ಸಂತ್ರಸ್ತರು

ಹುಳಿಮಾವು ಕೆರೆ ದಂಡೆ ಒಡೆದು ಸಾವಿರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿ ಮೂರು ದಿನಗಳಾದರೂ ಶಾಸಕ ಸತೀಶ್​ ರೆಡ್ಡಿ ಇತ್ತ ತಲೆಯೇ ಹಾಕಿಲ್ಲ ಎಂದು ಸಂತ್ರಸ್ತರು ಆರೋಪಿಸಿದರು.

author img

By

Published : Nov 26, 2019, 7:05 PM IST

MLA Satish reddy Missing
ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ

ಬೆಂಗಳೂರು: ಹುಳಿಮಾವು ಕೆರೆ ದಂಡೆ ಒಡೆದು ಸಾವಿರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಘಟನೆ ಸಂಭವಿಸಿ ಮೂರು ದಿನವಾದರೂ ಇಲ್ಲಿನ ಶಾಸಕರು ಇತ್ತ ತಿರುಗಿಯೂ ನೋಡಿಲ್ಲ.

ಅಂದಾಜು ₹ 80 ಕೋಟಿಗೂ ಅಧಿಕ ನಷ್ಟವಾಗಿದೆ. ನೂರಾರು ಜನ ಬೀದಿಗೆ ಬಂದಿದ್ದಾರೆ. ಆದರೆ, ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇಲ್ಲಿನ ಸಂತ್ರಸ್ತರಿಗೆ ಸಾಂತ್ವನ ಹೇಳುವ ಪ್ರಯತ್ನಕ್ಕೂ ಮುಂದಾಗಿಲ್ಲ. ಕನಿಷ್ಠ ಅಧಿಕಾರಿಗಳನ್ನ ಸಂಪರ್ಕಿಸಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸೂಚಿಸಬಹುದಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಸಂತ್ರಸ್ತರ ಅಳಲು

ಸತೀಶ್ ರೆಡ್ಡಿ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಎಲ್ಲಿದ್ದರೂ 50 ಗಂಟೆಗಳಲ್ಲಿ ಕ್ಷೇತ್ರಕ್ಕೆ ಆಗಮಿಸಿ ನಮ್ಮ ಜೊತೆ ನಿಲ್ಲಬಹುದಾಗಿತ್ತು ಎಂದು ಪಾಲಿಕೆ ಸದಸ್ಯ ಮುರಳಿ ಹೇಳುತ್ತಿದ್ದಾರೆ.

ಉಪ ಮೇಯರ್​ ರಾಮ್ ಮೋಹನ್ ರಾಜು ಅನಾರೋಗ್ಯದ ಕಾರಣ ಸ್ಥಳಕ್ಕೆ ಬರಲಾಗುತ್ತಿಲ್ಲ ಎನ್ನುತ್ತಾರೆ. ಕಾರಣ ಏನೇ ಇದ್ದರೂ ಕನಿಷ್ಠ ನೊಂದಿರುವ ಜನರಿಗೆ ಧೈರ್ಯ ತುಂಬದೇ ಈ ರೀತಿ ಕಣ್ಮರೆಯಾಗಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಬೆಂಗಳೂರು: ಹುಳಿಮಾವು ಕೆರೆ ದಂಡೆ ಒಡೆದು ಸಾವಿರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಘಟನೆ ಸಂಭವಿಸಿ ಮೂರು ದಿನವಾದರೂ ಇಲ್ಲಿನ ಶಾಸಕರು ಇತ್ತ ತಿರುಗಿಯೂ ನೋಡಿಲ್ಲ.

ಅಂದಾಜು ₹ 80 ಕೋಟಿಗೂ ಅಧಿಕ ನಷ್ಟವಾಗಿದೆ. ನೂರಾರು ಜನ ಬೀದಿಗೆ ಬಂದಿದ್ದಾರೆ. ಆದರೆ, ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇಲ್ಲಿನ ಸಂತ್ರಸ್ತರಿಗೆ ಸಾಂತ್ವನ ಹೇಳುವ ಪ್ರಯತ್ನಕ್ಕೂ ಮುಂದಾಗಿಲ್ಲ. ಕನಿಷ್ಠ ಅಧಿಕಾರಿಗಳನ್ನ ಸಂಪರ್ಕಿಸಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸೂಚಿಸಬಹುದಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಸಂತ್ರಸ್ತರ ಅಳಲು

ಸತೀಶ್ ರೆಡ್ಡಿ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಎಲ್ಲಿದ್ದರೂ 50 ಗಂಟೆಗಳಲ್ಲಿ ಕ್ಷೇತ್ರಕ್ಕೆ ಆಗಮಿಸಿ ನಮ್ಮ ಜೊತೆ ನಿಲ್ಲಬಹುದಾಗಿತ್ತು ಎಂದು ಪಾಲಿಕೆ ಸದಸ್ಯ ಮುರಳಿ ಹೇಳುತ್ತಿದ್ದಾರೆ.

ಉಪ ಮೇಯರ್​ ರಾಮ್ ಮೋಹನ್ ರಾಜು ಅನಾರೋಗ್ಯದ ಕಾರಣ ಸ್ಥಳಕ್ಕೆ ಬರಲಾಗುತ್ತಿಲ್ಲ ಎನ್ನುತ್ತಾರೆ. ಕಾರಣ ಏನೇ ಇದ್ದರೂ ಕನಿಷ್ಠ ನೊಂದಿರುವ ಜನರಿಗೆ ಧೈರ್ಯ ತುಂಬದೇ ಈ ರೀತಿ ಕಣ್ಮರೆಯಾಗಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

Intro:Mla missing hulimavu (special)Body:ಕಾಣೆಯಾಗಿದ್ದಾರೆ!! ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ.

ಮೂರುದಿನಗಳಿಂದ ಸಾಕಷ್ಟು ಸುದ್ದಿಯಾಗುತ್ತಿರುವುದು, ಹುಳಿಮಾವು ಕೆರೆ ವಿಚಾರ, ಆದರೆ ಘಟನೆ ಸಂಭವಿಸಿ ಮೂರು ದಿನವಾದರೂ ಇಲ್ಲಿನ ಶಾಸಕರು ಇತ್ತ ತಿರುಗಿಯೂ ನೋಡಿಲ್ಲ.!!

ಅಂದಾಜು ಸರಿ ಸುಮಾರು 80 ಕೋಟಿಗೂ ಅಧಿಕ ನಷ್ಟವಾಗಿದ್ದು, ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ, ಆದರೆ ಸ್ಥಳೀಯ ಶಾಸಕ ಎಂ ಸತೀಶ್ ರೆಡ್ಡಿ ಅವರ ಫೋನ್ ಸ್ವಿಚ್ ಆಫ್ ಆಗಿದೆ, ಘಟನೆ ಸಂಭವಿಸಿದ ನಂತರ ಕನಿಷ್ಠ ಇದಕ್ಕೆ ಸಂಬಂಧಪಟ್ಟಂತೆ ಯಾರಿಗೂ ಸಾಂತ್ವನ ಹೇಳುವ ಪ್ರಯತ್ನಕ್ಕೆ ಕೈ ಹಾಕದೆ ಇರುವುದು ವಿಪರ್ಯಾಸ, ಕೆಲ ಜನರು ಹೇಳುವ ಪ್ರಕಾರ ಸತೀಶ್ ರೆಡ್ಡಿ ಅವರು ವಿದೇಶ ಪ್ರವಾಸದಲ್ಲಿದ್ದು, ಕನಿಷ್ಠ ಅಧಿಕಾರಿಗಳ ಜೊತೆ ಸಂಪರ್ಕ ಮಾಡಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸೂಚಿಸಬಹುದಾಗಿತ್ತು ಎಂದು ಕೆಲವು ಅಭಿಪ್ರಾಯಪಟ್ಟರೆ.

ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ 50 ಗಂಟೆಗಳಲ್ಲಿ ಅವರು ಕ್ಷೇತ್ರಕ್ಕೆ ಬಂದು ನಮ್ಮ ಜೊತೆ ನಿಲ್ಲಬಹುದಾಗಿತ್ತು ಎಂದು ಇಲ್ಲಿನ ಜನ ಗೋಗರೆಯುತ್ತಿದ್ದ, ಸ್ಥಳೀಯ ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಮುರಳಿ ಓಡಾಡುತ್ತಿದ್ದರು, ಅವರ ಮಿತಿಯನ್ನು ಮೀರಿ ಅನಾಹುತ ಸಂಭವಿಸಿರುವ ಕಾರಣ, ಅವರು ಸಹ ಅಸಹಾಯಕರಾಗಿದ್ದಾರೆ, ಇನ್ನು ಇದೇ ಕ್ಷೇತ್ರದ ಮತ್ತೊಬ್ಬ ಕಾರ್ಪರೇಟರ್ ಸದ್ಯದ ಡೆಪ್ಯುಟಿ ಮೇಯರ್ ರಾಮ್ ಮೋಹನ್ ರಾಜು ಹೇಳಿಕೆಯ ಪ್ರಕಾರ ಅವರಿಗೆ ಅನಾರೋಗ್ಯ ಕಾರಣ ಸ್ಥಳಕ್ಕೆ ಬರಲಾಗುತ್ತಿಲ್ಲ ಎನ್ನುತ್ತಾರೆ.ಸದ್ಯ ಕಾರಣ ಏನೇ ಇದ್ದರೂ ಕನಿಷ್ಠ ನೊಂದಿರುವ ಜನರಿಗೆ ಧೈರ್ಯ ತುಂಬಿದೆ ಈ ರೀತಿ ಕಣ್ಮರೆಯಾಗಿರುವ ಕಾರಣ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.Conclusion:Video from mojo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.