ETV Bharat / city

ನಾನು ಸಿಎಂ ಬೊಮ್ಮಾಯಿ ಕ್ಲೋಸ್ ಫ್ರೆಂಡ್: ಶಾಸಕ ರಾಮದಾಸ್

author img

By

Published : Aug 14, 2021, 12:21 PM IST

Updated : Aug 14, 2021, 12:28 PM IST

ಮೈಸೂರಿಗೆ ಸಿಎಂ ಬಂದಿದ್ದಾಗ ನಾನು ಅವರ ಭೇಟಿ ಮಾಡಿರಲಿಲ್ಲ. ಏಕೆ ಭೇಟಿ ಮಾಡಿಲ್ಲವೆಂದು ಸೀಲ್ಡ್ ಕವರ್​ನಲ್ಲಿ ಪತ್ರದ ಮೂಲಕ ಕಾರಣ ಕೊಡುತ್ತೇನೆ ಅಂದಿದ್ದೆ. ಅದರಂತೆ ಇಂದು ಸಿಎಂ ಅವರನ್ನು ಭೇಟಿ ಮಾಡಿ ಕಾರಣ ಕೊಟ್ಟಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಬೇಸರ ಮಾಡಿಕೊಂಡಿಲ್ಲ ಎಂದು ರಾಮದಾಸ್​ ಸ್ಪಷ್ಟಪಡಿಸಿದರು.

mla ramadas
ಶಾಸಕ ರಾಮದಾಸ್

ಬೆಂಗಳೂರು: ಸಚಿವ ಸ್ಥಾನದಿಂದ ವಂಚಿತರಾದ ಶಾಸಕ ರಾಮದಾಸ್ ಹಾಗೂ ಸಿ.ಪಿ. ಯೋಗೇಶ್ವರ್ ಇಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿಯಾಗಿದ್ದರು.

ಶಾಸಕ ರಾಮದಾಸ್

ಸಿಎಂ ಬೊಮ್ಮಾಯಿ ಮೈಸೂರು ಭೇಟಿ ವೇಳೆ ಶಾಸಕ ರಾಮದಾಸ್ ಗೈರಾಗಿದ್ದರು. ಈ ಹಿನ್ನೆಲೆ ಶಾಸಕ ರಾಮದಾಸ್ ಆರ್.ಟಿ. ನಗರದಲ್ಲಿನ ಸಿಎಂ ನಿವಾಸಕ್ಕೆ ಆಗಮಿಸಿ, ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಮೈಸೂರಿಗೆ ಸಿಎಂ ಬಂದಿದ್ದಾಗ ನಾನು ಅವರ ಭೇಟಿ ಮಾಡಿರಲಿಲ್ಲ. ಏಕೆ ಭೇಟಿ ಮಾಡಿಲ್ಲವೆಂದು ಸೀಲ್ಡ್ ಕವರ್​ನಲ್ಲಿ ಪತ್ರದ ಮೂಲಕ ಕಾರಣ ಕೊಡುತ್ತೇನೆ ಅಂದಿದ್ದೆ. ಅದರಂತೆ ಇಂದು ಸಿಎಂ ಅವರನ್ನು ಭೇಟಿ ಮಾಡಿ ಕಾರಣ ಕೊಟ್ಟಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಬೇಸರ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ನನ್ನ ಕ್ಲೋಸ್ ಫ್ರೆಂಡ್:

ಸೀಲ್ಡ್ ಕವರ್​ನಲ್ಲಿ ಕೋವಿಡ್ ವಿಚಾರ, ರಾಜ್ಯ, ಸರ್ಕಾರದ ಹಿತದೃಷ್ಟಿಯಿಂದ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಬಿಡುವಾದಾಗ ಓದಿ ಅಂತ ಸಿಎಂಗೆ ಹೇಳಿದ್ದೇನೆ. ನಾನೊಬ್ಬ ಸ್ವಯಂಸೇವಕ, ಪಕ್ಷ ಕಟ್ಟುವ ಕಷ್ಟದ ಅನುಭವ ಇದೆ. ಪಕ್ಷದ ವಿರುದ್ಧ ಅಭಿಪ್ರಾಯ, ನನ್ನ ಅಸಮಾಧಾನ ಹೇಳಿಕೊಂಡಿಲ್ಲ. ಸಿಎಂ ಬೇಸರವಾಗಿಲ್ಲ, ಅವರು ನನ್ನ ಕ್ಲೋಸ್ ಫ್ರೆಂಡ್. ಸಿಎಂ ಒಬ್ಬ ಸಿಎಂ ಮಗ, ಪರಿಸ್ಥಿತಿಗಳು ಅವರಿಗೆ ಗೊತ್ತಿದೆ ಎಂದರು.

ನಾಯಕರಿಗೆ ಎಲ್ಲ ಗೊತ್ತಿದೆ:

ಮೈಸೂರಿಗೆ ಪ್ರಾತಿನಿಧ್ಯತೆ ಸಿಕ್ಕಿಲ್ಲದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನಾನೇನು ಹೇಳೋದು? ನಾಯಕರಿಗೆ ಎಲ್ಲ ಗೊತ್ತಿದೆ. ಮಕ್ಕಳಲ್ಲ ಅವರು, ಮೈಸೂರಿನ ಬಗ್ಗೆ ನಾಯಕರಿಗೆ ಗೊತ್ತಿದೆ. ಮೈಸೂರಿನಲ್ಲಿ ಬಿಜೆಪಿ ದುರ್ಬಲ‌ ಅಲ್ಲ. ಆದರೆ, ಪರಿಸ್ಥಿತಿ ಹಿನ್ನೆಲೆಯಲ್ಲಿ, ಸಚಿವ ಸ್ಥಾನ ಸಿಕ್ಕಿಲ್ಲ ಎಂದು ತಿಳಿಸಿದರು.

ಸಿಎಂ - ಸಿಪಿವೈ ಭೇಟಿ:

ಸಿಎಂ ಬೊಮ್ಮಾಯಿ ಅವರನ್ನು ಆರ್‌ಟಿ‌ ನಗರ ನಿವಾಸದಲ್ಲಿ ಸಚಿವ ಸ್ಥಾನ ವಂಚಿತ ಸಿ.ಪಿ. ಯೋಗೇಶ್ವರ್ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಸಚಿವ ಸ್ಥಾನ ವಂಚಿತರಾದ ಬಳಿಕ ಸಿ.ಪಿ.ಯೋಗೇಶ್ವರ್ ಸಿಎಂ ಮೊದಲ ಭೇಟಿಯಾಗಿದೆ. ಸಚಿವ ಸ್ಥಾನ ಕೈ ತಪ್ಪಿದ ಬಳಿಕ ದೆಹಲಿಗೆ ವರಿಷ್ಠರ ಭೇಟಿಗೆ ಹೋಗಿದ್ದರು. ಇದೀಗ ಸಿಎಂ ಭೇಟಿ ಕುತೂಹಲ ಮೂಡಿಸಿದೆ.

ಯಾವುದೇ ಅಸಮಾಧಾನ ಇಲ್ಲ:

ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಸುಮ್ಮನೆ ಭೇಟಿ ಆಗಿದ್ದೆ ಅಷ್ಟೇ. ಈ ಹಿಂದೆ ಎರಡು ಮೂರು ಸಲ ಭೇಟಿ ಆಗಿದ್ದೆ. ಆದರೆ ಮಾಧ್ಯಮಗಳ ಮುಂದೆ ಬಂದಿರಲಿಲ್ಲ. ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡುತ್ತೇನೆ. ಬೇರೆ ಏನು ಮಾತನಾಡುವುದಿಲ್ಲ ಎಂದಷ್ಟೇ ಹೇಳಿ ತೆರಳಿದರು.

ಇದನ್ನೂ ಓದಿ: ಜನರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ, ಕೋವಿಡ್ ಹೆಚ್ಚಾಗದಂತೆ ಕ್ರಮ: ಸಿಎಂ ಬೊಮ್ಮಾಯಿ

ಬೆಂಗಳೂರು: ಸಚಿವ ಸ್ಥಾನದಿಂದ ವಂಚಿತರಾದ ಶಾಸಕ ರಾಮದಾಸ್ ಹಾಗೂ ಸಿ.ಪಿ. ಯೋಗೇಶ್ವರ್ ಇಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿಯಾಗಿದ್ದರು.

ಶಾಸಕ ರಾಮದಾಸ್

ಸಿಎಂ ಬೊಮ್ಮಾಯಿ ಮೈಸೂರು ಭೇಟಿ ವೇಳೆ ಶಾಸಕ ರಾಮದಾಸ್ ಗೈರಾಗಿದ್ದರು. ಈ ಹಿನ್ನೆಲೆ ಶಾಸಕ ರಾಮದಾಸ್ ಆರ್.ಟಿ. ನಗರದಲ್ಲಿನ ಸಿಎಂ ನಿವಾಸಕ್ಕೆ ಆಗಮಿಸಿ, ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಮೈಸೂರಿಗೆ ಸಿಎಂ ಬಂದಿದ್ದಾಗ ನಾನು ಅವರ ಭೇಟಿ ಮಾಡಿರಲಿಲ್ಲ. ಏಕೆ ಭೇಟಿ ಮಾಡಿಲ್ಲವೆಂದು ಸೀಲ್ಡ್ ಕವರ್​ನಲ್ಲಿ ಪತ್ರದ ಮೂಲಕ ಕಾರಣ ಕೊಡುತ್ತೇನೆ ಅಂದಿದ್ದೆ. ಅದರಂತೆ ಇಂದು ಸಿಎಂ ಅವರನ್ನು ಭೇಟಿ ಮಾಡಿ ಕಾರಣ ಕೊಟ್ಟಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಬೇಸರ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ನನ್ನ ಕ್ಲೋಸ್ ಫ್ರೆಂಡ್:

ಸೀಲ್ಡ್ ಕವರ್​ನಲ್ಲಿ ಕೋವಿಡ್ ವಿಚಾರ, ರಾಜ್ಯ, ಸರ್ಕಾರದ ಹಿತದೃಷ್ಟಿಯಿಂದ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಬಿಡುವಾದಾಗ ಓದಿ ಅಂತ ಸಿಎಂಗೆ ಹೇಳಿದ್ದೇನೆ. ನಾನೊಬ್ಬ ಸ್ವಯಂಸೇವಕ, ಪಕ್ಷ ಕಟ್ಟುವ ಕಷ್ಟದ ಅನುಭವ ಇದೆ. ಪಕ್ಷದ ವಿರುದ್ಧ ಅಭಿಪ್ರಾಯ, ನನ್ನ ಅಸಮಾಧಾನ ಹೇಳಿಕೊಂಡಿಲ್ಲ. ಸಿಎಂ ಬೇಸರವಾಗಿಲ್ಲ, ಅವರು ನನ್ನ ಕ್ಲೋಸ್ ಫ್ರೆಂಡ್. ಸಿಎಂ ಒಬ್ಬ ಸಿಎಂ ಮಗ, ಪರಿಸ್ಥಿತಿಗಳು ಅವರಿಗೆ ಗೊತ್ತಿದೆ ಎಂದರು.

ನಾಯಕರಿಗೆ ಎಲ್ಲ ಗೊತ್ತಿದೆ:

ಮೈಸೂರಿಗೆ ಪ್ರಾತಿನಿಧ್ಯತೆ ಸಿಕ್ಕಿಲ್ಲದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನಾನೇನು ಹೇಳೋದು? ನಾಯಕರಿಗೆ ಎಲ್ಲ ಗೊತ್ತಿದೆ. ಮಕ್ಕಳಲ್ಲ ಅವರು, ಮೈಸೂರಿನ ಬಗ್ಗೆ ನಾಯಕರಿಗೆ ಗೊತ್ತಿದೆ. ಮೈಸೂರಿನಲ್ಲಿ ಬಿಜೆಪಿ ದುರ್ಬಲ‌ ಅಲ್ಲ. ಆದರೆ, ಪರಿಸ್ಥಿತಿ ಹಿನ್ನೆಲೆಯಲ್ಲಿ, ಸಚಿವ ಸ್ಥಾನ ಸಿಕ್ಕಿಲ್ಲ ಎಂದು ತಿಳಿಸಿದರು.

ಸಿಎಂ - ಸಿಪಿವೈ ಭೇಟಿ:

ಸಿಎಂ ಬೊಮ್ಮಾಯಿ ಅವರನ್ನು ಆರ್‌ಟಿ‌ ನಗರ ನಿವಾಸದಲ್ಲಿ ಸಚಿವ ಸ್ಥಾನ ವಂಚಿತ ಸಿ.ಪಿ. ಯೋಗೇಶ್ವರ್ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಸಚಿವ ಸ್ಥಾನ ವಂಚಿತರಾದ ಬಳಿಕ ಸಿ.ಪಿ.ಯೋಗೇಶ್ವರ್ ಸಿಎಂ ಮೊದಲ ಭೇಟಿಯಾಗಿದೆ. ಸಚಿವ ಸ್ಥಾನ ಕೈ ತಪ್ಪಿದ ಬಳಿಕ ದೆಹಲಿಗೆ ವರಿಷ್ಠರ ಭೇಟಿಗೆ ಹೋಗಿದ್ದರು. ಇದೀಗ ಸಿಎಂ ಭೇಟಿ ಕುತೂಹಲ ಮೂಡಿಸಿದೆ.

ಯಾವುದೇ ಅಸಮಾಧಾನ ಇಲ್ಲ:

ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಸುಮ್ಮನೆ ಭೇಟಿ ಆಗಿದ್ದೆ ಅಷ್ಟೇ. ಈ ಹಿಂದೆ ಎರಡು ಮೂರು ಸಲ ಭೇಟಿ ಆಗಿದ್ದೆ. ಆದರೆ ಮಾಧ್ಯಮಗಳ ಮುಂದೆ ಬಂದಿರಲಿಲ್ಲ. ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡುತ್ತೇನೆ. ಬೇರೆ ಏನು ಮಾತನಾಡುವುದಿಲ್ಲ ಎಂದಷ್ಟೇ ಹೇಳಿ ತೆರಳಿದರು.

ಇದನ್ನೂ ಓದಿ: ಜನರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ, ಕೋವಿಡ್ ಹೆಚ್ಚಾಗದಂತೆ ಕ್ರಮ: ಸಿಎಂ ಬೊಮ್ಮಾಯಿ

Last Updated : Aug 14, 2021, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.