ETV Bharat / city

ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂ ಸ್ವಾಧೀನ, ಪರಿಹಾರದ ಕುರಿತು ಚರ್ಚೆ: ಸಚಿವ ರಮೇಶ್​ - bangalore news

ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಕಾಯ್ದೆ 2013 ರಂತೆ ಪರಿಹಾರ ನೀಡಲು ಚರ್ಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಭೂ ಸ್ವಾಧೀನ ‌ಮತ್ತು ಪರಿಹಾರ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಚಿವ ರಮೇಶ್ ಜಾರಕಿಹೊಳಿ‌ ಸ್ಪಷ್ಟಪಡಿಸಿದ್ದಾರೆ.

Minister Ramesh Zarakiholi statement about Krishna Upstairs Project
ಭೂ ಸ್ವಾಧೀನ ಕಾಯ್ದೆ 2013ರಂತೆ ಪರಿಹಾರ ನೀಡಲು ಚರ್ಚಿಸಲಾಗಿದೆ: ರಮೇಶ್ ಜಾರಕಿಹೊಳಿ
author img

By

Published : May 6, 2020, 1:26 PM IST

Updated : May 6, 2020, 5:27 PM IST

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಕಾಯ್ದೆ 2013ರಂತೆ ಪರಿಹಾರ ನೀಡಲು ಚರ್ಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಭೂ ಸ್ವಾಧೀನ ‌ಮತ್ತು ಪರಿಹಾರ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಕುರಿತಾದ ಉನ್ನತ ಮಟ್ಟದ ಸಭೆ

ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಕುರಿತಾದ ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ಸಚಿವರು, ಶೀಘ್ರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಭೂ ಸ್ವಾದೀನ ಪ್ರಕ್ರಿಯೆ ತುಂಬಾ ನಿಧಾನ ಆಗ್ತಿದೆ. ಅದನ್ನು ಚುರುಕುಗೊಳಿಸಲು ಚರ್ಚೆ ಮಾಡಿದ್ದೇವೆ. ಸಿಎಂ ಜೊತೆಗೆ ಇನ್ನೊಂದು ಸುತ್ತಿನ ಸಭೆ ನಡೆಸುತ್ತೇವೆ. 16 ಸಾವಿರ ಎಕರೆ ಈಗ ಭೂ ಸ್ವಾಧೀನ ಆಗಿದೆ. 35 ಸಾವಿರ ಎಕರೆ ಬಾಕಿ ಇದೆ. ಪರಿಹಾರ ಹಣ ಒಂದೊಂದು ತಾಲೂಕಿನಲ್ಲಿ ಒಂದೊಂದು ರೀತಿ ಇದೆ. ಇದೂ ಕೂಡ ಸಮಸ್ಯೆ ಆಗಿದೆ. ಉಳಿದಂತೆ ಆಲಮಟ್ಟಿ ಜಲಾಶಯದ ಅಣೆಕಟ್ಟು ಎತ್ತರ 524ಕ್ಕೆ ಏರಿಕೆ ಆಗಿರುವುದರಿಂದ 75 ಸಾವಿರ ಎಕರೆ ಮುಳಗಡೆ ಮತ್ತು ಪುನರ್ವಸತಿಗೆ ಬೇಕು. ಈ ಭೂಮಿಯನ್ನು ಸ್ವಾಧೀನ ಮಾಡಲಾಗಿದೆ ಎಂದು ಹೇಳಿದರು.

ಎತ್ತಿನಹೊಳೆ ಭರದ ಕಾಮಗಾರಿ:

ಇದೇ ವೇಳೆ ಸಚಿವ ಮಾಧುಸ್ವಾಮಿ ಮಾತನಾಡಿ, ಎತ್ತಿನ ಹೊಳೆ ಕಾಮಗಾರಿ ಭರದಿಂದ ಸಾಗಿದೆ. ಅರಸೀಕೆರೆ ತನಕ ಕೆನಲ್ ಬಂದಿದೆ ಎಂದು ವಿವರಿಸಿದರು.

ಉನ್ನತ ಮಟ್ಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಜವಳಿ ಸಚಿವ ಶ್ರೀಮಂತ ಪಾಟೀಲ್, ತೋಟಗಾರಿಕೆ ಸಚಿವ ನಾರಾಯಣ ಗೌಡ, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಕಾಯ್ದೆ 2013ರಂತೆ ಪರಿಹಾರ ನೀಡಲು ಚರ್ಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಭೂ ಸ್ವಾಧೀನ ‌ಮತ್ತು ಪರಿಹಾರ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಕುರಿತಾದ ಉನ್ನತ ಮಟ್ಟದ ಸಭೆ

ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಕುರಿತಾದ ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ಸಚಿವರು, ಶೀಘ್ರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಭೂ ಸ್ವಾದೀನ ಪ್ರಕ್ರಿಯೆ ತುಂಬಾ ನಿಧಾನ ಆಗ್ತಿದೆ. ಅದನ್ನು ಚುರುಕುಗೊಳಿಸಲು ಚರ್ಚೆ ಮಾಡಿದ್ದೇವೆ. ಸಿಎಂ ಜೊತೆಗೆ ಇನ್ನೊಂದು ಸುತ್ತಿನ ಸಭೆ ನಡೆಸುತ್ತೇವೆ. 16 ಸಾವಿರ ಎಕರೆ ಈಗ ಭೂ ಸ್ವಾಧೀನ ಆಗಿದೆ. 35 ಸಾವಿರ ಎಕರೆ ಬಾಕಿ ಇದೆ. ಪರಿಹಾರ ಹಣ ಒಂದೊಂದು ತಾಲೂಕಿನಲ್ಲಿ ಒಂದೊಂದು ರೀತಿ ಇದೆ. ಇದೂ ಕೂಡ ಸಮಸ್ಯೆ ಆಗಿದೆ. ಉಳಿದಂತೆ ಆಲಮಟ್ಟಿ ಜಲಾಶಯದ ಅಣೆಕಟ್ಟು ಎತ್ತರ 524ಕ್ಕೆ ಏರಿಕೆ ಆಗಿರುವುದರಿಂದ 75 ಸಾವಿರ ಎಕರೆ ಮುಳಗಡೆ ಮತ್ತು ಪುನರ್ವಸತಿಗೆ ಬೇಕು. ಈ ಭೂಮಿಯನ್ನು ಸ್ವಾಧೀನ ಮಾಡಲಾಗಿದೆ ಎಂದು ಹೇಳಿದರು.

ಎತ್ತಿನಹೊಳೆ ಭರದ ಕಾಮಗಾರಿ:

ಇದೇ ವೇಳೆ ಸಚಿವ ಮಾಧುಸ್ವಾಮಿ ಮಾತನಾಡಿ, ಎತ್ತಿನ ಹೊಳೆ ಕಾಮಗಾರಿ ಭರದಿಂದ ಸಾಗಿದೆ. ಅರಸೀಕೆರೆ ತನಕ ಕೆನಲ್ ಬಂದಿದೆ ಎಂದು ವಿವರಿಸಿದರು.

ಉನ್ನತ ಮಟ್ಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಜವಳಿ ಸಚಿವ ಶ್ರೀಮಂತ ಪಾಟೀಲ್, ತೋಟಗಾರಿಕೆ ಸಚಿವ ನಾರಾಯಣ ಗೌಡ, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.

Last Updated : May 6, 2020, 5:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.