ETV Bharat / city

ನಮ್ಮ ಹೈಕಮಾಂಡ್ ಯಡಿಯೂರಪ್ಪ, ಸಚಿವ ಸ್ಥಾನಕ್ಕೆ ತೊಂದರೆಯಿಲ್ಲ: ನಾರಾಯಣಗೌಡ

ಯಡಿಯೂರಪ್ಪ ಅವರೇ ನಮ್ಮ ಹೈಕಮಾಂಡ್. ಅವರೇ ಸಿಎಂ ಆಗಿ ಮುಂದುವರಿಯಬೇಕೆಂಬುದು ನಮ್ಮ ಆಸೆ. ಎಲ್ಲವೂ ಒಳ್ಳೆಯದಾಗಲಿದೆ ಅನ್ನೋ ವಿಶ್ವಾಸವಿದೆದೆ. ದೆಹಲಿಗೆ ಹೋಗುವ ಅಗತ್ಯ ಬಿದ್ದರೆ, ಖಂಡಿತ ಹೋಗುತ್ತೇವೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.

author img

By

Published : Jul 22, 2021, 2:16 PM IST

Minister Narayana Gowda
ನಮ್ಮ ಹೈಕಮಾಂಡ್ ಯಡಿಯೂರಪ್ಪ, ಸಚಿವ ಸ್ಥಾನಕ್ಕೆ ತೊಂದರೆಯಿಲ್ಲ: ನಾರಾಯಣಗೌಡ

ಬೆಂಗಳೂರು: ನಮ್ಮ ಹೈಕಮಾಂಡ್ ಏನಿದ್ದರೂ ಯಡಿಯೂರಪ್ಪ. ಅವರನ್ನು ನಂಬಿಯೇ ನಾವು ಬಿಜೆಪಿಗೆ ಸೇರಿದ್ದು, ಅಗತ್ಯ ಬಿದ್ದರೆ ನಾವೆಲ್ಲಾ ವರಿಷ್ಠರನ್ನು ಭೇಟಿ ಮಾಡಲು ಸಿದ್ಧರಿದ್ದೇವೆ ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.

ನಮ್ಮ ಹೈಕಮಾಂಡ್ ಯಡಿಯೂರಪ್ಪ, ಸಚಿವ ಸ್ಥಾನಕ್ಕೆ ತೊಂದರೆಯಿಲ್ಲ: ನಾರಾಯಣಗೌಡ

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಯಾವ ತರಹದ ಅಡಚಣೆ, ತೊಂದರೆಯೂ ಇಲ್ಲ. ಸಿಎಂ ಆಗಿದ್ದುಕೊಂಡೇ ಪಕ್ಷದ ಕೆಲಸ ಮಾಡಬಹುದು. ಯಡಿಯೂರಪ್ಪ ಅವರೇ ನಮ್ಮ ಹೈಕಮಾಂಡ್, ಅವರೇ ಸಿಎಂ ಆಗಿ ಮುಂದುವರಿಯಬೇಕೆಂಬುದು ನಮ್ಮ ಆಸೆ. ಎಲ್ಲವೂ ಒಳ್ಳೆಯದಾಗಲಿದೆ ಅನ್ನೋ ವಿಶ್ವಾಸವಿದೆ. ದೆಹಲಿಗೆ ಹೋಗುವ ಅಗತ್ಯಬಿದ್ದರೆ, ಖಂಡಿತ ಹೋಗುತ್ತೇವೆ ಎಂದರು.

ಸಿಎಂ‌ ಬದಲಾವಣೆಯಾದರೆ ನಿಮಗೇನು ಸಮಸ್ಯೆಯಾಗಲ್ವಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನಕ್ಕೆ ಯಾವುದೇ ಸಮಸ್ಯೆಯಿಲ್ಲ. ಸಂಪುಟ ಪುನಾರಚನೆ ಯಾವುದು ಇಲ್ಲ. ಆ ರೀತಿಯ ಯಾವುದೇ ಚರ್ಚೆಯೂ ಇಲ್ಲ ಎಂದರು.

ಇದನ್ನೂ ಓದಿ: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿ ನಿರ್ನಾಮ: ಬಸವಪ್ರಕಾಶ ಸ್ವಾಮೀಜಿ Warning

ಬೆಂಗಳೂರು: ನಮ್ಮ ಹೈಕಮಾಂಡ್ ಏನಿದ್ದರೂ ಯಡಿಯೂರಪ್ಪ. ಅವರನ್ನು ನಂಬಿಯೇ ನಾವು ಬಿಜೆಪಿಗೆ ಸೇರಿದ್ದು, ಅಗತ್ಯ ಬಿದ್ದರೆ ನಾವೆಲ್ಲಾ ವರಿಷ್ಠರನ್ನು ಭೇಟಿ ಮಾಡಲು ಸಿದ್ಧರಿದ್ದೇವೆ ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.

ನಮ್ಮ ಹೈಕಮಾಂಡ್ ಯಡಿಯೂರಪ್ಪ, ಸಚಿವ ಸ್ಥಾನಕ್ಕೆ ತೊಂದರೆಯಿಲ್ಲ: ನಾರಾಯಣಗೌಡ

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಯಾವ ತರಹದ ಅಡಚಣೆ, ತೊಂದರೆಯೂ ಇಲ್ಲ. ಸಿಎಂ ಆಗಿದ್ದುಕೊಂಡೇ ಪಕ್ಷದ ಕೆಲಸ ಮಾಡಬಹುದು. ಯಡಿಯೂರಪ್ಪ ಅವರೇ ನಮ್ಮ ಹೈಕಮಾಂಡ್, ಅವರೇ ಸಿಎಂ ಆಗಿ ಮುಂದುವರಿಯಬೇಕೆಂಬುದು ನಮ್ಮ ಆಸೆ. ಎಲ್ಲವೂ ಒಳ್ಳೆಯದಾಗಲಿದೆ ಅನ್ನೋ ವಿಶ್ವಾಸವಿದೆ. ದೆಹಲಿಗೆ ಹೋಗುವ ಅಗತ್ಯಬಿದ್ದರೆ, ಖಂಡಿತ ಹೋಗುತ್ತೇವೆ ಎಂದರು.

ಸಿಎಂ‌ ಬದಲಾವಣೆಯಾದರೆ ನಿಮಗೇನು ಸಮಸ್ಯೆಯಾಗಲ್ವಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನಕ್ಕೆ ಯಾವುದೇ ಸಮಸ್ಯೆಯಿಲ್ಲ. ಸಂಪುಟ ಪುನಾರಚನೆ ಯಾವುದು ಇಲ್ಲ. ಆ ರೀತಿಯ ಯಾವುದೇ ಚರ್ಚೆಯೂ ಇಲ್ಲ ಎಂದರು.

ಇದನ್ನೂ ಓದಿ: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿ ನಿರ್ನಾಮ: ಬಸವಪ್ರಕಾಶ ಸ್ವಾಮೀಜಿ Warning

ETV Bharat Logo

Copyright © 2024 Ushodaya Enterprises Pvt. Ltd., All Rights Reserved.