ETV Bharat / city

ಮತಾಂತರ ನಿಷೇಧ ಮಸೂದೆ RSS ಅಜೆಂಡಾ ಎಂದು ಒಪ್ಪಿಕೊಳ್ಳುವೆ: ಸಚಿವ ಅಶ್ವತ್ಥ ನಾರಾಯಣ

author img

By

Published : Dec 23, 2021, 7:19 PM IST

ಆರ್​ಎಸ್​ಎಸ್​ ದೇಶದ ಅಭಿವೃದ್ಧಿಯ ಅಜೆಂಡಾ ಹೊಂದಿದೆ. ಮತಾಂತರ ನಿಷೇಧ ಮಾಡುವುದನ್ನು ಆರ್​ಎಸ್​ಎಸ್ ಬಯಸಿತ್ತು ಎಂದು ಹೇಳುವ ಮೂಲಕ ಮತಾಂತರ ನಿಷೇಧ ಮಸೂದೆ ಆರ್​ಎಸ್​ಎಸ್​ ಅಜೆಂಡಾ ಎಂಬುದನ್ನು ಸಚಿವ ಡಾ.ಸಿ.ಎನ್​. ಅಶ್ವತ್ಥ್​ನಾರಾಯಣ ಅವರು ಒಪ್ಪಿಕೊಂಡಿದ್ದಾರೆ.

ashwath narayana
ಸಚಿವ ಅಶ್ವತ್ಥ್ ನಾರಾಯಣ

ಬೆಳಗಾವಿ: ಆರ್​ಎಸ್​ಎಸ್​ ದೇಶದ ಅಭಿವೃದ್ಧಿಯ ಅಜೆಂಡಾ ಹೊಂದಿದೆ. ಮತಾಂತರ ನಿಷೇಧ ಮಾಡುವುದನ್ನು ಆರ್​ಎಸ್​ಎಸ್ ಬಯಸಿತ್ತು ಎಂದು ಹೇಳುವ ಮೂಲಕ ಮತಾಂತರ ನಿಷೇಧ ಮಸೂದೆ ಆರ್​ಎಸ್​ಎಸ್​ ಅಜೆಂಡಾ ಎಂಬುದನ್ನು ಸಚಿವ ಡಾ.ಸಿ.ಎನ್​. ಅಶ್ವತ್ಥ ​ನಾರಾಯಣ ಅವರು ಒಪ್ಪಿಕೊಂಡಿದ್ದಾರೆ.

ಸಚಿವ ಅಶ್ವತ್ಥ ನಾರಾಯಣ

ಮತಾಂತರ ನಿಷೇಧ ಮಸೂದೆ ಮಂಡನೆಯ ಬಳಿಕ ಸುವರ್ಣಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಕಾನೂನು ಸಮಾಜ‌ದ ಪರವಾಗಿದೆ. ಮತಾಂತರ ನಿಷೇಧದ ಬಗ್ಗೆ ಸಂವಿಧಾನದಲ್ಲೇ ಇದೆ. ಹೆಚ್ಚಿನ ಸ್ಪಷ್ಟತೆ ಕೊಡೋದಕ್ಕೆ ಈ ಕಾಯ್ದೆ ಜಾರಿಗೆ ತಂದಿದ್ದೇವೆ. ಇದು ಆರ್​ಎಸ್ಎಸ್ ಅಜೆಂಡಾ ಎಂದು ಒಪ್ಪಿಕೊಳ್ಳುತ್ತೇನೆ ಎಂದರು.

ಧರ್ಮ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ ಅಸೆಂಬ್ಲಿಯಲ್ಲಿ ಪಾಸ್ ಆಗಿದೆ‌. ಮಸೂದೆ ಬಗ್ಗೆ ಸಾಕಷ್ಟು ಚರ್ಚೆ ಆಯ್ತು. ಬಿಲ್​ನ ಚರ್ಚೆ ಸಂದರ್ಭದಲ್ಲಿ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿದೆ ಎಂದರು.

ಇದನ್ನೂ ಓದಿ: ಬೀಜಿಂಗ್​ ಒಲಂಪಿಕ್ಸ್​ಗಾಗಿ ಟಫ್​ ರೂಲ್ಸ್​.. ಚೀನಾದ ಹಲವು ನಗರಗಳಲ್ಲಿ ಕೊರೊನಾ ಕಠಿಣ ನಿಯಮ ಜಾರಿ

ಯಾವುದೇ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗಿ ಮತಾಂತರ ಆಗಬಾರದು. ಇದು ಸಮಾಜದ ಸಂಸ್ಕೃತಿಗೆ ಪೂರಕವಾಗಿರುವುದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಈ ಮಸೂದೆ ಜಾರಿಗೆ ತರಬೇಕು ಎಂದು ಈ ಹಿಂದೆ ಪ್ರಯತ್ನಿಸಿದ್ದರು. ಸಮಾಜಕ್ಕೆ ಒಳಿತಾಗುವ ಮಸೂದೆ ಇದು ಎಂದರು.

ಇಡೀ ವಿಶ್ವದಲ್ಲೇ ಭಾರತೀಯರು ಮಸೂದೆಯನ್ನು ಎದುರು ನೋಡುತ್ತಿದ್ದರು. ಇದೀಗ ವಿಧಾನಸಭೆಯಲ್ಲಿ ಮಂಡನೆ ಮಾಡಿ ಅಂಗೀಕರಿಸಲಾಗಿದೆ. ಇದರ ಸಂಪೂರ್ಣ ಕ್ರೆಡಿಟ್ ಬಿಜೆಪಿಗೆ ಸೇರುತ್ತದೆ. ಕಾಂಗ್ರೆಸ್​ ಇದನ್ನು ವಿರೋಧಿಸುವುದನ್ನು ಬಿಟ್ಟು ಸಹಕರಿಸಿದ್ದರೆ, ಅವರಿಗೂ ಇದರ ಪಾಲು ಸೇರುತ್ತಿತ್ತು ಎಂದರು.

ಬೆಳಗಾವಿ: ಆರ್​ಎಸ್​ಎಸ್​ ದೇಶದ ಅಭಿವೃದ್ಧಿಯ ಅಜೆಂಡಾ ಹೊಂದಿದೆ. ಮತಾಂತರ ನಿಷೇಧ ಮಾಡುವುದನ್ನು ಆರ್​ಎಸ್​ಎಸ್ ಬಯಸಿತ್ತು ಎಂದು ಹೇಳುವ ಮೂಲಕ ಮತಾಂತರ ನಿಷೇಧ ಮಸೂದೆ ಆರ್​ಎಸ್​ಎಸ್​ ಅಜೆಂಡಾ ಎಂಬುದನ್ನು ಸಚಿವ ಡಾ.ಸಿ.ಎನ್​. ಅಶ್ವತ್ಥ ​ನಾರಾಯಣ ಅವರು ಒಪ್ಪಿಕೊಂಡಿದ್ದಾರೆ.

ಸಚಿವ ಅಶ್ವತ್ಥ ನಾರಾಯಣ

ಮತಾಂತರ ನಿಷೇಧ ಮಸೂದೆ ಮಂಡನೆಯ ಬಳಿಕ ಸುವರ್ಣಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಕಾನೂನು ಸಮಾಜ‌ದ ಪರವಾಗಿದೆ. ಮತಾಂತರ ನಿಷೇಧದ ಬಗ್ಗೆ ಸಂವಿಧಾನದಲ್ಲೇ ಇದೆ. ಹೆಚ್ಚಿನ ಸ್ಪಷ್ಟತೆ ಕೊಡೋದಕ್ಕೆ ಈ ಕಾಯ್ದೆ ಜಾರಿಗೆ ತಂದಿದ್ದೇವೆ. ಇದು ಆರ್​ಎಸ್ಎಸ್ ಅಜೆಂಡಾ ಎಂದು ಒಪ್ಪಿಕೊಳ್ಳುತ್ತೇನೆ ಎಂದರು.

ಧರ್ಮ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ ಅಸೆಂಬ್ಲಿಯಲ್ಲಿ ಪಾಸ್ ಆಗಿದೆ‌. ಮಸೂದೆ ಬಗ್ಗೆ ಸಾಕಷ್ಟು ಚರ್ಚೆ ಆಯ್ತು. ಬಿಲ್​ನ ಚರ್ಚೆ ಸಂದರ್ಭದಲ್ಲಿ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿದೆ ಎಂದರು.

ಇದನ್ನೂ ಓದಿ: ಬೀಜಿಂಗ್​ ಒಲಂಪಿಕ್ಸ್​ಗಾಗಿ ಟಫ್​ ರೂಲ್ಸ್​.. ಚೀನಾದ ಹಲವು ನಗರಗಳಲ್ಲಿ ಕೊರೊನಾ ಕಠಿಣ ನಿಯಮ ಜಾರಿ

ಯಾವುದೇ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗಿ ಮತಾಂತರ ಆಗಬಾರದು. ಇದು ಸಮಾಜದ ಸಂಸ್ಕೃತಿಗೆ ಪೂರಕವಾಗಿರುವುದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಈ ಮಸೂದೆ ಜಾರಿಗೆ ತರಬೇಕು ಎಂದು ಈ ಹಿಂದೆ ಪ್ರಯತ್ನಿಸಿದ್ದರು. ಸಮಾಜಕ್ಕೆ ಒಳಿತಾಗುವ ಮಸೂದೆ ಇದು ಎಂದರು.

ಇಡೀ ವಿಶ್ವದಲ್ಲೇ ಭಾರತೀಯರು ಮಸೂದೆಯನ್ನು ಎದುರು ನೋಡುತ್ತಿದ್ದರು. ಇದೀಗ ವಿಧಾನಸಭೆಯಲ್ಲಿ ಮಂಡನೆ ಮಾಡಿ ಅಂಗೀಕರಿಸಲಾಗಿದೆ. ಇದರ ಸಂಪೂರ್ಣ ಕ್ರೆಡಿಟ್ ಬಿಜೆಪಿಗೆ ಸೇರುತ್ತದೆ. ಕಾಂಗ್ರೆಸ್​ ಇದನ್ನು ವಿರೋಧಿಸುವುದನ್ನು ಬಿಟ್ಟು ಸಹಕರಿಸಿದ್ದರೆ, ಅವರಿಗೂ ಇದರ ಪಾಲು ಸೇರುತ್ತಿತ್ತು ಎಂದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.