ETV Bharat / city

ಒಂದು ಫೋನ್ ಕಾಲ್​: ಕ್ಷುಲ್ಲಕ ವಿಚಾರಕ್ಕೆ ಪ್ರಿಯತಮೆ ಕೊಂದು ಪ್ರಿಯಕರ ನೇಣಿಗೆ ಶರಣು!

author img

By

Published : Feb 18, 2021, 12:34 PM IST

ಫೋನ್ ರಿಸೀವ್ ಮಾಡಿಲ್ಲ‌ ಎಂಬ ಕ್ಷುಲ್ಲಕ ಕಾರಣಕ್ಕೆ ಪ್ರಿಯತಮೆಯನ್ನು ಕೊಂದು ಬಳಿಕ ಪ್ರಿಯಕರ ತಾನು ನೇಣಿಗೆ ಶರಣಾಗಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Man Killed His Lover in bangalore
ಪೋನ್ ರಿಸೀವ್ ಮಾಡಿಲ್ಲವೆಂದು ಪ್ರಿಯತಮೆ ಕೊಂದು ಪ್ರಿಯಕರ ನೇಣಿಗೆ ಶರಣು

ಬೆಂಗಳೂರು: ಫೋನ್​ ರಿಸೀವ್ ಮಾಡಿಲ್ಲ‌ ಎಂಬ ಕ್ಷುಲ್ಲಕ ಕಾರಣಕ್ಕೆ ಪ್ರಿಯತಮೆಯನ್ನು ಕೊಂದು ಬಳಿಕ ತಾನು ನೇಣಿಗೆ ಶರಣಾಗಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

35 ವರ್ಷದ ರಮ್ಯಾ ಕೊಲೆಯಾದ ಮಹಿಳೆ. ಚಿಕ್ಕಮೊಗ (45) ಆತ್ಮಹತ್ಯೆ ಮಾಡಿಕೊಂಡ ಸೆಕ್ಯೂರಿಟಿ ಗಾರ್ಡ್. ರಮ್ಯಾ ಗಾರ್ಮೆಂಟ್ಸ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಚಿಕ್ಕಮೊಗ ಅತ್ತಿಬೆಲೆಯಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇಬ್ಬರು ತಮ್ಮ ಸಂಗಾತಿಗಳನ್ನು ತೊರೆದು ಒಟ್ಟಿಗೆ ಜೀವನ ನಡೆಸುತ್ತಿದ್ದರು.

ಎಂದಿನಂತೆ ರಮ್ಯಾಳಗೆ ಚಿಕ್ಕಮೊಗ ಫೋನ್‌ ಮಾಡಿದ್ದಾನೆ‌. ಫೋನ್ ಬಂದಿರುವುದನ್ನು ರಮ್ಯಾ ಗಮನಿಸಿರಲಿಲ್ಲ. ಇದರಿಂದ ಅಸಮಾಧಾಗೊಂಡು ಮನೆಗೆ ಬಂದು ಜಗಳವಾಡಿ ಕೋಪದಲ್ಲೇ‌ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಬಳಿಕ ತಾನು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ: ಧಗ ಧಗನೇ ಹೊತ್ತಿ ಉರಿದ ವಾಹನ

ಶವದ ವಾಸನೆ ಬಂದ ಹಿನ್ನೆಲೆ, ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೋಣನಕುಂಟೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ‌.

ಬೆಂಗಳೂರು: ಫೋನ್​ ರಿಸೀವ್ ಮಾಡಿಲ್ಲ‌ ಎಂಬ ಕ್ಷುಲ್ಲಕ ಕಾರಣಕ್ಕೆ ಪ್ರಿಯತಮೆಯನ್ನು ಕೊಂದು ಬಳಿಕ ತಾನು ನೇಣಿಗೆ ಶರಣಾಗಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

35 ವರ್ಷದ ರಮ್ಯಾ ಕೊಲೆಯಾದ ಮಹಿಳೆ. ಚಿಕ್ಕಮೊಗ (45) ಆತ್ಮಹತ್ಯೆ ಮಾಡಿಕೊಂಡ ಸೆಕ್ಯೂರಿಟಿ ಗಾರ್ಡ್. ರಮ್ಯಾ ಗಾರ್ಮೆಂಟ್ಸ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಚಿಕ್ಕಮೊಗ ಅತ್ತಿಬೆಲೆಯಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇಬ್ಬರು ತಮ್ಮ ಸಂಗಾತಿಗಳನ್ನು ತೊರೆದು ಒಟ್ಟಿಗೆ ಜೀವನ ನಡೆಸುತ್ತಿದ್ದರು.

ಎಂದಿನಂತೆ ರಮ್ಯಾಳಗೆ ಚಿಕ್ಕಮೊಗ ಫೋನ್‌ ಮಾಡಿದ್ದಾನೆ‌. ಫೋನ್ ಬಂದಿರುವುದನ್ನು ರಮ್ಯಾ ಗಮನಿಸಿರಲಿಲ್ಲ. ಇದರಿಂದ ಅಸಮಾಧಾಗೊಂಡು ಮನೆಗೆ ಬಂದು ಜಗಳವಾಡಿ ಕೋಪದಲ್ಲೇ‌ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಬಳಿಕ ತಾನು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ: ಧಗ ಧಗನೇ ಹೊತ್ತಿ ಉರಿದ ವಾಹನ

ಶವದ ವಾಸನೆ ಬಂದ ಹಿನ್ನೆಲೆ, ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೋಣನಕುಂಟೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.