ಬೆಂಗಳೂರು : ಕೊಡಿಗೆಹಳ್ಳಿ ಗಂಟಲು ದ್ರವ ಪರೀಕ್ಷೆ ಕಿಟ್ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ್ ಅವರನ್ನು ಅಮಾನತು ಮಾಡಲಾಗಿದೆ.
ಕಾರಣ ಕೇಳಿ ಏಪ್ರಿಲ್ 8ರಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗೆ ನೋಟಿಸ್ ನೀಡಲಾಗಿತ್ತು. ಆದ್ರೆ, ಪ್ರೇಮಾನಂದ್ ಹೇಳಿಕೆ ಸಮಂಜಸವಾಗಿಲ್ಲ ಹಾಗೂ ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸುಗಿರುವುದು ಕಂಡು ಬಂದಿದೆ. ಆರೋಗ್ಯ ಕೇಂದ್ರದಲ್ಲಿ ಸರಿಯಾದ ಮೇಲ್ವಿಚಾರಣೆ ನಡೆಸದೇ ಇರುವ ಕಾರಣ ಅವರನ್ನು ಅಮಾನತು ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.
ಓದಿ-ನಕಲಿ ಸ್ವಾಬ್ ಟೆಸ್ಟಿಂಗ್.. ವೈರಲ್ ವಿಡಿಯೋ ಆಧರಿಸಿ ಸ್ವಾಬ್ ಕಲೆಕ್ಟರ್ಗಳ ಅಮಾನತು
ಘಟನೆ ಹಿನ್ನೆಲೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯಲಹಂಕ ವಲಯ ಕೊಡಿಗೆಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏಪ್ರಿಲ್ 7ರಂದು ಸ್ವ್ಯಾಬ್ ಕಲೆಕ್ಟರ್ಗಳಾದ ನಾಗರಾಜು ಹಾಗೂ ಹೇಮಂತ್ ಎಂಬುವರು ಸ್ವ್ಯಾಬ್ ಟೆಸ್ಟ್ ಕಿಟ್ಗಳ ದುರುಪಯೋಗ ಮಾಡಿದ್ದ ಹಿನ್ನೆಲೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಅಲ್ಲದೆ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ.