ETV Bharat / city

ಈ ವಿಶೇಷ ನ್ಯಾಯಾಲಯ ರಾಜ್ಯಕ್ಕೊಂದೇ... 17 ಸಾವಿರಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥ ಯಾವಾಗ?

ಇಡೀ ರಾಜ್ಯಕ್ಕೆ ಒಂದೇ ವಿಶೇಷ ನ್ಯಾಯಾಲಯ. ರಾಜ್ಯದಲ್ಲಿ ಸುಮಾರು 17,732 ಸರ್ಕಾರಿ ಭೂ ಒತ್ತುವರಿ ಪ್ರಕರಣಗಳು ದಾಖಲು. ಪ್ರಕರಣಗಳ ಇತ್ಯರ್ಥ ವಿಳಂಬ.

author img

By

Published : Jan 15, 2020, 2:47 AM IST

ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ
ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಸರ್ಕಾರಿ ಭೂ ಒತ್ತುವರಿ ಪ್ರಕರಣಗಳ ವಿಚಾರಣೆಗೆ ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರಿನಲ್ಲಿ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿದೆ. ಆದರೆ, ಇಡೀ ರಾಜ್ಯಕ್ಕೆ ಇದು ಏಕೈಕ ವಿಶೇಷ ನ್ಯಾಯಾಲಯವಾಗಿದ್ದು, ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ.

ಬೆಂಗಳೂರಲ್ಲಿ 9,294 ಸರ್ಕಾರಿ ಭೂ ಒತ್ತುವರಿ ಪ್ರಕರಣಗಳು ಪತ್ತೆಯಾಗಿದ್ದರೂ, 127 ಪ್ರಕರಣಗಳು ಮಾತ್ರ ದಾಖಲಾಗಿವೆ. ತಹಶೀಲ್ದಾರ್ ಹಾಗೂ ಎಸಿಗಳು ಅಕ್ರಮ ಒತ್ತುವರಿ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸದೇ ಇರುವುದರಿಂದ ಬೆಂಗಳೂರಿನಲ್ಲಿ ಭೂಗಳ್ಳರು ಅಕ್ರಮವಾಗಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ ಎಂಬ ಆಕ್ಷೇಪ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ‌ (ಪಿಎಸಿ) ಸಭೆಯಲ್ಲಿ ವ್ಯಕ್ತವಾಗಿದೆ.

ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ
ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ
ರಾಜ್ಯದಲ್ಲಿ ಸುಮಾರು 17,732 ಸರ್ಕಾರಿ ಭೂ ಒತ್ತುವರಿ ಪ್ರಕರಣಗಳಿದ್ದು, ಇಡೀ ರಾಜ್ಯಕ್ಕೆ ಒಂದೇ ವಿಶೇಷ ನ್ಯಾಯಾಲಯ ಬೆಂಗಳೂರಿನಲ್ಲಿ ಮಾತ್ರ ತೆರೆಯಲಾಗಿದೆ. ರಾಜ್ಯದ ಎಲ್ಲಾ ಭೂ ಒತ್ತುವರಿದಾರರೂ ಬೆಂಗಳೂರಿಗೆ ಅಲೆದಾಡುವಂತಾಗಿದ್ದು, ಇದರಿಂದ ಕೃಷಿ ಉದ್ದೇಶಕ್ಕೆ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಸಣ್ಣ ಹಿಡುವಳಿದಾರರು ಬೆಂಗಳೂರಿಗೆ ಅಲೆದಾಡುವಂತೆ ಆಗಿದೆ. ಸಣ್ಣ ಹಿಡುವಳಿದಾರರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಸಮಿತಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.ಕಾನೂನು ಇಲಾಖೆಯ ಆದೇಶದಲ್ಲಿ ಆಗಿರುವ ಲೋಪದಿಂದ ಜನರು ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಜೆಎಂಎಫ್‍ಸಿ ಕೋರ್ಟ್ ಗಳಲ್ಲಿಯೇ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸಲು ಸರ್ಕಾರದ ಆದೇಶವನ್ನು ಮಾರ್ಪಾಡು ಮಾಡುವಂತೆ ಸರ್ಕಾರಕ್ಕೆ ಪಿಎಸಿ ನಿರ್ದೇಶನ ನೀಡಿದೆ.ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೂಚನೆಯಂತೆ ಸರ್ಕಾರ ಆದೇಶ ಪತ್ರವನ್ನು ಮಾರ್ಪಾಡಿಸಿದರೆ, ತಾಲೂಕು ನ್ಯಾಯಾಲಯದಲ್ಲಿಯೇ ಭೂ ಒತ್ತುವರಿ ಪ್ರಕರಣಗಳ ವಿಚಾರಣೆಗೆ ಅವಕಾಶ ದೊರೆಯಲಿದೆ. ಈ ರೀತಿಯ ಸುಮಾರು 14 ಪ್ರಕರಣಗಳು ರಾಜ್ಯಾದ್ಯಂತ ದಾಖಲಾಗಿವೆ ಎಂದು ಪಿಎಸಿ ಸದಸ್ಯರು ತಿಳಿಸಿದ್ದಾರೆ.
ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ
ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಸರ್ಕಾರಿ ಭೂ ಒತ್ತುವರಿ ಪ್ರಕರಣಗಳ ವಿಚಾರಣೆಗೆ ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರಿನಲ್ಲಿ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿದೆ. ಆದರೆ, ಇಡೀ ರಾಜ್ಯಕ್ಕೆ ಇದು ಏಕೈಕ ವಿಶೇಷ ನ್ಯಾಯಾಲಯವಾಗಿದ್ದು, ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ.

ಬೆಂಗಳೂರಲ್ಲಿ 9,294 ಸರ್ಕಾರಿ ಭೂ ಒತ್ತುವರಿ ಪ್ರಕರಣಗಳು ಪತ್ತೆಯಾಗಿದ್ದರೂ, 127 ಪ್ರಕರಣಗಳು ಮಾತ್ರ ದಾಖಲಾಗಿವೆ. ತಹಶೀಲ್ದಾರ್ ಹಾಗೂ ಎಸಿಗಳು ಅಕ್ರಮ ಒತ್ತುವರಿ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸದೇ ಇರುವುದರಿಂದ ಬೆಂಗಳೂರಿನಲ್ಲಿ ಭೂಗಳ್ಳರು ಅಕ್ರಮವಾಗಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ ಎಂಬ ಆಕ್ಷೇಪ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ‌ (ಪಿಎಸಿ) ಸಭೆಯಲ್ಲಿ ವ್ಯಕ್ತವಾಗಿದೆ.

ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ
ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ
ರಾಜ್ಯದಲ್ಲಿ ಸುಮಾರು 17,732 ಸರ್ಕಾರಿ ಭೂ ಒತ್ತುವರಿ ಪ್ರಕರಣಗಳಿದ್ದು, ಇಡೀ ರಾಜ್ಯಕ್ಕೆ ಒಂದೇ ವಿಶೇಷ ನ್ಯಾಯಾಲಯ ಬೆಂಗಳೂರಿನಲ್ಲಿ ಮಾತ್ರ ತೆರೆಯಲಾಗಿದೆ. ರಾಜ್ಯದ ಎಲ್ಲಾ ಭೂ ಒತ್ತುವರಿದಾರರೂ ಬೆಂಗಳೂರಿಗೆ ಅಲೆದಾಡುವಂತಾಗಿದ್ದು, ಇದರಿಂದ ಕೃಷಿ ಉದ್ದೇಶಕ್ಕೆ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಸಣ್ಣ ಹಿಡುವಳಿದಾರರು ಬೆಂಗಳೂರಿಗೆ ಅಲೆದಾಡುವಂತೆ ಆಗಿದೆ. ಸಣ್ಣ ಹಿಡುವಳಿದಾರರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಸಮಿತಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.ಕಾನೂನು ಇಲಾಖೆಯ ಆದೇಶದಲ್ಲಿ ಆಗಿರುವ ಲೋಪದಿಂದ ಜನರು ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಜೆಎಂಎಫ್‍ಸಿ ಕೋರ್ಟ್ ಗಳಲ್ಲಿಯೇ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸಲು ಸರ್ಕಾರದ ಆದೇಶವನ್ನು ಮಾರ್ಪಾಡು ಮಾಡುವಂತೆ ಸರ್ಕಾರಕ್ಕೆ ಪಿಎಸಿ ನಿರ್ದೇಶನ ನೀಡಿದೆ.ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೂಚನೆಯಂತೆ ಸರ್ಕಾರ ಆದೇಶ ಪತ್ರವನ್ನು ಮಾರ್ಪಾಡಿಸಿದರೆ, ತಾಲೂಕು ನ್ಯಾಯಾಲಯದಲ್ಲಿಯೇ ಭೂ ಒತ್ತುವರಿ ಪ್ರಕರಣಗಳ ವಿಚಾರಣೆಗೆ ಅವಕಾಶ ದೊರೆಯಲಿದೆ. ಈ ರೀತಿಯ ಸುಮಾರು 14 ಪ್ರಕರಣಗಳು ರಾಜ್ಯಾದ್ಯಂತ ದಾಖಲಾಗಿವೆ ಎಂದು ಪಿಎಸಿ ಸದಸ್ಯರು ತಿಳಿಸಿದ್ದಾರೆ.
ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ
ರಾಜ್ಯಕ್ಕೊಂದೇ ವಿಶೇಷ ನ್ಯಾಯಾಲಯ
Intro:Body:KN_BNG_05_LANDGRABCOURT_PCB_SCRIPT_7201951

ರಾಜ್ಯಕ್ಕೊಂದೇ ಭೂ ಒತ್ತುವರಿ ವಿಶೇಷ ನ್ಯಾಯಾಲಯ: ಪಿಎಸಿ ನೀಡಿದ ನಿರ್ದೇಶನ ಏನು?

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಸರ್ಕಾರಿ ಭೂ ಒತ್ತುವರಿ ಪ್ರಕರಣಗಳ ವಿಚಾರಣೆಗೆ ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿದೆ. ಆದರೆ, ಇಡೀ ರಾಜ್ಯಕ್ಕೆ ಇದು ಏಕೈಕ ವಿಶೇಷ ನ್ಯಾಯಾಲಯವಾಗಿದ್ದು, ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ.

ರಾಜ್ಯದಲ್ಲಿ ಸಾವಿರಾರು ಭೂ ಒತ್ತುವರಿಗೆ ಪ್ರಕರಣಗಳಿವೆ. ಇದರ‌ ವಿಚಾರಣೆ‌‌ ನಡೆಸಲು ಏಕೈಕ ವಿಶೇಷ ನ್ಯಾಯಾಲಯ ಇರುವುದರಿಂದ‌ ಸರ್ಕಾರಿ ಭೂ ಒತ್ತುವರಿ ಪ್ರಕರಣಗಳ ಇತ್ಯರ್ಥ ಸಾಕಷ್ಟು ವಿಳಂಬವಾಗುತ್ತಿದೆ.

ಬೆಂಗಳೂರಿನಲ್ಲಿ 9,294 ಸರ್ಕಾರಿ ಭೂ ಒತ್ತುವರಿ ಪ್ರಕರಣಗಳು ಪತ್ತೆಯಾಗಿದ್ದರೂ, ಬೆಂಗಳೂರಿನಲ್ಲಿ 127 ಪ್ರಕರಣಗಳು ಮಾತ್ರ ದಾಖಲಾಗಿವೆ. ತಹಶೀಲ್ದಾರ್ ಹಾಗೂ ಎಸಿಗಳು ಅಕ್ರಮ ಒತ್ತುವರಿ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸದೇ ಇರುವುದರಿಂದ ಬೆಂಗಳೂರಿನಲ್ಲಿ ಭೂಗಳ್ಳಲು ಅಕ್ರಮವಾಗಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ ಎಂಬ ಆಕ್ಷೇಪ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ‌ (ಪಿಎಸಿ) ಸಭೆಯಲ್ಲಿ ವ್ಯಕ್ತವಾಗಿದೆ.

ರಾಜ್ಯದಲ್ಲಿ ಸುಮಾರು 17,732 ಸರ್ಕಾರಿ ಭೂ ಒತ್ತುವರಿ ಪ್ರಕರಣಗಳಿದ್ದು, ಇಡೀ ರಾಜ್ಯಕ್ಕೆ ಒಂದೇ ವಿಶೇಷ ನ್ಯಾಯಾಲಯ ಬೆಂಗಳೂರಿನಲ್ಲಿ ಮಾತ್ರ ತೆರೆಯಲಾಗಿದೆ. ರಾಜ್ಯದ ಎಲ್ಲಾ ಭೂ ಒತ್ತುವರಿದಾರರೂ ಬೆಂಗಳೂರಿಗೆ ಅಲೆದಾಡುವಂತಾಗಿದ್ದು, ಇದರಿಂದ ಕೃಷಿ ಉದ್ದೇಶಕ್ಕೆ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಸಣ್ಣ ಹಿಡುವಳಿದಾರರು ಬೆಂಗಳೂರಿಗೆ ಅಲೆದಾಡುವಂತೆ ಆಗಿದ್ದು, ಸಣ್ಣ ಹಿಡುವಳಿದಾರರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಸಮಿತಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಕಾನೂನು ಇಲಾಖೆಯ ಆದೇಶದಲ್ಲಿ ಆಗಿರುವ ಲೋಪದಿಂದ ಜನರು ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಜೆಎಂಎಫ್‍ಸಿ ಕೋರ್ಟ್ ಗಳಲ್ಲಿಯೇ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸಲು ಸರ್ಕಾರದ ಆದೇಶವನ್ನು ಮಾರ್ಪಾಡು ಮಾಡುವಂತೆ ಪಿಎಸಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೂಚನೆಯಂತೆ ಸರ್ಕಾರ ಆದೇಶ ಪತ್ರವನ್ನು ಮಾರ್ಪಾಡಿಸಿದರೆ, ತಾಲೂಕು ನ್ಯಾಯಾಲಯದಲ್ಲಿಯೇ ಭೂ ಒತ್ತುವರಿ ಪ್ರಕರಣಗಳ ವಿಚಾರಣೆಗೆ ಅವಕಾಶ ದೊರೆಯಲಿದೆ. ಈ ರೀತಿಯ ಸುಮಾರು 14 ಪ್ರಕರಣಗಳು ರಾಜ್ಯಾದ್ಯಂತ ದಾಖಲಾಗಿವೆ ಎಂದು ಪಿಎಸಿ ಸದಸ್ಯರು ತಿಳಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.