ETV Bharat / city

ದೇಶದ 5 ಟ್ರಿಲಿಯನ್ ಆರ್ಥಿಕತೆ ಗುರಿಯಲ್ಲಿ ರಾಜ್ಯದ ಭಾಗ 1/3ರಷ್ಟು ಆಗಿರಬೇಕು: ಸಿಎಂ

author img

By

Published : Dec 5, 2021, 12:26 AM IST

ಭಾರತ 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ಸಾಧಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದು, ಅದರಲ್ಲಿ ಕರ್ನಾಟಕದ ಕೊಡುಗೆ ಬಹುಪಾಲು ಇರಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Karnataka Infinite opportunities programme in bengaluru,ಭಾರತದ ಆರ್ಥಿಕತೆ ಬಗ್ಗೆ ಸಿಎಂ ಬೊಮ್ಮಾಯಿ
Karnataka Infinite opportunities programme in bengaluru

ಬೆಂಗಳೂರು: 2024-25ರ ವೇಳೆಗೆ 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ಸಾಧಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದು, ಇದರ 1/3 ಭಾಗದಷ್ಟು ಕೊಡುಗೆ ಕರ್ನಾಟಕದಿಂದ ಆಗಬೇಕು. ಅದು ನನ್ನ ಗುರಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಖಾಸಗಿ ಹೊಟೇಲ್​​ನಲ್ಲಿ ಡಬ್ಲ್ಯೂ.ಎಂ.ಜಿ ಗ್ರೂಪ್ ಆಯೋಜಿಸಿದ್ದ ಕರ್ನಾಟಕ-ಇನ್ಫೈನೈಟ್ ಅಪಾರ್ಚುನಿಟೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದನ್ನು ಸಾಧಿಸಲು ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡಲು ತಾವು ಸಿದ್ದರಿದ್ದೇವೆ. ನವ ಕರ್ನಾಟಕದಿಂದ ನವ ಭಾರತವನ್ನು ಕಟ್ಟಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬರೂ ಸಾಧಕರಾಗಬೇಕೆನ್ನುವುದು ನಮ್ಮ ಗುರಿ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರಿಗೂ ಅವಕಾಶಗಳ ಒದಗಿಸುವ ಹೊಸ ಭಾರತದ ಬಗ್ಗೆ ಕನಸು ಕಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ವಿಶ್ವವನ್ನು ಭಾರತ ಮುನ್ನಡೆಸುವಂತಾಗಬೇಕು. ಕರ್ನಾಟಕ ಸರ್ಕಾರ ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರೊಂದಿಗೆ ಹೆಜ್ಜೆಯಿಡಲು ಸಿದ್ಧವಿದೆ. ಅವರು ಯಶಸ್ವಿಯಾಗಲು ಮಾತ್ರವಲ್ಲದೇ ಸಾಧನೆ ಮಾಡಲೂ ಹೆಗಲಿಗೆ ಹೆಗಲು ನೀಡುವುದುದಾಗಿ ಭರವಸೆ ನೀಡಿದರು.

ಮಹಿಳಾ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಶಕ್ತಿ, ಪ್ರಾಮಾಣಿಕತೆ ಮಹಿಳೆಯರಿಗೆ ಸಹಜವಾಗಿಯೇ ಬಂದಿರುವ ಗುಣಗಳು. ಈ ಮೂಲಭೂತ ಗುಣಗಳೇ ಒಂದು ರಾಜ್ಯ, ಸಮಾಜ ಹಾಗೂ ವ್ಯಕ್ತಿಯ ಅನಂತ ಬೆಳವಣಿಗೆಗೆ ಪೂರಕವಾಗಿವೆ. ಅನಂತ ಅವಕಾಶಗಳನ್ನು ಹುಡುಕಲು ಸೀಮಿತ ಅಂಶಗಳನ್ನು ಪರಿಶೀಲಿಸಬೇಕು. ಕರ್ನಾಟಕದಲ್ಲಿ ಅನಂತ ಅವಕಾಶಗಳಿದ್ದು, ಖಚಿತವಾದ ರಹದಾರಿಯನ್ನು ಹಾಗೂ ಅನುಷ್ಠಾನ ತಂತ್ರಗಳು ನಮ್ಮಲ್ಲಿವೆ. ಕರ್ನಾಟಕಕ್ಕೆ ಬಂದರೆ ಬೇಕಾದದ್ದು ಮಾತ್ರವಲ್ಲದೆ ಅವರ ನಿರೀಕ್ಷೆಗೂ ಮೀರಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಕರ್ನಾಟಕಕ್ಕೆ ತನ್ನದೇ ಇತಿಹಾಸವಿದೆ. ಈ ರಾಜ್ಯದ ಪ್ರತಿ ವ್ಯಕ್ತಿಯೂ ಈ ಚರಿತ್ರೆಯ ಫಲಾನುಭವಿಗಳೇ ಆಗಿದ್ದಾರೆ. ಮೈಸೂರು ಮಹಾರಾಜರು ದೂರದೃಷ್ಟಿ ಹೊಂದಿದ್ದ ಅತ್ಯಂತ ಪ್ರಗತಿಶೀಲ ರಾಜರಾಗಿದ್ದರು. ಮಹಿಳೆಯರಿಗೆ ಪ್ರತ್ಯೇಕ ಕಾಲೇಜು, ಬ್ಯಾಂಕ್ ಸ್ಥಾಪನೆ ಸೇರಿದಂತೆ ಶಾಹಿಯಿಂದ ಮೊದಲುಗೊಂಡು ಸ್ಟೀಲ್, ಸಾಬೂನು, ಕಾಗದದವರೆಗೆ ಕೈಗಾರಿಕೆಗಳ ಸ್ಥಾಪನೆ ಮಾಡಿದ ಪ್ರಥಮ ವ್ಯಕ್ತಿ ಅವರು. ಮೊಟ್ಟ ಮೊದಲ ಬಾರಿಗೆ ಜಲಶಕ್ತಿಯ ಬಳಕೆ ಮಾಡಿದರು. ವಿಶ್ವೇಶ್ವರಯ್ಯ ನಂಥ ದೂರದೃಷ್ಟಿಯುಳ್ಳ ನಾಯಕರು ಅವರೊಂದಿಗೆ ಇದ್ದುದರ ಪರಿಣಾಮವಾಗಿ ನಮ್ಮಲ್ಲಿ ರಕ್ಷಣಾ ಕೈಗಾರಿಕೆಗಳು, ಬೃಹತ್ ಕೈಗಾರಿಕೆಗಳು, ಏರೋಸ್ಪೇಸ್ ತಂತ್ರಜ್ಞಾನ, ಹೆಚ್.ಎ.ಎ ಲ್, ಎನ್.ಎ. ಎಲ್, ಬಿ.ಹೆಚ್.ಇ. ಎಲ್ ಮುಂತಾದ ಪ್ರಮುಖ ಕೈಗಾರಿಕೆಗಳು ಇವೆ ಎಂದರು.

ಕರ್ನಾಟಕ ಜ್ಞಾನ, ತಂತ್ರಜ್ಞಾನದ ಭಂಡಾರ:
ಕರ್ನಾಟಕ ಮೊದಲಿನಿಂದಲೂ ಇಲೆಕ್ಟ್ರಾನಿಕ್​​ನಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯ. ಇಲೆಕ್ಟ್ರಾನಿಕ್ ಯಂತ್ರೋಪಕರಣ, ಉತ್ಪಾದನೆ, ಇಂಜಿನಿಯರ್​ಗಳು ಲಭ್ಯವಿದ್ದದ್ದು, ಕಂಪ್ಯೂಟರ್ ಸೈನ್ಸ್​ಗೆ ದಾರಿ ಮಾಡಿಕೊಟ್ಟಿತು. ಹಾಗಾಗಿ ಕರ್ನಾಟಕ ಜ್ಞಾನ, ತಂತ್ರಜ್ಞಾನದ ಭಂಡಾರ. ಅಕ್ಷರ, ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನವಿರುವುದರಿಂದ ಐ.ಟಿ ಬಿಟಿಯಲ್ಲಿಯೂ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ದೇಶದ ಪ್ರಥಮ ಐ.ಟಿ ಕಂಪನಿ ಬೆಂಗಳೂರಲ್ಲಿ ಪ್ರಾರಂಭವಾಯಿತು. ತಂತ್ರಜ್ಞಾನ ಮತ್ತು ಕೌಶಲ್ಯ ನಮ್ಮಲ್ಲಿದ್ದು, ಇಲ್ಲಿನ ವಾತಾವರಣ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಕೈಗಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಎಲ್ಲಾ ಪ್ರಥಮ ಇಂಜಿನಿಯರ್​​ಗಳನ್ನು ಸ್ಮರಿದ ಮುಖ್ಯಮಂತ್ರಿಗಳು, ಕೆಲವು ದಶಕಗಳ ನಂತರ ಅನಂತ ಅವಕಾಶಗಳನ್ನು ಬಳಸಿಕೊಂಡು ಸಾಧನೆಗೈದ ಇಂಜಿನಿಯರ್​ಗಳನ್ನು ಇಲ್ಲಿಯೇ ಸ್ಮರಿಸುವಂತಾಗಬೇಕು ಎಂದು ಆಶಿಸಿದರು.

(ಇದನ್ನೂ ಓದಿ: ಇಂಜಿನಿಯರಿಂಗ್ ಪರೀಕ್ಷೆ ಬರೆದ ನಕಲಿ ಹಾಗೂ ಅಸಲಿ ವಿದ್ಯಾರ್ಥಿಗೆ 6 ತಿಂಗಳ ಜೈಲು ಶಿಕ್ಷೆ!)

ಬೆಂಗಳೂರು: 2024-25ರ ವೇಳೆಗೆ 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ಸಾಧಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದು, ಇದರ 1/3 ಭಾಗದಷ್ಟು ಕೊಡುಗೆ ಕರ್ನಾಟಕದಿಂದ ಆಗಬೇಕು. ಅದು ನನ್ನ ಗುರಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಖಾಸಗಿ ಹೊಟೇಲ್​​ನಲ್ಲಿ ಡಬ್ಲ್ಯೂ.ಎಂ.ಜಿ ಗ್ರೂಪ್ ಆಯೋಜಿಸಿದ್ದ ಕರ್ನಾಟಕ-ಇನ್ಫೈನೈಟ್ ಅಪಾರ್ಚುನಿಟೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದನ್ನು ಸಾಧಿಸಲು ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡಲು ತಾವು ಸಿದ್ದರಿದ್ದೇವೆ. ನವ ಕರ್ನಾಟಕದಿಂದ ನವ ಭಾರತವನ್ನು ಕಟ್ಟಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬರೂ ಸಾಧಕರಾಗಬೇಕೆನ್ನುವುದು ನಮ್ಮ ಗುರಿ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರಿಗೂ ಅವಕಾಶಗಳ ಒದಗಿಸುವ ಹೊಸ ಭಾರತದ ಬಗ್ಗೆ ಕನಸು ಕಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ವಿಶ್ವವನ್ನು ಭಾರತ ಮುನ್ನಡೆಸುವಂತಾಗಬೇಕು. ಕರ್ನಾಟಕ ಸರ್ಕಾರ ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರೊಂದಿಗೆ ಹೆಜ್ಜೆಯಿಡಲು ಸಿದ್ಧವಿದೆ. ಅವರು ಯಶಸ್ವಿಯಾಗಲು ಮಾತ್ರವಲ್ಲದೇ ಸಾಧನೆ ಮಾಡಲೂ ಹೆಗಲಿಗೆ ಹೆಗಲು ನೀಡುವುದುದಾಗಿ ಭರವಸೆ ನೀಡಿದರು.

ಮಹಿಳಾ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಶಕ್ತಿ, ಪ್ರಾಮಾಣಿಕತೆ ಮಹಿಳೆಯರಿಗೆ ಸಹಜವಾಗಿಯೇ ಬಂದಿರುವ ಗುಣಗಳು. ಈ ಮೂಲಭೂತ ಗುಣಗಳೇ ಒಂದು ರಾಜ್ಯ, ಸಮಾಜ ಹಾಗೂ ವ್ಯಕ್ತಿಯ ಅನಂತ ಬೆಳವಣಿಗೆಗೆ ಪೂರಕವಾಗಿವೆ. ಅನಂತ ಅವಕಾಶಗಳನ್ನು ಹುಡುಕಲು ಸೀಮಿತ ಅಂಶಗಳನ್ನು ಪರಿಶೀಲಿಸಬೇಕು. ಕರ್ನಾಟಕದಲ್ಲಿ ಅನಂತ ಅವಕಾಶಗಳಿದ್ದು, ಖಚಿತವಾದ ರಹದಾರಿಯನ್ನು ಹಾಗೂ ಅನುಷ್ಠಾನ ತಂತ್ರಗಳು ನಮ್ಮಲ್ಲಿವೆ. ಕರ್ನಾಟಕಕ್ಕೆ ಬಂದರೆ ಬೇಕಾದದ್ದು ಮಾತ್ರವಲ್ಲದೆ ಅವರ ನಿರೀಕ್ಷೆಗೂ ಮೀರಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಕರ್ನಾಟಕಕ್ಕೆ ತನ್ನದೇ ಇತಿಹಾಸವಿದೆ. ಈ ರಾಜ್ಯದ ಪ್ರತಿ ವ್ಯಕ್ತಿಯೂ ಈ ಚರಿತ್ರೆಯ ಫಲಾನುಭವಿಗಳೇ ಆಗಿದ್ದಾರೆ. ಮೈಸೂರು ಮಹಾರಾಜರು ದೂರದೃಷ್ಟಿ ಹೊಂದಿದ್ದ ಅತ್ಯಂತ ಪ್ರಗತಿಶೀಲ ರಾಜರಾಗಿದ್ದರು. ಮಹಿಳೆಯರಿಗೆ ಪ್ರತ್ಯೇಕ ಕಾಲೇಜು, ಬ್ಯಾಂಕ್ ಸ್ಥಾಪನೆ ಸೇರಿದಂತೆ ಶಾಹಿಯಿಂದ ಮೊದಲುಗೊಂಡು ಸ್ಟೀಲ್, ಸಾಬೂನು, ಕಾಗದದವರೆಗೆ ಕೈಗಾರಿಕೆಗಳ ಸ್ಥಾಪನೆ ಮಾಡಿದ ಪ್ರಥಮ ವ್ಯಕ್ತಿ ಅವರು. ಮೊಟ್ಟ ಮೊದಲ ಬಾರಿಗೆ ಜಲಶಕ್ತಿಯ ಬಳಕೆ ಮಾಡಿದರು. ವಿಶ್ವೇಶ್ವರಯ್ಯ ನಂಥ ದೂರದೃಷ್ಟಿಯುಳ್ಳ ನಾಯಕರು ಅವರೊಂದಿಗೆ ಇದ್ದುದರ ಪರಿಣಾಮವಾಗಿ ನಮ್ಮಲ್ಲಿ ರಕ್ಷಣಾ ಕೈಗಾರಿಕೆಗಳು, ಬೃಹತ್ ಕೈಗಾರಿಕೆಗಳು, ಏರೋಸ್ಪೇಸ್ ತಂತ್ರಜ್ಞಾನ, ಹೆಚ್.ಎ.ಎ ಲ್, ಎನ್.ಎ. ಎಲ್, ಬಿ.ಹೆಚ್.ಇ. ಎಲ್ ಮುಂತಾದ ಪ್ರಮುಖ ಕೈಗಾರಿಕೆಗಳು ಇವೆ ಎಂದರು.

ಕರ್ನಾಟಕ ಜ್ಞಾನ, ತಂತ್ರಜ್ಞಾನದ ಭಂಡಾರ:
ಕರ್ನಾಟಕ ಮೊದಲಿನಿಂದಲೂ ಇಲೆಕ್ಟ್ರಾನಿಕ್​​ನಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯ. ಇಲೆಕ್ಟ್ರಾನಿಕ್ ಯಂತ್ರೋಪಕರಣ, ಉತ್ಪಾದನೆ, ಇಂಜಿನಿಯರ್​ಗಳು ಲಭ್ಯವಿದ್ದದ್ದು, ಕಂಪ್ಯೂಟರ್ ಸೈನ್ಸ್​ಗೆ ದಾರಿ ಮಾಡಿಕೊಟ್ಟಿತು. ಹಾಗಾಗಿ ಕರ್ನಾಟಕ ಜ್ಞಾನ, ತಂತ್ರಜ್ಞಾನದ ಭಂಡಾರ. ಅಕ್ಷರ, ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನವಿರುವುದರಿಂದ ಐ.ಟಿ ಬಿಟಿಯಲ್ಲಿಯೂ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ದೇಶದ ಪ್ರಥಮ ಐ.ಟಿ ಕಂಪನಿ ಬೆಂಗಳೂರಲ್ಲಿ ಪ್ರಾರಂಭವಾಯಿತು. ತಂತ್ರಜ್ಞಾನ ಮತ್ತು ಕೌಶಲ್ಯ ನಮ್ಮಲ್ಲಿದ್ದು, ಇಲ್ಲಿನ ವಾತಾವರಣ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಕೈಗಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಎಲ್ಲಾ ಪ್ರಥಮ ಇಂಜಿನಿಯರ್​​ಗಳನ್ನು ಸ್ಮರಿದ ಮುಖ್ಯಮಂತ್ರಿಗಳು, ಕೆಲವು ದಶಕಗಳ ನಂತರ ಅನಂತ ಅವಕಾಶಗಳನ್ನು ಬಳಸಿಕೊಂಡು ಸಾಧನೆಗೈದ ಇಂಜಿನಿಯರ್​ಗಳನ್ನು ಇಲ್ಲಿಯೇ ಸ್ಮರಿಸುವಂತಾಗಬೇಕು ಎಂದು ಆಶಿಸಿದರು.

(ಇದನ್ನೂ ಓದಿ: ಇಂಜಿನಿಯರಿಂಗ್ ಪರೀಕ್ಷೆ ಬರೆದ ನಕಲಿ ಹಾಗೂ ಅಸಲಿ ವಿದ್ಯಾರ್ಥಿಗೆ 6 ತಿಂಗಳ ಜೈಲು ಶಿಕ್ಷೆ!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.