ETV Bharat / city

ರಾಜ್ಯದಲ್ಲಿಂದು 5532 ಪಾಸಿಟಿವ್ ಕೇಸ್.. 84 ಮಂದಿ ಸಾವು, 2 ಲಕ್ಷ ದಾಟಿದ ಕ್ವಾರಂಟೈನಿಗಳ ಸಂಖ್ಯೆ

author img

By

Published : Aug 2, 2020, 8:06 PM IST

ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು, ಬೆಂಗಳೂರಿನಲ್ಲಿ ಸ್ಮಶಾನಕ್ಕೆ ಜಿಲ್ಲಾಡಳಿತವು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ 23 ಎಕರೆ ಗುರುತಿಸಿದೆ. ಸ್ಮಶಾನಗಳು ತುಂಬಿ ಹೋಗಿರುವ ಹಿನ್ನೆಲೆ ಅಂತ್ಯಕ್ರಿಯೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ..

karnataka-covid-19-report
ಕೊರೊನಾ ವರದಿ

ಬೆಂಗಳೂರು : ರಾಜ್ಯದಲ್ಲಿಂದು 5532 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿದೆ.

24‌ಗಂಟೆಯಲ್ಲಿ 84 ಮಂದಿ ಬಲಿಯಾಗಿದ್ದಾರೆ. ಈವರೆಗಿನ ಮೃತರ ಸಂಖ್ಯೆ 2496. 57,725 ಮಂದಿ ಗುಣಮುಖರಾಗಿದ್ದು, 74,590 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 638 ತೀವ್ರ ನಿಗಾ ಘಟಕದಲ್ಲಿದ್ದಾರೆ. ರಾಜ್ಯದಲ್ಲಿ ಕ್ವಾರಂಟೈನ್​​ನಲ್ಲಿರುವವರ ಸಂಖ್ಯೆ 2 ಲಕ್ಷ ದಾಟಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಸಂಪರ್ಕಿತರು 1,18,631 ದ್ವಿತೀಯ ಸಂಪರ್ಕಿತರು 1,06,741 ಮಂದಿ ಇದ್ದಾರೆ. 2,25,372 ಮಂದಿ ನಿಗಾವಣೆಯಲ್ಲಿದ್ದಾರೆ.

Karnataka covid-19 report
ಕೊರೊನಾ ವರದಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ 23 ಎಕರೆ ಗುರುತಿಸಿದ ಜಿಲ್ಲಾಡಳಿತ

ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು, ಬೆಂಗಳೂರಿನಲ್ಲಿ ಸ್ಮಶಾನಕ್ಕೆ ಜಿಲ್ಲಾಡಳಿತವು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ 23 ಎಕರೆ ಗುರುತಿಸಿದೆ. ಸ್ಮಶಾನಗಳು ತುಂಬಿ ಹೋಗಿರುವ ಹಿನ್ನೆಲೆ ಅಂತ್ಯಕ್ರಿಯೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಕೊರೊನಾ‌ ಸೋಂಕಿತರನ್ನ ಸುಡಲು 4 ಚಿತಾಗಾರಗಳನ್ನ ಮೀಸಲಿಟ್ಟಿರುವ ಪಾಲಿಕೆ, ಯಾವುದೇ ತೊಂದರೆ ಆಗಬಾರದು ಅಂತಾ 23 ಎಕರೆ 1 ಗುಂಟೆ ಜಾಗ ಗುರುತಿಸಿದೆ. ಸಾರ್ವಜನಿಕ ಸ್ಮಶಾನಕ್ಕಾಗಿ ಗುರುತಿಸಿರುವ ಸರ್ಕಾರಿ ಜಮೀನು ಪಟ್ಟಿ ಇಂತಿದೆ.

  • ಬೆಂಗಳೂರು ಉತ್ತರದ ಗಿಡ್ಡೆಹಳ್ಳಿ ಗ್ರಾಂ ಸರ್ವೆ ನಂಬರ್ 80 ರಲ್ಲಿ 4 ಎಕರೆ
  • ಅಗ್ರಹಾರ ಪಾಳ್ಯ ಗ್ರಾಮ ಸರ್ವೇ ನಂ 29 ರಲ್ಲಿ 3 ಎಕರೆ
  • ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಉತ್ತರಹಳ್ಳಿ ಹೋಬಳಿ ಗುಳಿಕಮಲೆ ಗ್ರಾಮ ಸವೇ ನಂ 35 ರಲ್ಲಿ 4 ಎಕರೆ
  • ಆನೇಕಲ್ ಜಿಗುಣಿ ಹೋಬಳಿಯಲ್ಲಿ ಗಿಡ್ಡೆನಹಳ್ಳಿ ಗ್ರಾಮದ ಸರ್ವೇ ನಂಬರ್ 23 ರಲ್ಲಿ 3 ಎಕರೆ
  • ಸರ್ಜಾಪುರ ಹೋಬಳಿ - ಇಟ್ಟಂಗೂರು ಗ್ರಾಂ ಸರ್ವೆ ನಂ 13ರಲ್ಲಿ 3 ಎಕರೆ 39 ಗುಂಟೆ
  • ಯಲಹಂಕ ತಾಲೂಕು ಕುದುರೆಗೆರೆ ಗ್ರಾಮದಲ್ಲಿ1.20 ಎಕರೆ
  • ಮಾರೇನಹಳ್ಳಿ ಬಳಿ12 ಗುಂಟೆ
  • ಬೋಯಿಲಹಳ್ಳಿ ಗ್ರಾಮ 1 ಎಕರೆ

ಒಟ್ಟು 23 ಎಕರೆ 1 ಗುಂಟೆ ಜಾಗ ಸ್ಮಶಾನಕ್ಕೆ ಮೀಸಲಿಡಲಾಗಿದೆ. ಕೊರೊನಾ‌ದಿಂದ ಮೃತಪಟ್ಟರು ಮತ್ತು ಇತರೆ ಮೃತವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಲಾಗುತ್ತೆ. ಉಳಿದ 12 ಎಕರೆ 17 ಗುಂಟೆ ಎಕರೆ ಜಾಗ ಶೀಘ್ರವೇ ಗುರುತಿಸಲಾಗ್ತಿದೆ.

ಹೋಮ್​​ ಐಸೋಲೇಶನ್ ಮೊರೆ : ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ. ಈ ತಿಂಗಳಲ್ಲಿ ಹೆಚ್ಚು ಕೊರೊನಾ ಕೇಸ್ ಪತ್ತೆಯಾದ್ರೆ ಹೋಮ್​​ ಐಸೋಲೇಷನ್​ಗೆ ಒತ್ತು ನೀಡಲು ಪಾಲಿಕೆ ಮುಂದಾಗಿದೆ. ಅಲ್ಲದೆ ಇನ್ಮುಂದೆ ಕೊರೊನಾ ಬಂದರೆ ಶೇ. 40- 50ರಷ್ಟು ಮಂದಿಯನ್ನು ಹೋಮ್​ ಐಸೋಲೇಷನ್​ನಲ್ಲಿ ಸೇರಿಸಲು ಪಾಲಿಕೆ ಪ್ಲಾನ್ ಮಾಡುತ್ತಿದೆ. ಈಗಾಗಲೇ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿಂದು 5532 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿದೆ.

24‌ಗಂಟೆಯಲ್ಲಿ 84 ಮಂದಿ ಬಲಿಯಾಗಿದ್ದಾರೆ. ಈವರೆಗಿನ ಮೃತರ ಸಂಖ್ಯೆ 2496. 57,725 ಮಂದಿ ಗುಣಮುಖರಾಗಿದ್ದು, 74,590 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 638 ತೀವ್ರ ನಿಗಾ ಘಟಕದಲ್ಲಿದ್ದಾರೆ. ರಾಜ್ಯದಲ್ಲಿ ಕ್ವಾರಂಟೈನ್​​ನಲ್ಲಿರುವವರ ಸಂಖ್ಯೆ 2 ಲಕ್ಷ ದಾಟಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಸಂಪರ್ಕಿತರು 1,18,631 ದ್ವಿತೀಯ ಸಂಪರ್ಕಿತರು 1,06,741 ಮಂದಿ ಇದ್ದಾರೆ. 2,25,372 ಮಂದಿ ನಿಗಾವಣೆಯಲ್ಲಿದ್ದಾರೆ.

Karnataka covid-19 report
ಕೊರೊನಾ ವರದಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ 23 ಎಕರೆ ಗುರುತಿಸಿದ ಜಿಲ್ಲಾಡಳಿತ

ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು, ಬೆಂಗಳೂರಿನಲ್ಲಿ ಸ್ಮಶಾನಕ್ಕೆ ಜಿಲ್ಲಾಡಳಿತವು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ 23 ಎಕರೆ ಗುರುತಿಸಿದೆ. ಸ್ಮಶಾನಗಳು ತುಂಬಿ ಹೋಗಿರುವ ಹಿನ್ನೆಲೆ ಅಂತ್ಯಕ್ರಿಯೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಕೊರೊನಾ‌ ಸೋಂಕಿತರನ್ನ ಸುಡಲು 4 ಚಿತಾಗಾರಗಳನ್ನ ಮೀಸಲಿಟ್ಟಿರುವ ಪಾಲಿಕೆ, ಯಾವುದೇ ತೊಂದರೆ ಆಗಬಾರದು ಅಂತಾ 23 ಎಕರೆ 1 ಗುಂಟೆ ಜಾಗ ಗುರುತಿಸಿದೆ. ಸಾರ್ವಜನಿಕ ಸ್ಮಶಾನಕ್ಕಾಗಿ ಗುರುತಿಸಿರುವ ಸರ್ಕಾರಿ ಜಮೀನು ಪಟ್ಟಿ ಇಂತಿದೆ.

  • ಬೆಂಗಳೂರು ಉತ್ತರದ ಗಿಡ್ಡೆಹಳ್ಳಿ ಗ್ರಾಂ ಸರ್ವೆ ನಂಬರ್ 80 ರಲ್ಲಿ 4 ಎಕರೆ
  • ಅಗ್ರಹಾರ ಪಾಳ್ಯ ಗ್ರಾಮ ಸರ್ವೇ ನಂ 29 ರಲ್ಲಿ 3 ಎಕರೆ
  • ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಉತ್ತರಹಳ್ಳಿ ಹೋಬಳಿ ಗುಳಿಕಮಲೆ ಗ್ರಾಮ ಸವೇ ನಂ 35 ರಲ್ಲಿ 4 ಎಕರೆ
  • ಆನೇಕಲ್ ಜಿಗುಣಿ ಹೋಬಳಿಯಲ್ಲಿ ಗಿಡ್ಡೆನಹಳ್ಳಿ ಗ್ರಾಮದ ಸರ್ವೇ ನಂಬರ್ 23 ರಲ್ಲಿ 3 ಎಕರೆ
  • ಸರ್ಜಾಪುರ ಹೋಬಳಿ - ಇಟ್ಟಂಗೂರು ಗ್ರಾಂ ಸರ್ವೆ ನಂ 13ರಲ್ಲಿ 3 ಎಕರೆ 39 ಗುಂಟೆ
  • ಯಲಹಂಕ ತಾಲೂಕು ಕುದುರೆಗೆರೆ ಗ್ರಾಮದಲ್ಲಿ1.20 ಎಕರೆ
  • ಮಾರೇನಹಳ್ಳಿ ಬಳಿ12 ಗುಂಟೆ
  • ಬೋಯಿಲಹಳ್ಳಿ ಗ್ರಾಮ 1 ಎಕರೆ

ಒಟ್ಟು 23 ಎಕರೆ 1 ಗುಂಟೆ ಜಾಗ ಸ್ಮಶಾನಕ್ಕೆ ಮೀಸಲಿಡಲಾಗಿದೆ. ಕೊರೊನಾ‌ದಿಂದ ಮೃತಪಟ್ಟರು ಮತ್ತು ಇತರೆ ಮೃತವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಲಾಗುತ್ತೆ. ಉಳಿದ 12 ಎಕರೆ 17 ಗುಂಟೆ ಎಕರೆ ಜಾಗ ಶೀಘ್ರವೇ ಗುರುತಿಸಲಾಗ್ತಿದೆ.

ಹೋಮ್​​ ಐಸೋಲೇಶನ್ ಮೊರೆ : ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ. ಈ ತಿಂಗಳಲ್ಲಿ ಹೆಚ್ಚು ಕೊರೊನಾ ಕೇಸ್ ಪತ್ತೆಯಾದ್ರೆ ಹೋಮ್​​ ಐಸೋಲೇಷನ್​ಗೆ ಒತ್ತು ನೀಡಲು ಪಾಲಿಕೆ ಮುಂದಾಗಿದೆ. ಅಲ್ಲದೆ ಇನ್ಮುಂದೆ ಕೊರೊನಾ ಬಂದರೆ ಶೇ. 40- 50ರಷ್ಟು ಮಂದಿಯನ್ನು ಹೋಮ್​ ಐಸೋಲೇಷನ್​ನಲ್ಲಿ ಸೇರಿಸಲು ಪಾಲಿಕೆ ಪ್ಲಾನ್ ಮಾಡುತ್ತಿದೆ. ಈಗಾಗಲೇ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.