ETV Bharat / city

ದೇಶಾದ್ಯಂತ ಭವಿಷ್ಯ ನಿಧಿ ಖಾತೆಯಿಂದ ಜನರು ಹಿಂಪಡೆದ ಹಣವೆಷ್ಟು?

ಕೊರೊನಾ ಸಂಕಷ್ಟದ ಸಂದರ್ಭದಿಂದ ಪಾರಾಗಲು ದೇಶದಲ್ಲಿ ಪಿಂಚಣಿದಾರರು ಮತ್ತು ಉದ್ಯೋಗದಾತರು ತಮ್ಮ ಭವಿಷ್ಯನಿಧಿ ಖಾತೆಯಿಂದ 4,684.52 ಕೋಟಿ ರೂಪಾಯಿ ಪಿಎಫ್​ ಹಣ ಪಡೆದಿದ್ದಾರೆ. ಹಾಗೆಯೇ ಕೆಲವರ ಖಾತೆಗಳನ್ನು ಮುಚ್ಚಲಾಗಿದೆ.

author img

By

Published : Aug 28, 2020, 8:06 PM IST

money
ಹಣ

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್‌ಡೌನ್ ಘೊಷಿಸಿರುವ ಹಿನ್ನೆಲೆಯಲ್ಲಿ ಹಲವು ಉದ್ಯೋಗಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥವರಿಗೆ ನೆರವಾಗಲೆಂದು ಕೇಂದ್ರ ಸರ್ಕಾರವು ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಸದಸ್ಯರಿಗೆ ಹಣ ಹಿಂಪಡೆಯಲು ಇದ್ದ ನಿಯಮಗಳನ್ನು ಸಡಿಲಿಸಿತ್ತು. ಉದ್ಯೋಗಿಗಳು ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೂರು ತಿಂಗಳ ಮೊತ್ತದಷ್ಟು ಅಥವಾ ಭವಿಷ್ಯ ನಿಧಿಯ ತಮ್ಮ ಖಾತೆಯಲ್ಲಿ ಸಂಗ್ರಹವಾಗಿರುವ ಹಣದ ಶೇ.75ರಷ್ಟು ಹಣವನ್ನು ಹಿಂಪಡೆಯಲು ಅವಕಾಶ ನೀಡಿತ್ತು. ಅದರಲ್ಲಿ ಎಷ್ಟು ಮಂದಿ ಹಣವನ್ನು ಹಿಂಪಡೆದರು ಮತ್ತು ರಾಜ್ಯದಲ್ಲಿ ಎಷ್ಟು ಮಂದಿಯ ಖಾತೆಗಳು ಸ್ಥಗಿತಗೊಂಡಿವೆ ಎಂಬುದನ್ನು ಈ ಮೂಲಕ ತಿಳಿಯೋಣ...

ಆರ್ಥಿಕ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ಬಹುಸಂಖ್ಯಾತ ನೌಕರರಿಗೆ ಭವಿಷ್ಯ ನಿಧಿಯೇ ಆಸರೆ. ಕೊರೊನಾಪ್ರೇರಿತ ಲಾಕ್​ಡೌನ್​ನಿಂದಾಗಿ ಜನರ ಕೈಯಲ್ಲಿ ಹಣ ಓಡಾಡಿದ್ದೇ ಕಡಿಮೆ. ಆಗ ತುರ್ತು ಹಣದ ಅವಶ್ಯಕತೆಗಾಗಿ ಎಷ್ಟೋ ಮಂದಿ ಪರದಾಡಿದ್ರು. ಆ ಸಂದರ್ಭದಲ್ಲಿ ಮೊದಲಿದ್ದ ನಿಯಮಗಳನ್ನು ಸಡಿಲಿಸಿ ಪಿಎಫ್​ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿತು. ಸಂಕಷ್ಟದ ಸಂದರ್ಭದಿಂದ ಪಾರಾಗಲು ದೇಶದಲ್ಲಿ ಪಿಂಚಣಿದಾರರು ಮತ್ತು ಉದ್ಯೋಗದಾತರು ತಮ್ಮ ಭವಿಷ್ಯನಿಧಿ ಖಾತೆಯಿಂದ 4,684.52 ಕೋಟಿ ರೂಪಾಯಿ ಪಿಎಫ್​ ಹಣ ಪಡೆದಿದ್ದಾರೆ. ಹಾಗೆಯೇ ಕೆಲವರ ಖಾತೆಗಳನ್ನು ಮುಚ್ಚಲಾಗಿದೆ.

ಪಿಎಫ್​ ಖಾತೆಯಿಂದ ಹಿಂಪಡೆದ ಹಣವೆಷ್ಟು?

ಲಾಕ್​ಡೌನ್ ಇದ್ದ ಕಾರಣ ಕೋವಿಡ್ ಕ್ಲೈಮ್​​​ನಡಿ ಕರ್ನಾಟಕದಲ್ಲಿ 11,193 ಖಾತೆಗಳು, ದೇಶದಲ್ಲಿ 7.40 ಲಕ್ಷ ಖಾತೆದಾರರು 2,367.65 ಕೋಟಿ ರೂ ಮೊತ್ತವನ್ನು ಹಿಂಪಡೆದಿದ್ದಾರೆ. ಈ ಮೂಲಕ ಅವರ ಖಾತೆಗಳು ಸ್ಥಗಿತಗೊಂಡಿವೆ. ಮೊದಲೆರಡು ತಿಂಗಳ ಲಾಕ್​ಡೌನ್​ ಅವಧಿಯಲ್ಲಿ ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆಯಡಿ ದೇಶದಲ್ಲಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ 12.91 ಲಕ್ಷ ಸದಸ್ಯರಿಗೆ 4,684.52 ಕೋಟಿ ಹಣವನ್ನು ಜಮೆ ಆಗಿದೆ. ಇಪಿಎಫ್​ಒ ಹೇಳುವ ಪ್ರಕಾರ, ಮೇ ತಿಂಗಳಲ್ಲಿ ಖಾತೆಗಳ ಮುಚ್ಚುವಿಕೆ ಕಡಿಮೆಯಾಗಿದೆ. ಹೊಸ ಖಾತೆದಾರರ ಸಂಖ್ಯೆ ಶೇ.64ರಷ್ಟು ಏರಿಕೆ ಕಂಡಿದೆ.

Employees' Provident Fund Organisation
ಕರ್ನಾಟಕದಲ್ಲಿ ಸ್ಥಗಿತಗೊಂಡ ಖಾತೆಗಳು

ಮೈಸೂರು ಜಿಲ್ಲೆಯಲ್ಲಿ ಏಪ್ರಿಲ್​​​1 ರಿಂದ ಜುಲೈ 31ರವರೆಗೂ ಕೋವಿಡ್ ಮತ್ತು ಇತರ​ ಕ್ಲೈಮ್​​ನಡಿಯಲ್ಲಿ 12,986 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಫಾರಂ-68 ಜೆ ಅಡಿಯಲ್ಲಿ 4,822 ಮಂದಿ, ಕೋವಿಡ್ ಸಂದರ್ಭದಲ್ಲಿ ಫಾರಂ-68ಎಲ್ ಅಡಿಯಲ್ಲಿ 7,232 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅಂದಾಜು 17.79 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಟ್ಟಿನಲ್ಲಿ, ಸಂಕಷ್ಟದ ಕಾಲದಲ್ಲಿ ಭವಿಷ್ಯ ನಿಧಿ ಹಣ ಜನರ ಉಪಯೋಗಕ್ಕೆ ಬಂದಿದೆ.

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್‌ಡೌನ್ ಘೊಷಿಸಿರುವ ಹಿನ್ನೆಲೆಯಲ್ಲಿ ಹಲವು ಉದ್ಯೋಗಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥವರಿಗೆ ನೆರವಾಗಲೆಂದು ಕೇಂದ್ರ ಸರ್ಕಾರವು ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಸದಸ್ಯರಿಗೆ ಹಣ ಹಿಂಪಡೆಯಲು ಇದ್ದ ನಿಯಮಗಳನ್ನು ಸಡಿಲಿಸಿತ್ತು. ಉದ್ಯೋಗಿಗಳು ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೂರು ತಿಂಗಳ ಮೊತ್ತದಷ್ಟು ಅಥವಾ ಭವಿಷ್ಯ ನಿಧಿಯ ತಮ್ಮ ಖಾತೆಯಲ್ಲಿ ಸಂಗ್ರಹವಾಗಿರುವ ಹಣದ ಶೇ.75ರಷ್ಟು ಹಣವನ್ನು ಹಿಂಪಡೆಯಲು ಅವಕಾಶ ನೀಡಿತ್ತು. ಅದರಲ್ಲಿ ಎಷ್ಟು ಮಂದಿ ಹಣವನ್ನು ಹಿಂಪಡೆದರು ಮತ್ತು ರಾಜ್ಯದಲ್ಲಿ ಎಷ್ಟು ಮಂದಿಯ ಖಾತೆಗಳು ಸ್ಥಗಿತಗೊಂಡಿವೆ ಎಂಬುದನ್ನು ಈ ಮೂಲಕ ತಿಳಿಯೋಣ...

ಆರ್ಥಿಕ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ಬಹುಸಂಖ್ಯಾತ ನೌಕರರಿಗೆ ಭವಿಷ್ಯ ನಿಧಿಯೇ ಆಸರೆ. ಕೊರೊನಾಪ್ರೇರಿತ ಲಾಕ್​ಡೌನ್​ನಿಂದಾಗಿ ಜನರ ಕೈಯಲ್ಲಿ ಹಣ ಓಡಾಡಿದ್ದೇ ಕಡಿಮೆ. ಆಗ ತುರ್ತು ಹಣದ ಅವಶ್ಯಕತೆಗಾಗಿ ಎಷ್ಟೋ ಮಂದಿ ಪರದಾಡಿದ್ರು. ಆ ಸಂದರ್ಭದಲ್ಲಿ ಮೊದಲಿದ್ದ ನಿಯಮಗಳನ್ನು ಸಡಿಲಿಸಿ ಪಿಎಫ್​ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿತು. ಸಂಕಷ್ಟದ ಸಂದರ್ಭದಿಂದ ಪಾರಾಗಲು ದೇಶದಲ್ಲಿ ಪಿಂಚಣಿದಾರರು ಮತ್ತು ಉದ್ಯೋಗದಾತರು ತಮ್ಮ ಭವಿಷ್ಯನಿಧಿ ಖಾತೆಯಿಂದ 4,684.52 ಕೋಟಿ ರೂಪಾಯಿ ಪಿಎಫ್​ ಹಣ ಪಡೆದಿದ್ದಾರೆ. ಹಾಗೆಯೇ ಕೆಲವರ ಖಾತೆಗಳನ್ನು ಮುಚ್ಚಲಾಗಿದೆ.

ಪಿಎಫ್​ ಖಾತೆಯಿಂದ ಹಿಂಪಡೆದ ಹಣವೆಷ್ಟು?

ಲಾಕ್​ಡೌನ್ ಇದ್ದ ಕಾರಣ ಕೋವಿಡ್ ಕ್ಲೈಮ್​​​ನಡಿ ಕರ್ನಾಟಕದಲ್ಲಿ 11,193 ಖಾತೆಗಳು, ದೇಶದಲ್ಲಿ 7.40 ಲಕ್ಷ ಖಾತೆದಾರರು 2,367.65 ಕೋಟಿ ರೂ ಮೊತ್ತವನ್ನು ಹಿಂಪಡೆದಿದ್ದಾರೆ. ಈ ಮೂಲಕ ಅವರ ಖಾತೆಗಳು ಸ್ಥಗಿತಗೊಂಡಿವೆ. ಮೊದಲೆರಡು ತಿಂಗಳ ಲಾಕ್​ಡೌನ್​ ಅವಧಿಯಲ್ಲಿ ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆಯಡಿ ದೇಶದಲ್ಲಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ 12.91 ಲಕ್ಷ ಸದಸ್ಯರಿಗೆ 4,684.52 ಕೋಟಿ ಹಣವನ್ನು ಜಮೆ ಆಗಿದೆ. ಇಪಿಎಫ್​ಒ ಹೇಳುವ ಪ್ರಕಾರ, ಮೇ ತಿಂಗಳಲ್ಲಿ ಖಾತೆಗಳ ಮುಚ್ಚುವಿಕೆ ಕಡಿಮೆಯಾಗಿದೆ. ಹೊಸ ಖಾತೆದಾರರ ಸಂಖ್ಯೆ ಶೇ.64ರಷ್ಟು ಏರಿಕೆ ಕಂಡಿದೆ.

Employees' Provident Fund Organisation
ಕರ್ನಾಟಕದಲ್ಲಿ ಸ್ಥಗಿತಗೊಂಡ ಖಾತೆಗಳು

ಮೈಸೂರು ಜಿಲ್ಲೆಯಲ್ಲಿ ಏಪ್ರಿಲ್​​​1 ರಿಂದ ಜುಲೈ 31ರವರೆಗೂ ಕೋವಿಡ್ ಮತ್ತು ಇತರ​ ಕ್ಲೈಮ್​​ನಡಿಯಲ್ಲಿ 12,986 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಫಾರಂ-68 ಜೆ ಅಡಿಯಲ್ಲಿ 4,822 ಮಂದಿ, ಕೋವಿಡ್ ಸಂದರ್ಭದಲ್ಲಿ ಫಾರಂ-68ಎಲ್ ಅಡಿಯಲ್ಲಿ 7,232 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅಂದಾಜು 17.79 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಟ್ಟಿನಲ್ಲಿ, ಸಂಕಷ್ಟದ ಕಾಲದಲ್ಲಿ ಭವಿಷ್ಯ ನಿಧಿ ಹಣ ಜನರ ಉಪಯೋಗಕ್ಕೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.