ETV Bharat / city

ಲಾಕ್​ಡೌನ್​​ನಿಂದ ಹೋಟೆಲ್ ಉದ್ಯಮ ಅಧೋಗತಿಗೆ: ಪ್ಯಾಕೇಜ್​​ಗಾಗಿ ಮನವಿ - Hotel industry loss from lock down

ಸುಮಾರು 60-70 ಲಕ್ಷ ಹೋಟೆಲ್ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಹೋಟೆಲ್ ಕಾರ್ಮಿಕರ ಕುಟುಂಬಗಳು ಕಷ್ಟದಲ್ಲಿವೆ. ಅದಕ್ಕಾಗಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಪ್ರವಾಸೋದ್ಯಮ ಜಿಲ್ಲೆಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್, ಲಾಡ್ಜಿಂಗ್​ಗಳಿಗೆ ಯಾವುದೇ ರೀತಿಯ ವ್ಯಾಪಾರ ನಡೆದಿಲ್ಲ‌. ಈ ಟೂರಿಸಂ ವ್ಯಾಪ್ತಿಯವರಿಗೆ ವಿಶೇಷ ಪ್ಯಾಕೇಜ್ ನೀಡಬೇಕಿದೆ.

hotel-industry-in-loss-from-lockdown
ಹೋಟೆಲ್ ಉದ್ಯಮ ಮನವಿ
author img

By

Published : May 22, 2021, 5:00 PM IST

ಬೆಂಗಳೂರು: ಲಾಕ್​​ಡೌನ್​ನಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಆಸ್ತಿ ತೆರಿಗೆ, ಬೆಸ್ಕಾಂ, ಜಲಮಂಡಳಿ ಬಿಲ್, ಅಬಕಾರಿ ಲೈಸೆನ್ಸ್ ಸುಂಕ ರಿಯಾಯಿತಿ ಸೆರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಹೋಟೆಲ್​ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.

ಆಸ್ತಿ ತೆರಿಗೆಗೆ ಒಂದು ವರ್ಷ ವಿನಾಯಿತಿ, ಮೂರು ತಿಂಗಳು ಜಲಮಂಡಳಿ ಬಿಲ್​ ಮನ್ನಾ, ಬಾರ್ ಆಂಡ್ ರೆಸ್ಟೋರೆಂಟ್​ಗಳ ಅಬಕಾರಿ ಲೈಸೆನ್ಸ್ ಸುಂಕ ವರ್ಷಕ್ಕೆ ಹತ್ತು ಲಕ್ಷ ಬರುತ್ತಿದ್ದು, ಕಳೆದ ವರ್ಷವೂ ಬಂದ್ ಇದ್ದರೂ ರಿಯಾಯಿತಿ ಸಿಕ್ಕಿಲ್ಲ‌. ಜೂನ್​ನಲ್ಲಿ ಲೈಸೆನ್ಸ್ ಶುಲ್ಕ ಮತ್ತೆ ಕಟ್ಟಲಿದ್ದು, ಕನಿಷ್ಠ ಆರು ತಿಂಗಳ ಲೈಸೆನ್ಸ್ ಶುಲ್ಕ ವಿನಾಯಿತಿ ಬೇಕೆಂದು ಮನವಿ ಸಂಘ ಮನವಿ ಮಾಡಿದೆ.

ಪ್ಯಾಕೇಜ್​ಗಾಗಿ ಹೋಟೆಲ್ ಉದ್ಯಮ ಮನವಿ

ಸುಮಾರು 60-70 ಲಕ್ಷ ಹೋಟೇಲ್ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಹೋಟೆಲ್ ಕಾರ್ಮಿಕರ ಕುಟುಂಬಗಳು ಕಷ್ಟದಲ್ಲಿವೆ. ಅದಕ್ಕಾಗಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಪ್ರವಾಸೋದ್ಯಮ ಜಿಲ್ಲೆಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್, ಲಾಡ್ಜಿಂಗ್​ಗಳಿಗೆ ಯಾವುದೇ ರೀತಿಯ ವ್ಯಾಪಾರ ನಡೆದಿಲ್ಲ‌. ಈ ಟೂರಿಸಂ ವ್ಯಾಪ್ತಿಯವರಿಗೆ ವಿಶೇಷ ಪ್ಯಾಕೇಜ್ ನೀಡಬೇಕಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ತಿಳಿಸಿದೆ.

ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ ಮಾತನಾಡಿ, ರಾಜ್ಯದ ಸುಮಾರು 1.50 ಲಕ್ಷಕ್ಕೂ ಅಧಿಕ ಹೋಟೆಲ್ ಮತ್ತು ರೆಸ್ಟೋರೆಂಟ್​​ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಕಳೆದ ಒಂದೂವರೇ ವರ್ಷದಿಂದ ವ್ಯಾಪಾರದಲ್ಲಿ ಚೇತರಿಕೆ ಕಾಣದೆ, ಸಾಲ ಮಾಡಿಕೊಂಡಿದ್ದಾರೆ. 30-40% ಮಾಲೀಕರು ತಮ್ಮ ಹೋಟೆಲ್, ಸಂಸ್ಥೆಯನ್ನು ಮುಚ್ಚಿ ದಿಕ್ಕು ಪಾಲಾಗಿದ್ದಾರೆ ಎಂದರು.

ಲಾಕ್ಡೌನ್ ವಿಸ್ತರಣೆಯಿಂದ ನಮ್ಮ ಪರಿಸ್ಥಿತಿ ಅಧೋಗತಿಯಾಗಿದೆ. ಬೇರೆಯವರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿರುವಂತೆ ಹೋಟೆಲ್​​ನವರಿಗೂ ಪ್ಯಾಕೇಜ್ ಸಿಗಲಿ. ಅದೇ ರೀತಿ ಈಗಾಗಲೇ ಕೊಟ್ಟಿರುವ ಮನವಿಗಳನ್ನು ಈಡೇರಿಸಲಿ ಎಂದರು.

ಬೆಂಗಳೂರು: ಲಾಕ್​​ಡೌನ್​ನಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಆಸ್ತಿ ತೆರಿಗೆ, ಬೆಸ್ಕಾಂ, ಜಲಮಂಡಳಿ ಬಿಲ್, ಅಬಕಾರಿ ಲೈಸೆನ್ಸ್ ಸುಂಕ ರಿಯಾಯಿತಿ ಸೆರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಹೋಟೆಲ್​ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.

ಆಸ್ತಿ ತೆರಿಗೆಗೆ ಒಂದು ವರ್ಷ ವಿನಾಯಿತಿ, ಮೂರು ತಿಂಗಳು ಜಲಮಂಡಳಿ ಬಿಲ್​ ಮನ್ನಾ, ಬಾರ್ ಆಂಡ್ ರೆಸ್ಟೋರೆಂಟ್​ಗಳ ಅಬಕಾರಿ ಲೈಸೆನ್ಸ್ ಸುಂಕ ವರ್ಷಕ್ಕೆ ಹತ್ತು ಲಕ್ಷ ಬರುತ್ತಿದ್ದು, ಕಳೆದ ವರ್ಷವೂ ಬಂದ್ ಇದ್ದರೂ ರಿಯಾಯಿತಿ ಸಿಕ್ಕಿಲ್ಲ‌. ಜೂನ್​ನಲ್ಲಿ ಲೈಸೆನ್ಸ್ ಶುಲ್ಕ ಮತ್ತೆ ಕಟ್ಟಲಿದ್ದು, ಕನಿಷ್ಠ ಆರು ತಿಂಗಳ ಲೈಸೆನ್ಸ್ ಶುಲ್ಕ ವಿನಾಯಿತಿ ಬೇಕೆಂದು ಮನವಿ ಸಂಘ ಮನವಿ ಮಾಡಿದೆ.

ಪ್ಯಾಕೇಜ್​ಗಾಗಿ ಹೋಟೆಲ್ ಉದ್ಯಮ ಮನವಿ

ಸುಮಾರು 60-70 ಲಕ್ಷ ಹೋಟೇಲ್ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಹೋಟೆಲ್ ಕಾರ್ಮಿಕರ ಕುಟುಂಬಗಳು ಕಷ್ಟದಲ್ಲಿವೆ. ಅದಕ್ಕಾಗಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಪ್ರವಾಸೋದ್ಯಮ ಜಿಲ್ಲೆಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್, ಲಾಡ್ಜಿಂಗ್​ಗಳಿಗೆ ಯಾವುದೇ ರೀತಿಯ ವ್ಯಾಪಾರ ನಡೆದಿಲ್ಲ‌. ಈ ಟೂರಿಸಂ ವ್ಯಾಪ್ತಿಯವರಿಗೆ ವಿಶೇಷ ಪ್ಯಾಕೇಜ್ ನೀಡಬೇಕಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ತಿಳಿಸಿದೆ.

ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ ಮಾತನಾಡಿ, ರಾಜ್ಯದ ಸುಮಾರು 1.50 ಲಕ್ಷಕ್ಕೂ ಅಧಿಕ ಹೋಟೆಲ್ ಮತ್ತು ರೆಸ್ಟೋರೆಂಟ್​​ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಕಳೆದ ಒಂದೂವರೇ ವರ್ಷದಿಂದ ವ್ಯಾಪಾರದಲ್ಲಿ ಚೇತರಿಕೆ ಕಾಣದೆ, ಸಾಲ ಮಾಡಿಕೊಂಡಿದ್ದಾರೆ. 30-40% ಮಾಲೀಕರು ತಮ್ಮ ಹೋಟೆಲ್, ಸಂಸ್ಥೆಯನ್ನು ಮುಚ್ಚಿ ದಿಕ್ಕು ಪಾಲಾಗಿದ್ದಾರೆ ಎಂದರು.

ಲಾಕ್ಡೌನ್ ವಿಸ್ತರಣೆಯಿಂದ ನಮ್ಮ ಪರಿಸ್ಥಿತಿ ಅಧೋಗತಿಯಾಗಿದೆ. ಬೇರೆಯವರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿರುವಂತೆ ಹೋಟೆಲ್​​ನವರಿಗೂ ಪ್ಯಾಕೇಜ್ ಸಿಗಲಿ. ಅದೇ ರೀತಿ ಈಗಾಗಲೇ ಕೊಟ್ಟಿರುವ ಮನವಿಗಳನ್ನು ಈಡೇರಿಸಲಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.