ETV Bharat / city

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ₹ 5 ಕೋಟಿ ಮೌಲ್ಯದ ವಸ್ತುಗಳು ವಶ

author img

By

Published : Oct 1, 2019, 8:37 PM IST

ಭರ್ಜರಿ ಕಾರ್ಯಾಚರಣೆ ನಡೆಸಿ ದರೋಡೆ, ಕಳ್ಳತನ, ಸರಗಳ್ಳತನ ಸೇರಿದಂತೆ 342 ಪ್ರಕರಣಗಳನ್ನು ಬೇಧಿಸಿರುವ ದಕ್ಷಿಣ ವಿಭಾಗ ಪೊಲೀಸರು, ಒಟ್ಟು 229 ಆರೋಪಿಗಳಿಂದ ₹ 5.17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

great-police-operation

ಬೆಂಗಳೂರು: ಭರ್ಜರಿ ಕಾರ್ಯಾಚರಣೆ ನಡೆಸಿ ದರೋಡೆ, ಕಳ್ಳತನ, ಸರಗಳ್ಳತನ ಸೇರಿದಂತೆ 342 ಪ್ರಕರಣಗಳನ್ನು ಬೇಧಿಸಿರುವ ದಕ್ಷಿಣ ವಿಭಾಗ ಪೊಲೀಸರು, ಒಟ್ಟು 229 ಆರೋಪಿಗಳಿಂದ ₹ 5.17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಪತ್ತೆಯಾದ ವಸ್ತುಗಳನ್ನು ಸಾರ್ವಜನಿಕರಿಗೆ ಹಿಂದಿರುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏನೇನು ಪತ್ತೆ: 8.7 ಕೆಜಿ ಚಿನ್ನ, 25 ಕೆಜಿ ಬೆಳ್ಳಿ, 155 ಮೂರು ಚಕ್ರದ ವಾಹನಗಳು, 10 ನಾಲ್ಕು ಚಕ್ರದ ವಾಹನಗಳು, 122 ಮೊಬೈಲ್, 54 ಲ್ಯಾಪ್​ಟಾಪ್ ಹಾಗೂ 23.85 ಲಕ್ಷ ನಗದು ಸೇರಿ ಒಟ್ಟು ₹ 5.17 ಕೋಟಿ ಮೌಲ್ಯದ ವಸ್ತಗಳನ್ನ ಜಪ್ತಿ ಮಾಡಿದ್ದಾರೆ.

ವಶಪಡಿಸಿಕೊಂಡಿರುವ ಮಾಲು

ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಕಟೋಚ್‌ ಸೆಫಟ್‌ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಕಾರ್ಯಾಚರಣೆ ನಡೆಸುವಂತೆ ಆದೇಶ ನೀಡಿದ್ದರು.

ವಶಪಡಿಸಿಕೊಂಡಿರುವ ಎಲ್ಲ ವಸ್ತುಗಳ ವಾರಸುದಾರರ ಪತ್ತೆ ಹಚ್ಚಿ ಪೊಲೀಸರು ನಗರ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಅವರಿಗೆ ವಸ್ತುಗಳನ್ನು ಮರಳಿಸಲಾಯಿತು. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ ಉತ್ತಮ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳಿಗೆ ಬಹುಮಾನ ನೀಡಲಾಯಿತು.

ಬೆಂಗಳೂರು: ಭರ್ಜರಿ ಕಾರ್ಯಾಚರಣೆ ನಡೆಸಿ ದರೋಡೆ, ಕಳ್ಳತನ, ಸರಗಳ್ಳತನ ಸೇರಿದಂತೆ 342 ಪ್ರಕರಣಗಳನ್ನು ಬೇಧಿಸಿರುವ ದಕ್ಷಿಣ ವಿಭಾಗ ಪೊಲೀಸರು, ಒಟ್ಟು 229 ಆರೋಪಿಗಳಿಂದ ₹ 5.17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಪತ್ತೆಯಾದ ವಸ್ತುಗಳನ್ನು ಸಾರ್ವಜನಿಕರಿಗೆ ಹಿಂದಿರುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏನೇನು ಪತ್ತೆ: 8.7 ಕೆಜಿ ಚಿನ್ನ, 25 ಕೆಜಿ ಬೆಳ್ಳಿ, 155 ಮೂರು ಚಕ್ರದ ವಾಹನಗಳು, 10 ನಾಲ್ಕು ಚಕ್ರದ ವಾಹನಗಳು, 122 ಮೊಬೈಲ್, 54 ಲ್ಯಾಪ್​ಟಾಪ್ ಹಾಗೂ 23.85 ಲಕ್ಷ ನಗದು ಸೇರಿ ಒಟ್ಟು ₹ 5.17 ಕೋಟಿ ಮೌಲ್ಯದ ವಸ್ತಗಳನ್ನ ಜಪ್ತಿ ಮಾಡಿದ್ದಾರೆ.

ವಶಪಡಿಸಿಕೊಂಡಿರುವ ಮಾಲು

ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಕಟೋಚ್‌ ಸೆಫಟ್‌ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಕಾರ್ಯಾಚರಣೆ ನಡೆಸುವಂತೆ ಆದೇಶ ನೀಡಿದ್ದರು.

ವಶಪಡಿಸಿಕೊಂಡಿರುವ ಎಲ್ಲ ವಸ್ತುಗಳ ವಾರಸುದಾರರ ಪತ್ತೆ ಹಚ್ಚಿ ಪೊಲೀಸರು ನಗರ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಅವರಿಗೆ ವಸ್ತುಗಳನ್ನು ಮರಳಿಸಲಾಯಿತು. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ ಉತ್ತಮ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳಿಗೆ ಬಹುಮಾನ ನೀಡಲಾಯಿತು.

Intro:ದಕ್ಷಿಣ ವಿಭಾಗ ಪೊಲೀಸ್ರು ಭರ್ಜರಿ ಕಾರ್ಯಚರಣೆ


ಬೆಂಗಳೂರು ದಕ್ಷಿಣ ವಿಭಾಗ ಪೊಲೀಸ್ರು ಭರ್ಜರಿ ಕಾರ್ಯಚರಣೆ ನಡೆಸಿ ಡಕಾಯಿತಿ , ರಾಬರಿ, ಚೈನ್ ಸ್ನಾಚಿಂಗ್ ಸೇರಿದಂತೆ ೩೪೨ ವಿವಿಧ ಪ್ರಕರಣಗಳ ಪತ್ತೆ ‌ಮಾಡಿ ೨೨೯ ಆರೋಪಿಗಳು ಹಾಗೆ
೮.೭ ಕೆಜಿ ಚಿನ್ನ, ೨೫ ಕೆಜಿ ಬೆಳ್ಳಿ, ೧೫೫ ಮೂರು ಚಕ್ರ ವಾಹನಗಳು, ೧೦ ನಾಲ್ಕು ಚಕ್ರ ವಾಹನಗಳು,೧೨೨ ಮೊಬೈಲ್, ೫೪ ಲ್ಯಾಪ್ ಟಾಪ್ , ಹಾಗೂ ೨೩ ಲಕ್ಷದ ೮೫ ಸಾವಿರ ಕ್ಯಾಶ್ ಸೇರಿ ಒಟ್ಟು ೫ ಕೋಟಿ ೧೭ ಲಕ್ಷ , ೪೩ ಸಾವಿರ ಮೌಲ್ಯದ ಮಾಲು ವಶ ಪಡಿಸುವಲ್ಕಿ ಯಶಸ್ವಿಯಾಗಿದ್ದಾರೆ

ಇನ್ನು ಈ ಕಾರ್ಯಚರಣೆಯನ್ನ ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆಯೋಜನೆ ಮಾಡಿದ್ದರು. ಹಾಗೆ ಪತ್ತೆಯಾದ ಮಾಲುಗಳನ್ನ ಸಾರ್ವಜನಿಕರಿಗೆ ಹಿಂದಿರುಗಿಸಿದ ಸಾವರ್ಜನಿಕರ ಮೆಚ್ಚುಗೆಗೆ ಪಾತ್ರಾದರು.
ಇನ್ನು ಇದೇ ರೀತಿ ನಗರದ ವಿವಿಧ ಕಡೆಗಳಲ್ಲಿ ಶೋಕಿಗಾಗಿ ಬೈಕ್ ಕದಿಯುತಿದ್ದ ಆರೋಪಿಗಳನ್ನು ಖೆಡ್ಡಾಕೆ ಕೆಡವಿದ ಖಾಕಿ ಪಡೆ 4 ಕೋಟಿಗೂ ಅಧಿಕ ಮೌಲ್ಯದ ವಿವಿಧ ಮಾದರಿಯ 155 ಬೈಕ್ ಗಳು, 10 ಕಾರ್ ಗಳು ವಶಕ್ಕೆ ಪಡೆದಿದ್ದಾರೆ.. ಇನ್ನು ಇವೆಲ್ಲದರ ವಾರಸುದರಾರ ಪತ್ತೆ ಮಾಡಿದ ಪೊಲೀಸರು ಇಂದು ನಗರ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಕಳೆದುಕೊಂಡಿದ್ದ ವಸ್ತುಗಳನ್ನು ಹಿಂತಿರುಗಿಸಲಾಯ್ತು.. ಇನ್ನು ಪೊಲೀಸರ ಈ ಕಾರ್ಯಚಾರಣೆ ಮೆಚ್ಚಿದ ಸಾರ್ವಜನಿಕರು ಖಾಕಿಗೊಂದು ಸಲಾಂ ಹಾಕಿದರು..
ಇನ್ನು ಇದಷ್ಟೇ ಅಲ್ಲದೇ, ದಕ್ಷಿಣ ವಿಭಾಗದಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ.. ಹಾಗೂ ಉತ್ತಮ ಕಾರ್ಯಾಚರಣೆ ಮಾಡಿದ ಅಧಿಕಾರಿಗಳಿಗೆ ಗೌರವಯುತ ರಿವಾರ್ಡ್ಸ್ ಗಳನ್ನು ನೀಡುವ ಮೂಲಕ ಟ್ರೋಫಿಗಳನ್ನು ನೀಡಲಾಯ್ತು.. ಒಟ್ನಲ್ಲಿ ದಕ್ಷಿಣ ವಿಭಾಗದ ಪೊಲೀಸರ ಈ ಕಾರ್ಯಾಚರಣೆ ಸಾರ್ವನಿಕರ ಮೊಗದಲ್ಲಿ ಖುಷಿ ತಂದಿದ್ರೆ, ತಮ್ಮ ನಿರಂತರ ಪರಿಶ್ರಮದ ಫಲವಾಗಿ ನಗರ ಪೊಲೀಸ್ ಆಯುಕ್ತರಿಂದ ಕಿರಿಯ ಅಧಿಕಾರಿಗಳು ಮೆಚ್ಚುಗೆಗೆ ಪಾತ್ರರಾದ್ರು..Body:KN_BNG_08_THEFT_AREST_7204498Conclusion:KN_BNG_08_THEFT_AREST_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.