ETV Bharat / city

ರಮೇಶ್​ ಜಾರಕಿಹೊಳಿ ಭೇಟಿಯಾದ ಕುಮಟಳ್ಳಿ... ಕಾಂಗ್ರೆಸ್​​ಗೆ ಕೊಡ್ತಾರಾ ಬಿಗ್​ ಶಾಕ್​!? - undefined

ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ನಿನ್ನೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕ ನಾಗರಾಜು ಭೇಟಿ ನೀಡಿದ್ದರು. ಇಂದು ಮಹೇಶ್‍ ಕುಮಟಳ್ಳಿ ಭೇಟಿ ನೀಡಿದ್ದಾರೆ.

ರಮೇಶ್‍ ಜಾರಕಿಹೊಳಿ
author img

By

Published : May 15, 2019, 9:49 PM IST

ಬೆಂಗಳೂರು: ಮಾಜಿ ಸಚಿವ ರಮೇಶ್‍ ಜಾರಕಿಹೊಳಿ ಮೂಲಕ ಬಿಜೆಪಿ ಆಪರೇಷನ್‍ ಕಮಲದ ಲೆಕ್ಕಾಚಾರವನ್ನು ಜೀವಂತಗೊಳಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಆಪರೇಷನ್ ಕಮಲಕ್ಕೆ ರಮೇಶ್​ ಸೂತ್ರದಾರರಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ರಮೇಶ್‍ ಕನಿಷ್ಠ 10-15 ಮಂದಿ ಶಾಸಕರನ್ನು ತಮ್ಮತ್ತ ಸೆಳೆಯುವ ಯತ್ನದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ರಮೇಶ್‍ ಜಾರಕಿಹೊಳಿ

ಈಗಾಗಲೆ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ನಿನ್ನೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕ ನಾಗರಾಜು ಭೇಟಿ ನೀಡಿದ್ದರು. ಇಂದು ಮಹೇಶ್‍ ಕುಮಟಳ್ಳಿ ಭೇಟಿ ನೀಡಿದ್ದಾರೆ. ಇಂದು ರಾತ್ರಿ ಸಹ ಕೆಲ ನಾಯಕರು ಆಗಮಿಸಿ, ರಮೇಶ್​ರೊಂದಿಗೆ ಸಮಾಲೋಚಿಸಲಿದ್ದಾರೆ ಎನ್ನಲಾಗುತ್ತಿದೆ.

ರಮೇಶ್​ ಮನೆಗೆ ಬಿಜೆಪಿ ಮುಖಂಡರ ಭೇಟಿ ವೇಳೆ ಮಹತ್ವದ ಚರ್ಚೆಗಳು ನಡೆದಿವೆ. ರಮೇಶ್ ಸಹ ಸಂಪೂರ್ಣ ಚುರುಕಾಗಿದ್ದು, ಮೇ 23ರ ಚುನಾವಣಾ ಫಲಿತಾಂಶದ ಬಳಿಕ ಮುಂದಿನ‌ ನಿರ್ಧಾರ ಕೈಗೊಳ್ಳಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್​ಗೆ ತಾವೊಬ್ಬರೆ ರಾಜೀನಾಮೆ ನೀಡುವ ಬದಲು ಇನ್ನಷ್ಟು ಮಂದಿ ಶಾಸಕರನ್ನು ಹೊರಬರುವಂತೆ ಮಾಡುವ ಪ್ಲಾನ್ ಮಾಡುತ್ತಿದ್ದಾರೆ. ಅಲ್ಲಿಯವರೆಗೂ ಆಪ್ತ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುವ ಬಗ್ಗೆಯೇ ಮಹೇಶ್ ಕುಮಟಳ್ಳಿ ಜತೆ ಇಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಮಾಜಿ ಸಚಿವ ರಮೇಶ್‍ ಜಾರಕಿಹೊಳಿ ಮೂಲಕ ಬಿಜೆಪಿ ಆಪರೇಷನ್‍ ಕಮಲದ ಲೆಕ್ಕಾಚಾರವನ್ನು ಜೀವಂತಗೊಳಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಆಪರೇಷನ್ ಕಮಲಕ್ಕೆ ರಮೇಶ್​ ಸೂತ್ರದಾರರಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ರಮೇಶ್‍ ಕನಿಷ್ಠ 10-15 ಮಂದಿ ಶಾಸಕರನ್ನು ತಮ್ಮತ್ತ ಸೆಳೆಯುವ ಯತ್ನದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ರಮೇಶ್‍ ಜಾರಕಿಹೊಳಿ

ಈಗಾಗಲೆ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ನಿನ್ನೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕ ನಾಗರಾಜು ಭೇಟಿ ನೀಡಿದ್ದರು. ಇಂದು ಮಹೇಶ್‍ ಕುಮಟಳ್ಳಿ ಭೇಟಿ ನೀಡಿದ್ದಾರೆ. ಇಂದು ರಾತ್ರಿ ಸಹ ಕೆಲ ನಾಯಕರು ಆಗಮಿಸಿ, ರಮೇಶ್​ರೊಂದಿಗೆ ಸಮಾಲೋಚಿಸಲಿದ್ದಾರೆ ಎನ್ನಲಾಗುತ್ತಿದೆ.

ರಮೇಶ್​ ಮನೆಗೆ ಬಿಜೆಪಿ ಮುಖಂಡರ ಭೇಟಿ ವೇಳೆ ಮಹತ್ವದ ಚರ್ಚೆಗಳು ನಡೆದಿವೆ. ರಮೇಶ್ ಸಹ ಸಂಪೂರ್ಣ ಚುರುಕಾಗಿದ್ದು, ಮೇ 23ರ ಚುನಾವಣಾ ಫಲಿತಾಂಶದ ಬಳಿಕ ಮುಂದಿನ‌ ನಿರ್ಧಾರ ಕೈಗೊಳ್ಳಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್​ಗೆ ತಾವೊಬ್ಬರೆ ರಾಜೀನಾಮೆ ನೀಡುವ ಬದಲು ಇನ್ನಷ್ಟು ಮಂದಿ ಶಾಸಕರನ್ನು ಹೊರಬರುವಂತೆ ಮಾಡುವ ಪ್ಲಾನ್ ಮಾಡುತ್ತಿದ್ದಾರೆ. ಅಲ್ಲಿಯವರೆಗೂ ಆಪ್ತ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುವ ಬಗ್ಗೆಯೇ ಮಹೇಶ್ ಕುಮಟಳ್ಳಿ ಜತೆ ಇಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Intro:newsBody:ರಮೇಶ್‍ ಮೂಲಕ ರಾಜ್ಯದಲ್ಲಿ ಚುರುಕಾಗುತ್ತಾ ಆಪರೇಷನ್ ಕಮಲ !?





ಬೆಂಗಳೂರು: ಕಳೆದ ಎರಡು ದಿನದ ಬೆಳವಣಿಗೆಯನ್ನು ನೋಡುತ್ತಿದ್ದಂತೆ ರಾಜ್ಯದಲ್ಲಿ ಮಾಜಿ ಸಚಿವ ರಮೇಶ್‍ ಜಾರಕಿಹೊಳಿ ಮೂಲಕ ಬಿಜೆಪಿ ಆಪರೇಷನ್‍ ಕಮಲ ಜೀವಂತಗೊಳಿಸುವ ಲಕ್ಷಣ ತೋರಿಸುತ್ತಿದೆ.

ರಾಜ್ಯದಲ್ಲಿ ಮತ್ತೆ ಚುರುಕುಪಡೆದುಕೊಂಡ ಆಪರೇಷನ್ ಕಮಲಕ್ಕೆ ರಮೇಸ್‍ ಸೂತ್ರದಾರರಾಗಲಿದ್ದಾರೆ ಎಂಬ ಮಾತಿದ್ದು, ಕನಿಷ್ಠ 10-15 ಮಂದಿಯನ್ನು ತಮ್ಮ ಸಂಪರ್ಕಕ್ಕೆ ಸೆಳೆಯುವ ಯತ್ನವನ್ನು ರಮೇಶ್‍ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದಲೇ ಮುಂದಿನ ದಿನಗಳಲ್ಲಿ ರಮೇಶ್‍ ನಿವಾಸ ತೀವ್ರ ರಾಜಕೀಯ ಚಟುವಟಿಕೆಯ ಕೇಂದ್ರವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಗರಿಗೆದರಿದ ಚಟುವಟಿಕೆ

ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ ನಡೆಯುತ್ತಿದ್ದು, ನಿನ್ನೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಮಾಜಿ ಶಾಸಕ ನಾಗರಾಜು ಭೇಟಿಕೊಟ್ಟು ತೆರಳಿದ್ದರು. ಇಂದು ಮಹೇಶ್‍ ಕುಮಟಳ್ಳಿ ಭೇಟಿಕೊಟ್ಟಿದ್ದರು. ಇಂದು ರಾತ್ರಿ ಕೆಲ ನಾಯಕರು ಭೇಟಿಕೊಟ್ಟು ಸಮಾಲೋಚಿಸುವ ಕಾರ್ಯ ಮಾಡುವ ಸಾಧ್ಯತೆ ಇದೆ.

ಬಿಜೆಪಿ ಮುಖಂಡರ ಭೇಟಿಯಲ್ಲಿ ಮಹತ್ವದ ಚರ್ಚೆ ನಡೆದಿದೆ. ನಿನ್ನೆಯವರೆಗೆ ಏಕಾಂಗಿಯಾಗಿದ್ದ ರಮೇಶ್ ಮತ್ತೆ ಸಂಪೂರ್ಣ ಚುರುಕಾಗಿದ್ದು, ಮೇ 23 ರ ಚುನಾವಣಾ ಫಲಿತಾಂಶದ ಬಳಿಕ ಮುಂದಿನ‌ ನಿರ್ಧಾರ ಕೈಗೊಳ್ಳಲಿದ್ದು, ರಾಜೀನಾಮೆ ತಾವೊಬ್ಬರು ನೀಡುವ ಬದಲು ತಮ್ಮೊಂದಿಗೆ ಇನ್ನಷ್ಟು ಮಂದಿ ಶಾಸಕರನ್ನು ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಆಪ್ತ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿ ರಮೇಶ್‍ ಇದ್ದಾರೆ. ಈ ಬೆಳವಣಿಗೆ ಭಾಗವಾಗಿಯೇ ಮಹೇಶ್ ಕುಮಟಳ್ಳಿ ಜೊತೆಗೆ ಇಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.



Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.