ETV Bharat / city

ಸರ್ಕಾರಿ ಶಾಲೆಗಳ ಶಿಕ್ಷಕರು, ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಬನ್ನಿ : ಸಚಿವ ಸುರೇಶ್‌ ಕುಮಾರ್ ಮನವಿ

ಸರ್ಕಾರ‌‌ ಇಂತಹ ಸಂಕಷ್ಟದ‌ ಸಂದರ್ಭದಲ್ಲಿಯೂ ಸರ್ಕಾರಿ ಶಾಲಾ‌ ಶಿಕ್ಷಕರೂ ಸೇರಿದಂತೆ ಯಾವುದೇ ವರ್ಗಕ್ಕೂ ವೇತನ‌ ಭತ್ಯೆಗಳ ಕಡಿತಕ್ಕೆ ಮುಂದಾಗಿಲ್ಲ. ರಾಜ್ಯ ಸರ್ಕಾರದ‌ ಆರ್ಥಿಕ ಸ್ಥಿತಿಗತಿಗಳ‌ ಬಗ್ಗೆ ಎಲ್ಲರಿಗೂ ಅರಿವಿದೆ. ಹಾಗಾಗಿ, ಕಳೆದ ಹದಿನೈದು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗೆ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಸಹಾಯಹಸ್ತ ಚಾಚಬೇಕೆಂದು ಸಚಿವ ಸುರೇಶ್‌ ಕುಮಾರ್ ಮನವಿ ಮಾಡಿದ್ದಾರೆ..

author img

By

Published : May 26, 2021, 1:55 PM IST

Bangalore
ಸರ್ಕಾರಿ ಶಾಲೆಗಳ ಶಿಕ್ಷಕರು ಶಾಲಾ ಶಿಕ್ಷಕರ ನೆರವಿಗೆ ಬನ್ನಿ: ಸಚಿವ ಸುರೇಶ್‌ ಕುಮಾರ್ ಮನವಿ

ಬೆಂಗಳೂರು : ಸಾಂಕ್ರಾಮಿಕ ಕೊರೊನಾ‌ ಸೋಂಕಿನಿಂದಾಗಿ ಖಾಸಗಿ ಶಾಲೆಗಳ ಶಿಕ್ಷಕರು ಕೆಲಸವಿಲ್ಲದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಶಾಲಾ-ಕಾಲೇಜುಗಳು ನಿಗದಿತ ಸಮಯಕ್ಕೆ ಶುರುವಾಗದೇ ಅದೆಷ್ಟು ಶಿಕ್ಷಕರು ಉದ್ಯೋಗಯಿಲ್ಲದೇ ಬೀದಿ ವ್ಯಾಪಾರ ಮಾಡುತ್ತಿದ್ದನ್ನ ನೋಡಿದ್ದೇವೆ.

ಮೊದಲ ಅಲೆಯ ಹೊಡೆತದ ನಂತರ ಇದೀಗ ಎರಡನೇ ಅಲೆಯಲ್ಲೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಹದಿನೈದು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗೆ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಸಹಾಯಹಸ್ತ ಚಾಚಬೇಕೆಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಮನವಿ ಮಾಡಿದ್ದಾರೆ.

ಶಿಕ್ಷಕ ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಹಾಗೂ ಪದವಿಪೂರ್ವ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರೊಂದಿಗೆ ಇಂದು ಸಭೆ‌ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಸುರೇಶ್‌ ಕುಮಾರ್, ಸರ್ಕಾರ‌‌ ಇಂತಹ ಸಂಕಷ್ಟದ‌ ಸಂದರ್ಭದಲ್ಲಿಯೂ ಸರ್ಕಾರಿ ಶಾಲಾ‌ ಶಿಕ್ಷಕರೂ ಸೇರಿದಂತೆ ಯಾವುದೇ ವರ್ಗಕ್ಕೂ ವೇತನ‌ ಭತ್ಯೆಗಳ ಕಡಿತಕ್ಕೆ ಮುಂದಾಗಿಲ್ಲ.

ರಾಜ್ಯ ಸರ್ಕಾರದ‌ ಆರ್ಥಿಕ ಸ್ಥಿತಿಗತಿಗಳ‌ ಬಗ್ಗೆ ಎಲ್ಲರಿಗೂ ಅರಿವಿದೆ. ಹಾಗಾಗಿ, ನಮ್ಮದೇ ಖಾಸಗಿ ಅನುದಾನರಹಿತ ಶಿಕ್ಷಕ‌ ಸಮುದಾಯದ ನೆರವಿಗೆ ಬರಬೇಕಾದ್ದು ನಮ್ಮ‌ ಜವಾಬ್ದಾರಿಯೆಂದು ತಿಳಿಯಬೇಕು.

ಶಿಕ್ಷಕ ಪದವೀಧರ‌ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳು ತಮ್ಮೆಲ್ಲರಿಂದ ನಿರೀಕ್ಷಿಸುವ ವೇತನ ಮೊತ್ತವನ್ನು ನೀಡಲು ಮುಂದೆ ಬಂದಿದ್ದು, ಇದನ್ನು ಎಲ್ಲರೂ ಮಾದರಿಯಾಗಿ ಕಾಣಬೇಕಿದೆ. ಇಲಾಖೆಯ ಆಂತರಿಕ ಆರ್ಥಿಕ ಸಂಪನ್ಮೂಲಗಳನ್ನು ಬಳಸಲು ಸಹ ಆಲೋಚಿಸಲಾಗುತ್ತಿದ್ದು, ಸಂಪನ್ಮೂಲ‌ ಕ್ರೂಢೀಕರಣಕ್ಕೆ ಪ್ರಸ್ತಾವನೆ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಒಂದು ವೇಳೆ ಮುಂದಿನ‌ ದಿನಗಳಲ್ಲಿ ಸರ್ಕಾರಿ‌ ನೌಕರರ ವೇತನ ಕಟಾವಣೆ ಮಾಡುತ್ತೇವೆಂದು ಸರ್ಕಾರ‌ ನಿರ್ಧರಿಸಿದಲ್ಲಿ, ಈಗ ನೀಡಲು ಶಿಕ್ಷಕರು ನೀಡಲು ಇಚ್ಛಿಸುವ ಮೊತ್ತವನ್ನು ವಿನಾಯ್ತಿ ನೀಡಲು ಆರ್ಥಿಕ ಇಲಾಖೆಯನ್ನು ಕೋರಲಾಗುವುದು ಎಂದರು.

ಪ್ರೌಢ ಶಾಲಾ ಶಿಕ್ಷಕರ ಸಂಘಟನೆಯ ಮಂಜುನಾಥ್, ನಿಶ್ಚಿತವಾಗಿಯೂ ಸಂಘಟನೆಯು ಈ ರೀತಿಯ ಮಾನವೀಯ ಸಹಕಾರವನ್ನು ತೋರಲು ಉತ್ಸುಕವಾಗಿದ್ದು, ಸರ್ಕಾರದ‌ ನಿಲುವನ್ನು ಬೆಂಬಲಿಸುತ್ತೇವೆ ಎಂದರು. ಪದವಿಪೂರ್ವ ಉಪನ್ಯಾಸಕರ‌ ಸಂಘಟನೆಯ ಅಧ್ಯಕ್ಷ ನಿಂಗೇಗೌಡ, ತಮ್ಮ ಸಂಘಟನೆಯು ಹಿಂದೆಯೇ ಈ ರೀತಿಯ ಸಹಕಾರ‌ ನೀಡಲು ಮನವಿ ಸಲ್ಲಿಸಿದ್ದು ಖಂಡಿತವಾಗಿಯೂ ಸರ್ಕಾರದ‌ ನಿಲುವಿಗೆ ಬದ್ಧವಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯೂ ಸಹ ಇದರ ಬಗ್ಗೆ ಕ್ರಿಯಾಶೀಲವಾಗಿ ಸ್ಪಂದಿಸಲು ಇಚ್ಛಿಸಿದ್ದು, ಸಂಘಟನೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ತಮ್ಮ ಲಿಖಿತ ಒಪ್ಪಿಗೆ ನೀಡುತ್ತೇವೆಂದು ಸಂಘಟನೆಯ ಅಧ್ಯಕ್ಷ ಶಂಭುಗೌಡನ ಪಾಟೀಲ್ ಹಾಗು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ‌ ನುಗ್ಲಿ ಹೇಳಿದರು.

ಓದಿ: ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒಗಳ ಜೊತೆ ಸಿಎಂ ವಿಡಿಯೋ ಸಂವಾದ ಆರಂಭ

ಬೆಂಗಳೂರು : ಸಾಂಕ್ರಾಮಿಕ ಕೊರೊನಾ‌ ಸೋಂಕಿನಿಂದಾಗಿ ಖಾಸಗಿ ಶಾಲೆಗಳ ಶಿಕ್ಷಕರು ಕೆಲಸವಿಲ್ಲದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಶಾಲಾ-ಕಾಲೇಜುಗಳು ನಿಗದಿತ ಸಮಯಕ್ಕೆ ಶುರುವಾಗದೇ ಅದೆಷ್ಟು ಶಿಕ್ಷಕರು ಉದ್ಯೋಗಯಿಲ್ಲದೇ ಬೀದಿ ವ್ಯಾಪಾರ ಮಾಡುತ್ತಿದ್ದನ್ನ ನೋಡಿದ್ದೇವೆ.

ಮೊದಲ ಅಲೆಯ ಹೊಡೆತದ ನಂತರ ಇದೀಗ ಎರಡನೇ ಅಲೆಯಲ್ಲೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಹದಿನೈದು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗೆ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಸಹಾಯಹಸ್ತ ಚಾಚಬೇಕೆಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಮನವಿ ಮಾಡಿದ್ದಾರೆ.

ಶಿಕ್ಷಕ ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಹಾಗೂ ಪದವಿಪೂರ್ವ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರೊಂದಿಗೆ ಇಂದು ಸಭೆ‌ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಸುರೇಶ್‌ ಕುಮಾರ್, ಸರ್ಕಾರ‌‌ ಇಂತಹ ಸಂಕಷ್ಟದ‌ ಸಂದರ್ಭದಲ್ಲಿಯೂ ಸರ್ಕಾರಿ ಶಾಲಾ‌ ಶಿಕ್ಷಕರೂ ಸೇರಿದಂತೆ ಯಾವುದೇ ವರ್ಗಕ್ಕೂ ವೇತನ‌ ಭತ್ಯೆಗಳ ಕಡಿತಕ್ಕೆ ಮುಂದಾಗಿಲ್ಲ.

ರಾಜ್ಯ ಸರ್ಕಾರದ‌ ಆರ್ಥಿಕ ಸ್ಥಿತಿಗತಿಗಳ‌ ಬಗ್ಗೆ ಎಲ್ಲರಿಗೂ ಅರಿವಿದೆ. ಹಾಗಾಗಿ, ನಮ್ಮದೇ ಖಾಸಗಿ ಅನುದಾನರಹಿತ ಶಿಕ್ಷಕ‌ ಸಮುದಾಯದ ನೆರವಿಗೆ ಬರಬೇಕಾದ್ದು ನಮ್ಮ‌ ಜವಾಬ್ದಾರಿಯೆಂದು ತಿಳಿಯಬೇಕು.

ಶಿಕ್ಷಕ ಪದವೀಧರ‌ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳು ತಮ್ಮೆಲ್ಲರಿಂದ ನಿರೀಕ್ಷಿಸುವ ವೇತನ ಮೊತ್ತವನ್ನು ನೀಡಲು ಮುಂದೆ ಬಂದಿದ್ದು, ಇದನ್ನು ಎಲ್ಲರೂ ಮಾದರಿಯಾಗಿ ಕಾಣಬೇಕಿದೆ. ಇಲಾಖೆಯ ಆಂತರಿಕ ಆರ್ಥಿಕ ಸಂಪನ್ಮೂಲಗಳನ್ನು ಬಳಸಲು ಸಹ ಆಲೋಚಿಸಲಾಗುತ್ತಿದ್ದು, ಸಂಪನ್ಮೂಲ‌ ಕ್ರೂಢೀಕರಣಕ್ಕೆ ಪ್ರಸ್ತಾವನೆ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಒಂದು ವೇಳೆ ಮುಂದಿನ‌ ದಿನಗಳಲ್ಲಿ ಸರ್ಕಾರಿ‌ ನೌಕರರ ವೇತನ ಕಟಾವಣೆ ಮಾಡುತ್ತೇವೆಂದು ಸರ್ಕಾರ‌ ನಿರ್ಧರಿಸಿದಲ್ಲಿ, ಈಗ ನೀಡಲು ಶಿಕ್ಷಕರು ನೀಡಲು ಇಚ್ಛಿಸುವ ಮೊತ್ತವನ್ನು ವಿನಾಯ್ತಿ ನೀಡಲು ಆರ್ಥಿಕ ಇಲಾಖೆಯನ್ನು ಕೋರಲಾಗುವುದು ಎಂದರು.

ಪ್ರೌಢ ಶಾಲಾ ಶಿಕ್ಷಕರ ಸಂಘಟನೆಯ ಮಂಜುನಾಥ್, ನಿಶ್ಚಿತವಾಗಿಯೂ ಸಂಘಟನೆಯು ಈ ರೀತಿಯ ಮಾನವೀಯ ಸಹಕಾರವನ್ನು ತೋರಲು ಉತ್ಸುಕವಾಗಿದ್ದು, ಸರ್ಕಾರದ‌ ನಿಲುವನ್ನು ಬೆಂಬಲಿಸುತ್ತೇವೆ ಎಂದರು. ಪದವಿಪೂರ್ವ ಉಪನ್ಯಾಸಕರ‌ ಸಂಘಟನೆಯ ಅಧ್ಯಕ್ಷ ನಿಂಗೇಗೌಡ, ತಮ್ಮ ಸಂಘಟನೆಯು ಹಿಂದೆಯೇ ಈ ರೀತಿಯ ಸಹಕಾರ‌ ನೀಡಲು ಮನವಿ ಸಲ್ಲಿಸಿದ್ದು ಖಂಡಿತವಾಗಿಯೂ ಸರ್ಕಾರದ‌ ನಿಲುವಿಗೆ ಬದ್ಧವಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯೂ ಸಹ ಇದರ ಬಗ್ಗೆ ಕ್ರಿಯಾಶೀಲವಾಗಿ ಸ್ಪಂದಿಸಲು ಇಚ್ಛಿಸಿದ್ದು, ಸಂಘಟನೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ತಮ್ಮ ಲಿಖಿತ ಒಪ್ಪಿಗೆ ನೀಡುತ್ತೇವೆಂದು ಸಂಘಟನೆಯ ಅಧ್ಯಕ್ಷ ಶಂಭುಗೌಡನ ಪಾಟೀಲ್ ಹಾಗು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ‌ ನುಗ್ಲಿ ಹೇಳಿದರು.

ಓದಿ: ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒಗಳ ಜೊತೆ ಸಿಎಂ ವಿಡಿಯೋ ಸಂವಾದ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.