ಬೆಂಗಳೂರು: ರಾಜಾಜಿನಗರ ಇಎಸ್ಐ ಆಸ್ಪತ್ರೆಯ ಆಡಳಿತಾಧಿಕಾರಿಗಳ ಕಚೇರಿ ಮುಂದೆ ವೈದ್ಯರು ಹಾಗೂ ನರ್ಸ್ಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡದೆ ಕೆಲಸಕ್ಕೆ ಬರುವಂತೆ ಸೂಚಿಸಿರುವ ಆಡಳಿತ ಮಂಡಳಿಯ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರಸೂತಿ ವಿಭಾಗದಲ್ಲಿ ಇಬ್ಬರಿಗೆ, ಇಬ್ಬರು ಮುಖ್ಯ ವೈದ್ಯರಿಗೆ, ಇಬ್ಬರು ಹಿರಿಯ ವೈದ್ಯರಿಗೆ, ಒಬ್ಬ ಪಿಜಿ ವೈದ್ಯ ವಿದ್ಯಾರ್ಥಿ ಸೇರಿ ಇಲ್ಲಿಯವರೆಗೆ ಇಎಸ್ಐನ ಒಟ್ಟು 8 ಮಂದಿಗೆ ಸೋಂಕು ದೃಢಪಟ್ಟಿದೆ. ಆದರೆ ಇವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ಗೆ ಒಳಪಡಿಸದೆ ಕೆಲಸಕ್ಕೆ ಕರೆಯಿಸಿಕೊಳ್ಳಲಾಗಿದೆ ಎಂಬುದು ಪ್ರತಿಭಟನಾನಿರತ ಸಿಬ್ಬಂದಿಯ ಆರೋಪವಾಗಿದೆ.