ETV Bharat / city

ಮೈತ್ರಿ ಸರ್ಕಾರ ಉಳಿಸಲು ಸಿದ್ದರಾಮಯ್ಯ ಇನ್ನಿಲ್ಲದ ಪ್ರಯತ್ನ ಮಾಡಿದ್ರು: ಗೌಡರ ಹೇಳಿಕೆಗೆ ದಿನೇಶ್ ಗುಂಡೂರಾವ್​ ಬೇಸರ

author img

By

Published : Aug 23, 2019, 6:30 PM IST

ಅನರ್ಹ ಶಾಸಕರು ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಸಹಾಯ ಮಾಡಿದ್ದಾರೆ. ಆ 17 ಶಾಸಕರಿಗೂ ಸಚಿವ ಸ್ಥಾನ ನೀಡಿ ನ್ಯಾಯ ಒದಗಿಸಬೇಕು. ಯಡಿಯೂರಪ್ಪ ಸಿಎಂ ಆಗೋಕೆ ಅನರ್ಹರ ಸಹಕಾರ ತುಂಬಾ ಮುಖ್ಯವಾದುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

Devegowdas allegations against to siddaramaiah baseless

ಬೆಂಗಳೂರು: ನಾವು ಸರಿ, ಅವರದ್ದು ತಪ್ಪು ಎನ್ನುವುದು ಏಕೆ? ನಾವು ಕೂಡ ನೋವು ನುಂಗಿಕೊಂಡೇ ಎಲ್ಲವನ್ನೂ ಸಹಿಸಿಕೊಂಡಿದ್ದೆವು. ಆದರೆ, ದೇವೇಗೌಡರು ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳುವುದಕ್ಕೆ ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡರು ನೀಡಿರುವ ಹೇಳಿಕೆ ಬೇಸರ ತರಿಸಿದೆ. ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸರ್ವ ಪ್ರಯತ್ನ ಮಾಡಿದ್ದರು. ಈಗಿದು ಬೇಡವಾದ ಮಾತು. ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿಯೇ ಪ್ರಚಾರ ಮಾಡಿದ್ದೇವೆ. ದೇವೇಗೌಡರು ಏಕೆ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ ಎಂದರು.

ದೇವೇಗೌಡರು ಕಣ್ಣೀರು ಹಾಕುವ ಸಮಸ್ಯೆ ಎಲ್ಲೂ ಕಂಡಿಲ್ಲ. ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಗೆ ಕಣ್ಣೀರು ತರಿಸುವಂಥ ಪರಿಸ್ಥಿತಿ ಎಂದೂ ಉದ್ಭವವಾಗಿರಲಿಲ್ಲ. ಪದೇಪದೆ ಅವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಆರೋಪಿಸಿದ್ದರ ಪರಿಣಾಮ ಸಿದ್ದರಾಮಯ್ಯ ಇಂದು ಪ್ರತಿಕ್ರಿಯಿಸಿದ್ದಾರೆ. ಅವರು ಸುಮ್ಮನಿದ್ದಿದ್ದರೆ, ಸಿದ್ದರಾಮಯ್ಯ ಕೂಡ ಹಾಗೆ ಇರುತ್ತಿದ್ದರು. ದೇವೇಗೌಡರು ಕೆಣಕಿದಕ್ಕಾಗಿ ಸಿದ್ದರಾಮಯ್ಯ ಮಾತನಾಡುವ ಪರಿಸ್ಥಿತಿ ಅನಿವಾರ್ಯವಾಯ್ತು ಎಂದು ತಿಳಿಸಿದರು.

ಕಾಂಗ್ರೆಸ್​​ನಲ್ಲಿ 80 ಶಾಸಕರಿದ್ದರೂ ಅವರೇ ಅಧಿಕಾರದಲ್ಲಿದ್ದರು. ದೇವೇಗೌಡರ ಹೇಳಿಕೆ ನಾಟಕೀಯವಾದುದು. ಸಿದ್ದರಾಮಯ್ಯ ಎಲ್ಲಿಯೂ ಹಿಂದೆ ಮುಂದೆ ಸರ್ಕಾರದ ಬಗ್ಗೆ ಮಾತನಾಡಿರಲಿಲ್ಲ. ಜೆಡಿಎಸ್​​ಗೆ ಕಾಂಗ್ರೆಸ್​ ಮುಕ್ತವಾದ ಸಹಕಾರ ಕೊಟ್ಟಿತ್ತು. ಅಧಿಕಾರ ಕಳೆದುಕೊಂಡ ಬಳಿಕ ಅವರು ಸರಿಯಿಲ್ಲ, ಇವರು ಸರಿಯಿಲ್ಲ ಅಂದ್ರೆ ಏನರ್ಥ. ಅಧಿಕಾರಿದಲ್ಲಿದ್ದಾಗ ಮಾತನಾಡದೆ ಈಗ ಆರೋಪಿಸಿದರೆ ಏನು ಪ್ರಯೋಜನ. ಹಾಗಿದ್ದಾಗ ದೇವೇಗೌಡರು ಏಕೆ ಆರೋಪ ಮಾಡಬೇಕಿತ್ತು ಎಂದು ಕುಮಾರಸ್ವಾಮಿ ಟ್ವೀಟ್​ಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದರು.

ಮೈತ್ರಿ ಮುರಿದುಕೊಳ್ಳುವ ಸೂಚನೆ: ಜೆಡಿಎಸ್ ಜೊತೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಸಂದರ್ಭ ಬಂದಾಗ ಸ್ಪಷ್ಟ ನಿರ್ಧಾರ ತೆಗೆದುಕೊಳ್ತೇವೆ. ಮೈತ್ರಿಯ ಮುಂದುವರಿಕೆ ಬಗ್ಗೆ ಈಗ ಮಾತನಾಡುವುದಿಲ್ಲ ಎಂದರು.

ಬೆಂಗಳೂರು: ನಾವು ಸರಿ, ಅವರದ್ದು ತಪ್ಪು ಎನ್ನುವುದು ಏಕೆ? ನಾವು ಕೂಡ ನೋವು ನುಂಗಿಕೊಂಡೇ ಎಲ್ಲವನ್ನೂ ಸಹಿಸಿಕೊಂಡಿದ್ದೆವು. ಆದರೆ, ದೇವೇಗೌಡರು ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳುವುದಕ್ಕೆ ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡರು ನೀಡಿರುವ ಹೇಳಿಕೆ ಬೇಸರ ತರಿಸಿದೆ. ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸರ್ವ ಪ್ರಯತ್ನ ಮಾಡಿದ್ದರು. ಈಗಿದು ಬೇಡವಾದ ಮಾತು. ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿಯೇ ಪ್ರಚಾರ ಮಾಡಿದ್ದೇವೆ. ದೇವೇಗೌಡರು ಏಕೆ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ ಎಂದರು.

ದೇವೇಗೌಡರು ಕಣ್ಣೀರು ಹಾಕುವ ಸಮಸ್ಯೆ ಎಲ್ಲೂ ಕಂಡಿಲ್ಲ. ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಗೆ ಕಣ್ಣೀರು ತರಿಸುವಂಥ ಪರಿಸ್ಥಿತಿ ಎಂದೂ ಉದ್ಭವವಾಗಿರಲಿಲ್ಲ. ಪದೇಪದೆ ಅವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಆರೋಪಿಸಿದ್ದರ ಪರಿಣಾಮ ಸಿದ್ದರಾಮಯ್ಯ ಇಂದು ಪ್ರತಿಕ್ರಿಯಿಸಿದ್ದಾರೆ. ಅವರು ಸುಮ್ಮನಿದ್ದಿದ್ದರೆ, ಸಿದ್ದರಾಮಯ್ಯ ಕೂಡ ಹಾಗೆ ಇರುತ್ತಿದ್ದರು. ದೇವೇಗೌಡರು ಕೆಣಕಿದಕ್ಕಾಗಿ ಸಿದ್ದರಾಮಯ್ಯ ಮಾತನಾಡುವ ಪರಿಸ್ಥಿತಿ ಅನಿವಾರ್ಯವಾಯ್ತು ಎಂದು ತಿಳಿಸಿದರು.

ಕಾಂಗ್ರೆಸ್​​ನಲ್ಲಿ 80 ಶಾಸಕರಿದ್ದರೂ ಅವರೇ ಅಧಿಕಾರದಲ್ಲಿದ್ದರು. ದೇವೇಗೌಡರ ಹೇಳಿಕೆ ನಾಟಕೀಯವಾದುದು. ಸಿದ್ದರಾಮಯ್ಯ ಎಲ್ಲಿಯೂ ಹಿಂದೆ ಮುಂದೆ ಸರ್ಕಾರದ ಬಗ್ಗೆ ಮಾತನಾಡಿರಲಿಲ್ಲ. ಜೆಡಿಎಸ್​​ಗೆ ಕಾಂಗ್ರೆಸ್​ ಮುಕ್ತವಾದ ಸಹಕಾರ ಕೊಟ್ಟಿತ್ತು. ಅಧಿಕಾರ ಕಳೆದುಕೊಂಡ ಬಳಿಕ ಅವರು ಸರಿಯಿಲ್ಲ, ಇವರು ಸರಿಯಿಲ್ಲ ಅಂದ್ರೆ ಏನರ್ಥ. ಅಧಿಕಾರಿದಲ್ಲಿದ್ದಾಗ ಮಾತನಾಡದೆ ಈಗ ಆರೋಪಿಸಿದರೆ ಏನು ಪ್ರಯೋಜನ. ಹಾಗಿದ್ದಾಗ ದೇವೇಗೌಡರು ಏಕೆ ಆರೋಪ ಮಾಡಬೇಕಿತ್ತು ಎಂದು ಕುಮಾರಸ್ವಾಮಿ ಟ್ವೀಟ್​ಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದರು.

ಮೈತ್ರಿ ಮುರಿದುಕೊಳ್ಳುವ ಸೂಚನೆ: ಜೆಡಿಎಸ್ ಜೊತೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಸಂದರ್ಭ ಬಂದಾಗ ಸ್ಪಷ್ಟ ನಿರ್ಧಾರ ತೆಗೆದುಕೊಳ್ತೇವೆ. ಮೈತ್ರಿಯ ಮುಂದುವರಿಕೆ ಬಗ್ಗೆ ಈಗ ಮಾತನಾಡುವುದಿಲ್ಲ ಎಂದರು.

Intro:newsBody:ನಾವು ನೋವು ನುಂಗಿಯೇ ಎಲ್ಲವನ್ನೂ ಸಹಿಸಿಕೊಂಡಿದ್ದೆವು: ದಿನೇಶ್ ಗುಂಡೂರಾವ್


ಬೆಂಗಳೂರು: ನಾವು ಸರಿ, ಅವರದ್ದು ತಪ್ಪು ಅನ್ನುವುದು ಯಾಕೆ? ನಾವು ನೋವು ನುಂಗಿಯೇ ಎಲ್ಲವನ್ನೂ ಸಹಿಸಿಕೊಂಡಿದ್ದೆವು. ಇಂತ ಸಂದರ್ಭದಲ್ಲಿ ದೇವೇಗೌಡರು ಹೇಳಿಕೆ ನೀಡಬಾರದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರ ಬೀಳುವುದಕ್ಕೆ ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಹೇಳಿಕೆ ಬೇಸರ ತಂದಿದೆ. ಈ ಸಂದರ್ಭದಲ್ಲಿ ಇದು ಬೇಡವಾದ ಮಾತಾಗಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಚುನಾವಣೆ ಪ್ರಚಾರ ಮಾಡಿದ್ದೇವೆ. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿ ಚುನಾವಣೆ ಮಾಡಿದ್ದೇವೆ. ಇವಾಗ ದೇವೇಗೌಡರು ಯಾಕೆ ಈ ಮಾತು ಹೇಳಿದ್ರೋ ಗೊತ್ತಿಲ್ಲ. ಸರ್ಕಾರ ಉಳಿಸಿಕೊಳ್ಳೋದಕ್ಕೂ ಸಿದ್ದರಾಮಯ್ಯ ಸರ್ವ ಪ್ರಯತ್ನ ಮಾಡಿದ್ದಾರೆ ಎಂದರು.
ದೇವೇಗೌಡರು ಕಣ್ಣೀರು ಹಾಕುವಂತ ಸಮಸ್ಯೆ ಎಲ್ಲೂ ಕಂಡಿಲ್ಲ. ಕುಮಾರಸ್ವಾಮಿಯವರಿಗೆ ನಾವು ಸಂಪೂರ್ಣ ಬೆಂಬಲ ಕೊಟ್ಟಿದ್ವಿ. 14 ತಿಂಗಳ ಆಡಳಿತಾವಧಿಯಲ್ಲಿ ಕುಮಾರಸ್ವಾಮಿ ಕಣ್ಣೀರು ಹಾಕೋ ಪರಿಸ್ಥಿತಿ ಉದ್ಬವ ಆಗಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಪದೇ ಪದೇ ಅವರು ಈ ರೀತಿಯ ಹೇಳಿಕೆ ಕೊಡೋದು ಸರಿಯಲ್ಲ. ಇದು ಜನರು ಒಪ್ಪುವಂತ ಮಾತು ಅಲ್ಲ. ಸರ್ಕಾರ ಉಳಿಸಿಕೊಳ್ಳೋಕೆ ಎಲ್ಲ ಪ್ರಯತ್ನ ಮಾಡಿದ್ದೇವೆ. ಆದರೂ ದೇವೇಗೌಡರು ಈ ರೀತಿ ಹೇಳಿಕೆ ಕೊಡೋದು ಸರಿಯಲ್ಲ. ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಹೇಳಿದ್ದಕ್ಕೆ ಸಿದ್ದರಾಮಯ್ಯ ಇವತ್ತು ಮಾತನಾಡಿದ್ದಾರೆ. ಅವರು ಸೈಲೆಂಟ್ ಆಗಿ ಇದ್ದಿದ್ರಿ ಸಿದ್ದರಾಮಯ್ಯ ಕೂಡ ಸೈಲೆಂಟ್ ಆಗಿ ಇರ್ತಿದ್ರು. ಆದರೆ ಯಾವಾಗ ಸಿದ್ದರಾಮಯ್ಯಗೆ ದೇವೇಗೌಡರು ಅಟ್ಯಾಕ್ ಮಾಡಿದ್ರೋ, ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಮಾತನಾಡುವ ಪರಿಸ್ಥಿತಿ ಅನಿವಾರ್ಯ ಆಯಿತು ಎಂದಿದ್ದಾರೆ.
ನಾವು 80 ಜನ ಇದ್ರೂ ಕೂಡ ಅವರೂ ಅಧಿಕಾರದಲ್ಲಿದ್ರು. ಅಧಿಕಾರವಿಲ್ಲದೆ ನಮ್ಮ ಜೊತೆ ಕೈ ಜೋಡಿಸಿರಲಿಲ್ಲ. ದೇವೇಗೌಡರ ಹೇಳಿಕೆ ನಾಟಕೀಯವಾದುದು. ಜನರು ಕೂಡ ಇದನ್ನ ಒಪ್ಪುವುದಿಲ್ಲ. ಮೊದಲು ಕುಮಾರಸ್ವಾಮಿ ಅವರ ತಂದೆಗೆ ಹೇಳಬೇಕಿತ್ತು. ಈ ಸಂದರ್ಭದಲ್ಲಿ ಆರೋಪ ಬೇಡ ಅಂತ ಹೇಳಬೇಕಿತ್ತು. ಅಲ್ಲಿ ಸುಮ್ಮನಿದ್ದು ಈಗ ಹೇಳಿದರೆ ಪ್ರಯೋಜನವೇನು. ನಮ್ಮ ಶಾಸಕಾಂಗ ಪಕ್ಷದ ನಾಯಕರ ಬಗ್ಗೆ ಧ್ವನಿ ಎತ್ತಿದ್ದಾರೆ. ಸಿದ್ದರಾಮಯ್ಯ ಎಲ್ಲಿಯೂ ಹಿಂದೆ ಮುಂದೆ ಹೇಳಿರಲಿಲ್ಲ. ಸರ್ಕಾರದ ಬಗ್ಗೆಯೂ ಮಾತನಾಡಿರಲಿಲ್ಲ. ಎಲ್ಲರೂ ಮುಕ್ತವಾದ ಸಹಕಾರವನ್ನ ಕೊಟ್ಟಿದ್ದೆವು. ಸೋತ ಬಳಿಕ ಅವರು ಸರಿಯಿಲ್ಲ,ಇವರು ಸರಿಯಿಲ್ಲ ಅಂದ್ರೆ ಹೇಗೆ? ಹಾಗಿದ್ದಾಗ ದೇವೇಗೌಡರು ಆರೋಪ ಯಾಕೆ ಮಾಡಬೇಕಿತ್ತು ಎಂದು ಕುಮಾರಸ್ವಾಮಿ ಟ್ವೀಟ್ ಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದರು.
ಮೈತ್ರಿ ಮುರಿದುಕೊಳ್ಳುವ ಸೂಚನೆ
ಜೆಡಿಎಸ್ ಜೊತೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ದಿನೇಶ್ ಸುಳಿವು ನೀಡಿದರು. ಸಂದರ್ಭ ಬಂದಾಗ ನಾವು ಸ್ಪಷ್ಟ ನಿರ್ಧಾರ ತೆಗೆದುಕೊಳ್ತೇವೆ. ಮೈತ್ರಿಯ ಮುಂದುವರಿಕೆ ಬಗ್ಗೆ ಈಗ ಮಾತನಾಡಲ್ಲ ಎಂದರು.
ಅನರ್ಹ ಶಾಸಕರ ಬಗ್ಗೆ ದಿನೇಶ್ ಪ್ರತಿಕ್ರಿಯೆ ನೀಡಿ, ಅವರು ಸರ್ಕಾರ ಬೀಳಿಸಿದ್ದಾರೆ. ಅವರಿಗೆ ಯಡಿಯೂರಪ್ಪ ನ್ಯಾಯ ಕೊಡಿಸಬೇಕಲ್ಲ. ಮೈತ್ರಿ ಸರ್ಕಾರ ಬೀಳಿಸೋಕೆ 17 ಜನರೇ ಕಾರಣ. ಅವರಿಗೆ ಈಗ ಸಚಿವ ಸ್ಥಾನ ಕೊಡಿಸಬೇಕಲ್ಲ. ಯಡಿಯೂರಪ್ಪ ಸಿಎಂ ಆಗೋಕೆ ಅನರ್ಹರ ಸಹಕಾರವಿದೆ ಎಂದರು.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.