ETV Bharat / city

ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು : ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ!

author img

By

Published : Feb 18, 2022, 12:34 PM IST

Updated : Feb 18, 2022, 2:26 PM IST

ಸದನ ಸರಿಯಾಗಿ ನಡೆಸಬೇಕು ಎನ್ನುವ ಸದುದ್ದೇಶದಿಂದ ಹೊರಟಿದ್ದೇವೆ. ಸದನದಲ್ಲಿಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದು ಬೇಡ, ಅವರು ಇಲ್ಲಿ ಬಂದು ಸಮರ್ಥನೆ ಮಾಡಿಕೊಳ್ಳಲು ಆಗಲ್ಲ. ಹಾಗಾಗಿ, ಸದನದ ಸದಸ್ಯರಲ್ಲದವರ ಹೆಸರು ಪ್ರಸ್ತಾಪಿಸದೆ ಕಲಾಪ ಸುಗಮವಾಗಿ ನಡೆಯಲು ಸಹಕಾರ ನೀಡಿ ಎಂದು ಮನವಿ ಮಾಡಿದರು..

ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ
ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಬೆಂಗಳೂರು : ಸಚಿವ ಕೆ ಎಸ್‌ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ವಿಧಾನ ಪರಿಷತ್​​ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಶುಕ್ರವಾರದ ಕಲಾಪ ಬಲಿಯಾಯಿತು. ಕಾಂಗ್ರೆಸ್, ಬಿಜೆಪಿ ಸದಸ್ಯರ ವಾಗ್ವಾದ, ಆರೋಪ-ಪ್ರತ್ಯಾರೋಪಗಳ ಘೋಷಣೆ ಮೊಳಗಿ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಗಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಯಿತು.

ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಈಶ್ವರಪ್ಪ ವಿಷಯದ ಗದ್ದಲ ಆರಂಭಗೊಂಡಿದ್ದರಿಂದ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು. ಮುಂದೂಡಿಕೆಯಾಗಿದ್ದ ಕಲಾಪ ಪುನಾರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಸರ್ಕಾರದಿಂದ ಕ್ರಮದ ಭರವಸೆ ಸಿಗುವವರೆಗೂ ಧರಣಿ ಬಿಡಲ್ಲ. ಈಶ್ವರಪ್ಪ ವಜಾ ಆಗಲೇಬೇಕು ಎಂದರು.

ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ಪ್ರಧಾನಿ ಮೋದಿಗೆ ಧಿಕ್ಕಾರ ಹಾಕಿದ್ದು ಸಂವಿಧಾನ ವಿರೋಧಿ. ಸಲೀಂ ಅಹಮದ್ ಅವರನ್ನು ಸದನದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದರು.

ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು : ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಬಿಜೆಪಿ ಬೇಡಿಕೆಗೆ ಕಿಡಿಕಾರದ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಮೋದಿಗೆ ಧಿಕ್ಕಾರ ಕೂಗೋದು ಸಂವಿಧಾನ ವಿರೋಧಿ ಅಲ್ಲ, ಅದು ಪ್ರಜಾಪ್ರಭುತ್ವ. ಹಿಂದೆ ಅಮಿತ್ ಶಾರನ್ನು ಗಡಿಪಾರು ಮಾಡಿದ್ದರು. ಕೊಲೆ ಕೇಸ್​​ನಲ್ಲಿ ಗಡಿಪಾರು ಮಾಡಲಾಗಿತ್ತು. ಅಂತವರಿಗೆ ಧಿಕ್ಕಾರ ಕೂಗುವುದು ತಪ್ಪಲ್ಲ‌ ಎಂದು ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದ್ದನ್ನು ಸಮರ್ಥಿಸಿದರು.

ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರಿಂದ ಪರ- ವಿರೋಧಿ ಘೋಷಣೆ ಮೊಳಗಿತು. ಭಿತ್ತಿಪತ್ರ ಪ್ರದರ್ಶಿಸಿದ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಪರಿಸ್ಥಿತಿ ತಿಳಿಗಿಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೀಠದಿಂದ ಎದ್ದು ನಿಂತ ಸಭಾಪತಿ ಹೊರಟ್ಟಿ ಅವರು, ಸದನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

ಸದನ ಸರಿಯಾಗಿ ನಡೆಸಬೇಕು ಎನ್ನುವ ಸದುದ್ದೇಶದಿಂದ ಹೊರಟಿದ್ದೇವೆ. ಸದನದಲ್ಲಿಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದು ಬೇಡ, ಅವರು ಇಲ್ಲಿ ಬಂದು ಸಮರ್ಥನೆ ಮಾಡಿಕೊಳ್ಳಲು ಆಗಲ್ಲ. ಹಾಗಾಗಿ, ಸದನದ ಸದಸ್ಯರಲ್ಲದವರ ಹೆಸರು ಪ್ರಸ್ತಾಪಿಸದೆ ಕಲಾಪ ಸುಗಮವಾಗಿ ನಡೆಯಲು ಸಹಕಾರ ನೀಡಿ ಎಂದು ಮನವಿ ಮಾಡಿದರು.

ಸದನದಲ್ಲಿ ಇಲ್ಲದವರ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ, ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಬಗ್ಗೆ ಹಗುರವಾಗಿ ಮಾತನಾಡುವುದೂ ಸಲ್ಲದು, ಉತ್ತಮ ಪರಂಪರೆ ಹಾಕಲು ಎರಡೂ ಕಡೆ ಸಹಕಾರ ನೀಡಬೇಕು. ಘಟನೆ ನನಗೆ ನೋವಾಗಿದೆ. ಸದನದಲ್ಲಿ ಇಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡಿದ ಎರಡು ಕಡೆಯ ಹೆಸರುಗಳನ್ನು ಕಡತದಿಂದ ತೆಗೆದು ಹಾಕಿ ರೂಲಿಂಗ್ ನೀಡಿ ಧಿಕ್ಕಾರ ಪ್ರಹಸನಕ್ಕೆ ತೆರೆ ಎಳೆದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ನಾವು ಸದನದಲ್ಲಿ ಇಲ್ಲದ ವ್ಯಕ್ತಿಗಳ ಹೆಸರು ಪ್ರಸ್ತಾಪ ಮಾಡಲಿಲ್ಲ. ಈಶ್ವರಪ್ಪನವರ ವಿಚಾರ ಮಾತ್ರ ಪ್ರಸ್ತಾಪ ಮಾಡಿದ್ದೇವೆ. ಮೊದಲು ವಿವಾದ ಆರಂಭಿಸಿದ್ದೇ ಬಿಜೆಪಿಯವರು ಎಂದರು.

ನಂತರ ಮಾತನಾಡಿದ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್, ಬಿಜೆಪಿಯವರಿಗೆ ನಾಚಿಕೆಯಾಗಬೇಕು, ಮೋದಿ ವಿರುದ್ಧ ಮಾತನಾಡಿದ್ದಕ್ಕೆ ನನ್ನ ವಿರುದ್ಧ ದೇಶದ್ರೋಹದ ಕೇಸ್ ಹಾಕಬೇಕು ಎನ್ನುವ ಬೇಡಿಕೆ ಇಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದರು.

ಈ ವೇಳೆ ಮತ್ತೆ ಕಲಾಪದಲ್ಲಿ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಚೀಫ್‌ ವಿಪ್ ಪ್ರಕಾಶ್ ರಾಥೋಡ್, ತಾಕತ್ತಿದ್ದರೆ ಮೋದಿ ವಿರುದ್ಧ ಧಿಕ್ಕಾರ ಕೂಗಿದ ಸಲೀಂ ಅಹಮದ್ ವಿರುದ್ಧ ದೇಶದ್ರೋಹದ ಕೇಸ್ ಹಾಕಿ ನೋಡೋಣ ಎಂದು ಸವಾಲೆಸೆದರು. ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಈ ವೇಳೆ ಕೆರಳಿದ ಸಭಾಪತಿ ಬಸವರಾಜ ಹೊರಟ್ಟಿ, ನಿಮ್ಮ ಸಚೇತಕರನ್ನು ಸುಮ್ಮನಾಗಿಸಿ ಎಂದು ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್​ಗೆ ಸೂಚಿಸಿದರು. ಎರಡೂ ಕಡೆಗೂ ಅನ್ವಯ ಆಗುವಂತೆ ರೂಲಿಂಗ್ ನೀಡಿದ್ದೇನೆ, ಸದನದ ಸದಸ್ಯರಲ್ಲದವರ ಹೆಸರು ಕಡತದಿಂದ ತೆಗೆಸಿ ಹಾಕಲಾಗಿದೆ.

ಆದರೂ ಮತ್ತೆ ಈ ವಿಷಯದ ಚರ್ಚೆ ಏಕೆ ಎಂದು ಪ್ರಶ್ನಿಸಿ ಧಿಕ್ಕಾರ ಕುರಿತು ಚರ್ಚೆಗೆ ತೆರೆ ಎಳೆದು ಮುಂದಿನ ಕಲಾಪ ಕೈಗೆತ್ತಿಕೊಂಡು ವರದಿ ಮಂಡನೆಗೆ ಅನುಮತಿ ನೀಡಿದರು.

ವರದಿ ಮಂಡನೆ ನಂತರ ಬಿಜೆಪಿ ಸದಸ್ಯ ಪ್ರಾಣೇಶ್ ಮಾತನಾಡಿ, ಪೀಠದ ನಿರ್ಣಯವೇ ಅಂತಿಮ, ಪೀಠದ ತೀರ್ಪು ವಿರೋಧಿಸಿ ಹೋರಾಟ ಸಲ್ಲದು, ಇದರಿಂದ ಹೊಸಬರಿಗೆ ಏನು ಸಂದೇಶ ಹೋಗಲಿದೆ? ರೂಲಿಂಗ್ ಧಿಕ್ಕರಿಸಬಹುದು ಎನ್ನುವ ಭಾವನೆ ಹೊಸಬರಿಗೆ ಬರಬಾರದು.

ಈಗಾಗಲೇ ಈಶ್ವರಪ್ಪ ಹೇಳಿಕೆ ಕುರಿತ ಪ್ರಕರಣದ ಚರ್ಚೆಗೆ ಅವಕಾಶವಿಲ್ಲ ಎಂದು ರೂಲಿಂಗ್ ನೀಡಿದ್ದೀರಿ, ಆದರೂ ಮತ್ತೆ ಅದರ ಪ್ರಸ್ತಾಪಕ್ಕೆ ಅವಕಾಶ ನೀಡಿದ್ದೀರಿ. ಈಗ ಕಾಂಗ್ರೆಸ್ ಮತ್ತೆ ಅದೇ ವಿಷಯ ಹಿಡಿದು ಹೋರಾಟ ನಡೆಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಹೀಗಾದಲ್ಲಿ, ಪೀಠದ ಗೌರವ ಏನಾಗಬೇಕು, ಕೂಡಲೇ ಪೀಠದ ನಿರ್ಣಯ ವಿರೋಧಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಇನ್ಮುಂದೆ ಅಂತಹ ಘಟನೆ ಆದಲ್ಲಿ ಕಠಿಣ ಕ್ರಮದ ಭರವಸೆ ನೀಡಿದರು. ಆದರೂ ಕಲಾಪಕ್ಕೆ ಅವಕಾಶ ನೀಡದ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು.

ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿ ಭಿತ್ತಿ ಪತ್ರ ಪ್ರದರ್ಶನ ಮಾಡಿದರು. ಪದೇಪದೆ ಮನವಿ ಮಾಡಿದರೂ ಕಾಂಗ್ರೆಸ್ ಸದಸ್ಯರ ಸಹಕಾರ ಸಿಗದ ಹಿನ್ನೆಲೆಯಲ್ಲಿ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಯಿತು.

ಬೆಂಗಳೂರು : ಸಚಿವ ಕೆ ಎಸ್‌ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ವಿಧಾನ ಪರಿಷತ್​​ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಶುಕ್ರವಾರದ ಕಲಾಪ ಬಲಿಯಾಯಿತು. ಕಾಂಗ್ರೆಸ್, ಬಿಜೆಪಿ ಸದಸ್ಯರ ವಾಗ್ವಾದ, ಆರೋಪ-ಪ್ರತ್ಯಾರೋಪಗಳ ಘೋಷಣೆ ಮೊಳಗಿ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಗಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಯಿತು.

ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಈಶ್ವರಪ್ಪ ವಿಷಯದ ಗದ್ದಲ ಆರಂಭಗೊಂಡಿದ್ದರಿಂದ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು. ಮುಂದೂಡಿಕೆಯಾಗಿದ್ದ ಕಲಾಪ ಪುನಾರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಸರ್ಕಾರದಿಂದ ಕ್ರಮದ ಭರವಸೆ ಸಿಗುವವರೆಗೂ ಧರಣಿ ಬಿಡಲ್ಲ. ಈಶ್ವರಪ್ಪ ವಜಾ ಆಗಲೇಬೇಕು ಎಂದರು.

ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ಪ್ರಧಾನಿ ಮೋದಿಗೆ ಧಿಕ್ಕಾರ ಹಾಕಿದ್ದು ಸಂವಿಧಾನ ವಿರೋಧಿ. ಸಲೀಂ ಅಹಮದ್ ಅವರನ್ನು ಸದನದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದರು.

ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು : ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಬಿಜೆಪಿ ಬೇಡಿಕೆಗೆ ಕಿಡಿಕಾರದ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಮೋದಿಗೆ ಧಿಕ್ಕಾರ ಕೂಗೋದು ಸಂವಿಧಾನ ವಿರೋಧಿ ಅಲ್ಲ, ಅದು ಪ್ರಜಾಪ್ರಭುತ್ವ. ಹಿಂದೆ ಅಮಿತ್ ಶಾರನ್ನು ಗಡಿಪಾರು ಮಾಡಿದ್ದರು. ಕೊಲೆ ಕೇಸ್​​ನಲ್ಲಿ ಗಡಿಪಾರು ಮಾಡಲಾಗಿತ್ತು. ಅಂತವರಿಗೆ ಧಿಕ್ಕಾರ ಕೂಗುವುದು ತಪ್ಪಲ್ಲ‌ ಎಂದು ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದ್ದನ್ನು ಸಮರ್ಥಿಸಿದರು.

ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರಿಂದ ಪರ- ವಿರೋಧಿ ಘೋಷಣೆ ಮೊಳಗಿತು. ಭಿತ್ತಿಪತ್ರ ಪ್ರದರ್ಶಿಸಿದ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಪರಿಸ್ಥಿತಿ ತಿಳಿಗಿಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೀಠದಿಂದ ಎದ್ದು ನಿಂತ ಸಭಾಪತಿ ಹೊರಟ್ಟಿ ಅವರು, ಸದನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

ಸದನ ಸರಿಯಾಗಿ ನಡೆಸಬೇಕು ಎನ್ನುವ ಸದುದ್ದೇಶದಿಂದ ಹೊರಟಿದ್ದೇವೆ. ಸದನದಲ್ಲಿಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದು ಬೇಡ, ಅವರು ಇಲ್ಲಿ ಬಂದು ಸಮರ್ಥನೆ ಮಾಡಿಕೊಳ್ಳಲು ಆಗಲ್ಲ. ಹಾಗಾಗಿ, ಸದನದ ಸದಸ್ಯರಲ್ಲದವರ ಹೆಸರು ಪ್ರಸ್ತಾಪಿಸದೆ ಕಲಾಪ ಸುಗಮವಾಗಿ ನಡೆಯಲು ಸಹಕಾರ ನೀಡಿ ಎಂದು ಮನವಿ ಮಾಡಿದರು.

ಸದನದಲ್ಲಿ ಇಲ್ಲದವರ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ, ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಬಗ್ಗೆ ಹಗುರವಾಗಿ ಮಾತನಾಡುವುದೂ ಸಲ್ಲದು, ಉತ್ತಮ ಪರಂಪರೆ ಹಾಕಲು ಎರಡೂ ಕಡೆ ಸಹಕಾರ ನೀಡಬೇಕು. ಘಟನೆ ನನಗೆ ನೋವಾಗಿದೆ. ಸದನದಲ್ಲಿ ಇಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡಿದ ಎರಡು ಕಡೆಯ ಹೆಸರುಗಳನ್ನು ಕಡತದಿಂದ ತೆಗೆದು ಹಾಕಿ ರೂಲಿಂಗ್ ನೀಡಿ ಧಿಕ್ಕಾರ ಪ್ರಹಸನಕ್ಕೆ ತೆರೆ ಎಳೆದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ನಾವು ಸದನದಲ್ಲಿ ಇಲ್ಲದ ವ್ಯಕ್ತಿಗಳ ಹೆಸರು ಪ್ರಸ್ತಾಪ ಮಾಡಲಿಲ್ಲ. ಈಶ್ವರಪ್ಪನವರ ವಿಚಾರ ಮಾತ್ರ ಪ್ರಸ್ತಾಪ ಮಾಡಿದ್ದೇವೆ. ಮೊದಲು ವಿವಾದ ಆರಂಭಿಸಿದ್ದೇ ಬಿಜೆಪಿಯವರು ಎಂದರು.

ನಂತರ ಮಾತನಾಡಿದ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್, ಬಿಜೆಪಿಯವರಿಗೆ ನಾಚಿಕೆಯಾಗಬೇಕು, ಮೋದಿ ವಿರುದ್ಧ ಮಾತನಾಡಿದ್ದಕ್ಕೆ ನನ್ನ ವಿರುದ್ಧ ದೇಶದ್ರೋಹದ ಕೇಸ್ ಹಾಕಬೇಕು ಎನ್ನುವ ಬೇಡಿಕೆ ಇಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದರು.

ಈ ವೇಳೆ ಮತ್ತೆ ಕಲಾಪದಲ್ಲಿ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಚೀಫ್‌ ವಿಪ್ ಪ್ರಕಾಶ್ ರಾಥೋಡ್, ತಾಕತ್ತಿದ್ದರೆ ಮೋದಿ ವಿರುದ್ಧ ಧಿಕ್ಕಾರ ಕೂಗಿದ ಸಲೀಂ ಅಹಮದ್ ವಿರುದ್ಧ ದೇಶದ್ರೋಹದ ಕೇಸ್ ಹಾಕಿ ನೋಡೋಣ ಎಂದು ಸವಾಲೆಸೆದರು. ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಈ ವೇಳೆ ಕೆರಳಿದ ಸಭಾಪತಿ ಬಸವರಾಜ ಹೊರಟ್ಟಿ, ನಿಮ್ಮ ಸಚೇತಕರನ್ನು ಸುಮ್ಮನಾಗಿಸಿ ಎಂದು ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್​ಗೆ ಸೂಚಿಸಿದರು. ಎರಡೂ ಕಡೆಗೂ ಅನ್ವಯ ಆಗುವಂತೆ ರೂಲಿಂಗ್ ನೀಡಿದ್ದೇನೆ, ಸದನದ ಸದಸ್ಯರಲ್ಲದವರ ಹೆಸರು ಕಡತದಿಂದ ತೆಗೆಸಿ ಹಾಕಲಾಗಿದೆ.

ಆದರೂ ಮತ್ತೆ ಈ ವಿಷಯದ ಚರ್ಚೆ ಏಕೆ ಎಂದು ಪ್ರಶ್ನಿಸಿ ಧಿಕ್ಕಾರ ಕುರಿತು ಚರ್ಚೆಗೆ ತೆರೆ ಎಳೆದು ಮುಂದಿನ ಕಲಾಪ ಕೈಗೆತ್ತಿಕೊಂಡು ವರದಿ ಮಂಡನೆಗೆ ಅನುಮತಿ ನೀಡಿದರು.

ವರದಿ ಮಂಡನೆ ನಂತರ ಬಿಜೆಪಿ ಸದಸ್ಯ ಪ್ರಾಣೇಶ್ ಮಾತನಾಡಿ, ಪೀಠದ ನಿರ್ಣಯವೇ ಅಂತಿಮ, ಪೀಠದ ತೀರ್ಪು ವಿರೋಧಿಸಿ ಹೋರಾಟ ಸಲ್ಲದು, ಇದರಿಂದ ಹೊಸಬರಿಗೆ ಏನು ಸಂದೇಶ ಹೋಗಲಿದೆ? ರೂಲಿಂಗ್ ಧಿಕ್ಕರಿಸಬಹುದು ಎನ್ನುವ ಭಾವನೆ ಹೊಸಬರಿಗೆ ಬರಬಾರದು.

ಈಗಾಗಲೇ ಈಶ್ವರಪ್ಪ ಹೇಳಿಕೆ ಕುರಿತ ಪ್ರಕರಣದ ಚರ್ಚೆಗೆ ಅವಕಾಶವಿಲ್ಲ ಎಂದು ರೂಲಿಂಗ್ ನೀಡಿದ್ದೀರಿ, ಆದರೂ ಮತ್ತೆ ಅದರ ಪ್ರಸ್ತಾಪಕ್ಕೆ ಅವಕಾಶ ನೀಡಿದ್ದೀರಿ. ಈಗ ಕಾಂಗ್ರೆಸ್ ಮತ್ತೆ ಅದೇ ವಿಷಯ ಹಿಡಿದು ಹೋರಾಟ ನಡೆಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಹೀಗಾದಲ್ಲಿ, ಪೀಠದ ಗೌರವ ಏನಾಗಬೇಕು, ಕೂಡಲೇ ಪೀಠದ ನಿರ್ಣಯ ವಿರೋಧಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಇನ್ಮುಂದೆ ಅಂತಹ ಘಟನೆ ಆದಲ್ಲಿ ಕಠಿಣ ಕ್ರಮದ ಭರವಸೆ ನೀಡಿದರು. ಆದರೂ ಕಲಾಪಕ್ಕೆ ಅವಕಾಶ ನೀಡದ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು.

ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿ ಭಿತ್ತಿ ಪತ್ರ ಪ್ರದರ್ಶನ ಮಾಡಿದರು. ಪದೇಪದೆ ಮನವಿ ಮಾಡಿದರೂ ಕಾಂಗ್ರೆಸ್ ಸದಸ್ಯರ ಸಹಕಾರ ಸಿಗದ ಹಿನ್ನೆಲೆಯಲ್ಲಿ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಯಿತು.

Last Updated : Feb 18, 2022, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.