ಬೆಂಗಳೂರು: ಮಾಜಿ ಸಚಿವ ಡಿ. ಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಜಾರಿಗೊಳಿಸಿದ ಸಮನ್ಸ್ ಅನ್ನು ರದ್ದು ಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನಾಳೆ ಹೈಕೋರ್ಟ್ ಅಂತಿಮ ತೀರ್ಪು ಪ್ರಕಟ ಮಾಡಲಿದೆ.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ತೀರ್ಪಿಗೆ ಸಂಬಂಧ ಪಟ್ಟಂತೆ ಉಕ್ತಲೇಖನ ನೀಡುತ್ತಿದ್ದು, ನಾಳೆ ತೀರ್ಪನ್ನ ಪ್ರಕಟಿಸುವುದಾಗಿ ನ್ಯಾಯಲಯ ತಿಳಿಸಿದೆ. ದೆಹಲಿಯ ಫ್ಲಾಟ್ವೊಂದರಲ್ಲಿ 8.59 ಕೋಟಿ ರೂ. ಹಣ ಸಿಕ್ಕ ಬಗ್ಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಇದನ್ನು ಪ್ರಶ್ನಿಸಿದ್ದರು. ಜೊತೆಗೆ ಪ್ರಸಿದ್ಧ ವಕೀಲ ಕಪಿಲ್ ಸಿಬಲ್ ಡಿಕೆಶಿ ಪರ ವಾದ ಮಂಡಿಸಿದ್ದರು.
ಈ ಪ್ರಕರಣದ ಕುರಿತು ಹೈಕೋರ್ಟ್ ನಾಳೆ ಅಂತಿಮ ತೀರ್ಪು ನೀಡುವ ಸಂಭವವಿದ್ದು, ಎಲ್ಲರಲ್ಲೂ ಕಾತುರ ಮನೆಮಾಡಿದೆ.