ETV Bharat / city

ನಕಲಿ ದಾಖಲೆ ಸೃಷ್ಟಿಸಿ ರೈತರಿಗೆ ಕದ್ದ ಟ್ರ್ಯಾಕ್ಟರ್​​ ಮಾರಾಟ: ಐವರ ಬಂಧನ

author img

By

Published : Dec 29, 2020, 3:42 PM IST

ನಕಲಿ ದಾಖಲೆ ಸೃಷ್ಟಿಸಿ ರೈತರಿಗೆ ಕದ್ದ ಟ್ರ್ಯಾಕ್ಟರ್​ಗಳನ್ನು ಮಾರಾಟ ಮಾಡುತ್ತಿದ್ದ ಐವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದು, ಇವರಿಂದ 1 ಕೋಟಿ 46 ಲಕ್ಷ 40 ಸಾವಿರ ರೂ. ಮೌಲ್ಯದ 26 ಟ್ರ್ಯಾಕ್ಟರ್​​ಗಳು, 5 ಮಾರುತಿ ಓಮಿನಿ, 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

create-a-dummy-record-and-sell-tractor-to-farmers
ನಕಲಿ ದಾಖಲೆ ಸೃಷ್ಟಿಸಿ ರೈತರಿಗೆ ಟ್ರ್ಯಾಕ್ಟರ್​​ ಮಾರಾಟ: ಐವರ ಬಂಧನ

ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಕಳ್ಳತನವಾಗಿದ್ದು, ಈ ಟ್ರ್ಯಾಕ್ಟರ್ ಕಳ್ಳರನ್ನು ಹಿಡಿದಾಗ ಹಲವಾರು ಪ್ರಕರಣಗಳು ಪತ್ತೆಯಾಗಿವೆ.

ನಕಲಿ ದಾಖಲೆ ಸೃಷ್ಟಿಸಿ ರೈತರಿಗೆ ಟ್ರ್ಯಾಕ್ಟರ್​​ ಮಾರಾಟ: ಐವರ ಬಂಧನ

ಕಾಮಾಕ್ಷಿಪಾಳ್ಯ ಠಾಣಾ ಇನ್ಸ್​ಪೆಕ್ಟರ್​ ನೇತೃತ್ವದ ತಂಡ ಟ್ರ್ಯಾಕ್ಟರ್ ಕಳ್ಳತನ ವಿಚಾರವಾಗಿ ಮೊದಲು ಬೋರೇಗೌಡ ಎಂಬಾತನನ್ನು ಬಂಧಿಸಿದ್ದರು. ಆತನ ವಿಚಾರಣೆ ನಡೆಸಿದಾಗ ಇನ್ನುಳಿದ ಐವರ ಬಗ್ಗೆ ಸುಳಿವು ಸಿಕ್ಕಿದ್ದು, ಈ 5 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆನಂದ, ಯಾಕೂಬ್ ಖಾನ್, ಲಿಂಗಪ್ಪ, ಕೆ.ಲೋಕೇಶ್​, ವಿ.ಲೋಕೇಶ್ ಬಂಧಿತ ಆರೋಪಿಗಳು. ಇವರಿಂದ 1 ಕೋಟಿ 46 ಲಕ್ಷ 40 ಸಾವಿರ ರೂ. ಮೌಲ್ಯದ 26 ಟ್ರ್ಯಾಕ್ಟರ್​​ಗಳು, 5 ಮಾರುತಿ ಓಮಿನಿ, 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ವಿ.ಲೋಕೇಶ ಮಂಡ್ಯದ ನಿವಾಸಿ ಆನಂದ್​ ಎಂಬುವವರ ಬಳಿ ಕಳವು ಮಾಡಿದ್ದ ಟ್ರ್ಯಾಕ್ಟರ್​ಗಳ ಇಂಜಿನ್​ ಹಾಗೂ ನಂಬರ್​ಗಳನ್ನು ಬದಲಾಯಿಸುತ್ತಿದ್ದ. ಬಳಿಕ ಎಲೆಕ್ಟ್ರಾನಿಕ್ ಸಿಟಿ ಆರ್​ಟಿಒ ಕಚೇರಿ ಸೇರಿದಂತೆ ವಿವಿಧ ಆರ್​ಟಿಒ ಕಚೇರಿಗಳಲ್ಲಿ ಹೊಸದಾಗಿ ವಾಹನಗಳಿಗೆ ನಕಲಿ ಸೇಲ್ ಸರ್ಟಿಫಿಕೇಟ್​ಗಳನ್ನು ಸೃಷ್ಟಿಸುತ್ತಿದ್ದರು.

ಓದಿ: ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿದ್ದ ಕನ್ನಡ ಧ್ವಜಸ್ತಂಭ ಧ್ವಂಸ

ಹೀಗೆ ನಕಲಿ ದಾಖಲೆ​ ಸೃಷ್ಟಿಸಿ ಮಂಡ್ಯ, ತುಮಕೂರು, ಮೈಸೂರು ಸೇರಿದಂತೆ ವಿವಿಧ ರೈತರಿಗೆ ಟ್ರ್ಯಾಕ್ಟರ್​ಗಳನ್ನು ಮಾರಾಟ ಮಾಡುತ್ತಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ 30 ಸಾವಿರ ನಗದು ಬಹುಮಾನ ಘೋಷಿಸಿ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಕಳ್ಳತನವಾಗಿದ್ದು, ಈ ಟ್ರ್ಯಾಕ್ಟರ್ ಕಳ್ಳರನ್ನು ಹಿಡಿದಾಗ ಹಲವಾರು ಪ್ರಕರಣಗಳು ಪತ್ತೆಯಾಗಿವೆ.

ನಕಲಿ ದಾಖಲೆ ಸೃಷ್ಟಿಸಿ ರೈತರಿಗೆ ಟ್ರ್ಯಾಕ್ಟರ್​​ ಮಾರಾಟ: ಐವರ ಬಂಧನ

ಕಾಮಾಕ್ಷಿಪಾಳ್ಯ ಠಾಣಾ ಇನ್ಸ್​ಪೆಕ್ಟರ್​ ನೇತೃತ್ವದ ತಂಡ ಟ್ರ್ಯಾಕ್ಟರ್ ಕಳ್ಳತನ ವಿಚಾರವಾಗಿ ಮೊದಲು ಬೋರೇಗೌಡ ಎಂಬಾತನನ್ನು ಬಂಧಿಸಿದ್ದರು. ಆತನ ವಿಚಾರಣೆ ನಡೆಸಿದಾಗ ಇನ್ನುಳಿದ ಐವರ ಬಗ್ಗೆ ಸುಳಿವು ಸಿಕ್ಕಿದ್ದು, ಈ 5 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆನಂದ, ಯಾಕೂಬ್ ಖಾನ್, ಲಿಂಗಪ್ಪ, ಕೆ.ಲೋಕೇಶ್​, ವಿ.ಲೋಕೇಶ್ ಬಂಧಿತ ಆರೋಪಿಗಳು. ಇವರಿಂದ 1 ಕೋಟಿ 46 ಲಕ್ಷ 40 ಸಾವಿರ ರೂ. ಮೌಲ್ಯದ 26 ಟ್ರ್ಯಾಕ್ಟರ್​​ಗಳು, 5 ಮಾರುತಿ ಓಮಿನಿ, 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ವಿ.ಲೋಕೇಶ ಮಂಡ್ಯದ ನಿವಾಸಿ ಆನಂದ್​ ಎಂಬುವವರ ಬಳಿ ಕಳವು ಮಾಡಿದ್ದ ಟ್ರ್ಯಾಕ್ಟರ್​ಗಳ ಇಂಜಿನ್​ ಹಾಗೂ ನಂಬರ್​ಗಳನ್ನು ಬದಲಾಯಿಸುತ್ತಿದ್ದ. ಬಳಿಕ ಎಲೆಕ್ಟ್ರಾನಿಕ್ ಸಿಟಿ ಆರ್​ಟಿಒ ಕಚೇರಿ ಸೇರಿದಂತೆ ವಿವಿಧ ಆರ್​ಟಿಒ ಕಚೇರಿಗಳಲ್ಲಿ ಹೊಸದಾಗಿ ವಾಹನಗಳಿಗೆ ನಕಲಿ ಸೇಲ್ ಸರ್ಟಿಫಿಕೇಟ್​ಗಳನ್ನು ಸೃಷ್ಟಿಸುತ್ತಿದ್ದರು.

ಓದಿ: ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿದ್ದ ಕನ್ನಡ ಧ್ವಜಸ್ತಂಭ ಧ್ವಂಸ

ಹೀಗೆ ನಕಲಿ ದಾಖಲೆ​ ಸೃಷ್ಟಿಸಿ ಮಂಡ್ಯ, ತುಮಕೂರು, ಮೈಸೂರು ಸೇರಿದಂತೆ ವಿವಿಧ ರೈತರಿಗೆ ಟ್ರ್ಯಾಕ್ಟರ್​ಗಳನ್ನು ಮಾರಾಟ ಮಾಡುತ್ತಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ 30 ಸಾವಿರ ನಗದು ಬಹುಮಾನ ಘೋಷಿಸಿ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.