ETV Bharat / city

ಗ್ರಾಹಕರಿಗೆ 3ಅಡಿ ಅಂತರ ಕಾಯ್ದುಕೊಳ್ಳಲು ವೃತ್ತ ರಚಿಸಿದ ಸೂಪರ್ ಮಾರ್ಕೆಟ್​​ಗಳು

ಒಟ್ಟಿನಲ್ಲಿ ಆತಂಕ ಬೇಡ ಎಂದು ಸರ್ಕಾರ ಜನರಲ್ಲಿ ಎಷ್ಟೇ ಮನವಿ ಮಾಡಿದರೂ ಗಾಬರಿಯಿಂದ ಅಗತ್ಯ ವಸ್ತುಗಳ ಖರೀದಿಸಲು ಮುಗಿಬೀಳುತ್ತಿರುವುದು ವಿಪರ್ಯಾಸವೇ ಸರಿ.

author img

By

Published : Mar 24, 2020, 9:58 PM IST

coronavirus-phobia
ಗ್ರಾಹಕರ ಅಂತರ

ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಸ್ತಬ್ದವಾಗಿದೆ. ಆದರೆ, ಒಂದಷ್ಟು ಜನರಿಗೆ ನಾಳಿನ ಯುಗಾದಿ ಹಬ್ಬದ್ದೇ ಚಿಂತೆಯಾಗಿದೆ.

ನಾಳೆಯಿಂದ ಎಲ್ಲಿ ಅಗತ್ಯ ವಸ್ತುಗಳು ಸಿಗುವುದಿಲ್ಲವೋ ಎಂಬ ಭಯದಿಂದ ಸೂಪರ್ ಮಾರ್ಕೆಟ್​​ಗಳ ಕಡೆ ಜನ ಮುಗಿ ಬೀಳುತ್ತಿದ್ದಾರೆ. ಅಗತ್ಯ ವಸ್ತುಗಳ ಕೊರತೆ ಕಾಣುವುದಿಲ್ಲ ಎಂದು ಸರ್ಕಾರ ಜನರಿಗೆ ಪರಿಪರಿಯಾಗಿ ಮನವಿ ಮಾಡಿದರೂ, ಅದಕ್ಕೆ ಕಿವಿಗೊಡುತ್ತಿಲ್ಲ.

ಗ್ರಾಹಕರ ಅಂತರ

ಇದರ ಗಂಭೀರತೆ ಅರಿತ ಸೂಪರ್​ ಮಾರ್ಕೆಟ್​​ಗಳು ಗ್ರಾಹಕರು ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳಲು ಉಪಾಯ ಮಾಡಿವೆ. ಇಸ್ರೋ ಲೇಔಟ್​​ನ ಸ್ಟಾರ್ ಸೂಪರ್​​ ಮಾರ್ಕೆಟ್​​​ನಲ್ಲಿ ಗ್ರಾಹಕರು ಮೂರು ಅಡಿ ಅಂತರ ಕಾಯ್ದುಕೊಳ್ಳಲು ಪ್ರತಿ ಗ್ರಾಹಕರೂ ನಿಂತುಕೊಳ್ಳಲು ವೃತ್ತ ಹಾಕಲಾಗಿದೆ.

ಹಾಪ್​​ಕಾಮ್ಸ್​​ ಹಾಗೂ ತರಕಾರಿ ಹಣ್ಣು ಮಳಿಗೆಗಳು ಸಹ ಅದೇ ರೀತಿ ಮಾಡಿವೆ. ಜನರು ಸಾಲಗಿ ನಿಂತು ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನ ಖರೀದಿಸಿದರು.

ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಸ್ತಬ್ದವಾಗಿದೆ. ಆದರೆ, ಒಂದಷ್ಟು ಜನರಿಗೆ ನಾಳಿನ ಯುಗಾದಿ ಹಬ್ಬದ್ದೇ ಚಿಂತೆಯಾಗಿದೆ.

ನಾಳೆಯಿಂದ ಎಲ್ಲಿ ಅಗತ್ಯ ವಸ್ತುಗಳು ಸಿಗುವುದಿಲ್ಲವೋ ಎಂಬ ಭಯದಿಂದ ಸೂಪರ್ ಮಾರ್ಕೆಟ್​​ಗಳ ಕಡೆ ಜನ ಮುಗಿ ಬೀಳುತ್ತಿದ್ದಾರೆ. ಅಗತ್ಯ ವಸ್ತುಗಳ ಕೊರತೆ ಕಾಣುವುದಿಲ್ಲ ಎಂದು ಸರ್ಕಾರ ಜನರಿಗೆ ಪರಿಪರಿಯಾಗಿ ಮನವಿ ಮಾಡಿದರೂ, ಅದಕ್ಕೆ ಕಿವಿಗೊಡುತ್ತಿಲ್ಲ.

ಗ್ರಾಹಕರ ಅಂತರ

ಇದರ ಗಂಭೀರತೆ ಅರಿತ ಸೂಪರ್​ ಮಾರ್ಕೆಟ್​​ಗಳು ಗ್ರಾಹಕರು ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳಲು ಉಪಾಯ ಮಾಡಿವೆ. ಇಸ್ರೋ ಲೇಔಟ್​​ನ ಸ್ಟಾರ್ ಸೂಪರ್​​ ಮಾರ್ಕೆಟ್​​​ನಲ್ಲಿ ಗ್ರಾಹಕರು ಮೂರು ಅಡಿ ಅಂತರ ಕಾಯ್ದುಕೊಳ್ಳಲು ಪ್ರತಿ ಗ್ರಾಹಕರೂ ನಿಂತುಕೊಳ್ಳಲು ವೃತ್ತ ಹಾಕಲಾಗಿದೆ.

ಹಾಪ್​​ಕಾಮ್ಸ್​​ ಹಾಗೂ ತರಕಾರಿ ಹಣ್ಣು ಮಳಿಗೆಗಳು ಸಹ ಅದೇ ರೀತಿ ಮಾಡಿವೆ. ಜನರು ಸಾಲಗಿ ನಿಂತು ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನ ಖರೀದಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.