ETV Bharat / city

ಸಂಶೋಧನಾ ಅಂಶಗಳು ಡ್ರಗ್ಸ್ ರೂಪದಲ್ಲಿ ಬಂದಾಗಷ್ಟೇ ಕ್ಯಾನ್ಸರ್ ಮುಕ್ತಿಗೆ ಅವಕಾಶ - ಕ್ಯಾನ್ಸರ್ ಶ್ರೀಮಂತರ ಕಾಯಿಲೆ

ಕ್ಯಾನ್ಸರ್​ ರೋಗ ಜೀವಸಂಕುಲಕ್ಕೆ ಮಾರಕವಾಗಿದ್ದು, ಭಾರತದಲ್ಲಿ ಶೇ.7ರಷ್ಟು ಜನರನ್ನು ಬಲಿಪಡೆದಿದೆ. ಈ ರೋಗಕ್ಕೆ ಮುಕ್ತಿ ಹಾಡಲು ಸಾಕಷ್ಟು ಸಂಶೋಧನೆಗಳು ನಡೆದಿವೆ. ಆದ್ರೆ ಸಂಶೋಧನೆಗಳು ಡ್ರಗ್ಸ್​ ರೂಪದಲ್ಲಿ ಬಂದಾಗಷ್ಟೇ, ಕ್ಯಾನ್ಸರ್ ಗುಣಮುಖ ಮಾಡಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.

ಕ್ಯಾನ್ಸರ್​ ಕುರಿತಾದ ಸಂಶೋಧನೆ ಬಗ್ಗೆ ಮಾತನಾಡಿದ ಪ್ರಾಧ್ಯಾಪಕ ಸುರೇಶ್ ಬಾಬು ಅಭಿಪ್ರಾಯ
author img

By

Published : Oct 10, 2019, 11:47 PM IST

ಬೆಂಗಳೂರು: ಕ್ಯಾನ್ಸರ್.. ಈ ಪದವನ್ನು ಕೇಳಿದರೆ ಸಾಕು. ಜನರು ಭಯಭೀತರಾಗುತ್ತಾರೆ. ಕ್ಯಾನ್ಸರ್ ಶ್ರೀಮಂತರ ಕಾಯಿಲೆ ಎಂಬ ಮಾತಿತ್ತು. ಆದ್ರೀಗ ಸಾಮಾನ್ಯರನ್ನೂ ಈ ಮಾರಕ ರೋಗ ಬಾಧಿಸುತ್ತಿದೆ. ಭಾರತದಲ್ಲಿ ಶೇಕಡ 7ರಷ್ಟು ಸಾವುಗಳು ಈ ಮಹಾಮಾರಿಯಿಂದ್ಲೇ ಸಂಭವಿಸುತ್ತಿವೆ ಎಂದು ವರದಿ ಆಗಿದೆ.

ಕ್ಯಾನ್ಸರ್​ ಕುರಿತಾದ ಸಂಶೋಧನೆ ಬಗ್ಗೆ ಪ್ರಾಧ್ಯಾಪಕ ಸುರೇಶ್ ಬಾಬು ಅಭಿಪ್ರಾಯ

ಇತ್ತ ಕ್ಯಾನ್ಸರ್ ಸಂಬಂಧ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದರೂ, ವ್ಯಕ್ತಿಯನ್ನು ಕ್ಯಾನ್ಸರ್​ನಿಂದ ಪೂರ್ಣ ಗುಣಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಕ್ಯಾನ್ಸರ್ ರೋಗ ಹೀಗೆಯೇ ಬರುತ್ತದೆ ಎಂದು ಹೇಳುವುದಾಗಲಿ, ಸ್ಪಷ್ಟ ಕಾರಣ ಹುಡುವುದಾಗಲಿ ಇದುವರೆಗೂ ಸಾಧ್ಯವಾಗಿಲ್ಲ. ಕ್ಯಾನ್ಸರ್​ ರೋಗ ನಾನಾ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಮುಕ್ತಿ ಹಾಡಲು ಸಂಶೋಧನೆಗಳು ನಡೆಯುತ್ತಲೇ ಇವೆ.

ಮೊನ್ನೆಯಷ್ಟೇ ವೈದ್ಯಕೀಯ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಬಂದಿದ್ದು, ಅದರಲ್ಲಿ ಆಕ್ಸಿಜನ್ ಮತ್ತು ಕ್ಯಾನ್ಸರ್​ಗೆ ಸಂಬಂಧಪಟ್ಟ ಸಂಶೋಧನೆ ಕುರಿತಂತೆ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಲಭಿಸಿದೆ‌. ಈ ಸಂಶೋಧನೆಯಿಂದ ಮುಖ್ಯವಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಯಾವ ರೀತಿ ತಡೆಗಟ್ಟಬಹುದು, ಆಮ್ಲಜನಕದ ಅವಶ್ಯಕತೆಗೆ ತಕ್ಕಂತೆ ಜೀವಕೋಶಗಳು ಹೇಗೆ ಹೊಂದಿಕೊಳ್ಳುತ್ತವೆ ಹಾಗೂ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಪತ್ತೆ ಹಚ್ಚಬಹುದು ಎಂಬ ಬಗ್ಗೆ ಅಧ್ಯಯನ ನಡೆದಿದೆ. ಈ ಪರಿಕಲ್ಪನೆ ಬಳಸಿಕೊಂಡು ಯಾವ ರೀತಿಯಲ್ಲಿ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂಬುದನ್ನ ತಿಳಿಯಬಹುದಾಗಿದೆ.

ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಈ ಸಂಶೋಧನೆಗಳು ಸಹಾಯವಾಗಲಿದೆ. ಅದರಲ್ಲೂ ಈ ಸಂಶೋಧನೆಗಳು ಡ್ರಗ್ಸ್​ ರೂಪದಲ್ಲಿ ಬಂದಾಗಷ್ಟೇ, ಕ್ಯಾನ್ಸರ್ ಗುಣಮುಖ ಮಾಡಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.

ಬೆಂಗಳೂರು: ಕ್ಯಾನ್ಸರ್.. ಈ ಪದವನ್ನು ಕೇಳಿದರೆ ಸಾಕು. ಜನರು ಭಯಭೀತರಾಗುತ್ತಾರೆ. ಕ್ಯಾನ್ಸರ್ ಶ್ರೀಮಂತರ ಕಾಯಿಲೆ ಎಂಬ ಮಾತಿತ್ತು. ಆದ್ರೀಗ ಸಾಮಾನ್ಯರನ್ನೂ ಈ ಮಾರಕ ರೋಗ ಬಾಧಿಸುತ್ತಿದೆ. ಭಾರತದಲ್ಲಿ ಶೇಕಡ 7ರಷ್ಟು ಸಾವುಗಳು ಈ ಮಹಾಮಾರಿಯಿಂದ್ಲೇ ಸಂಭವಿಸುತ್ತಿವೆ ಎಂದು ವರದಿ ಆಗಿದೆ.

ಕ್ಯಾನ್ಸರ್​ ಕುರಿತಾದ ಸಂಶೋಧನೆ ಬಗ್ಗೆ ಪ್ರಾಧ್ಯಾಪಕ ಸುರೇಶ್ ಬಾಬು ಅಭಿಪ್ರಾಯ

ಇತ್ತ ಕ್ಯಾನ್ಸರ್ ಸಂಬಂಧ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದರೂ, ವ್ಯಕ್ತಿಯನ್ನು ಕ್ಯಾನ್ಸರ್​ನಿಂದ ಪೂರ್ಣ ಗುಣಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಕ್ಯಾನ್ಸರ್ ರೋಗ ಹೀಗೆಯೇ ಬರುತ್ತದೆ ಎಂದು ಹೇಳುವುದಾಗಲಿ, ಸ್ಪಷ್ಟ ಕಾರಣ ಹುಡುವುದಾಗಲಿ ಇದುವರೆಗೂ ಸಾಧ್ಯವಾಗಿಲ್ಲ. ಕ್ಯಾನ್ಸರ್​ ರೋಗ ನಾನಾ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಮುಕ್ತಿ ಹಾಡಲು ಸಂಶೋಧನೆಗಳು ನಡೆಯುತ್ತಲೇ ಇವೆ.

ಮೊನ್ನೆಯಷ್ಟೇ ವೈದ್ಯಕೀಯ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಬಂದಿದ್ದು, ಅದರಲ್ಲಿ ಆಕ್ಸಿಜನ್ ಮತ್ತು ಕ್ಯಾನ್ಸರ್​ಗೆ ಸಂಬಂಧಪಟ್ಟ ಸಂಶೋಧನೆ ಕುರಿತಂತೆ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಲಭಿಸಿದೆ‌. ಈ ಸಂಶೋಧನೆಯಿಂದ ಮುಖ್ಯವಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಯಾವ ರೀತಿ ತಡೆಗಟ್ಟಬಹುದು, ಆಮ್ಲಜನಕದ ಅವಶ್ಯಕತೆಗೆ ತಕ್ಕಂತೆ ಜೀವಕೋಶಗಳು ಹೇಗೆ ಹೊಂದಿಕೊಳ್ಳುತ್ತವೆ ಹಾಗೂ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಪತ್ತೆ ಹಚ್ಚಬಹುದು ಎಂಬ ಬಗ್ಗೆ ಅಧ್ಯಯನ ನಡೆದಿದೆ. ಈ ಪರಿಕಲ್ಪನೆ ಬಳಸಿಕೊಂಡು ಯಾವ ರೀತಿಯಲ್ಲಿ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂಬುದನ್ನ ತಿಳಿಯಬಹುದಾಗಿದೆ.

ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಈ ಸಂಶೋಧನೆಗಳು ಸಹಾಯವಾಗಲಿದೆ. ಅದರಲ್ಲೂ ಈ ಸಂಶೋಧನೆಗಳು ಡ್ರಗ್ಸ್​ ರೂಪದಲ್ಲಿ ಬಂದಾಗಷ್ಟೇ, ಕ್ಯಾನ್ಸರ್ ಗುಣಮುಖ ಮಾಡಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.

Intro:ಸಂಶೋಧನಾ ಅಂಶವು ಡ್ರಾಗ್ಸ್ ರೂಪದಲ್ಲಿ ಬಂದಾಗಷ್ಟೇ ಕ್ಯಾನ್ಸರ್ ಮುಕ್ತಿಗೆ ಅವಕಾಶ..

ಬೆಂಗಳೂರು: ಕ್ಯಾನ್ಸರ್.. ಈ ಪದವನ್ನು ಕೇಳಿದ್ದರೆ ಸಾಕು ಜನರು ಈಗಲೂ ಭಯ ಭೀತಿಗೊಳ್ಳತ್ತಾರೆ..‌ ಕ್ಯಾನ್ಸರ್ ಶ್ರೀಮಂತರ ಕಾಯಿಲೆ ಎಂಬ ಮಾತಿತ್ತು.. ಆದರೆ ಈಗ ಅದು ದೂರ ಸರಿದು ಸಾಮಾನ್ಯ ರಲ್ಲೂ ಕ್ಯಾನ್ಸರ್ ಕಾಣಿಸಿ ಕೊಳ್ಳುತ್ತಿದೆ.‌.. ಭಾರತದಲ್ಲಿ ಶೇಕಡ 7 ರಷ್ಟು ಸಾವುಗಳು ಕ್ಯಾನ್ಸರ್ ರೋಗದಿಂದಲೇ ಸಂಭವಿಸುತ್ತಿವೆ ಎಂದು ವರದಿ ಆಗಿದೆ..

ಇತ್ತ ಕ್ಯಾನ್ಸರ್ ಸಂಬಂಧ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದರು, ವ್ಯಕ್ತಿಯನ್ನ ಕ್ಯಾನ್ಸರ್ ನಿಂದ ಪೂರ್ಣ ಗುಣ ಮಾಡಲು ಸಾಧ್ಯವಾಗಿಲ್ಲ.. ಯಾಕೆಂದರೆ ಕ್ಯಾನ್ಸರ್ ರೋಗವು ಒಂದು ಕಾರಣದಿಂದ ಬಾರದೇ ಹಲವು ಕಾರಣದಿಂದ ಈ ರೋಗ ಉಲ್ಬಣಗೊಳ್ಳುತ್ತೆ.. ಹೀಗಾಗಿ ಪ್ರತಿ ಕ್ಯಾನ್ಸರ್ ರೋಗವೊ ಒಂದೊಂದು ರೀತಿಯಲ್ಲಿ ಇದ್ದು ಇದಕ್ಕೆ ಮುಕ್ತಿ ಆಡಲು ಸಂಶೋಧನೆಗಳು ನಡೆಯುತ್ತಲೇ ಇವೆ..

ಸದ್ಯ ಮೊನ್ನೆ ವೈದ್ಯಕೀಯ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಬಂದಿದ್ದು, ಅದರಲ್ಲಿ ಆಕ್ಸಿಜನ್ ಮತ್ತು ಕ್ಯಾನ್ಸರ್ ಗೆ ಸಂಬಂಧ ಪಟ್ಟ ಸಂಶೋಧನಗೆ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಲಭಿಸಿದೆ‌..
ಈ ಸಂಶೋಧನೆಯಿಂದ ಮುಖ್ಯವಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನ ಯಾವ ರೀತಿ ತಡೆಗಟ್ಟಬಹುದು..

ಆಮ್ಲಜನಕದ ಅವಶ್ಯಕತೆಗೆ ತಕ್ಕಂತೆ ಜೀವಕೋಶಗಳು ಹೇಗೆ ಹೊಂದಿಕೊಳ್ಳುತ್ತವೆ ಹಾಗೂ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಈ ಸಂಶೋಧನೆ ಸಹಕಾರಿ .. ಈ ಪರಿಕಲ್ಪನೆ ಬಳಸಿಕೊಂಡು ಯಾವ ರೀತಿಯಲ್ಲಿ ಕ್ಯಾನ್ಸರ್ ಅನ್ನ ಸಂಪೂರ್ಣವಾಗಿ ತಡೆಗಟ್ಟಬಹುದು ಎಂಬುದನ್ನ ತಿಳಿಯಬಹುದಾಗಿದೆ..

ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಈ ಸಂಶೋಧನೆಗಳು ಸಹಾಯವಾಗಲಿದೆ ಅಂತಾರೆ, ತಜ್ಞರು.. ಈಗ ಮಾಡಿರುವ ಸಂಶೋಧನೆಗಳು ಡ್ರಾಗ್ಸ್ ರೂಪದಲ್ಲಿ ಬಂದಾಗಷ್ಟೇ ಕ್ಯಾನ್ಸರ್ ಗುಣಮುಖ ಮಾಡಲು ಸಾಧ್ಯವ ಎಂಬುದು ತಿಳಿಯಲಿದೆ ಅಂತೆ..

ಬೈಟ್: ಸುರೇಶ್ ಬಾಬು- ಪ್ರಾಧ್ಯಾಪಕರು ಕಿದ್ವಾಯಿ ಆಸ್ಪತ್ರೆ..‌

KN_BNG_2_CANCER_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.