ETV Bharat / city

ವಿಶ್ವಾಸ ಮತಯಾಚನೆಗೆ ಬಿಜೆಪಿ ನಾಯಕರಿಂದ ಆತುರ: ಶಿವಲಿಂಗೇಗೌಡ ವ್ಯಂಗ್ಯ

author img

By

Published : Jul 19, 2019, 9:24 PM IST

15 ಶಾಸಕರು ಮುಂಬೈಗೆ ಹೋಗಿದ್ದಕ್ಕೆ ವಿಶ್ವಾಸ ಮತಯಾಚನೆ ಮಾಡಿಸಲು ಬಿಜೆಪಿ ನಾಯಕರು ಆತುರ ಪಡುತ್ತಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ವ್ಯಂಗ್ಯವಾಡಿದರು. ಇಷ್ಟು ದಿನ ಬಿಜೆಪಿಯವರು ಮಾಡಿರುವ ಅಪಾದನೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡಿ ಸ್ಪೀಕರ್​ಗೆ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ.

ಬೆಂಗಳೂರು: 15 ಶಾಸಕರು ಮುಂಬೈ ಹೋಗಿದ್ದಕ್ಕೆ ವಿಶ್ವಾಸ ಮತಯಾಚನೆ ಮಾಡಿಸಲು ಬಿಜೆಪಿ ನಾಯಕರು ಆತುರ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಶಾಸಕ ಶಿವಲಿಂಗೇಗೌಡರು ಇಷ್ಟು ದಿನ ಬಿಜೆಪಿಯವರು ಮಾಡಿರುವ ಅಪಾದನೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಸ್ಪೀಕರ್​ಗೆ ಒತ್ತಾಯಿಸಿದರು.

ಮುಂಬೈನಲ್ಲಿರುವ ಶಾಸಕರು ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಾಯಿಸಿಕೊಳ್ಳಬಹುದು ಎಂಬ ಭಯದಲ್ಲಿ ಬಿಜೆಪಿಯವರಿದ್ದಾರೆ. ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಒಂದೇ ಒಂದು ಮತಕ್ಕಾಗಿ 10ದಿನ ಸಮಯ ತೆಗೆದುಕೊಂಡಿತ್ತು. ಸರ್ಕಾರ ರಚನೆಯಾದ ಬಳಿಕ ಏನೇನು ನಡೆಯಿತು ಎಂಬುದು ಎಲ್ಲರಿಗೆ ಗೊತ್ತಿದೆ ಎಂದು ವಿವರಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ.

ಸದನದಲ್ಲಿ ಚರ್ಚೆ ವೇಳೆ ಮಾತನಾಡಿದ ಅವರು, ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ದೋಸ್ತಿ ಸರ್ಕಾರಕ್ಕೆ ಬೆಂಬಲ ನೀಡದಂತೆ ನೋಡಿಕೊಳ್ಳಬಹುದಿತ್ತು. ಶಾಸಕ ಶ್ರೀಮಂತ್​ ಪಾಟೀಲ್​ ಅವರನ್ನು ಮುಂಬೈಗೆ ಏಕೆ ಕಳುಹಿಸಬೇಕಿತ್ತು. ಎದೆನೋವು ಬಂದು ಮದ್ರಾಸ್​​ನಿಂದ ಮುಂಬೈಗೆ ಹಾರಿದ್ದಾರಂತೆ. ಬೆಂಗಳೂರಿನಲ್ಲಿ ಆಸ್ಪತ್ರೆ ಇರಲಿಲ್ಲವೇ? ಹಾಗೆಯೇ ಮುಂಬೈನಲ್ಲಿರುವ ಶಾಸಕರಿಗೂ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂದು ಇನ್ನೂ ಉತ್ತಮವಾದ ಆಸ್ಪತ್ರೆಗಳಿಗೆ ಸೇರಿಸಬೇಕಾಗಿತ್ತು ಎಂದು ವ್ಯಂಗ್ಯವಾಡಿದರು.

2008ರಲ್ಲಿ 6ಜನ ಶಾಸಕರಿಗೆ ಸಚಿವ ಸ್ಥಾನದ ಆಸೆ ತೋರಿಸಿ ರಾಜೀನಾಮೆ ಕೊಡಿಸಿ ಉಪ ಚುನಾವಣೆ ನಡೆಸುವಂತೆ ಮಾಡಿದ್ದರು. ಮೊದಲ ಬಾರಿಗೆ ಬಿಎಸ್​ವೈ ಸಿಎಂ ಆಗಿದ್ದಾಗ ಖುದ್ದಾಗಿ ಆಪರೇಷನ್​ ಕಮಲ ಮಾಡಿದ್ದರು. ಒಂದು ಪಕ್ಷದಿಂದ ಗೆದ್ದು, ಇನ್ನೊಂದು ಪಕ್ಷ ಸೇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಾಸಕ ಶಿವಲಿಂಗೇಗೌಡ ಪ್ರಶ್ನಿಸಿದರು.

ಮೈತ್ರಿ ಸರ್ಕಾರ ರಚನೆಯಾದ 14 ತಿಂಗಳಿಂದ ದಿನಕ್ಕೊಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಮೈತ್ರಿ ಸರ್ಕಾರವನ್ನು ಕೆಡವಲು ನಾನಾ ಪ್ರಯತ್ನಗಳು ನಡೆಸುತ್ತಿದ್ದಾರೆ. ಸರ್ಕಾರ ಆಡಳಿತ ನಡೆಸಲು ಬಿಜೆಪಿ ಬಿಡುತ್ತಿಲ್ಲ. ಮುಖ್ಯಮಂತ್ರಿಗೆ ಕೊಡಬಾರದ ಕಷ್ಟ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಈ ಎಲ್ಲಾ ರಾಜಕೀಯ ತಲ್ಲಣಗಳಿಂದ ಶಾಸಕರನ್ನು ಜನರು ಡಕಾಯಿತರಂತೆ ನೋಡ್ತಿದ್ದಾರೆ. ಬರುವ ದಿನಗಳಲ್ಲಿ ರಾಜಕಾರಣಿಗಳಿಗೆ ಇನ್ನೂ ಹೀನಾಯವಾಗಿ ನೋಡುವ ಸ್ಥಿತಿ ಬರುತ್ತದೆ. ಸರ್ಕಾರ ತಪ್ಪು ಮಾಡಿದ್ದರೆ ಚರ್ಚಿಸಿ. ಬಹುಮತ ಇಲ್ಲ ಅಂದ್ರೆ ಮನೆಗೆ ಹೋಗುವುದು ನಮಗೆ ಗೊತ್ತಿದೆ ಎಂದು ಜೆಡಿಎಸ್​ ಶಾಸಕ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು: 15 ಶಾಸಕರು ಮುಂಬೈ ಹೋಗಿದ್ದಕ್ಕೆ ವಿಶ್ವಾಸ ಮತಯಾಚನೆ ಮಾಡಿಸಲು ಬಿಜೆಪಿ ನಾಯಕರು ಆತುರ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಶಾಸಕ ಶಿವಲಿಂಗೇಗೌಡರು ಇಷ್ಟು ದಿನ ಬಿಜೆಪಿಯವರು ಮಾಡಿರುವ ಅಪಾದನೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಸ್ಪೀಕರ್​ಗೆ ಒತ್ತಾಯಿಸಿದರು.

ಮುಂಬೈನಲ್ಲಿರುವ ಶಾಸಕರು ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಾಯಿಸಿಕೊಳ್ಳಬಹುದು ಎಂಬ ಭಯದಲ್ಲಿ ಬಿಜೆಪಿಯವರಿದ್ದಾರೆ. ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಒಂದೇ ಒಂದು ಮತಕ್ಕಾಗಿ 10ದಿನ ಸಮಯ ತೆಗೆದುಕೊಂಡಿತ್ತು. ಸರ್ಕಾರ ರಚನೆಯಾದ ಬಳಿಕ ಏನೇನು ನಡೆಯಿತು ಎಂಬುದು ಎಲ್ಲರಿಗೆ ಗೊತ್ತಿದೆ ಎಂದು ವಿವರಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ.

ಸದನದಲ್ಲಿ ಚರ್ಚೆ ವೇಳೆ ಮಾತನಾಡಿದ ಅವರು, ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ದೋಸ್ತಿ ಸರ್ಕಾರಕ್ಕೆ ಬೆಂಬಲ ನೀಡದಂತೆ ನೋಡಿಕೊಳ್ಳಬಹುದಿತ್ತು. ಶಾಸಕ ಶ್ರೀಮಂತ್​ ಪಾಟೀಲ್​ ಅವರನ್ನು ಮುಂಬೈಗೆ ಏಕೆ ಕಳುಹಿಸಬೇಕಿತ್ತು. ಎದೆನೋವು ಬಂದು ಮದ್ರಾಸ್​​ನಿಂದ ಮುಂಬೈಗೆ ಹಾರಿದ್ದಾರಂತೆ. ಬೆಂಗಳೂರಿನಲ್ಲಿ ಆಸ್ಪತ್ರೆ ಇರಲಿಲ್ಲವೇ? ಹಾಗೆಯೇ ಮುಂಬೈನಲ್ಲಿರುವ ಶಾಸಕರಿಗೂ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂದು ಇನ್ನೂ ಉತ್ತಮವಾದ ಆಸ್ಪತ್ರೆಗಳಿಗೆ ಸೇರಿಸಬೇಕಾಗಿತ್ತು ಎಂದು ವ್ಯಂಗ್ಯವಾಡಿದರು.

2008ರಲ್ಲಿ 6ಜನ ಶಾಸಕರಿಗೆ ಸಚಿವ ಸ್ಥಾನದ ಆಸೆ ತೋರಿಸಿ ರಾಜೀನಾಮೆ ಕೊಡಿಸಿ ಉಪ ಚುನಾವಣೆ ನಡೆಸುವಂತೆ ಮಾಡಿದ್ದರು. ಮೊದಲ ಬಾರಿಗೆ ಬಿಎಸ್​ವೈ ಸಿಎಂ ಆಗಿದ್ದಾಗ ಖುದ್ದಾಗಿ ಆಪರೇಷನ್​ ಕಮಲ ಮಾಡಿದ್ದರು. ಒಂದು ಪಕ್ಷದಿಂದ ಗೆದ್ದು, ಇನ್ನೊಂದು ಪಕ್ಷ ಸೇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಾಸಕ ಶಿವಲಿಂಗೇಗೌಡ ಪ್ರಶ್ನಿಸಿದರು.

ಮೈತ್ರಿ ಸರ್ಕಾರ ರಚನೆಯಾದ 14 ತಿಂಗಳಿಂದ ದಿನಕ್ಕೊಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಮೈತ್ರಿ ಸರ್ಕಾರವನ್ನು ಕೆಡವಲು ನಾನಾ ಪ್ರಯತ್ನಗಳು ನಡೆಸುತ್ತಿದ್ದಾರೆ. ಸರ್ಕಾರ ಆಡಳಿತ ನಡೆಸಲು ಬಿಜೆಪಿ ಬಿಡುತ್ತಿಲ್ಲ. ಮುಖ್ಯಮಂತ್ರಿಗೆ ಕೊಡಬಾರದ ಕಷ್ಟ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಈ ಎಲ್ಲಾ ರಾಜಕೀಯ ತಲ್ಲಣಗಳಿಂದ ಶಾಸಕರನ್ನು ಜನರು ಡಕಾಯಿತರಂತೆ ನೋಡ್ತಿದ್ದಾರೆ. ಬರುವ ದಿನಗಳಲ್ಲಿ ರಾಜಕಾರಣಿಗಳಿಗೆ ಇನ್ನೂ ಹೀನಾಯವಾಗಿ ನೋಡುವ ಸ್ಥಿತಿ ಬರುತ್ತದೆ. ಸರ್ಕಾರ ತಪ್ಪು ಮಾಡಿದ್ದರೆ ಚರ್ಚಿಸಿ. ಬಹುಮತ ಇಲ್ಲ ಅಂದ್ರೆ ಮನೆಗೆ ಹೋಗುವುದು ನಮಗೆ ಗೊತ್ತಿದೆ ಎಂದು ಜೆಡಿಎಸ್​ ಶಾಸಕ ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.