ETV Bharat / city

ಹನಿಟ್ರ್ಯಾಪ್​ನಲ್ಲಿ ಬಿಜೆಪಿ ಶಾಸಕರ ಹೆಸರು ಕೇವಲ ಊಹಾಪೋಹ : ಅನುಮಾನಕ್ಕೆ ಡಿಸಿಎಂ ಸ್ಪಷ್ಟನೆ

author img

By

Published : Nov 29, 2019, 3:07 PM IST

ಹನಿಟ್ರ್ಯಾಪ್ ಪ್ರಕರಣದಲ್ಲಿ ಬಿಜೆಪಿ ಹಾಗೂ ಅನರ್ಹ ಶಾಸಕರು ಹೆಸರು ಕೇಳಿಬರುತ್ತಿವ ವಿಚಾರಕ್ಕೆ ಮಹತ್ವ ಕೊಡುವ ಅವಶ್ಯಕತೆಯಿಲ್ಲ. ಇಲ್ಲ ಸಲ್ಲದ ಅಪಾದನೆ ಎಂದು ಡಿಸಿಎಂ ಅಶ್ವತ್ಥ್ ‌ನಾರಾಯಣ್ ಹೇಳಿದರು.

bangalore
ಡಿಸಿಎಂ ಅಶ್ವತ್ಥ್ ‌ನಾರಾಯಣ್

ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಬಿಜೆಪಿ ಹಾಗೂ ಅನರ್ಹ ಶಾಸಕರು ಹೆಸರು ಕೇಳಿಬರುತ್ತಿವ ವಿಚಾರಕ್ಕೆ ಮಹತ್ವ ಕೊಡುವ ಅವಶ್ಯಕತೆಯಿಲ್ಲ. ಇಂತಹ ಊಹಾಪೋಹದ ಹೇಳಿಕೆಗೆ ಕಿಮ್ಮತ್ತಿಲ್ಲ ಎಂದು ಡಿಸಿಎಂ ಅಶ್ವತ್ಥ್ ‌ನಾರಾಯಣ್ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ಇಲ್ಲಸಲ್ಲದ ಅಪಾದನೆ ಮಾಡುತ್ತಿದ್ದಾರೆ. ಈಗಾಗಲೇ ಬ್ಲಾಕ್​ಮೇಲ್​ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಸೆರೆಹಿಡಿದಿದ್ದು, ಅವರೇ ಈ ಹನಿಟ್ರ್ಯಾಪ್​ ತಂಡದಲ್ಲೂ ಇರಬಹುದು. ಸಿಸಿಬಿ ಮೂಲಗಳಲ್ಲಿ ಈ ಕುರಿತು ಪ್ರಶ್ನಿಸಿ ಅವರು ಸ್ಪಷ್ಟನೆ ನೀಡುತ್ತಾರೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಡಿಸಿಎಂ ಅಶ್ವತ್ಥ್ ‌ನಾರಾಯಣ್

ಇನ್ನು ಇದೇ ವೇಳೆ, ಉಪಚುನಾವಣೆಯ ಕುರಿತು ಮಾತನಾಡಿದ ಅವರು, ಜನರಿಗೆ ಈಗ ಸ್ಥಿರವಾದ ಸರ್ಕಾರ ಬೇಕಾಗಿದೆ. ಹೀಗಾಗಿ ಉಪಸಮರದಲ್ಲಿ ಬಿಜೆಪಿಗೆ ಜನ‌ ಬೆಂಬಲ‌ ನೀಡಲಿದ್ದಾರೆ‌ ಎಂದು ತಿಳಿಸಿದರು.

ಜೆಡಿಎಸ್ ಕಾಂಗ್ರೆಸ್​ಗೆ ಮತಕೊಡುವುದರಿಂದ ಏನು ಪ್ರಯೋಜನ‌ ಇಲ್ಲ ಎಂದು ಜನರಿಗೆ ಗೊತ್ತಾಗಿದೆ. ಜೆಡಿಎಸ್-ಕಾಂಗ್ರೆಸ್ ಕೈಜೋಡಿಸಲ್ಲ ಎಂದು ಈಗಾಗಲೇ ಅವರುಗಳೇ ಸ್ಪಷ್ಟಪಡಿಸಿದ್ದಾರೆ. ಗೊಂದಲ ಮೂಡಿಸುವ ಸಲುವಾಗಿ ಕೆಲವರು ಕಾಂಗ್ರೆಸ್ ಜೊತೆ ಕೈ ಜೋಡಿಸುವ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವು 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಬಿಜೆಪಿ ಹಾಗೂ ಅನರ್ಹ ಶಾಸಕರು ಹೆಸರು ಕೇಳಿಬರುತ್ತಿವ ವಿಚಾರಕ್ಕೆ ಮಹತ್ವ ಕೊಡುವ ಅವಶ್ಯಕತೆಯಿಲ್ಲ. ಇಂತಹ ಊಹಾಪೋಹದ ಹೇಳಿಕೆಗೆ ಕಿಮ್ಮತ್ತಿಲ್ಲ ಎಂದು ಡಿಸಿಎಂ ಅಶ್ವತ್ಥ್ ‌ನಾರಾಯಣ್ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ಇಲ್ಲಸಲ್ಲದ ಅಪಾದನೆ ಮಾಡುತ್ತಿದ್ದಾರೆ. ಈಗಾಗಲೇ ಬ್ಲಾಕ್​ಮೇಲ್​ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಸೆರೆಹಿಡಿದಿದ್ದು, ಅವರೇ ಈ ಹನಿಟ್ರ್ಯಾಪ್​ ತಂಡದಲ್ಲೂ ಇರಬಹುದು. ಸಿಸಿಬಿ ಮೂಲಗಳಲ್ಲಿ ಈ ಕುರಿತು ಪ್ರಶ್ನಿಸಿ ಅವರು ಸ್ಪಷ್ಟನೆ ನೀಡುತ್ತಾರೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಡಿಸಿಎಂ ಅಶ್ವತ್ಥ್ ‌ನಾರಾಯಣ್

ಇನ್ನು ಇದೇ ವೇಳೆ, ಉಪಚುನಾವಣೆಯ ಕುರಿತು ಮಾತನಾಡಿದ ಅವರು, ಜನರಿಗೆ ಈಗ ಸ್ಥಿರವಾದ ಸರ್ಕಾರ ಬೇಕಾಗಿದೆ. ಹೀಗಾಗಿ ಉಪಸಮರದಲ್ಲಿ ಬಿಜೆಪಿಗೆ ಜನ‌ ಬೆಂಬಲ‌ ನೀಡಲಿದ್ದಾರೆ‌ ಎಂದು ತಿಳಿಸಿದರು.

ಜೆಡಿಎಸ್ ಕಾಂಗ್ರೆಸ್​ಗೆ ಮತಕೊಡುವುದರಿಂದ ಏನು ಪ್ರಯೋಜನ‌ ಇಲ್ಲ ಎಂದು ಜನರಿಗೆ ಗೊತ್ತಾಗಿದೆ. ಜೆಡಿಎಸ್-ಕಾಂಗ್ರೆಸ್ ಕೈಜೋಡಿಸಲ್ಲ ಎಂದು ಈಗಾಗಲೇ ಅವರುಗಳೇ ಸ್ಪಷ್ಟಪಡಿಸಿದ್ದಾರೆ. ಗೊಂದಲ ಮೂಡಿಸುವ ಸಲುವಾಗಿ ಕೆಲವರು ಕಾಂಗ್ರೆಸ್ ಜೊತೆ ಕೈ ಜೋಡಿಸುವ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವು 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:Body:KN_BNG_02_ASHWATHNARAYAN_HONEYTRAP_SCRIPT_7201951

ಯಾರು ಯಾರು ಹನಿ ಅನ್ನೋದು ಗೊತ್ತಿಲ್ಲ: ಡಿಸಿಎಂ ಅಶ್ವತ್ಥ್ ನಾರಾಯಣ್

ಬೆಂಗಳೂರು: ಯಾರು ಯಾರು ಹನಿ ಅನ್ನೋದು ಗೊತ್ತಿಲ್ಲ. ಯಾರು ಮಾಡಿದ್ದಾರೆ ಅನ್ನೋದೂ ಗೊತ್ತಿಲ್ಲ ಎಂದು ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುತ್ತಾ ಡಿಸಿಎಂ ಅಶ್ವತ್ಥ್ ‌ನಾರಾಯಣ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ಬಿಜೆಪಿ, ಅನರ್ಹ ಶಾಸಕರು ಹೆಸರು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಊಹಾಪೋಹದ ಹೇಳಿಕೆಗೆ ಕಿಮ್ಮತ್ತಿಲ್ಲ. ಇದಕ್ಕೆ ಮಹತ್ವ ಕೊಡುವ ಅಗತ್ಯ ಇಲ್ಲ. ಇಲ್ಲಸಲ್ಲದ ಅಪಾದನೆ ಮಾಡುತ್ತಿದ್ದಾರೆ. ಬ್ಲಾಕ್ ಮೇಲ್ ತಂಡವನ್ನು ಪೊಲೀಸರು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಈ ಬ್ಲಾಕ್ ಮೇಲ್ ತಂಡದಲ್ಲೇ ಇವರೂ ಇರಬಹುದು. ಅನರ್ಹರು ಹನಿಟ್ರಾಪ್ ನಲ್ಲಿ ಇದ್ದಾರಾ ಗೊತ್ತಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಸಿಸಿಬಿ ಮೂಲಗಳು ಅಂದರೆ ನೀವು ಅವರನ್ನೇ ಕೇಳಿ, ಅವರು ಆ ಬಗ್ಗೆ ಹೇಳುತ್ತಾರೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

15 ಸ್ಥಾನ ಗೆಲ್ಲುತ್ತೇವೆ:

ಜನರಿಗೆ ಈಗ ಸ್ಥಿರವಾದ ಸರ್ಕಾರ ಬೇಕಾಗಿದೆ. ಹೀಗಾಗಿ ಉಪಸಮರದಲ್ಲಿ ಬಿಜೆಪಿಗೆ ಜನ‌ ಬೆಂಬಲ‌ ನೀಡಲಿದ್ದಾರೆ‌ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.

ಜೆಡಿಎಸ್ ಕಾಂಗ್ರೆಸ್ ಗೆ ಮತಕೊಡುವುದರಿಂದ ಏನು ಪ್ರಯೋಜನ‌ ಇಲ್ಲ ಎಂದು ಜನರಿಗೆ ಗೊತ್ತಾಗಿದೆ. ಜೆಡಿಎಸ್-ಕಾಂಗ್ರೆಸ್ ಕೈಜೋಡಿಸಲ್ಲ ಎಂದು ಈಗಾಗಲೇ ಅವರುಗಳೇ ಸ್ಪಷ್ಟಪಡಿಸಿದ್ದಾರೆ. ಗೊಂದಲ ಮೂಡಿಸುವ ಸಲುವಾಗಿ ಕೆಲವರು ಕಾಂಗ್ರೆಸ್ ಜೊತೆ ಕೈ ಜೋಡಿಸುವ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವು 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಬೆಂಬಲದ ಬಗ್ಗೆ ನಮಗೆ ಗೊತ್ತಿಲ್ಲ. ಅಂತ ಪರಿಸ್ಥಿತಿಯೂ ಉದ್ಭವಿಸಿಲ್ಲ. ಅಂತ ಪತಿಸ್ಥಿತಿ ಬಂದಾಗ ನೋಡೋಣ ಎಂದು ಸ್ಪಷ್ಟಪಡಿಸಿದರು.

ಉಪಸಮರದಲ್ಲಿ ಸೋತರೂ ಅನರ್ಹರನ್ನ ನಾವು ಕೈಬಿಡುವುದಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತೇವೆಂದು ನಮ್ಮ ನಾಯಕರೇ ಹೇಳಿದ್ದಾರೆ ಎಂದು ವಿವರಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.