ETV Bharat / city

ಇಷ್ಟು ಮಾಡಿದ್ರೆ.. ನಮ್ಮ ಬೆಂಗಳೂರು ಸ್ವಚ್ಛವಾಗಿರುತ್ತೆ ಅಂತಾರೆ ಬಿಬಿಎಂಪಿ ವಿಶೇಷ ಆಯುಕ್ತರು.. - ಬಿಬಿಎಂಪಿ ಹಸಿಕಸ ಕಾಂಪೋಸ್ಟ್​ ಸುದ್ದಿ

ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಮ್ಮ ಮನೆಯಲ್ಲಿಯೇ ಹಸಿಕಸವನ್ನು ದೊಡ್ಡ ಡಬ್ಬಕ್ಕೆ ತುಂಬಿ ಕೊಕೋಪಿಟ್ ಹಾಕಿ ಗೊಬ್ಬರ ಮಾಡುವ ಮಾದರಿ ತೋರಿಸಿಕೊಟ್ಟಿದ್ದಾರೆ.

bbmp-special-commissioner-randeep-showed-the-composting-of-the-garbage
ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್
author img

By

Published : Jan 20, 2020, 8:22 PM IST

ಬೆಂಗಳೂರು: ಘನತ್ಯಾಜ್ಯ ನಿಯಮದ ಪ್ರಕಾರ ಹಸಿಕಸವನ್ನು ಬಿಬಿಎಂಪಿ ವಾಹನಗಳಿಗೆ ನೀಡದೆ ಮನೆಯಲ್ಲೇ ಗೊಬ್ಬರ ಮಾಡಬೇಕು. ಅಲ್ಲದೆ ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಅಧಿಕಾರಿ, ನೌಕರರ ಮನೆಯಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಮಾಡಬೇಕು.

ಈ ಕುರಿತು ಎಲ್ಲರಿಗೂ ಮಾದರಿಯಾಗುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ತಮ್ಮ ಮನೆಯಲ್ಲಿಯೇ ಹಸಿಕಸವನ್ನು ದೊಡ್ಡ ಡಬ್ಬಕ್ಕೆ ತುಂಬಿ, ಕೊಕೋಪಿಟ್ ಹಾಕಿ ಗೊಬ್ಬರ ಮಾಡುವ ಮಾದರಿ ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಗೊಬ್ಬರವನ್ನು ತಮ್ಮದೇ ಕೈತೋಟ ಅಥವಾ ಪಾಲಿಕೆ ಪಾರ್ಕ್‌ಗಳಿಗೂ ಕೂಡಾ ಹಾಕಬಹುದು ಅಂತಾ ತಿಳಿಸಿದ್ದಾರೆ.

ಹಸಿಕಸ ಕಾಂಪೋಸ್ಟ್ ಮಾಡಿ ತೋರಿಸಿದ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್..

ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಸರ್ವೇಯ ಹಿನ್ನೆಲೆ ಪಾಲಿಕೆ ಅಧಿಕಾರಿಗಳು, ನೌಕರರು ಸ್ವಚ್ಛ ಬೆಂಗಳೂರಿನೆಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಹಸಿ ಕಸ, ಒಣ ಕಸ ವಿಂಗಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಪ್ರಚಾರ ನಡೆಸುತ್ತಿದ್ದಾರೆ.

ಅಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ವ್ಯಾಪಾರಿಗಳ ಮೂಲಕವೇ ಜನಜಾಗೃತಿ ಮೂಡಿಸಲಾಗುತ್ತಿದೆ. ದೇಶದ ನಗರಗಳ ಪೈಕಿ ಸ್ವಚ್ಛ ನಗರ ಎಂಬ ಪಟ್ಟ ಪಡೆಯಲು ಬೆಂಗಳೂರು ನಗರ ಆಡಳಿತ ಪ್ರಯತ್ನ ಮುಂದುವರೆಸಿದೆ.

ಬೆಂಗಳೂರು: ಘನತ್ಯಾಜ್ಯ ನಿಯಮದ ಪ್ರಕಾರ ಹಸಿಕಸವನ್ನು ಬಿಬಿಎಂಪಿ ವಾಹನಗಳಿಗೆ ನೀಡದೆ ಮನೆಯಲ್ಲೇ ಗೊಬ್ಬರ ಮಾಡಬೇಕು. ಅಲ್ಲದೆ ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಅಧಿಕಾರಿ, ನೌಕರರ ಮನೆಯಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಮಾಡಬೇಕು.

ಈ ಕುರಿತು ಎಲ್ಲರಿಗೂ ಮಾದರಿಯಾಗುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ತಮ್ಮ ಮನೆಯಲ್ಲಿಯೇ ಹಸಿಕಸವನ್ನು ದೊಡ್ಡ ಡಬ್ಬಕ್ಕೆ ತುಂಬಿ, ಕೊಕೋಪಿಟ್ ಹಾಕಿ ಗೊಬ್ಬರ ಮಾಡುವ ಮಾದರಿ ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಗೊಬ್ಬರವನ್ನು ತಮ್ಮದೇ ಕೈತೋಟ ಅಥವಾ ಪಾಲಿಕೆ ಪಾರ್ಕ್‌ಗಳಿಗೂ ಕೂಡಾ ಹಾಕಬಹುದು ಅಂತಾ ತಿಳಿಸಿದ್ದಾರೆ.

ಹಸಿಕಸ ಕಾಂಪೋಸ್ಟ್ ಮಾಡಿ ತೋರಿಸಿದ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್..

ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಸರ್ವೇಯ ಹಿನ್ನೆಲೆ ಪಾಲಿಕೆ ಅಧಿಕಾರಿಗಳು, ನೌಕರರು ಸ್ವಚ್ಛ ಬೆಂಗಳೂರಿನೆಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಹಸಿ ಕಸ, ಒಣ ಕಸ ವಿಂಗಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಪ್ರಚಾರ ನಡೆಸುತ್ತಿದ್ದಾರೆ.

ಅಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ವ್ಯಾಪಾರಿಗಳ ಮೂಲಕವೇ ಜನಜಾಗೃತಿ ಮೂಡಿಸಲಾಗುತ್ತಿದೆ. ದೇಶದ ನಗರಗಳ ಪೈಕಿ ಸ್ವಚ್ಛ ನಗರ ಎಂಬ ಪಟ್ಟ ಪಡೆಯಲು ಬೆಂಗಳೂರು ನಗರ ಆಡಳಿತ ಪ್ರಯತ್ನ ಮುಂದುವರೆಸಿದೆ.

Intro:ಹಸಿಕಸ ಕಾಂಪೋಸ್ಟ್ ಮಾಡಿ ತೋರಿಸಿದ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್


ಬೆಂಗಳೂರು: ಘನತ್ಯಾಜ್ಯ ನಿಯಮದ ಪ್ರಕಾರ ಹಸಿಕಸವನ್ನು ಬಿಬಿಎಂಪಿ ವಾಹನಗಳಿಗೆ ನೀಡದೆ ಮನೆಯಲ್ಲೇ ಗೊಬ್ಬರ ಮಾಡಬೇಕು. ಅಲ್ಲದೆ
ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಅಧಿಕಾರಿ, ನೌಕರರ ಮನೆಯಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಮಾಡಬೇಕು. ಎಲ್ಲರಿಗೂ ಮಾದರಿ ಆಗುವಂತೆ, ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ತಮ್ಮ ಮನೆಯಲ್ಲಿ ಹಸಿಕಸವನ್ನು ದೊಡ್ಡ ಡಬ್ಬಕ್ಕೆ ಹಾಕಿ, ಕೊಕೋಪಿಟ್ ಹಾಕಿ ಗೊಬ್ಬರ ಮಾಡುವ ಮಾದರಿಯನ್ನು ಮಾಡಿ ತೋರಿಸಿದ್ದಾರೆ. ಅಲ್ಲದೆ ಗೊಬ್ಬರವನ್ನು ತಮ್ಮದೇ ಕೈತೋಟ ಅಥವಾ ಪಾಲಿಕೆ ಪಾರ್ಕ್ ಗಳಿಗೆ ಹಾಕಬಹುದು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಸರ್ವೇಯ ಹಿನ್ನಲೆ, ಪಾಲಿಕೆ ಅಧಿಕಾರಿಗಳು, ನೌಕರರು ಸ್ವಚ್ಛ ಬೆಂಗಳೂರಿನೆಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಹಸಿ ಕಸ ,ಒಣ ಕಸ ವಿಂಗಡಿಸಿಕೊಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ವ್ಯಾಪಾರಿಗಳ ಮೂಲಕವೇ ಜನಜಾಗೃತಿ ಮೂಡಿಸಲಾಗುತ್ತಿದೆ. ದೇಶದ ನಗರಗಳ ಪೈಕಿ ಸ್ವಚ್ಛ ನಗರ ಎಂಬ ಪಟ್ಟ ಪಡೆಯಲು ಬೆಂಗಳೂರು ನಗರ ಆಡಳಿತ ಪ್ರಯತ್ನ ಪಡುತ್ತಿದೆ.
ಸೌಮ್ಯಶ್ರೀ
Kn_bng_03_Randheep_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.