ETV Bharat / city

ಲಂಚ ಸ್ವೀಕರಿಸುತ್ತಿದ್ದ ವೇಳೆ ಚಿಕ್ಕಜಾಲ ಠಾಣೆ ಇನ್ಸ್​​ಪೆಕ್ಟರ್ ಅರೆಸ್ಟ್! - bangalore crime case

ನಗರದ ಚಿಕ್ಕಜಾಲ ಠಾಣೆಯ ಇನ್ಸ್​​ಪೆಕ್ಟರ್ ರಾಘವೇಂದ್ರ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

acb arrested inspector raghavendra
ಚಿಕ್ಕಜಾಲ ಠಾಣೆಯ ಇನ್ಸ್​​ಪೆಕ್ಟರ್ ರಾಘವೇಂದ್ರ
author img

By

Published : Sep 18, 2021, 2:45 PM IST

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ನಗರದ ಚಿಕ್ಕಜಾಲ ಠಾಣೆಯ ಇನ್ಸ್​​ಪೆಕ್ಟರ್ ರಾಘವೇಂದ್ರ ಸಿಕ್ಕಿಬಿದ್ದಿದ್ದಾರೆ. ಎರಡು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಯಲ್ಲಿ ಲಾಕ್ ಆಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಎಸಿಬಿ ತೋಡಿದ ಖೆಡ್ಡಾಗೆ ಬಿದ್ದ ಚಿಕ್ಕಜಾಲ ಠಾಣೆಯ ಇನ್ಸ್​​ಪೆಕ್ಟರ್

ಜಮೀನು ತಕರಾರು ಬಗೆಹರಿಸುವ ಸಂಬಂಧ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎರಡು ಬಾರಿ ನಾಲ್ಕು ಲಕ್ಷ ಹಣವನ್ನು ಈಗಾಗಲೇ ಪಡೆದಿದ್ದ. ಈಗಾಗಲೇ ಎಂಟು ಲಕ್ಷ ಹಣ ಪಡೆದಿದ್ದ ಎಂದು ದೂರುದಾರರು ಎಸಿಬಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಉದನೆ ತೂಗುಸೇತುವೆಯ ಮೇಲೆ ಬ್ಯಾಗ್, ಚಪ್ಪಲಿ ಪತ್ತೆ: ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಶಂಕೆ

ಎರಡು ಲಕ್ಷ ರೂ. ಪಡೆಯುವ ವೇಳೆ ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ನಗರದ ಚಿಕ್ಕಜಾಲ ಠಾಣೆಯ ಇನ್ಸ್​​ಪೆಕ್ಟರ್ ರಾಘವೇಂದ್ರ ಸಿಕ್ಕಿಬಿದ್ದಿದ್ದಾರೆ. ಎರಡು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಯಲ್ಲಿ ಲಾಕ್ ಆಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಎಸಿಬಿ ತೋಡಿದ ಖೆಡ್ಡಾಗೆ ಬಿದ್ದ ಚಿಕ್ಕಜಾಲ ಠಾಣೆಯ ಇನ್ಸ್​​ಪೆಕ್ಟರ್

ಜಮೀನು ತಕರಾರು ಬಗೆಹರಿಸುವ ಸಂಬಂಧ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎರಡು ಬಾರಿ ನಾಲ್ಕು ಲಕ್ಷ ಹಣವನ್ನು ಈಗಾಗಲೇ ಪಡೆದಿದ್ದ. ಈಗಾಗಲೇ ಎಂಟು ಲಕ್ಷ ಹಣ ಪಡೆದಿದ್ದ ಎಂದು ದೂರುದಾರರು ಎಸಿಬಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಉದನೆ ತೂಗುಸೇತುವೆಯ ಮೇಲೆ ಬ್ಯಾಗ್, ಚಪ್ಪಲಿ ಪತ್ತೆ: ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಶಂಕೆ

ಎರಡು ಲಕ್ಷ ರೂ. ಪಡೆಯುವ ವೇಳೆ ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಸಿಬಿ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.