ETV Bharat / city

ಬಡವರ ಪಾಲಿನ ರಾಮಬಾಣ ಜನೌಷಧ ಕೇಂದ್ರಗಳು: ಹೀಗಿದೆ ರಿಯಾಲಿಟಿ!

author img

By

Published : Dec 14, 2020, 7:22 PM IST

ಪ್ರಸ್ತುತ ದೇಶಾದ್ಯಂತ 6 ಸಾವಿರಕ್ಕೂ ಅಧಿಕ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ. ಇನ್ನು ಕರ್ನಾಟಕದಲ್ಲೂ 200 ಜನೌಷಧ ಕೇಂದ್ರಗಳಿದ್ದು, ಔಷಧಗಳ ಮಾರಾಟದಲ್ಲಿ ಮೇಲುಗೈ ಸಾಧಿಸುತ್ತಿವೆ.

generic medicines
ಜನೌಷಧ ಕೇಂದ್ರ

ಬೆಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ದೊರಕಬೇಕೆನ್ನುವ ಉದ್ದೇಶದಿಂದ ಆರಂಭವಾದ ಪ್ರಧಾನಮಂತ್ರಿ ಜನರಿಕ್‌ ಔಷಧ ವಲಯ ಕೊರೊನಾ ಸಂದರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ವರವಾಗಿದೆ. ಕೋವಿಡ್​​ನಿಂದಾಗಿ ಸಣ್ಣ ಪ್ರಮಾಣದಲ್ಲಿದ್ದ ಮೆಡಿಕಲ್​ ಮಾಫಿಯಾ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದ್ದೇ ಅದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಕೊರೊನಾ ಸಂಕಷ್ಟದ ಸಂದರ್ಭ ಅನೇಕ ಕಡೆಗಳಲ್ಲಿ ಔಷಧ ಕೊರತೆ ಉಂಟಾಗಿ ವ್ಯವಹಾರ ಕುಸಿದಿದ್ದರೂ ಜನೌಷಧ ಮಳಿಗೆಗಳಲ್ಲಿ ಭರ್ಜರಿ ಮಾರಾಟ ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲೆರಡು ತಿಂಗಳಲ್ಲಿ ನೂರು ಕೋಟಿ ರೂ. ಮೊತ್ತದ ಔಷಧ ಮಾರಾಟವಾಗುವ ಮೂಲಕ ಮೊದಲಿದ್ದ ಗರಿಷ್ಠ ಮಾರಾಟವನ್ನು ದಾಖಲಿಸಿದೆ. ದೇಶಾದ್ಯಂತ ಪ್ರತಿ ತಿಂಗಳೂ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಈ ಕೇಂದ್ರಗಳ ಮೂಲಕ ಕೈಗೆಟಕುವ ದರದಲ್ಲಿ ಔಷಧ ಖರೀದಿಸುತ್ತಿದ್ದಾರೆ.

ಇದನ್ನೂ ಓದಿ...ಕೇಂದ್ರದ ಜಿಎಸ್​ಟಿ ನಷ್ಟ ಪರಿಹಾರ: 7ನೇ ಕಂತಿನಡಿ ರಾಜ್ಯಗಳಿಗೆ 6,000 ಕೋಟಿ ರೂ. ಬಿಡುಗಡೆ

ಪ್ರಸ್ತುತ ದೇಶಾದ್ಯಂತ 6 ಸಾವಿರಕ್ಕೂ ಅಧಿಕ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ. ಇನ್ನು ಕರ್ನಾಟಕದಲ್ಲೂ 200 ಜನೌಷಧ ಕೇಂದ್ರಗಳಿದ್ದು, ಔಷಧಗಳ ಮಾರಾಟದಲ್ಲಿ ಮೇಲುಗೈ ಸಾಧಿಸುತ್ತಿವೆ. ಈ ಮೊದಲು ಅನೇಕ ವೈದ್ಯರು ಜನರಿಕ್‌ ಔಷಧ ಬರೆದು ಕೊಡಲು ನಿರಾಕರಿಸುತ್ತಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ಅವರು ಕೊರೊನಾ ಆರಂಭದಲ್ಲಿ ನಡೆಸಿದ್ದ ಸಂವಾದದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಆದೇಶವೊಂದನ್ನು ಹೊರಡಿಸಿ ಇನ್ನುಮುಂದೆ ವೈದ್ಯರು ಜನರಿಕ್‌ ಔಷಧವನ್ನೇ ರೋಗಿಗಳಿಗೆ ಬರೆದುಕೊಡಬೇಕೆಂದು ತಿಳಿಸಿತ್ತು. ಇದಕ್ಕೆ ಹಲವು ವೈದ್ಯರು ಪೂರಕವಾಗಿ ಸ್ಪಂದಿಸಿದ್ದು ಕೂಡ ಜನೌಷಧ ಜನಪ್ರಿಯವಾಗಲು ಕಾರಣವಾಗಿದೆ.

ಜನೌಷಧ ಕೇಂದ್ರಗಳ ಕುರಿತು ವರದಿ

ಕೊರೊನಾ ಸಂದರ್ಭದಲ್ಲಿ ಮೆಡಿಸಿನ್​ ದಂಧೆ ಜೋರಾಗಿತ್ತು. ಪ್ರತಿಯೊಂದು ಮಾತ್ರೆಯೂ ಕೊರೊನಾಗೂ ಮುನ್ನ ಇದ್ದ ಬೆಲೆಗಿಂತ ಹೆಚ್ಚಾಗಿದೆ. ಆದರೆ, ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರಕ್ಕೆ ಔಷಧ ದೊರೆಯುವ ಕುರಿತು ಮಾಹಿತಿ ಇರಲಿಲ್ಲ. ನಂತರ ಜನರಿಕ್‌ ಔಷಧ ಬಗ್ಗೆ ಜನರಿಗೆ ಹೆಚ್ಚು ತಿಳಿವಳಿಕೆ ಮತ್ತು ನಂಬಿಕೆ ಬಂದಿದ್ದರಿಂದ ಜನ ಜನರಿಕ್‌ ಔಷಧವನ್ನೇ ಕೊಂಡುಕೊಳ್ಳುತ್ತಿದ್ದಾರೆ.

ಇಷ್ಟಾದರೂ ಮೆಡಿಕಲ್​ ಮಾಫಿಯಾಗೆ ಕಡಿವಾಣ ಬಿದ್ದಿಲ್ಲ ಎನ್ನಲಾಗಿದೆ. ಇನ್ನು ಖಾಸಗಿ ವಲಯದಲ್ಲಿ ಆಸ್ಪತ್ರೆಯ ಶುಲ್ಕದ ಜೊತೆಗೆ ಔಷಧಗಳನ್ನು ಖರೀದಿಸಲು ಸಾವಿರಾರು ರೂಪಾಯಿ ವ್ಯಯಿಸಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗೆಯೇ ಕೆಲವೆಡೆ ಎಷ್ಟೋ ಜನೌಷಧ ಕೇಂದ್ರಗಳನ್ನು ಉಪಯೋಗಕ್ಕೆ ಬಾರದಂತಾಗಿರುವ ಆರೋಪಗಳೂ ಕೇಳಿ ಬಂದಿದೆ.

ಇದನ್ನೂ ಓದಿ...ವಿಸ್ಟ್ರಾನ್​ ಕಂಪನಿಯಲ್ಲಿ ದಾಂಧಲೆ: ನೂರಾರು ಕೋಟಿ ರೂಪಾಯಿ ನಷ್ಟ, 11,500 ಕಾರ್ಮಿಕರು ಬೀದಿ ಪಾಲು

ಜೆನರಿಕ್‌ ಔಷಧಗಳು ಇತರ ಔಷಧ ಮಾರುಕಟ್ಟೆ ದರಕ್ಕಿಂತ ಶೇ.80ರಿಂದ ಶೇ.90ರಷ್ಡು ಅಗ್ಗದಲ್ಲಿ ದೊರೆಯುತ್ತಿವೆ. ಅಂದರೆ, ಉದಾಹರಣೆಗೆ ಬಿಪಿ, ಶುಗರ್‌ಗಳಿಗೆ ಬ್ರಾಂಡೆಡ್‌ ಔಷಧಕ್ಕೆ ಸುಮಾರು ₹2,000 ರಿಂದ ₹2,500 ಕೊಡಬೇಕಾಗುತ್ತದೆ. ಆದರೆ, ಜನೌಷಧಿಗೆ ಕೇವಲ₹400 ರಿಂದ ₹500 ಖರ್ಚಾಗುತ್ತದೆ. ವಾರ್ಷಿಕವಾಗಿ 30ರಿಂದ 40 ಕೋಟಿಯಷ್ಟೇ ಮಾರಾಟವಾಗುತ್ತಿದ್ದ ಜನರಿಕ್‌ ಔಷಧ ಈಗ ತಿಂಗಳಿಗೆ 50 ಕೋಟಿ ರೂ.ಗೂ ಅಧಿಕ ಮಾರಾಟ ದಾಖಲೆ ಮಾಡುತ್ತಿದೆ. ಒಟ್ಟಿನಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗಿರುವ ಜನೌಷಧ ಮಳಿಗೆಗಳನ್ನು ರಾಜ್ಯದಲ್ಲಿ ಇನ್ನಷ್ಟು ಆರಂಭಿಸಿದರೆ ಆಯಾ ಪ್ರದೇಶದ ರೋಗಿಗಳಿಗೆ ಅನುಕೂಲವಾಗಲಿದೆ.

ಬೆಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ದೊರಕಬೇಕೆನ್ನುವ ಉದ್ದೇಶದಿಂದ ಆರಂಭವಾದ ಪ್ರಧಾನಮಂತ್ರಿ ಜನರಿಕ್‌ ಔಷಧ ವಲಯ ಕೊರೊನಾ ಸಂದರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ವರವಾಗಿದೆ. ಕೋವಿಡ್​​ನಿಂದಾಗಿ ಸಣ್ಣ ಪ್ರಮಾಣದಲ್ಲಿದ್ದ ಮೆಡಿಕಲ್​ ಮಾಫಿಯಾ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದ್ದೇ ಅದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಕೊರೊನಾ ಸಂಕಷ್ಟದ ಸಂದರ್ಭ ಅನೇಕ ಕಡೆಗಳಲ್ಲಿ ಔಷಧ ಕೊರತೆ ಉಂಟಾಗಿ ವ್ಯವಹಾರ ಕುಸಿದಿದ್ದರೂ ಜನೌಷಧ ಮಳಿಗೆಗಳಲ್ಲಿ ಭರ್ಜರಿ ಮಾರಾಟ ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲೆರಡು ತಿಂಗಳಲ್ಲಿ ನೂರು ಕೋಟಿ ರೂ. ಮೊತ್ತದ ಔಷಧ ಮಾರಾಟವಾಗುವ ಮೂಲಕ ಮೊದಲಿದ್ದ ಗರಿಷ್ಠ ಮಾರಾಟವನ್ನು ದಾಖಲಿಸಿದೆ. ದೇಶಾದ್ಯಂತ ಪ್ರತಿ ತಿಂಗಳೂ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಈ ಕೇಂದ್ರಗಳ ಮೂಲಕ ಕೈಗೆಟಕುವ ದರದಲ್ಲಿ ಔಷಧ ಖರೀದಿಸುತ್ತಿದ್ದಾರೆ.

ಇದನ್ನೂ ಓದಿ...ಕೇಂದ್ರದ ಜಿಎಸ್​ಟಿ ನಷ್ಟ ಪರಿಹಾರ: 7ನೇ ಕಂತಿನಡಿ ರಾಜ್ಯಗಳಿಗೆ 6,000 ಕೋಟಿ ರೂ. ಬಿಡುಗಡೆ

ಪ್ರಸ್ತುತ ದೇಶಾದ್ಯಂತ 6 ಸಾವಿರಕ್ಕೂ ಅಧಿಕ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ. ಇನ್ನು ಕರ್ನಾಟಕದಲ್ಲೂ 200 ಜನೌಷಧ ಕೇಂದ್ರಗಳಿದ್ದು, ಔಷಧಗಳ ಮಾರಾಟದಲ್ಲಿ ಮೇಲುಗೈ ಸಾಧಿಸುತ್ತಿವೆ. ಈ ಮೊದಲು ಅನೇಕ ವೈದ್ಯರು ಜನರಿಕ್‌ ಔಷಧ ಬರೆದು ಕೊಡಲು ನಿರಾಕರಿಸುತ್ತಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ಅವರು ಕೊರೊನಾ ಆರಂಭದಲ್ಲಿ ನಡೆಸಿದ್ದ ಸಂವಾದದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಆದೇಶವೊಂದನ್ನು ಹೊರಡಿಸಿ ಇನ್ನುಮುಂದೆ ವೈದ್ಯರು ಜನರಿಕ್‌ ಔಷಧವನ್ನೇ ರೋಗಿಗಳಿಗೆ ಬರೆದುಕೊಡಬೇಕೆಂದು ತಿಳಿಸಿತ್ತು. ಇದಕ್ಕೆ ಹಲವು ವೈದ್ಯರು ಪೂರಕವಾಗಿ ಸ್ಪಂದಿಸಿದ್ದು ಕೂಡ ಜನೌಷಧ ಜನಪ್ರಿಯವಾಗಲು ಕಾರಣವಾಗಿದೆ.

ಜನೌಷಧ ಕೇಂದ್ರಗಳ ಕುರಿತು ವರದಿ

ಕೊರೊನಾ ಸಂದರ್ಭದಲ್ಲಿ ಮೆಡಿಸಿನ್​ ದಂಧೆ ಜೋರಾಗಿತ್ತು. ಪ್ರತಿಯೊಂದು ಮಾತ್ರೆಯೂ ಕೊರೊನಾಗೂ ಮುನ್ನ ಇದ್ದ ಬೆಲೆಗಿಂತ ಹೆಚ್ಚಾಗಿದೆ. ಆದರೆ, ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರಕ್ಕೆ ಔಷಧ ದೊರೆಯುವ ಕುರಿತು ಮಾಹಿತಿ ಇರಲಿಲ್ಲ. ನಂತರ ಜನರಿಕ್‌ ಔಷಧ ಬಗ್ಗೆ ಜನರಿಗೆ ಹೆಚ್ಚು ತಿಳಿವಳಿಕೆ ಮತ್ತು ನಂಬಿಕೆ ಬಂದಿದ್ದರಿಂದ ಜನ ಜನರಿಕ್‌ ಔಷಧವನ್ನೇ ಕೊಂಡುಕೊಳ್ಳುತ್ತಿದ್ದಾರೆ.

ಇಷ್ಟಾದರೂ ಮೆಡಿಕಲ್​ ಮಾಫಿಯಾಗೆ ಕಡಿವಾಣ ಬಿದ್ದಿಲ್ಲ ಎನ್ನಲಾಗಿದೆ. ಇನ್ನು ಖಾಸಗಿ ವಲಯದಲ್ಲಿ ಆಸ್ಪತ್ರೆಯ ಶುಲ್ಕದ ಜೊತೆಗೆ ಔಷಧಗಳನ್ನು ಖರೀದಿಸಲು ಸಾವಿರಾರು ರೂಪಾಯಿ ವ್ಯಯಿಸಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗೆಯೇ ಕೆಲವೆಡೆ ಎಷ್ಟೋ ಜನೌಷಧ ಕೇಂದ್ರಗಳನ್ನು ಉಪಯೋಗಕ್ಕೆ ಬಾರದಂತಾಗಿರುವ ಆರೋಪಗಳೂ ಕೇಳಿ ಬಂದಿದೆ.

ಇದನ್ನೂ ಓದಿ...ವಿಸ್ಟ್ರಾನ್​ ಕಂಪನಿಯಲ್ಲಿ ದಾಂಧಲೆ: ನೂರಾರು ಕೋಟಿ ರೂಪಾಯಿ ನಷ್ಟ, 11,500 ಕಾರ್ಮಿಕರು ಬೀದಿ ಪಾಲು

ಜೆನರಿಕ್‌ ಔಷಧಗಳು ಇತರ ಔಷಧ ಮಾರುಕಟ್ಟೆ ದರಕ್ಕಿಂತ ಶೇ.80ರಿಂದ ಶೇ.90ರಷ್ಡು ಅಗ್ಗದಲ್ಲಿ ದೊರೆಯುತ್ತಿವೆ. ಅಂದರೆ, ಉದಾಹರಣೆಗೆ ಬಿಪಿ, ಶುಗರ್‌ಗಳಿಗೆ ಬ್ರಾಂಡೆಡ್‌ ಔಷಧಕ್ಕೆ ಸುಮಾರು ₹2,000 ರಿಂದ ₹2,500 ಕೊಡಬೇಕಾಗುತ್ತದೆ. ಆದರೆ, ಜನೌಷಧಿಗೆ ಕೇವಲ₹400 ರಿಂದ ₹500 ಖರ್ಚಾಗುತ್ತದೆ. ವಾರ್ಷಿಕವಾಗಿ 30ರಿಂದ 40 ಕೋಟಿಯಷ್ಟೇ ಮಾರಾಟವಾಗುತ್ತಿದ್ದ ಜನರಿಕ್‌ ಔಷಧ ಈಗ ತಿಂಗಳಿಗೆ 50 ಕೋಟಿ ರೂ.ಗೂ ಅಧಿಕ ಮಾರಾಟ ದಾಖಲೆ ಮಾಡುತ್ತಿದೆ. ಒಟ್ಟಿನಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗಿರುವ ಜನೌಷಧ ಮಳಿಗೆಗಳನ್ನು ರಾಜ್ಯದಲ್ಲಿ ಇನ್ನಷ್ಟು ಆರಂಭಿಸಿದರೆ ಆಯಾ ಪ್ರದೇಶದ ರೋಗಿಗಳಿಗೆ ಅನುಕೂಲವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.