ETV Bharat / city

ತಿಂಗಳ ಹಿಂದೆ ಮನೆ ಬಾಡಿಗೆ, 2 ವಾರದಿಂದ ಜ್ಯುವೆಲ್ಲರಿ ಗೋಡೆ ಕೊರೆತ.. 5 ಕೆಜಿ ಚಿನ್ನ ಕದ್ದು ಖದೀಮರು ಎಸ್ಕೇಪ್​!

author img

By

Published : Apr 21, 2022, 7:09 AM IST

ಆ ಆರೋಪಿಗಳು ದೆಹಲಿ ಮೂಲದವರು. ಬಂಗಾರದ ಆಭರಣದ ಅಂಗಡಿಯನ್ನು ದೋಚಲು ತಿಂಗಳಿಂದಲೂ ಸ್ಕೆಚ್​ ಹಾಕಿದ್ದರು. ಅದರಂತೆ ಕಾರ್ಯತಂತ್ರ ರೂಪಿಸಿದ್ದ ಆರೋಪಿಗಳು ಕೊನೆಗೂ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 5 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

gold robbery from Jewellery Shop in Bengaluru, Bengaluru crime news, Robbery in JP nagar police station area, Bengaluru news,  ಬೆಂಗಳೂರಿನ ಜ್ಯುವೆಲ್ಲರಿ ಶಾಪ್​ನಲ್ಲಿ ಚಿನ್ನ ದರೋಡೆ, ಬೆಂಗಳೂರು ಅಪರಾಧ ಸುದ್ದಿ, ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ, ಬೆಂಗಳೂರು ಸುದ್ದಿ,
ಚಿನ್ನಾಭರಣ ದೋಚಿದ ಖದೀಮರು

ಬೆಂಗಳೂರು: ದೆಹಲಿ ಮೂಲದ ಆರೋಪಿಗಳಿಬ್ಬರು ಆಭರಣದಂಗಡಿಗೆ ಕನ್ನ ಹಾಕಲು ತಿಂಗಳ ಹಿಂದೆನೇ ಸ್ಕೆಚ್​ ಹಾಕಿ ಕುಳಿತಿದ್ದರು. ಅದರಂತೆ ಮುನ್ನಡೆದ ಆರೋಪಿಗಳು ಶಾಪ್​ನ ಗೋಡೆ ಕೊರೆದು 2.50 ಕೋಟಿ ಮೌಲ್ಯದ ಐದು ಕೆಜಿ ಚಿನ್ನವನ್ನು ದೋಚಿರುವ ಘಟನೆ ಜೆ ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್‌ನಲ್ಲಿ ನಡೆದಿದೆ.

ಸ್ವಂತ ಕಟ್ಟಡದಲ್ಲೇ ಶಾಪ್​: ಜೆ ಪಿ ನಗರ ಶಾಕಾಂಬರಿ ನಗರದ ನಿವಾಸಿ ರಾಜು ದೇವಾಡಿಗ 2010ರಿಂದ ಜೆ ಪಿ ನಗರ 1ನೇ ಹಂತದ ಶಾಕಾಂಬರಿ ನಗರದಲ್ಲಿ ತಮ್ಮ ಸ್ವಂತ ಕಟ್ಟಡದ 2ನೇ ಮಹಡಿಯಲ್ಲಿ ಪ್ರಿಯದರ್ಶಿನಿ ಜ್ಯುವೆಲರ್ಸ್‌ ಶಾಪ್​ ಆರಂಭಿಸಿದ್ದರು. ಪ್ರತಿನಿತ್ಯ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡಾದ ಬಳಿಕ ಚಿನ್ನಾಭರಣಗಳನ್ನು ಲಾಕರ್‌ಗಳಲ್ಲಿ ಇಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಹೋಗುತ್ತಿದ್ದರು.

ಚಿನ್ನ ದೋಚಲು ಸ್ಕೆಚ್​: ದೆಹಲಿ ಮೂಲದ ಇಬ್ಬರು ಆರೋಪಿಗಳು ಪ್ರಿಯದರ್ಶಿನಿ ಜ್ಯುವೆಲರ್ಸ್‌ಗೆ ಹೊಂದಿಕೊಂಡಿರುವ ಪಕ್ಕದ ಕಟ್ಟಡದ 2ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಖಾಲಿ ಇರುವುದನ್ನು ಗಮನಿಸಿದ್ದರು. ಕಳೆದ 1 ತಿಂಗಳ ಹಿಂದೆ ಆರೋಪಿಗಳು ಇಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ನಂತರ ಪ್ರಿಯದರ್ಶಿನಿ ಜ್ಯುವೆಲ್ಲರ್ಸ್‌ಗೆ ಕನ್ನ ಹಾಕಲು ಸಂಚು ರೂಪಿಸಿದ್ದರು.

ಓದಿ: ಮಂಡ್ಯ ದರೋಡೆ ಪ್ರಕರಣ: ₹80 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ

ಗೋಡೆ ಕೊರೆಯಲು ಆರಂಭ: ಅದರಂತೆ ಕಳೆದ 2 ವಾರಗಳಿಂದ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ-ಹಂತವಾಗಿ ಕೊರೆಯಲು ಆರಂಭಿಸಿದ್ದರು. ಏ.17ರಂದು ರಾಜು ಜ್ಯುವೆಲ್ಲರ್ಸ್‌ನಲ್ಲಿ ವ್ಯಾಪಾರ ಮುಗಿಸಿ ಚಿನ್ನಾಭರಣಗಳನ್ನು ಕಬ್ಬಿಣದ ಲಾಕರ್‌ನಲ್ಲಿ ಇಟ್ಟು ಹೋಗಿದ್ದರು.

ಚಿನ್ನ ದರೋಡೆ: ಇತ್ತ ಗೋಡೆ ಕೊರೆದು ಜ್ಯುವೆಲ್ಲರಿಯೊಳಗೆ ನುಗ್ಗಿದ ಆರೋಪಿಗಳು ಮೊದಲಿಗೆ ಅಲ್ಲಿದ್ದ ಸಿಸಿ ಕ್ಯಾಮರಾ ಸಂಪರ್ಕ ಕಡಿತಗೊಳಿಸಿದ್ದರು. ನಂತರ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣವನ್ನು ದೋಚಿದ್ದಾರೆ. ಏ.18ರಂದು ಬೆಳಗ್ಗೆ 10 ಗಂಟೆಗೆ ರಾಜು ಜ್ಯುವೆಲರ್ಸ್ ತೆರೆದಾಗ ಕಳ್ಳತನವಾದ ಸಂಗತಿ ಬೆಳಕಿಗೆ ಬಂದಿದೆ.

ದೂರು ದಾಖಲು: ಕಳ್ಳತನವಾದ ಕೂಡಲೇ ರಾಜು ಜೆ ಪಿ ನಗರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆರಳಚ್ಚು ಹಾಗೂ ಶ್ವಾನದಳದ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಆರೋಪಿಗಳು ಬಾಡಿಗೆಗೆ ಪಡೆದಿದ್ದ ಮನೆ ಮಾಲೀಕರ ಬಳಿ ಕೊಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ಅವು ನಕಲಿ ದಾಖಲೆ ಎಂಬುದು ಪತ್ತೆಯಾಗಿದೆ.

ಓದಿ: ಬೆಳಗಾವಿ: ವಾಹನ ಅಡ್ಡಗಟ್ಟಿ 4.97 ಕೋಟಿ ರೂಪಾಯಿ ದರೋಡೆ

ನಕಲಿ ದಾಖಲೆ: ಬಾಡಿಗೆಗೆ ಪಡೆದಿದ್ದ ಮನೆಯ ಮಾಲೀಕರಿಗೆ ದೆಹಲಿ ಹಾಗೂ ಉತ್ತರಾಖಂಡ್‌ನ ವಿಳಾಸದ ನಕಲಿ ಆಧಾರ್ ಕಾರ್ಡ್ ನೀಡಿದ್ದರು. ಒಂದು ತಿಂಗಳಿನಿಂದ ಅಂಗಡಿಯಲ್ಲಿರುವ ಚಿನ್ನಾಭರಣ ಸೇರಿ ಇನ್ನಿತರ ಮಾಹಿತಿಯನ್ನು ಕಲೆ ಹಾಕಿದ್ದರು. ಖದೀಮರ ಬಂಧನಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ವಿಶೇಷ 3 ತಂಡ ರಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳಿಗಾಗಿ ಶೋಧ: ರಾಜು ದೇವಾಡಿಗ ಕೊಟ್ಟ ದೂರಿನ ಆಧಾರದ ಮೇಲೆ ಜೆ ಪಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ದೆಹಲಿ ಮೂಲದ ಇಬ್ಬರು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು: ದೆಹಲಿ ಮೂಲದ ಆರೋಪಿಗಳಿಬ್ಬರು ಆಭರಣದಂಗಡಿಗೆ ಕನ್ನ ಹಾಕಲು ತಿಂಗಳ ಹಿಂದೆನೇ ಸ್ಕೆಚ್​ ಹಾಕಿ ಕುಳಿತಿದ್ದರು. ಅದರಂತೆ ಮುನ್ನಡೆದ ಆರೋಪಿಗಳು ಶಾಪ್​ನ ಗೋಡೆ ಕೊರೆದು 2.50 ಕೋಟಿ ಮೌಲ್ಯದ ಐದು ಕೆಜಿ ಚಿನ್ನವನ್ನು ದೋಚಿರುವ ಘಟನೆ ಜೆ ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್‌ನಲ್ಲಿ ನಡೆದಿದೆ.

ಸ್ವಂತ ಕಟ್ಟಡದಲ್ಲೇ ಶಾಪ್​: ಜೆ ಪಿ ನಗರ ಶಾಕಾಂಬರಿ ನಗರದ ನಿವಾಸಿ ರಾಜು ದೇವಾಡಿಗ 2010ರಿಂದ ಜೆ ಪಿ ನಗರ 1ನೇ ಹಂತದ ಶಾಕಾಂಬರಿ ನಗರದಲ್ಲಿ ತಮ್ಮ ಸ್ವಂತ ಕಟ್ಟಡದ 2ನೇ ಮಹಡಿಯಲ್ಲಿ ಪ್ರಿಯದರ್ಶಿನಿ ಜ್ಯುವೆಲರ್ಸ್‌ ಶಾಪ್​ ಆರಂಭಿಸಿದ್ದರು. ಪ್ರತಿನಿತ್ಯ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡಾದ ಬಳಿಕ ಚಿನ್ನಾಭರಣಗಳನ್ನು ಲಾಕರ್‌ಗಳಲ್ಲಿ ಇಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಹೋಗುತ್ತಿದ್ದರು.

ಚಿನ್ನ ದೋಚಲು ಸ್ಕೆಚ್​: ದೆಹಲಿ ಮೂಲದ ಇಬ್ಬರು ಆರೋಪಿಗಳು ಪ್ರಿಯದರ್ಶಿನಿ ಜ್ಯುವೆಲರ್ಸ್‌ಗೆ ಹೊಂದಿಕೊಂಡಿರುವ ಪಕ್ಕದ ಕಟ್ಟಡದ 2ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಖಾಲಿ ಇರುವುದನ್ನು ಗಮನಿಸಿದ್ದರು. ಕಳೆದ 1 ತಿಂಗಳ ಹಿಂದೆ ಆರೋಪಿಗಳು ಇಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ನಂತರ ಪ್ರಿಯದರ್ಶಿನಿ ಜ್ಯುವೆಲ್ಲರ್ಸ್‌ಗೆ ಕನ್ನ ಹಾಕಲು ಸಂಚು ರೂಪಿಸಿದ್ದರು.

ಓದಿ: ಮಂಡ್ಯ ದರೋಡೆ ಪ್ರಕರಣ: ₹80 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ

ಗೋಡೆ ಕೊರೆಯಲು ಆರಂಭ: ಅದರಂತೆ ಕಳೆದ 2 ವಾರಗಳಿಂದ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ-ಹಂತವಾಗಿ ಕೊರೆಯಲು ಆರಂಭಿಸಿದ್ದರು. ಏ.17ರಂದು ರಾಜು ಜ್ಯುವೆಲ್ಲರ್ಸ್‌ನಲ್ಲಿ ವ್ಯಾಪಾರ ಮುಗಿಸಿ ಚಿನ್ನಾಭರಣಗಳನ್ನು ಕಬ್ಬಿಣದ ಲಾಕರ್‌ನಲ್ಲಿ ಇಟ್ಟು ಹೋಗಿದ್ದರು.

ಚಿನ್ನ ದರೋಡೆ: ಇತ್ತ ಗೋಡೆ ಕೊರೆದು ಜ್ಯುವೆಲ್ಲರಿಯೊಳಗೆ ನುಗ್ಗಿದ ಆರೋಪಿಗಳು ಮೊದಲಿಗೆ ಅಲ್ಲಿದ್ದ ಸಿಸಿ ಕ್ಯಾಮರಾ ಸಂಪರ್ಕ ಕಡಿತಗೊಳಿಸಿದ್ದರು. ನಂತರ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣವನ್ನು ದೋಚಿದ್ದಾರೆ. ಏ.18ರಂದು ಬೆಳಗ್ಗೆ 10 ಗಂಟೆಗೆ ರಾಜು ಜ್ಯುವೆಲರ್ಸ್ ತೆರೆದಾಗ ಕಳ್ಳತನವಾದ ಸಂಗತಿ ಬೆಳಕಿಗೆ ಬಂದಿದೆ.

ದೂರು ದಾಖಲು: ಕಳ್ಳತನವಾದ ಕೂಡಲೇ ರಾಜು ಜೆ ಪಿ ನಗರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆರಳಚ್ಚು ಹಾಗೂ ಶ್ವಾನದಳದ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಆರೋಪಿಗಳು ಬಾಡಿಗೆಗೆ ಪಡೆದಿದ್ದ ಮನೆ ಮಾಲೀಕರ ಬಳಿ ಕೊಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ಅವು ನಕಲಿ ದಾಖಲೆ ಎಂಬುದು ಪತ್ತೆಯಾಗಿದೆ.

ಓದಿ: ಬೆಳಗಾವಿ: ವಾಹನ ಅಡ್ಡಗಟ್ಟಿ 4.97 ಕೋಟಿ ರೂಪಾಯಿ ದರೋಡೆ

ನಕಲಿ ದಾಖಲೆ: ಬಾಡಿಗೆಗೆ ಪಡೆದಿದ್ದ ಮನೆಯ ಮಾಲೀಕರಿಗೆ ದೆಹಲಿ ಹಾಗೂ ಉತ್ತರಾಖಂಡ್‌ನ ವಿಳಾಸದ ನಕಲಿ ಆಧಾರ್ ಕಾರ್ಡ್ ನೀಡಿದ್ದರು. ಒಂದು ತಿಂಗಳಿನಿಂದ ಅಂಗಡಿಯಲ್ಲಿರುವ ಚಿನ್ನಾಭರಣ ಸೇರಿ ಇನ್ನಿತರ ಮಾಹಿತಿಯನ್ನು ಕಲೆ ಹಾಕಿದ್ದರು. ಖದೀಮರ ಬಂಧನಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ವಿಶೇಷ 3 ತಂಡ ರಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳಿಗಾಗಿ ಶೋಧ: ರಾಜು ದೇವಾಡಿಗ ಕೊಟ್ಟ ದೂರಿನ ಆಧಾರದ ಮೇಲೆ ಜೆ ಪಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ದೆಹಲಿ ಮೂಲದ ಇಬ್ಬರು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.