ETV Bharat / city

ಮೇಕೆದಾಟು ಪಾದಯಾತ್ರೆಗೆ ಭದ್ರತೆ ನೀಡಿದ್ದ 42 ಕೆಎಸ್​ಆರ್​ಪಿ ಸಿಬ್ಬಂದಿಗೆ ​ಕೊರೊನಾ ಪಾಸಿಟಿವ್

author img

By

Published : Jan 20, 2022, 2:56 PM IST

Updated : Jan 20, 2022, 5:36 PM IST

ಮೇಕೆದಾಟು ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಅಹಿತಕರ ಘಟನೆ ನಡೆಯದಂತೆ ಮೈಸೂರು ವಿಭಾಗದ 179 ಮಂದಿ ಕೆಎಸ್​ಆರ್​ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು‌‌. ಈ ಪೈಕಿ 42 ಮಂದಿಗೆ‌ ಕೊರೊನಾ ವೈರಾಣು‌ ದೃಢವಾಗಿದ್ದು, ಎಲ್ಲರನ್ನೂ ಐಸೋಲೇಷನ್​ಗೆ‌ ಒಳಪಡಿಸಲಾಗಿದೆ.

infected-corona
​ಕೊರೊನಾ ಪಾಸಿಟಿವ್

ಬೆಂಗಳೂರು: ಮೇಕೆದಾಟು ಯೋಜನೆ‌ ಜಾರಿಗೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ‌ ಭದ್ರತೆಗೆ‌ ನಿಯೋಜನೆ‌ಗೊಂಡಿದ್ದ ಮೈಸೂರಿನ ಬೆಟಾಲಿಯನ್ 179 ಕೆಎಸ್​ಆರ್​ಪಿಯ 42 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಕೊರೊನಾ‌ ಸೋಂಕು ಕಾಣಿಸಿಕೊಂಡ 42 ಕೆಎಸ್ಆರ್​ಪಿ ಪೊಲೀಸರಲ್ಲಿ ಸೋಂಕು ಸೌಮ್ಯ ಸ್ವಭಾವದ್ದಾಗಿದೆ. ಎಲ್ಲಾ ಸಿಬ್ಬಂದಿ ಹೋಮ್‌ ಕ್ವಾರಂಟೈನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ಮೀಸಲು ಪಡೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್​ ಮಾಡಿದ್ದಾರೆ.

ಪೊಲೀಸರಿಗೆ ಕೊರೊನಾ ದೃಢಪಟ್ಟ ಬಗ್ಗೆ ಅಲೋಕ್​ಕುಮಾರ್​ ಟ್ವೀಟ್​
ಪೊಲೀಸರಿಗೆ ಕೊರೊನಾ ದೃಢಪಟ್ಟ ಬಗ್ಗೆ ಅಲೋಕ್​ಕುಮಾರ್​ ಟ್ವೀಟ್​

ಮೇಕೆದಾಟು ಯೋಜನೆ ಅನುಷ್ಕಾನಕ್ಕಾಗಿ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟಿನಿಂದ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಅಹಿತಕರ ಘಟನೆ ನಡೆಯದಂತೆ ಮೈಸೂರು ವಿಭಾಗದ 179 ಮಂದಿ ಕೆಎಸ್​ಆರ್​ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು‌‌.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಪೈಕಿ 42 ಸಿಬ್ಬಂದಿಗೆ ಕೊರೊನಾ ವೈರಾಣು‌ ದೃಢವಾಗಿದ್ದು, ಎಲ್ಲರನ್ನೂ ಐಸೋಲೇಷನ್​ಗೆ‌ ಒಳಪಡಿಸಲಾಗಿದೆ. ಪಾದಯಾತ್ರೆ ಸಂಬಂಧ ಹೈಕೋರ್ಟ್ ಕೆಪಿಸಿಸಿಗೆ ಚಾಟಿ ಬೀಸಿದ್ದರಿಂದ ಐದನೇ ದಿನಕ್ಕೆ‌ ಅದನ್ನು ಮೊಟಕಗೊಳಿಸಲಾಗಿತ್ತು. ಕೊರೊನಾ ನಿಯಮ ಗಾಳಿಗೆ ತೂರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಕನಕಪುರ ಹಾಗೂ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಜನರಿಗೆ ಕಷ್ಟ ಕೊಡುವುದು ನಮ್ಮ ಉದ್ದೇಶವಲ್ಲ, ವೀಕೆಂಡ್ ಕರ್ಫ್ಯೂ ವಿನಾಯಿತಿ ಬಗ್ಗೆ ನಾಳೆ ನಿರ್ಧಾರ : ಸುಧಾಕರ್

ಬೆಂಗಳೂರು: ಮೇಕೆದಾಟು ಯೋಜನೆ‌ ಜಾರಿಗೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ‌ ಭದ್ರತೆಗೆ‌ ನಿಯೋಜನೆ‌ಗೊಂಡಿದ್ದ ಮೈಸೂರಿನ ಬೆಟಾಲಿಯನ್ 179 ಕೆಎಸ್​ಆರ್​ಪಿಯ 42 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಕೊರೊನಾ‌ ಸೋಂಕು ಕಾಣಿಸಿಕೊಂಡ 42 ಕೆಎಸ್ಆರ್​ಪಿ ಪೊಲೀಸರಲ್ಲಿ ಸೋಂಕು ಸೌಮ್ಯ ಸ್ವಭಾವದ್ದಾಗಿದೆ. ಎಲ್ಲಾ ಸಿಬ್ಬಂದಿ ಹೋಮ್‌ ಕ್ವಾರಂಟೈನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ಮೀಸಲು ಪಡೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್​ ಮಾಡಿದ್ದಾರೆ.

ಪೊಲೀಸರಿಗೆ ಕೊರೊನಾ ದೃಢಪಟ್ಟ ಬಗ್ಗೆ ಅಲೋಕ್​ಕುಮಾರ್​ ಟ್ವೀಟ್​
ಪೊಲೀಸರಿಗೆ ಕೊರೊನಾ ದೃಢಪಟ್ಟ ಬಗ್ಗೆ ಅಲೋಕ್​ಕುಮಾರ್​ ಟ್ವೀಟ್​

ಮೇಕೆದಾಟು ಯೋಜನೆ ಅನುಷ್ಕಾನಕ್ಕಾಗಿ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟಿನಿಂದ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಅಹಿತಕರ ಘಟನೆ ನಡೆಯದಂತೆ ಮೈಸೂರು ವಿಭಾಗದ 179 ಮಂದಿ ಕೆಎಸ್​ಆರ್​ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು‌‌.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಪೈಕಿ 42 ಸಿಬ್ಬಂದಿಗೆ ಕೊರೊನಾ ವೈರಾಣು‌ ದೃಢವಾಗಿದ್ದು, ಎಲ್ಲರನ್ನೂ ಐಸೋಲೇಷನ್​ಗೆ‌ ಒಳಪಡಿಸಲಾಗಿದೆ. ಪಾದಯಾತ್ರೆ ಸಂಬಂಧ ಹೈಕೋರ್ಟ್ ಕೆಪಿಸಿಸಿಗೆ ಚಾಟಿ ಬೀಸಿದ್ದರಿಂದ ಐದನೇ ದಿನಕ್ಕೆ‌ ಅದನ್ನು ಮೊಟಕಗೊಳಿಸಲಾಗಿತ್ತು. ಕೊರೊನಾ ನಿಯಮ ಗಾಳಿಗೆ ತೂರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಕನಕಪುರ ಹಾಗೂ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಜನರಿಗೆ ಕಷ್ಟ ಕೊಡುವುದು ನಮ್ಮ ಉದ್ದೇಶವಲ್ಲ, ವೀಕೆಂಡ್ ಕರ್ಫ್ಯೂ ವಿನಾಯಿತಿ ಬಗ್ಗೆ ನಾಳೆ ನಿರ್ಧಾರ : ಸುಧಾಕರ್

Last Updated : Jan 20, 2022, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.