ETV Bharat / city

ವ್ಯಕ್ತಿ ಪೂಜೆ ಹೆಸರಲ್ಲಿ ಭ್ರಷ್ಟರ ಪೂಜೆ ಆಗಬಾರದು: ಸಂತೋಷ್​​ ಹೆಗ್ಡೆ - ವ್ಯಕ್ತಿ ಪೂಜೆ ಹೆಸರಲ್ಲಿ ಭ್ರಷ್ಟರ ಪೂಜೆ ಆಗಬಾರದೆಂದ ಸಂತೋಷ್​​ ಹೆಗ್ಡೆ

ಹಿಂದೆ ಭ್ರಷ್ಟರು, ಜೈಲಿಗೆ ಹೋಗಿ ಬಂದವರನ್ನು ಸಮಾಜದಿಂದ ಬಹಿಷ್ಕರಿಸಲಾಗುತ್ತಿತ್ತು. ಆದರೆ, ಇವತ್ತು ಅಂಥಹವರನ್ನ ಹೂವಿನಹಾರ, ತುರಾಯಿಗಳಿಂದ ಅದ್ದೂರಿಯಾಗಿ ಸ್ವಾಗತ ಕೋರುವ ಸ್ಥಿತಿಯಲ್ಲಿ ನಾವಿದ್ದೇವೆ. ವ್ಯಕ್ತಿ ಪೂಜೆ ಹೆಸರಲ್ಲಿ ಭ್ರಷ್ಟರ ಪೂಜೆ ಆಗಬಾರದೆಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್​​ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್​​ ಹೆಗ್ಡೆ
author img

By

Published : Oct 26, 2019, 5:43 PM IST

ಬಳ್ಳಾರಿ: ಈ ದೇಶದಲ್ಲಿ ವ್ಯಕ್ತಿ ಪೂಜೆ ಹೆಸರಲ್ಲಿ ಭ್ರಷ್ಟರ ಪೂಜೆ ಆಗಬಾರದೆಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್​​ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್​​ ಹೆಗ್ಡೆ

ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್​​ನ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಆವರಣದಲ್ಲಿಂದು ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕವ್ಯಕ್ತಿ ಪೂಜೆ ಆಗಬೇಕು‌. ಆದರೆ, ಭ್ರಷ್ಟರ ಪೂಜೆ ಆಗಬಾರದು. ಈ ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅದನ್ನು ಹೋಗಲಾಡಿಸುವ ಸಲುವಾಗಿಯೇ ಈ ಸಮಾಜದಲ್ಲಿ ಬದಲಾವಣೆ ತರುವ ಕಾರ್ಯ ಆಗಬೇಕಿದೆ ಎಂದರು.

ಹಿಂದೆ ಭ್ರಷ್ಟರು, ಜೈಲಿಗೆ ಹೋಗಿ ಬಂದವರನ್ನು ಸಮಾಜದಿಂದ ಬಹಿಷ್ಕರಿಸಲಾಗುತ್ತಿತ್ತು. ಆದರೆ, ಇವತ್ತು ಅಂಥಹವರನ್ನ ಹೂವಿನಹಾರ, ತುರಾಯಿಗಳಿಂದ ಅದ್ದೂರಿಯಾಗಿ ಸ್ವಾಗತ ಕೋರುವ ಸ್ಥಿತಿಯಲ್ಲಿ ನಾವಿದ್ದೇವೆ. ಇವತ್ತು ಹಣವಂತರು ಮಾತ್ರ ಅಧಿಕಾರಕ್ಕೆ ಬರುವಂತಹ ಪರಿಸ್ಥಿತಿ ಎದುರಾಗಿದೆ. ಲೋಕಾಯುಕ್ತವನ್ನು ದುರ್ಬಲಗೊಳಿಸಲಾಗಿದೆ. ಎಸಿಬಿ ಜನ ಪ್ರತಿನಿಧಿಗಳ ಅಣತಿಯಂತೆ ನಡೆಯುತ್ತದೆ. ಲೋಕಪಾಲ್​ ಬಿಲ್ ಯಾರಿಗೆ ಬೇಕಾಗಿದೆ ಎಂದು ಸಂತೋಷ್​​ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ಬಳ್ಳಾರಿ: ಈ ದೇಶದಲ್ಲಿ ವ್ಯಕ್ತಿ ಪೂಜೆ ಹೆಸರಲ್ಲಿ ಭ್ರಷ್ಟರ ಪೂಜೆ ಆಗಬಾರದೆಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್​​ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್​​ ಹೆಗ್ಡೆ

ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್​​ನ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಆವರಣದಲ್ಲಿಂದು ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕವ್ಯಕ್ತಿ ಪೂಜೆ ಆಗಬೇಕು‌. ಆದರೆ, ಭ್ರಷ್ಟರ ಪೂಜೆ ಆಗಬಾರದು. ಈ ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅದನ್ನು ಹೋಗಲಾಡಿಸುವ ಸಲುವಾಗಿಯೇ ಈ ಸಮಾಜದಲ್ಲಿ ಬದಲಾವಣೆ ತರುವ ಕಾರ್ಯ ಆಗಬೇಕಿದೆ ಎಂದರು.

ಹಿಂದೆ ಭ್ರಷ್ಟರು, ಜೈಲಿಗೆ ಹೋಗಿ ಬಂದವರನ್ನು ಸಮಾಜದಿಂದ ಬಹಿಷ್ಕರಿಸಲಾಗುತ್ತಿತ್ತು. ಆದರೆ, ಇವತ್ತು ಅಂಥಹವರನ್ನ ಹೂವಿನಹಾರ, ತುರಾಯಿಗಳಿಂದ ಅದ್ದೂರಿಯಾಗಿ ಸ್ವಾಗತ ಕೋರುವ ಸ್ಥಿತಿಯಲ್ಲಿ ನಾವಿದ್ದೇವೆ. ಇವತ್ತು ಹಣವಂತರು ಮಾತ್ರ ಅಧಿಕಾರಕ್ಕೆ ಬರುವಂತಹ ಪರಿಸ್ಥಿತಿ ಎದುರಾಗಿದೆ. ಲೋಕಾಯುಕ್ತವನ್ನು ದುರ್ಬಲಗೊಳಿಸಲಾಗಿದೆ. ಎಸಿಬಿ ಜನ ಪ್ರತಿನಿಧಿಗಳ ಅಣತಿಯಂತೆ ನಡೆಯುತ್ತದೆ. ಲೋಕಪಾಲ್​ ಬಿಲ್ ಯಾರಿಗೆ ಬೇಕಾಗಿದೆ ಎಂದು ಸಂತೋಷ್​​ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

Intro:ವ್ಯಕ್ತಿಪೂಜೆ ಹೆಸರಲ್ಲಿ ಭ್ರಷ್ಟರ ಪೂಜೆ ಆಗಬಾರದು: ಸಂತೋಷ ಹೆಗ್ಡೆ
ಬಳ್ಳಾರಿ: ಈ ದೇಶದಲ್ಲಿ ವ್ಯಕ್ತಿಪೂಜೆ ಹೆಸರಲ್ಲಿ ಭ್ರಷ್ಟರ ಪೂಜೆ ಆಗಬಾರದೆಂದು ಲೋಕಾಯುಕ್ತ ನಿವೃತ್ತ ನ್ಯಾ.ಎನ್.ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್ ನ ಆರೋಗ್ಯಮಾತೆ ಪುಣ್ಯಕ್ಷೇತ್ರದ ಆವರಣದಲ್ಲಿಂದು ನಡೆದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಏಕ ವ್ಯಕ್ತಿ ಪೂಜೆ ಆಗಬೇಕು‌. ಆದರೆ, ಭ್ರಷ್ಟರಪೂಜೆ ಆಗ ಬಾರದು. ಈ ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅದನ್ನು ಹೋಗಲಾಡಿಸುವ ಸಲುವಾಗಿಯೇ ಈ ಸಮಾಜದಲ್ಲಿ ಬದಲಾವಣೆ ತರುವಕಾರ್ಯ ಆಗಬೇಕಿದೆ ಎಂದರು.



Body:ಜೈಲಿಗೆ ಹೋದವರನ್ನ ಹೂವಿನಹಾರ, ತುರಾಯಿಗಳಿಂದ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತೆ. ಹಿಂದೆ ಭ್ರಷ್ಟರು, ಜೈಲಿಗೆ ಹೋಗಿ ಬಂದವರನ್ನು ಸಮಾಜದಿಂದ ಬಹಿಷ್ಕರಿಸಲಾಗುತ್ತಿತ್ತು. ಆದರೆ, ಇವತ್ತು ಅಂಥವರನ್ನ ಅದ್ಧೂರಿ ಸ್ವಾಗತ ಕೋರುವ ಸ್ಥಿತಿ ಯಲ್ಲಿ ನಾವಿದ್ದೇವೆ. ಇವತ್ತು ಹಣವಂತರು ಮಾತ್ರ ಅಧಿಕಾರಕ್ಕೆ ಬರುವಂತಹ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದ್ದಾರೆ.
ಲೋಕಾಯುಕ್ತವನ್ನು ದುರ್ಬಲಗೊಳಿಸಲಾಗಿದೆ. ಎಸಿಬಿ ಜನ ಪ್ರತಿನಿಧಿಗಳ ಅಣತಿಯಂತೆ ನಡೆಯುತ್ತದೆ. ಲೋಕಪಾಲ ಬಿಲ್ ಯಾರಿಗೆ ಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.




Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_JUSTICE_SANTOSH_HEGADE_BYTE_7203310

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.