ETV Bharat / city

ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ರೈತರಿಂದ ರಸ್ತಾ ರೋಖೋ

ಬಳ್ಳಾರಿ ವಿಭಜನೆ ಖಂಡಿಸಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ರಸ್ತಾ ರೋಖೋ ಚಳವಳಿ ನಡೆಸಲಾಯಿತು.

author img

By

Published : Nov 28, 2020, 2:01 PM IST

ರೈತರಿಂದ ರಸ್ತಾ ರೋಖೋ ಚಳವಳಿ
ರೈತರಿಂದ ರಸ್ತಾ ರೋಖೋ ಚಳವಳಿ

ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ರೈತರು ರಸ್ತಾ ರೋಖೋ ಚಳವಳಿ ನಡೆಸಿದರು.

ರೈತರಿಂದ ರಸ್ತಾ ರೋಖೋ ಚಳವಳಿ

ರೈತ ನಾಯಕ ಪ್ರೊ. ನಂಜುಂಡಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಹಾಗೂ ಚಾಗನೂರು ಸಿರಿವಾರ ನೀರಾವರಿ ಭೂ ರಕ್ಷಣೆ ಹೋರಾಟ ಸಮಿತಿಗಳ ವತಿಯಿಂದ ಬಳ್ಳಾರಿ ವಿಭಜನೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಕೆಲ ಕಾಲ ರೈತರು ಮಳೆಯಲ್ಲೇ ನಿಂತು ಪ್ರತಿಭಟಿಸಿದರು. ಮತ್ತು ಹಲಗೆ ಹೊಡೆಯುವ ಮೂಲಕ ದಾರಿ ಉದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ, ಗುತ್ತಿ ಚಂದ್ರಶೇಖರ ರೆಡ್ಡಿ, ಗಂಗಿರೆಡ್ಡಿ, ಟಿ.ಜಿ ವಿಠಲ್, ಅಸುಂಡಿ ಲೇಪಾಕ್ಷಿ ಮತ್ತು ಊರಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ರೈತರು ರಸ್ತಾ ರೋಖೋ ಚಳವಳಿ ನಡೆಸಿದರು.

ರೈತರಿಂದ ರಸ್ತಾ ರೋಖೋ ಚಳವಳಿ

ರೈತ ನಾಯಕ ಪ್ರೊ. ನಂಜುಂಡಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಹಾಗೂ ಚಾಗನೂರು ಸಿರಿವಾರ ನೀರಾವರಿ ಭೂ ರಕ್ಷಣೆ ಹೋರಾಟ ಸಮಿತಿಗಳ ವತಿಯಿಂದ ಬಳ್ಳಾರಿ ವಿಭಜನೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಕೆಲ ಕಾಲ ರೈತರು ಮಳೆಯಲ್ಲೇ ನಿಂತು ಪ್ರತಿಭಟಿಸಿದರು. ಮತ್ತು ಹಲಗೆ ಹೊಡೆಯುವ ಮೂಲಕ ದಾರಿ ಉದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ, ಗುತ್ತಿ ಚಂದ್ರಶೇಖರ ರೆಡ್ಡಿ, ಗಂಗಿರೆಡ್ಡಿ, ಟಿ.ಜಿ ವಿಠಲ್, ಅಸುಂಡಿ ಲೇಪಾಕ್ಷಿ ಮತ್ತು ಊರಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.